ಪಾಕ್ ಮಾಜಿ ನಾಯಕ ಇಮ್ರಾನ್ ಖಾನ್ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಕಪಿಲ್ ದೇವ್ ಬೇಸರ
Kapil Dev: ಆಜ್ ತಕ್ನ ವಿಕ್ರಾಂತ್ ಕಾಂತ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕಪಿಲ್, "ಇಮ್ರಾನ್ ಖಾನ್ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. ಅವರು ಏನು ಮಾಡಿದರು ಸರಿಯೋ ತಪ್ಪೋ ನನಗೆ ತಿಳಿದಿಲ್ಲ. ಅವರು ಒಬ್ಬ ಉತ್ತಮ ಆಟಗಾರ ಎಂದು ನಾನು ಹೇಳಲು ಬಯಸುತ್ತೇನೆ, ಅವರು ತಪ್ಪುಗಳನ್ನು ಮಾಡಿರಬಹುದು ಆದರೆ ಅವರನ್ನು ಜೈಲಿನಲ್ಲಿ ನಡೆಸಿಕೊಳ್ಳುವ ರೀತಿ ಸರಿಯಲ್ಲ" ಎಂದು ಕಪಿಲ್ ದೇವ್ ತಿಳಿಸಿದರು.
Kapil Dev -
ಮುಂಬಯಿ, ಜು.6: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ಕಳವಳ ವ್ಯಕ್ತಪಡಿಸಿದ್ದು, ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್ ವಿರುದ್ಧದ ಕಾನೂನು ಕ್ರಮಗಳ ಹೊರತಾಗಿಯೂ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಅರ್ಹರು ಎಂದು ಹೇಳಿದ್ದಾರೆ.
ಆಗಸ್ಟ್ 2023 ರಿಂದ ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್ ಅವರ ಆರೋಗ್ಯದಲ್ಲಿ ಗಮನಾರ್ಹ ಕ್ಷೀಣತೆ ಕಂಡುಬಂದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, 1992 ರ ವಿಶ್ವಕಪ್ ವಿಜೇತ ನಾಯಕ ಕಸ್ಟಡಿಯಲ್ಲಿದ್ದಾಗ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಅವರ ಬಲಗಣ್ಣಿನ ಸುಮಾರು ಶೇ. 85 ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿಯ ಕುರಿತು ಮಾತನಾಡಿದ ಕಪಿಲ್, ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ತಮಗೆ ಬೇಸರ ತಂದಿದೆ ಎಂದು ಹೇಳಿದರು ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಮರೆಯಬಾರದು ಎಂದು ಒತ್ತಿ ಹೇಳಿದರು. ಪ್ರಕರಣದ ಕಾನೂನು ಅಂಶಗಳ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಆದರೆ ಇಮ್ರಾನ್ ಅವರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಎಂದು ನಂಬಿದ್ದೇನೆ ಎಂದು ಕಪಿಲ್ ಸ್ಪಷ್ಟಪಡಿಸಿದರು.
While Imran Khan rots in Pakistani jail, Indian legend Kapil Dev gets emotional: Imran Ke Haalat Ko Dekh Kar Dukh Hota hai. No way for Pakistan to treat their former Prime Minister.
— Vikrant Gupta (@vikrantgupta73) July 4, 2026
Watch this. Full podcast drops Sunday 7pm on @sports_tak @therealkapildev @ImranKhanPTI… pic.twitter.com/K4YbTkpcv8
ಆಜ್ ತಕ್ನ ವಿಕ್ರಾಂತ್ ಕಾಂತ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕಪಿಲ್, "ಇಮ್ರಾನ್ ಖಾನ್ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. ಅವರು ಏನು ಮಾಡಿದರು ಸರಿಯೋ ತಪ್ಪೋ ನನಗೆ ತಿಳಿದಿಲ್ಲ. ಅವರು ಒಬ್ಬ ಉತ್ತಮ ಆಟಗಾರ ಎಂದು ನಾನು ಹೇಳಲು ಬಯಸುತ್ತೇನೆ, ಅವರು ತಪ್ಪುಗಳನ್ನು ಮಾಡಿರಬಹುದು ಆದರೆ ಅವರನ್ನು ಜೈಲಿನಲ್ಲಿ ನಡೆಸಿಕೊಳ್ಳುವ ರೀತಿ ಸರಿಯಲ್ಲ" ಎಂದು ಕಪಿಲ್ ದೇವ್ ತಿಳಿಸಿದರು.
IND vs ENG: ತಮಾಷೆ ಮಾಡುತ್ತಿದ್ದೀರಾ? ಸಂಜು ಸ್ಯಾಮ್ಸನ್ಗೆ ಕೊಕ್ ನೀಡಿದ್ದಂತೆ ಸಂಜಯ್ ಮಾಂಜ್ರೇಕರ್ ಕಿಡಿ!
"ನನಗೆ ಕಾನೂನು ತಿಳಿದಿಲ್ಲ, ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ಆದರೆ ನನಗೆ ತಿಳಿದಿರುವ ಸಂಗತಿಯೆಂದರೆ ಅವರು ತಮ್ಮ ದೇಶಕ್ಕೆ ಬಹಳ ದೊಡ್ಡ ಕ್ರಿಕೆಟಿಗರಾಗಿದ್ದಾರೆ ಮತ್ತು ಅವರು ಪ್ರಧಾನಿಯಾಗಿದ್ದರು, ಆದ್ದರಿಂದ ಕೆಲವು ನೀತಿಗಳು ಇರಬೇಕು ಆದರೆ ಅದು ಹಾಗೆ ನಡೆಯುತ್ತಿಲ್ಲ ಅದಕ್ಕಾಗಿಯೇ ನನಗೆ ಬೇಸರವಾಗಿದೆ" ಎಂದು ಕಪಿಲ್ ಹೇಳಿದರು.
1983 ರ ವಿಶ್ವಕಪ್ ವಿಜೇತ ನಾಯಕ ಇಮ್ರಾನ್, ಕ್ರಿಕೆಟಿಗನಾಗಿ ಮತ್ತು ಪಾಕಿಸ್ತಾನದ ಮಾಜಿ ಸರ್ಕಾರದ ಮುಖ್ಯಸ್ಥನಾಗಿ ಅವರ ಸ್ಥಾನಮಾನವನ್ನು ಮತ್ತಷ್ಟು ಎತ್ತಿ ತೋರಿಸಿದ್ದರು. ಇಮ್ರಾನ್ ರಾಜಕೀಯ ಪ್ರವೇಶಿಸಲು ಮಾಡಿದ ಪ್ರಯತ್ನವನ್ನು ಕಪಿಲ್ ಶ್ಲಾಘಿಸಿದರು, ಮಾಜಿ ಆಲ್ರೌಂಡರ್ ನಿಜವಾಗಿಯೂ ತಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತಾರೆ ಎಂದು ಹೇಳಿದರು.
ಈ ಹಿಂದೆ ಕಪಿಲ್ ದೇವ್ ಸೇರಿದಂತೆ ಮಾಜಿ ನಾಯಕರಾದ ಮೈಕೆಲ್ ಅಥರ್ಟನ್, ಅಲನ್ ಬಾರ್ಡರ್, ಮೈಕೆಲ್ ಬ್ರಿಯಾರ್ಲಿ, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಸುನಿಲ್ ಗವಾಸ್ಕರ್, ಡೇವಿಡ್ ಗೋವರ್, ಕಿಮ್ ಹ್ಯೂಸ್, ನಾಸರ್ ಹುಸೇನ್, ಕ್ಲೈವ್ ಲಾಯ್ಡ್, , ಸ್ಟೀಫನ್ ವಾ ಮತ್ತು ಜಾನ್ ರೈಟ್ ಸೇರಿಕೊಂಡು ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪಾಕ್ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.