ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದು ಯಾರು?ʼ: ಗೌತಮ್‌ ಗಂಭೀರ್‌ ವಿರುದ್ಧ ಮಾತನಾಡಿದವರಿಗೆ ಸುನೀಲ್‌ ಗವಾಸ್ಕರ್‌ ತರಾಟೆ!

Sunil Gavaskat Backs Gautam Gambhir: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಸೋಲಿನ ಬಳಿಕ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯ ತರಬೇತುದಾರ ಹುದ್ದೆಯಿಂದ ಇವರನ್ನು ಕೆಳಗೆ ಇಳಿಸಬೇಕೆಂದು ಆಗ್ರಹಗಳು ಕೂಡ ಕೇಳಿ ಬರುತ್ತಿವೆ. ಆದರೆ, ಗಂಭೀರ್‌ ಅವರನ್ನು ಟೀಕಿಸುತ್ತಿರುವವರನ್ನು ಸುನೀಲ್‌ ಗವಾಸ್ಕರ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಗೌತಮ್‌ ಗಂಭೀರ್‌ಗೆ ಸುನೀಲ್‌ ಗವಾಸ್ಕರ್‌ ಬೆಂಬಲ.

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದಲ್ಲಿ ಭಾರತ ತಂಡ ಟೆಸ್ಟ್‌ ಸರಣಿ (IND vs SA) ಸೋಲು ಅನುಭವಿಸಿದ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಭಾರತ ತಂಡ, ಕಳೆದ ವರ್ಷ ನ್ಯೂಜಿಲೆಂಡ್‌ ವಿರುದ್ದವೂ ಟೆಸ್ಟ್‌ ಸರಣಿಯಲ್ಲಿ 3-0 ಅಂತರದಲ್ಲಿ ಕ್ವೀನ್‌ ಸ್ವೀಪ್‌ ಆಘಾತ ಅನುಭವಿಸಿತ್ತು. ಇದೀಗ ಹರಿಣ ಪಡೆಯ ವಿರುದ್ಧವೂ ವೈಟ್‌ವಾಷ್‌ ಆಘಾತ ಅನುಭವಿಸಿದೆ. ಮತ್ತೊಂದು ಕಡೆ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಟೆಸ್ಟ್‌ ಪಂದ್ಯದಲ್ಲಿ 200 ರನ್‌ ಗಳಿಸಲು ಕೂಡ ತಿಣುಕಾಡುತ್ತಿದ್ದಾರೆ. ಈ ಕಾರಣದಿಂದ ಗೌತಮ್‌ ಗಂಭೀರ್‌ ಅವರನ್ನು ಹೆಡ್‌ ಕೋಚ್‌ ಹುದ್ದೆಯಿಂದ ತೆಗೆಯಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ. ಆದರೆ, ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಅವರು ಗಂಭೀರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, "ಅವರು ಕೋಚ್‌. ಕೋಚ್‌ ತಂಡವನ್ನು ತಯಾರಿ ಮಾಡುತ್ತಾರೆ. ತಮ್ಮ ಅನುಭವದ ಆಧಾರದ ಮೇಲೆ ಆಟಗಾರರಿಗೆ ಕೋಚ್‌ ಏನು ಮಾಡಬೇಕೆಂದು ಹೇಳಬಹುದು. ಆದರೆ, ಅಂಗಣಕ್ಕೆ ಪ್ರವೇಶ ಮಾಡಿದ ಬಳಿಕ ಆಟಗಾರರು ಉತ್ತಮ ಪ್ರದರ್ಶನವನ್ನು ತೋರಬೇಕಾಗುತ್ತದೆ. ಈಗ, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಕೇಳುತ್ತಿರುವವರಿಗೆ ನನ್ನ ಪ್ರಶ್ನೆ: ಅವರ ನೇತೃತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಾಗ ನೀವು ಏನು ಮಾಡಿದ್ದೀರಿ? ಅವರ ಅಡಿಯಲ್ಲಿ ಭಾರತ ಏಷ್ಯಾ ಕಪ್ ಗೆದ್ದಾಗ ನೀವು ಏನು ಮಾಡಿದ್ದೀರಿ?" ಎಂದು ಪ್ರಶ್ನೆ ಮಾಡಿದ್ದಾರೆ.

IND vs SA: ಭಾರತದ ಬ್ಯಾಟ್ಸ್‌ಮನ್‌ಗಳ ಸ್ಪಿನ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಆರ್‌ ಅಶ್ವಿನ್‌!

"ನೀವು ಆಗ ಹೇಳಿದ್ದೀರಾ- ಈಗ ವಜಾಗೊಳಿಸುವಂತೆ ಕೇಳುತ್ತಿದ್ದೀರಿ - ಅವರಿಗೆ ಗುತ್ತಿಗೆಯನ್ನು ಮುಂದುವರಿಯಬೇಕಾ? ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್‌ಗೆ ಮಾತ್ರ ಅವರಿಗೆ ಗುತ್ತಿಗೆ ನೀಡಬೇಕೆಂದು ನೀವು ಆಗ ಹೇಳಿದ್ದೀರಾ? ನೀವು ಹಾಗೆ ಹೇಳಲಿಲ್ಲ. ತಂಡ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಮಾತ್ರ ನೀವು ತರಬೇತುದಾರರನ್ನು ನೋಡುತ್ತೀರಿ," ಎಂದು ಸುನೀಲ್‌ ಗವಾಸ್ಕರ್ ಹೇಳಿದ್ದಾರೆ.

ಗೌತಮ್‌ ಗಂಭೀರ್‌ ಮುಂದುವರಿಯಬೇಕು: ಗವಾಸ್ಕರ್

ಇಂಗ್ಲೆಂಡ್‌ ಹೆಡ್‌ ಕೋಚ್‌ ಬ್ರೆಂಡನ್‌ ಮೆಕಲಮ್‌ ಅವರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳುವ ಮೂಲಕ ಸುನೀಲ್‌ ಗವಾಸ್ಕರ್‌, ಗೌತಮ್‌ ಗಂಭೀರ್‌ ಅವರೇ ಭಾರತ ತಂಡದ ಮೂರೂ ಸ್ವರೂಪದಲ್ಲಿ ಹೆಡ್‌ ಕೋಚ್‌ ಆಗಿ ಮುಂದುವರಿಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IND vs SA: ಭಾರತದ ವಿರುದ್ಧ ಟೆಸ್ಟ್‌ ಸರಣಿ ಗೆದ್ದು ದೊಡ್ಡ ದಾಖಲೆ ಬರೆದ ತೆಂಬಾ ಬವೂಮ!

"ಕೋಚ್‌ ಸ್ಥಾನದಿಂದ ಇಳಿಯುವ ಅಗತ್ಯವಿಲ್ಲ. ನಿಮಗೆ ತರಬೇತುದಾರರು ಇದ್ದಾರೆ, ಉದಾಹರಣೆಗೆ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್‌ನ ಮೂರು ಸ್ವರೂಪಗಳಿಗೂ ತರಬೇತುದಾರರಾಗಿದ್ದಾರೆ. ಬಹಳಷ್ಟು ದೇಶಗಳು ಎಲ್ಲಾ ಸ್ವರೂಪಗಳಿಗೂ ಇರುವ ತರಬೇತುದಾರರನ್ನು ಹೊಂದಿವೆ. ಆದರೆ ತಂಡ ಸೋತಾಗ ನಾವು ಯಾರನ್ನಾದರೂ ನೋಡಿ ಬೆರಳು ತೋರಿಸುತ್ತೇವೆ," ಎಂದು ಹೇಳಿದ್ದಾರೆ.‌

ಗಂಭೀರ್‌ ಅವರನ್ನು ಏಕೆ ದೂಷಿಸುತ್ತೀರಿ?

"ನೀವು ಅವರಿಗೆ ಕ್ರೆಡಿಟ್ ನೀಡಲು ಸಿದ್ಧರಿಲ್ಲ. ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆಲುವಿಗೆ ಕ್ರೆಡಿಟ್ ನೀಡಲು ನೀವು ಸಿದ್ಧರಿಲ್ಲದಿದ್ದರೆ, ಆ 22-ಗಜಗಳ ಮೇಲೆ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲವಾದರೆ ನೀವು ಅವರನ್ನು ಏಕೆ ದೂಷಿಸುತ್ತೀರಿ ಎಂದು ದಯವಿಟ್ಟು ನನಗೆ ಹೇಳಿ. ನೀವು ಅವರನ್ನು ಏಕೆ ದೂಷಿಸುತ್ತಿದ್ದೀರಿ?" ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.