ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಾಸ್ತು ಲೋಕ

Vastu Tips: ವಾಸ್ತು ಶಾಸ್ತ್ರ ಹೇಳುವ ರಹಸ್ಯ ಇದು; ಮನೆಯ ಸಂಪತ್ತು ಹೆಚ್ಚಾಗಲು ಈ ದೇವರ ಫೋಟೋಗಳನ್ನ ಇಡಿ

ಹಣದ ಸಮಸ್ಯೆ ನಿವಾರಣೆಗೆ ಮನೆಯಲ್ಲಿ ಈ 3 ದೇವರ ವಿಗ್ರಹ ಇಡಿ..!

ಹಿಂದೂ ಶಾಸ್ತ್ರದ ಪ್ರಕಾರ ಮನೆಯಲ್ಲಿ ಲಕ್ಷ್ಮೀ ದೇವಿ, ಕುಬೇರ ದೇವರು ಮತ್ತು ಗಣೇಶನ ವಿಗ್ರಹ ಅಥವಾ ಫೋಟೋಗಳನ್ನು ಇಡುವುದರಿಂದ ಆರ್ಥಿಕ ಪ್ರಗತಿ ಹಾಗೂ ಸಮೃದ್ಧಿ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಈ ದೇವತೆಗಳನ್ನು ನಿಯಮಿತವಾಗಿ ಪೂಜಿಸಿದರೆ ಮನೆಯಲ್ಲಿನ ಹಣದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಶಾಂತಿ, ಸಂತೋಷ ನೆಲೆಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Vastu Tips: ಹಾಸಿಗೆಯ ಕೆಳಗೆ ಈ ವಸ್ತುಗಳನ್ನು ಇಟ್ಟರೆ  ಈ ಸಮಸ್ಯೆಗಳು ಎದುರಾಗಬಹುದು

ಹಾಸಿಗೆಯ ಕೆಳಗೆ ಈ ವಸ್ತುಗಳಿದ್ದರೆ ಸಮಸ್ಯೆ ಖಚಿತ

ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಪೊರಕೆ, ಚಪ್ಪಲಿ, ಎಣ್ಣೆ ಬಾಟಲಿ ಮತ್ತು ಹಾಸಿಗೆಯ ಎದುರು ಕನ್ನಡಿ ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇವು ನಿದ್ರಾಹೀನತೆ, ಮಾನಸಿಕ ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

Vastu Tips: ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಬೇಕಾ? ಈ ಸರಳ ವಾಸ್ತು ವಿಧಾನಗಳನ್ನು ಅನುಸರಿಸಿ

ಮನೆಯಲ್ಲಿನ ನಕಾರಾತ್ಮಕತೆ ಹೋಗಲಾಡಿಸಲು ಸರಳ ಉಪಾಯಗಳು

ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸಲು ಕೆಲವು ಸರಳ ವಾಸ್ತು ಕ್ರಮಗಳು ಸಹಾಯಕವಾಗುತ್ತವೆ. ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸುವುದು, ಉಪ್ಪು ಹಾಕಿದ ನೀರಿನಿಂದ ನೆಲ ಒರೆಸುವುದು, ಮನೆಯ ಬಾಗಿಲಿಗೆ ರಂಗೋಲಿ ಹಾಕುವುದು, ಸೂರ್ಯನ ಬೆಳಕು ಮತ್ತು ತಾಜಾ ಗಾಳಿಗೆ ಅವಕಾಶ ನೀಡುವುದು, ಗಿಡಗಳನ್ನು ಇಡುವುದು ಹಾಗೂ ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

ಈ ಸಮಯದಲ್ಲಿ ಹಣದ ವ್ಯವಹಾರ ಮಾಡಿದ್ರೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಬಹುದು; ಎಚ್ಚರ

ವಾಸ್ತು ಪ್ರಕಾರ ಈ ಸಮಯದಲ್ಲಿ ಹಣ ಕೊಡಬೇಡಿ

Vastu Tips: ವಾಸ್ತುಶಾಸ್ತ್ರದ ಪ್ರಕಾರ ಬ್ರಾಹ್ಮಿ ಮುಹೂರ್ತ ಮತ್ತು ಸಂಧ್ಯಾಕಾಲದಲ್ಲಿ ಹಣದ ಲೇವಾದೇವಿ ಮಾಡುವುದು ಅಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಣ ನೀಡುವುದು ಅಥವಾ ಪಡೆಯುವುದರಿಂದ ಆರ್ಥಿಕ ಸಂಕಷ್ಟಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಸೂರ್ಯೋದಯದ ನಂತರದಿಂದ ಸೂರ್ಯಾಸ್ತಕ್ಕೂ ಮುಂಚಿನ ಸಮಯವನ್ನು ಹಣಕಾಸಿನ ವ್ಯವಹಾರಕ್ಕೆ ಸೂಕ್ತ ಸಮಯವೆಂದು ವಾಸ್ತುಶಾಸ್ತ್ರ ಸೂಚಿಸುತ್ತದೆ.

Vastu Tips: ಅಡುಗೆ ಮನೆಯಲ್ಲಿ ಈ ಪದಾರ್ಥಗಳನ್ನು ಇಟ್ಟರೆ  ದಾರಿದ್ರ್ಯ ಹೆಚ್ಚಾಗುತ್ತದೆ!

ಅಡುಗೆ ಮನೆಯಲ್ಲಿ ಈ ತಪ್ಪು ಮಾಡಬೇಡಿ!

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥಗಳು ಮನೆಯ ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಸ್ಥಿತಿಗೆ ಪ್ರಭಾವ ಬೀರುತ್ತವೆ. ಹಾಳಾದ ಮಸಾಲೆ, ಹುಳ ಸೇರಿದ ಧಾನ್ಯಗಳು, ಹಾಳಾದ ತರಕಾರಿಗಳು ಹಾಗೂ ಮರುಬಳಕೆ ಮಾಡಿದ ಎಣ್ಣೆಯನ್ನು ಅಡುಗೆಗೆ ಬಳಸುವುದು ಅಶುಭಕರ ಎಂದು ಹೇಳಲಾಗುತ್ತದೆ.

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಈ ಉಡುಗೊರೆಗಳನ್ನ ನೀಡಿದರೆ ಬರಲಿದೆ ಸಂಪತ್ತು ಮತ್ತು ಸಮೃದ್ಧಿ

ಉಡುಗೊರೆ ನೀಡುವಾಗ ಈ ವಾಸ್ತು ನಿಯಮಗಳನ್ನು ಪಾಲಿಸಿ

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಶುಭ ಫಲಗಳು ದೊರಕುತ್ತವೆ ಎಂಬ ನಂಬಿಕೆ ಇದೆ. ಜೋಡಿ ಆನೆಯ ವಿಗ್ರಹ, ಹೂವುಗಳು ಹಾಗೂ ಬೆಳ್ಳಿಯ ವಸ್ತುಗಳು ಮಂಗಳಕರವೆಂದು ಹೇಳಲಾಗುತ್ತದೆ. ಆದರೆ ಗಡಿಯಾರ, ಚಾಕು, ಕಬ್ಬಿಣದ ವಸ್ತುಗಳು ಮುಂತಾದವುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸುವುದು ಉತ್ತಮ ಎಂದು ವಾಸ್ತು ಸಲಹೆ ನೀಡುತ್ತದೆ.

Vastu Tips: ಮನೆಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಶುಭವೇ? ವಾಸ್ತು-ಫೆಂಗ್ ಶೂಯಿ ಹೇಳೋದೇನು?

ಮನೆಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ

ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಒಂಟೆಯ ಪ್ರತಿಮೆ ಅಥವಾ ಚಿತ್ರವನ್ನು ಇಡುವುದು ಶುಭಕರವೆಂದು ಹೇಳಲಾಗುತ್ತದೆ. ಒಂಟೆ ಸಹನೆ, ಹೊಂದಿಕೊಳ್ಳುವಿಕೆ, ಪರಿಶ್ರಮ ಮತ್ತು ಬದುಕುಳಿಯುವ ಸಾಮರ್ಥ್ಯದ ಸಂಕೇತವಾಗಿದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಧನಾತ್ಮಕ ಶಕ್ತಿ ಹೆಚ್ಚುವುದು, ನಕಾರಾತ್ಮಕತೆ ದೂರಾಗುವುದು ಹಾಗೂ ಆರ್ಥಿಕ ಮತ್ತು ಮಾನಸಿಕ ಸ್ಥಿರತೆ ಬರಲು ಸಹಾಯವಾಗುತ್ತದೆ ಎಂದು ನಂಬಿಕೆ ಇದೆ. ವಿಶೇಷವಾಗಿ ವಾಯುವ್ಯ ಅಥವಾ ಈಶಾನ್ಯ ದಿಕ್ಕಿನಲ್ಲಿ ಒಂಟೆಯ ಪ್ರತಿಮೆ ಇಡುವುದು ಉತ್ತಮ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಕುಟುಂಬದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎನ್ನಲಾಗುತ್ತದೆ.

Vastu Tips: ಮನೆಯ ಈ ಐದು ಸ್ಥಳಗಳಲ್ಲಿ ನವಿಲುಗರಿ ಇಟ್ಟರೆ  ಐಶ್ವರ್ಯ ಹೆಚ್ಚಾಗೋದು ಗ್ಯಾರಂಟಿ..!

ವಾಸ್ತು ಪ್ರಕಾರ ನವಿಲು ಗರಿ ಇಡುವುದರಿಂದ ಐಶ್ವರ್ಯ ಹೆಚ್ಚಳ!

ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿಗೆ ಪವಿತ್ರ ಸ್ಥಾನವಿದ್ದು, ಇದು ದುಷ್ಟಶಕ್ತಿಗಳನ್ನು ದೂರ ಮಾಡಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ. ಪೂಜಾ ಕೋಣೆ, ಹಣ ಇಡುವ ಸ್ಥಳ, ಮುಖ್ಯ ಬಾಗಿಲು ಹಾಗೂ ಓದು ಮೇಜು ಸೇರಿದಂತೆ ಕೆಲವು ವಿಶೇಷ ಸ್ಥಳಗಳಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಆರ್ಥಿಕ ಸ್ಥಿರತೆ, ಮನಶಾಂತಿ ಮತ್ತು ಕುಟುಂಬದ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ದೇವರ ಕೋಣೆಯ ವಸ್ತುಗಳನ್ನು ಹೇಗೆ ಇಡಬೇಕು? ಈ ಬಗ್ಗೆ ವಾಸ್ತು ಶಾಸ್ತ್ರ ನೀಡೋ ಸಲಹೆ ಏನು?

ದೇವರ ಕೋಣೆಯಲ್ಲಿ ಏನು ಇಡಬೇಕು, ಏನು ಬೇಡ?

Vastu Tips: ಮನೆಯ ದೇವರ ಕೋಣೆ ಅತ್ಯಂತ ಪವಿತ್ರ ಸ್ಥಳವಾಗಿದ್ದು, ಇಲ್ಲಿ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ನಿಯಮಬದ್ಧವಾಗಿ ಇಡುವುದು ಮುಖ್ಯ. ದೀಪವನ್ನು ವಿಗ್ರಹದ ಮುಂಭಾಗದಲ್ಲಿ ಇಡುವುದು, ಪೂಜಾ ಸಾಮಗ್ರಿಗಳನ್ನು ಆಗ್ನೇಯ ದಿಕ್ಕಿನಲ್ಲಿ ಜೋಡಿಸುವುದು, ಮೃತರ ಛಾಯಾಚಿತ್ರಗಳನ್ನು ದೂರವಿಡುವುದು ಹಾಗೂ ನೈವೇದ್ಯವನ್ನು ಗೌರವದಿಂದ ಅರ್ಪಿಸುವುದು ವಾಸ್ತು ಮತ್ತು ಪರಂಪರೆಯ ಪ್ರಕಾರ ಒಳಿತು.

Vastu Tips: ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವಾಗ ಈ ನಿಯಮ ಪಾಲಿಸಿ; ಇಲ್ಲವಾದರೆ ಅಶುಭ ಫಲವೇ ಹೆಚ್ಚು

ಸ್ವಸ್ತಿಕ ಹಾಕುವ ಮುನ್ನ ಈ ವಿಚಾರಗಳನ್ನು ತಿಳಿದುಕೊಳ್ಳಿ

ಹಿಂದೂ ಸಂಪ್ರದಾಯದಲ್ಲಿ ಸ್ವಸ್ತಿಕ ಚಿಹ್ನೆಗೆ ವಿಶೇಷ ಮಹತ್ವವಿದೆ. ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವುದು ಶುಭಕರವೆಂದು ನಂಬಲಾಗುತ್ತದೆ. ಆದರೆ ಅದನ್ನು ಸಿಂಧೂರದಿಂದ, ಸ್ವಚ್ಛವಾದ ಬಾಗಿಲಿನ ಮೇಲೆ ಮತ್ತು ಸರಿಯಾದ ಗಾತ್ರದಲ್ಲಿ ಹಾಕಬೇಕು. ಸ್ವಸ್ತಿಕದ ಸುತ್ತ ಚಪ್ಪಲಿ ಇಡುವುದನ್ನು ತಪ್ಪಿಸಬೇಕು. ವಾಸ್ತು ಪ್ರಕಾರ ಸರಿಯಾದ ರೀತಿಯಲ್ಲಿ ಹಾಕಿದ ಸ್ವಸ್ತಿಕ ಮನೆಗೆ ಶಾಂತಿ, ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿ ತರಲಿದೆ ಎಂಬ ನಂಬಿಕೆ ಇದೆ.

Vastu Tips: ನಿದ್ರಾಹೀನತೆ ಹೆಚ್ಚಳಕ್ಕೆ ಮಲಗುವ ಕೋಣೆಯೇ ಕಾರಣವೇ? ವಾಸ್ತುಶಾಸ್ತ್ರ ಈ  ಬಗ್ಗೆ ಹೇಳೋದೇನು!

ವಾಸ್ತು ದೋಷವೇ ನಿದ್ರಾಹೀನತೆಗೆ ಕಾರಣ

ಇತ್ತೀಚಿನ ಜೀವನಶೈಲಿ ಬದಲಾವಣೆಗಳಿಂದ ನಿದ್ರಾಹೀನತೆ ಸಮಸ್ಯೆ ಹೆಚ್ಚುತ್ತಿದೆ. ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಅನಗತ್ಯ ವಸ್ತುಗಳು, ಹಾಸಿಗೆಯ ಕೆಳಗಿನ ಅಸ್ತವ್ಯಸ್ತತೆ, ಫ್ರಿಡ್ಜ್‌–ಇನ್ವರ್ಟರ್‌ ಮುಂತಾದ ಸಾಧನಗಳು ಹಾಗೂ ಮುಳ್ಳಿನ ಸಸ್ಯಗಳು ನಿದ್ರೆಗೆ ಅಡ್ಡಿಯಾಗಬಹುದು. ಸರಿಯಾದ ವಿನ್ಯಾಸ ಮತ್ತು ಸ್ವಚ್ಛತೆ ಉತ್ತಮ ನಿದ್ರೆಗೆ ಸಹಕಾರಿ ಎಂದು ತಜ್ಞರು ಸೂಚಿಸಿದ್ದಾರೆ.

Vastu Tips: ದೇವರ ಕೋಣೆಯಲ್ಲಿ ಪೂಜಾ ತಟ್ಟೆ ಹೀಗೆ ಇಡಿ; ವಾಸ್ತು ಸೂಚಿಸುವ ನಿಯಮಗಳು ಇವು

ಪೂಜಾ ತಟ್ಟೆ ಇಡಲು ಸೂಕ್ತ ದಿಕ್ಕು ಯಾವುದು?

ಮನೆಯಲ್ಲಿ ಪೂಜೆ ಮಾಡುವಾಗ ಪೂಜಾ ತಟ್ಟೆ ಇಡುವ ದಿಕ್ಕಿಗೂ ವಾಸ್ತು ಪ್ರಕಾರ ವಿಶೇಷ ಮಹತ್ವವಿದೆ. ತಜ್ಞರ ಪ್ರಕಾರ, ಪೂಜೆಯಲ್ಲಿ ಬಳಸುವ ತಟ್ಟೆ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯದ್ದಾಗಿರಬೇಕು. ಪೂಜಾ ತಟ್ಟೆಯನ್ನು ಸಾಮಾನ್ಯವಾಗಿ ಉತ್ತರ ದಿಕ್ಕಿನಲ್ಲಿ ಇಡುವುದು ಶುಭಕರವೆಂದು ನಂಬಲಾಗುತ್ತದೆ.

Vastu Tips: ಲಕ್ಷ್ಮೀ ದೇವಿಯ ವಾಹನ ಗೂಬೆ: ಮನೆಯಲ್ಲಿ ವಿಗ್ರಹ ಇಟ್ಟರೆ ಶುಭವೇ? ವಾಸ್ತು ಹೇಳುವುದು ಏನು?

ಮನೆಯಲ್ಲಿ ಗೂಬೆ ವಿಗ್ರಹ ಇಟ್ಟರೆ ಶುಭವೇ?

ಲಕ್ಷ್ಮಿ ದೇವಿ ಅವರ ವಾಹನವೆಂದು ಪರಿಗಣಿಸಲ್ಪಡುವ ಗೂಬೆಯ ವಿಗ್ರಹವನ್ನು ವಾಸ್ತು ಪ್ರಕಾರ ಮನೆಯಲ್ಲಿ ಇಟ್ಟರೆ ವಾಸ್ತು ದೋಷ ನಿವಾರಣೆ, ಧನಾತ್ಮಕ ಶಕ್ತಿ ವೃದ್ಧಿ ಹಾಗೂ ಆರ್ಥಿಕ ಸ್ಥಿರತೆ ಲಭಿಸುತ್ತದೆ ಎಂಬ ನಂಬಿಕೆ ಇದೆ. ವಾಯುವ್ಯ ದಿಕ್ಕಿನಲ್ಲಿ, ಮುಖ್ಯ ಬಾಗಿಲಿನತ್ತ ಮುಖವಾಗುವಂತೆ ಪ್ರತಿಮೆ ಇರಿಸುವುದು ಶುಭಕರವೆಂದು ಹೇಳಲಾಗುತ್ತದೆ. ಆದರೆ ಇವು ಧಾರ್ಮಿಕ ಮತ್ತು ವಾಸ್ತು ನಂಬಿಕೆಗಳ ಆಧಾರಿತ ಮಾಹಿತಿಗಳಾಗಿವೆ.

Vastu Tips: ತಪ್ಪಿಯೂ ಅಡುಗೆಮನೆಯಲ್ಲಿ ಇಂತಹ ಕೆಲಸ ಮಾಡಬೇಡಿ; ಆರೋಗ್ಯಕ್ಕೆ ಕುತ್ತು ಬರಬಹುದು

ಅಡುಗೆಮನೆಯಲ್ಲಿ ಮಾಡುವ ಈ ತಪ್ಪುಗಳು ಆರೋಗ್ಯಕ್ಕೆ ಹಾನಿಕರ

ಅಡುಗೆಮನೆ ಮನೆಯ ಹೃದಯಭಾಗ. ವಾಸ್ತುಶಾಸ್ತ್ರದ ಪ್ರಕಾರ ದಿಕ್ಕು, ಸ್ವಚ್ಛತೆ, ಗ್ಯಾಸ್-ನೀರಿನ ವ್ಯವಸ್ಥೆ, ಆಹಾರದ ಗೌರವ ಹಾಗೂ ಹಾಲು ಮುಚ್ಚಿಡುವಂತಹ ಸಣ್ಣ ಜಾಗ್ರತೆಗಳು ಮನೆಯ ಆರೋಗ್ಯ, ಶಾಂತಿ ಮತ್ತು ಆರ್ಥಿಕ ಸ್ಥಿರತಿಗೆ ಸಹಕಾರಿ ಎಂದು ನಂಬಲಾಗಿದೆ.

Vastu Tips: ಸುಖ ದಾಂಪತ್ಯಕ್ಕೆ ನಾಂದಿ ಹಾಡಲಿದೆ ರಾಧಾ–ಕೃಷ್ಣರ ಚಿತ್ರ; ಆದರೆ ವಾಸ್ತು ನಿಯಮ ಪಾಲಿಸಿದ್ರೆ ಮಾತ್ರ

ಮನೆಯ ಈ ಜಾಗದಲ್ಲಿ ರಾಧಾ–ಕೃಷ್ಣರ ಫೋಟೊ ಅಳವಡಿಸಿ

ವಾಸ್ತು ನಂಬಿಕೆಗಳ ಪ್ರಕಾರ ರಾಧಾ–ಕೃಷ್ಣರ ಚಿತ್ರವನ್ನು ಮನೆಯಲ್ಲಿ, ವಿಶೇಷವಾಗಿ ಮಲಗುವ ಕೋಣೆಯಲ್ಲಿ ಇಡುವುದರಿಂದ ಪತಿ–ಪತ್ನಿಯರ ನಡುವೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮನೆಯ ಮುಖ್ಯ ಬಾಗಿಲಿನ ಮೇಲ್ಭಾಗದಲ್ಲಿ ಈ ಚಿತ್ರವನ್ನು ಹಾಕಬಾರದು ಎಂದು ಸಲಹೆ ನೀಡಲಾಗುತ್ತದೆ. ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಇದೆ.

Vastu Tips: ಮನೆಯಲ್ಲಿ ಧನ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕಾ..?; ಹಾಗಾದ್ರೆ ಈ ವಾಸ್ತು ನಿಯಮ ಪಾಲಿಸಿ

ಧನ–ಸಮೃದ್ಧಿಗೆ ಮುಖ್ಯ ದ್ವಾರ ವಾಸ್ತು ಟಿಪ್ಸ್

ಮನೆಯಲ್ಲಿ ಧನ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಲು ಮುಖ್ಯ ದ್ವಾರದ ವಾಸ್ತು ಅತ್ಯಂತ ಮಹತ್ವದ್ದು ಎಂದು ನಂಬಲಾಗಿದೆ. ಮುಖ್ಯ ಬಾಗಿಲಿನ ಮೇಲೆ ಗಣೇಶನ ಚಿತ್ರ ಇಡುವುದು, ಎಡಬದಿಯಲ್ಲಿ ಶಮಿ ಗಿಡ ನೆಡುವುದು, ಕೆಂಪು ಸಿಂಧೂರದಿಂದ ಸ್ವಸ್ತಿಕ ಚಿಹ್ನೆ ಹಾಕುವುದು ಹಾಗೂ ತಾಮ್ರದ ಸೂರ್ಯ ದೇವರ ಪ್ರತಿಮೆ ಅಳವಡಿಸುವುದು ಶುಭಕರ ಕ್ರಮಗಳೆಂದು ಹೇಳಲಾಗುತ್ತದೆ

Vastu Tips: ಮನೆಯ ಸಮೃದ್ಧಿಗೆ ಬೆಸ್ಟ್ ಈ ದಿಕ್ಕು; ಆದ್ರೆ ಅಲ್ಲಿ ಮಲಗುವ ಕೋಣೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ

ತಪ್ಪಿಯೂ ಈ ದಿಕ್ಕಿನಲ್ಲಿ ಮಲಗುವ ಕೋಣೆ ನಿರ್ಮಿಸಬೇಡಿ

ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ದಿಕ್ಕಿಗೆ ಅತ್ಯಂತ ಪವಿತ್ರ ಹಾಗೂ ಪ್ರಮುಖ ಸ್ಥಾನವಿದೆ. ಇದನ್ನು ಶಿವನ ದಿಕ್ಕು ಮತ್ತು ದೈವಿಕ ಶಕ್ತಿಯ ನೆಲೆ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಪೂಜಾ ಕೋಣೆ, ನೀರಿನ ಮೂಲ ಅಥವಾ ಅತಿಥಿ ಕೋಣೆ ಇರಿಸುವುದು ಶುಭಕರ ಎಂದು ಹೇಳಲಾಗುತ್ತದೆ. ಆದರೆ ಮಲಗುವ ಕೋಣೆ ಈ ಭಾಗದಲ್ಲಿ ಇರಿಸುವುದು ಅನುಕೂಲಕರವಲ್ಲ.

Vastu Tips: ಸಾಲದ ತಲೆನೋವು ಕಾಡುತ್ತಿದೆಯೇ? ಮನೆಯ ಈ ದಿಕ್ಕಿನಲ್ಲಿ ಈ ವಸ್ತು ಇಟ್ಟರೆ ಆರ್ಥಿಕ ಸಮಸ್ಯೆ  ದೂರ!

ಸಾಲದ ಸಮಸ್ಯೆ ದೂರವಾಗಲು ಮನೆಯ ಈ ದಿಕ್ಕಿನಲ್ಲಿ ಈ ವಸ್ತು ಇಡಿ!

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ಕೆಲವು ಪವಿತ್ರ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಯು ಹೆಚ್ಚಾಗಿ, ಆರ್ಥಿಕ ಸಮಸ್ಯೆಗಳು ಮತ್ತು ಸಾಲದ ಬಾಧೆ ಕಡಿಮೆಯಾಗಬಹುದು ಎಂದು ನಂಬಲಾಗುತ್ತದೆ. ತುಳಸಿ ಗಿಡ, ನೀರಿನಿಂದ ತುಂಬಿದ ಕಲಶ, ಶಂಖ, ಸ್ವಸ್ತಿಕ ಚಿಹ್ನೆ ಹಾಗೂ ಹಿತ್ತಾಳೆ ಅಥವಾ ತಾಮ್ರದ ಗಂಟೆಯನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಸಮೃದ್ಧಿ ಮತ್ತು ಲಕ್ಷ್ಮೀ ದೇವಿಯ ಕೃಪೆಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ.

Vastu Tips: ನಿಮ್ಮ ಮನೆಯ ವಾಶ್ ರೂಮ್‌ನಲ್ಲಿರುವ ಈ ಬಣ್ಣದ ಬಕೆಟ್ ವಾಸ್ತುದೋಷಕ್ಕೆ ಕಾರಣವಾಗಬಹುದು ಎಚ್ಚರ

ವಾಸ್ತು ಶಾಸ್ತ್ರದ ಪ್ರಕಾರ ವಾಶ್ ರೂಮ್‌ನಲ್ಲಿ ಈ ಬಣ್ಣದ ಬಕೆಟ್ ಇರಲಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ಸ್ನಾನಗೃಹದ ದಿಕ್ಕು ಹಾಗೂ ಅಲ್ಲಿ ಬಳಸುವ ವಸ್ತುಗಳ ಬಣ್ಣವು ಮನೆಯ ಸಕಾರಾತ್ಮಕ-ನಕಾರಾತ್ಮಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸ್ನಾನಗೃಹದಲ್ಲಿ ಗಾಢ ಬಣ್ಣದ, ವಿಶೇಷವಾಗಿ ಕೆಂಪು ಮತ್ತು ಕಪ್ಪು ಬಣ್ಣದ ಬಕೆಟ್ ಬಳಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

Vastu Tips: ಮನೆ ಗುಡಿಸುವುದಕ್ಕೆ ಮಾತ್ರವಲ್ಲ ಒರೆಸುವುದಕ್ಕೂ ಇದೆ ವಾಸ್ತು ನಿಯಮ! ಈ ಸಮಯದಲ್ಲಿ ನೆಲ ಒರೆಸಿದ್ರೆ ಅಪಾಯ ತಪ್ಪಿದ್ದಲ್ಲ

ಮನೆ ಒರೆಸುವಾಗಲೂ ಈ ವಾಸ್ತು ನಿಯಮ ಪಾಲಿಸಿ!

ಮನೆ ಕೇವಲ ವಾಸಿಸುವ ಸ್ಥಳವಲ್ಲ; ಅದು ಲಕ್ಷ್ಮೀದೇವಿಯ ವಾಸಸ್ಥಾನವಾಗಿರುವ ಪವಿತ್ರ ಸ್ಥಳವಾಗಿದೆ. ಆದ್ದರಿಂದ ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ, ಅದರಿಂದ ಆರೋಗ್ಯ ಮಾತ್ರವಲ್ಲದೆ ಆರ್ಥಿಕ ಸಮಸ್ಯೆಗಳು ಮತ್ತು ದುರದೃಷ್ಟವೂ ಎದುರಾಗಬಹುದು ಎನ್ನಲಾಗುತ್ತದೆ.

Vastu Tips: ಸ್ನಾನಗೃಹದಲ್ಲಿ ಇಡುವ ಈ ವಸ್ತುಗಳು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಚ್ಚರಿಕೆ!

ಸ್ನಾನಗೃಹದಲ್ಲಿ ಇವುಗಳಿದ್ದರೆ ವಾಸ್ತು ದೋಷ ಪಕ್ಕಾ

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹದಿಂದ ಹೆಚ್ಚು ನಕಾರಾತ್ಮಕ ಶಕ್ತಿ ಉಂಟಾಗುವ ಸಾಧ್ಯತೆ ಇದೆ. ಮುರಿದ ಚಪ್ಪಲಿಗಳು, ಒಡೆದ ಕನ್ನಡಿ, ಖಾಲಿ ಬಕೆಟ್, ನಲ್ಲಿಯಿಂದ ತೊಟ್ಟಿಕ್ಕುವ ನೀರು, ಒದ್ದೆ ಬಟ್ಟೆಗಳು, ಚರಂಡಿಯಲ್ಲಿ ಜಮೆಯಾಗುವ ಕೂದಲು ಹಾಗೂ ಬಾತ್ ರೂಮಿನಲ್ಲಿ ಸಸ್ಯಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇಂತಹ ವಸ್ತುಗಳನ್ನು ತಪ್ಪಿಸಿ ಸ್ವಚ್ಛತೆ ಮತ್ತು ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸಿದರೆ ಮನೆಗೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ.

Vastu Tips: : ವಾಸ್ತುಶಾಸ್ತ್ರದ ಪ್ರಕಾರ ಎಂಥ ಸಮಯದಲ್ಲಿಯೂ ಯಾರಿಂದಲೂ ಈ ವಸ್ತುಗಳನ್ನು ಸಾಲ ಪಡೆಯಬೇಡಿ!

ಇನ್ನೊಬ್ಬರ ಬಳಿಯಿಂದ ಪೆನ್ನು ಸಾಲ ಪಡೆಯುವುದು ದುರದೃಷ್ಟ!

ನಮ್ಮ ದೈನಂದಿನ ಜೀವನದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಂದ ವಸ್ತುಗಳನ್ನು ಎರವಲು ಪಡೆಯುವುದು ಸಾಮಾನ್ಯ. ಆದರೆ ವಾಸ್ತುಶಾಸ್ತ್ರದ ಪ್ರಕಾರ, ಕೈಗಡಿಯಾರ, ಪೊರಕೆ, ಪೆನ್ನು ಮತ್ತು ಉಪ್ಪು ಮುಂತಾದ ಕೆಲವು ವಸ್ತುಗಳು ವ್ಯಕ್ತಿಯ ಅದೃಷ್ಟ ಹಾಗೂ ಹಣೆಬರಹಕ್ಕೆ ಸಂಬಂಧಿಸಿರುತ್ತವೆ. ಇವುಗಳನ್ನು ಎರವಲು ಕೊಡುವುದು ಅಥವಾ ಪಡೆಯುವುದು ಅಶುಭಕರವೆಂದು ನಂಬಲಾಗುತ್ತದೆ.

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ಮನೆಯಲ್ಲಿ ಅತ್ತೆ ಸೊಸೆ ಸಂಬಂಧ ಗಟ್ಟಿಯಾಗಲು ಇಲ್ಲಿದೆ ವಾಸ್ತು ಟಿಪ್ಸ್!

ಅತ್ತೆ–‌ ಸೊಸೆ ನಡುವಿನ ಭಿನ್ನಾಭಿಪ್ರಾಯಗಳು ಮನೆಯ ಶಾಂತಿಗೆ ಧಕ್ಕೆ ತರಬಹುದು. ವಾಸ್ತು ಶಾಸ್ತ್ರದ ಪ್ರಕಾರ ನೈಋತ್ಯ ಮತ್ತು ಈಶಾನ್ಯ ದಿಕ್ಕಿನ ಸರಿಯಾದ ಬಳಕೆ, ಸ್ಫಟಿಕ ಕಲ್ಲು, ದೀಪ, ಮಲಗುವ ದಿಕ್ಕು ಹಾಗೂ ಬಣ್ಣಗಳ ಆಯ್ಕೆ, ಜೊತೆಗೆ ಆಧ್ಯಾತ್ಮಿಕ ಆಚರಣೆಗಳನ್ನು ಪಾಲಿಸಿದರೆ ಗೃಹಕ್ಲೇಶ ನಿವಾರಣೆಯಾಗಿ ಕುಟುಂಬದಲ್ಲಿ ಸೌಹಾರ್ದತೆ ಮತ್ತು ನೆಮ್ಮದಿ ಹೆಚ್ಚಾಗುತ್ತದೆ.

Vastu Tips: ವಾಸ್ತು ಸಲಹೆಯಂತೆ ಮನೆಯಲ್ಲಿ ಕರಿಬೇವು ಗಿಡ ನೆಟ್ಟರೆ ಹಣಕಾಸು ಸಮಸ್ಯೆಯೇ ಬರದು!

ಕೈಯಲ್ಲಿ ಹಣ ನಿಲ್ಲಬೇಕಾದರೆ ಇದೊಂದು ಗಿಡ ಮನೆಯಲ್ಲಿರಲಿ!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕರಿಬೇವು ಗಿಡವನ್ನು ಬೆಳೆಸುವುದರಿಂದ ಅನೇಕ ಶುಭ ಪರಿಣಾಮಗಳು ಕಂಡುಬರುತ್ತವೆ. ವಿಶೇಷವಾಗಿ ಮನೆಯ ಹಿತ್ತಲಿನಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಗಿಡವಿದ್ದರೆ, ಧನಾತ್ಮಕ ಶಕ್ತಿ ಹೆಚ್ಚಾಗಿ ಮನೆಗೆ ಸಮೃದ್ಧಿ ಬರುತ್ತದೆ ಎಂದು ನಂಬಲಾಗುತ್ತದೆ. ಆದರೆ ಕರಿಬೇವು ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದು ಅತ್ಯಂತ ಮುಖ್ಯ. ಸರಿಯಾದ ದಿಕ್ಕಿನಲ್ಲಿ ಬೆಳೆದರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ.

Loading...