ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಾಸ್ತು ಲೋಕ
Vastu Tips: ಅಡುಗೆ ಮನೆಯಲ್ಲಿರುವ ಉಪ್ಪು ಜೀವನದಲ್ಲಿ ಯಶಸ್ಸು ತರುವುದು..

ಜೀವನದಲ್ಲಿ ನಿರಂತರ ಯಶಸ್ಸು ಸಿಗಬೇಕೇ ?

ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನಮ್ಮದಾಗಬೇಕು ಎಂದು ನಾವು ಬಯಸುತ್ತೇವೆ. ಆದರೆ ಪ್ರತಿ ಬಾರಿಯೂ ಇದು ಸಾಧ್ಯವಾಗುವುದಿಲ್ಲ. ಅದರಲ್ಲೂ ಕೆಲವೊಂದು ಬಾರಿ ಯಶಸ್ಸಿನ ಸಮೀಪಕ್ಕೆ ಬಂದು ಸೋಲುತ್ತೇವೆ. ಇದು ತುಂಬಾ ಬೇಸರವನ್ನು ಉಂಟು ಮಾಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಜೀವನದಲ್ಲೂ ಸಾಲು ಸಾಲು ಸೋಲುಗಳು ಎದುರಾಗುತ್ತಿದ್ದರೆ ಅದಕ್ಕೆ ಪರಿಹಾರವನ್ನು ಮನೆಯ ಅಡುಗೆ ಕೋಣೆಯಲ್ಲಿ ಹುಡುಕಿ.

Vastu Tips: ಜೀವನದ ಸಮಸ್ಯೆಗಳಿಗೆ ತಲೆದಿಂಬಿನಿಂದ ಪರಿಹಾರ

ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಐದು ವಸ್ತುಗಳು

ಜೀವನದ ಸಮಸ್ಯೆಗಳಿಗೂ ತಲೆದಿಂಬಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ. ಹೆಚ್ಚು ಸುಸ್ತು, ಮನಸ್ಸಿಗೆ ಬೇಸರವಾದಾಗ ತಲೆದಿಂಬು ನಮಗೆ ಸಾಂತ್ವನ ನೀಡುವುದು ಗೊತ್ತೇ ಇದೆ. ಆದರೆ ಇದು ಕೆಲವೊಂದು ಸಮಸ್ಯೆಗಳನ್ನು ಪರಿಹರಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೆ ಇರುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ವಾಸ್ತು ಶಾಸ್ತ್ರ (Vastu Shastra) ಹೇಳುವ ಕೆಲವು ವಸ್ತುಗಳನ್ನು ತಲೆದಿಂಬಿನ ಒಳಗೆ ಇರಿಸುವುದರಿಂದ ಪರಿಹಾರ ಕಾಣಬಹುದು.

Vastu Tips: ಮನೆಯ ಸಮೃದ್ಧಿಗಾಗಿ ನಿಯಮ ಪ್ರಕಾರವಾಗಿ ಶಿವಲಿಂಗ ಪೂಜಿಸಿ

ಮನೆಯಲ್ಲಿ ಶಿವಲಿಂಗ ಇಡಬಹುದೇ?

ಸಾಮಾನ್ಯವಾಗಿ ಮನೆಯಲ್ಲಿ ದೇವರ ಮೂರ್ತಿಗಳನ್ನು ಅದರಲ್ಲೂ ವಿಶೇಷವಾಗಿ ಶಿವಲಿಂಗವನ್ನು ಇಟ್ಟುಕೊಳ್ಳಬಾರದು ಎನ್ನುತ್ತಾರೆ. ಇದಕ್ಕೆ ಹಲವು ಕಾರಣಗಳೂ ಇವೆ. ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಳ್ಳುವುದಾದರೆ ಅದಕ್ಕೆ ಸಂಬಂಧಿಸಿ ಕೆಲವು ವಿಶೇಷ ನಿಯಮಗಳನ್ನು ಪಾಲಿಸಬೇಕು. ಶಿವಲಿಂಗವನ್ನು ಕೆಲವು ವಿಶಿಷ್ಠ ಅನುಷ್ಠಾನಗಳನ್ನು ಪಾಲಿಸಿ ಪೂಜಿಸುವುದರಿಂದ ಮನೆಯ ಸಮೃದ್ಧಿ ಸದಾ ನೆಲೆಸುವಂತೆ ಮಾಡಲು ಸಾಧ್ಯವಿದೆ.

Vastu Tips: ವೃತ್ತಿ ಜೀವನದ ಅಡೆತಡೆ ದೂರ ಮಾಡಲು ಇಲ್ಲಿದೆ ವಾಸ್ತು ಪರಿಹಾರ

ವೃತ್ತಿ ಜೀವನದ ಅಡೆತಡೆಗೆ ಕಾರಣವಾಗುತ್ತದೆ ಈ ಮೂರು ಬಣ್ಣಗಳು

ವೃತ್ತಿ ಬದುಕಿನಲ್ಲಿ ಏಳುಬೀಳು ಸಹಜ. ಆದರೆ ಕೆಲವೊಮ್ಮೆ ನಾವು ಎಷ್ಟೇ ಕಷ್ಟಪಟ್ಟು ದುಡಿದರೂ ನಿರೀಕ್ಷಿತ ಫಲ ಕೈಗೂಡುವುದಿಲ್ಲ. ಇದರಿಂದ ಮನಸ್ಸಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ. ವೃತ್ತಿ ಬದುಕಿನಲ್ಲಿ ಅಡೆತಡೆ ಎದುರಾಗಲು ಕೆಲವೊಂದು ವಾಸ್ತು ದೋಷಗಳು ಕಾರಣವಾಗಬಹುದು. ಆದರೆ ಇದಕ್ಕೆ ಕೆಲವು ಪರಿಹಾರ ದಾರಿಯನ್ನು ಕಂಡುಕೊಳ್ಳುವುದರಿಂದ ಸಾಕಷ್ಟು ಏಳಿಗೆಯನ್ನೂ ಹೊಂದಬಹುದು. ಅಂತಹ ಒಂದು ಸರಳ ಪರಿಹಾರ ದಾರಿ ಇಂತಿದೆ.

Vastu Tips: ಹವನದ ವೇಳೆ ಪಾಲಿಸಲೇಬೇಕು ವಾಸ್ತು ನಿಯಮ

ಹವನದ ವೇಳೆ ಪಾಲಿಸಬೇಕಾದ ನಿಯಮಗಳೇನು ಗೊತ್ತೇ?

ಸಾಮಾನ್ಯವಾಗಿ ನಾವು ಮನೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ಹೋಮ ಹವನಗಳನ್ನು(Vastu about havan) ಮಾಡಿಸುತ್ತೇವೆ. ಇದರಿಂದ ಮನೆಯ ವಾತಾವರಣ ಶುದ್ಧಿಯಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಗಳು ಅಲ್ಲಿ ನೆಲೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಸಾಮಾನ್ಯವಾಗಿ ಹವನಕ್ಕೆ ಪಾಲಿಸಬೇಕಾದ ಕೆಲವು ನಿಯಮಗಳನ್ನು ಬಹುತೇಕ ಎಲ್ಲರೂ ಇದನ್ನು ಹೇಳುವುದಿಲ್ಲ. ಅಗತ್ಯವಿರುವುದನ್ನಷ್ಟೇ ಹೇಳಿ ಮುಗಿಸುತ್ತಾರೆ. ಹವನದ ಕುರಿತು ವಾಸ್ತು ಶಾಸ್ತ್ರ ಹೇಳಿರುವ ನಿಯಮಗಳೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

Vastu Tips: ಮನೆಯ ಅದೃಷ್ಟ, ಸಂಪತ್ತು, ಸಮೃದ್ಧಿಗಾಗಿ ಬಳಸಿ ದಾಲ್ಚಿನಿ

ಅದೃಷ್ಟವನ್ನೇ ಬದಲಾಯಿಸುವ ಅಡುಗೆ ಮನೆಯಲ್ಲಿರುವ ವಸ್ತು ಯಾವುದು ಗೊತ್ತೇ ?

ಪ್ರತಿಯೊಬ್ಬರ ಮನೆಯ ಅಡುಗೆ ಕೋಣೆಯಲ್ಲಿರುವ ಕೆಲವೊಂದು ವಸ್ತುಗಳು (Vastu Tips) ಮನೆ ಮಂದಿಯ ಅದೃಷ್ಟವನ್ನೇ ಬದಲಾಯಿಸುತ್ತದೆ. ಮನೆಯ ಸುಖ, ಶಾಂತಿ, ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಂತಹ ಒಂದು ವಸ್ತುವೆಂದರೆ ದಾಲ್ಚಿನಿ. ಇದನ್ನು ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ, ಯಾವ ರೀತಿ ಅದನ್ನು ಮನೆಯಲ್ಲಿ ಬಳಸಿಕೊಳ್ಳಬೇಕು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

Vastu Tips: ಆರ್ಥಿಕ ತೊಂದರೆ ಉಂಟಾಗದಿರಲು ಈ ವಸ್ತುಗಳನ್ನು ಎಂದಿಗೂ ದಾನ ನೀಡಬೇಡಿ!

ದಾನ ಮಾಡಲೇಬಾರದ ವಸ್ತುಗಳು ಇವು

ಪ್ರತಿಯೊಂದು ಧರ್ಮದಲ್ಲೂ ದಾನಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ನಮ್ಮ ಪಾಪ ಕರ್ಮಗಳನ್ನು ಕಳೆಯಲು ಇದೊಂದು ಉತ್ತಮ ಮಾರ್ಗ ಎನ್ನುವುದನ್ನು ಬಹುತೇಕ ಎಲ್ಲ ಧರ್ಮ ಗ್ರಂಥಗಳೂ ಹೇಳುತ್ತವೆ. ಆದರೂ ಕೆಲವೊಂದು ವಸ್ತುಗಳನ್ನು ದಾನ ಎಂದಿಗೂ ಮಾಡಬಾರದು ಎನ್ನುತ್ತದೆ ಹಿಂದೂ ಧರ್ಮ ಶಾಸ್ತ್ರ. ಯಾಕೆ, ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

Vastu Tips: ಮನೆಯಲ್ಲಿ ಸ್ಫಟಿಕದ ಮರವನ್ನು ಇಡಬಹುದೆ?

ಸ್ಫಟಿಕದ ಮರ ಮನೆಗೆ ಶುಭವೇ?

ಮನೆ ಸುಖ, ಶಾಂತಿ, ನೆಮ್ಮದಿಯ ತಾಣವಾಗಬೇಕು ಎನ್ನುವುದು ಎಲ್ಲರ ಉದ್ದೇಶ. ಇದಕ್ಕಾಗಿ ನಾವು ಏನು ಮಾಡಲು ಬೇಕಾದರೂ ಸಿದ್ಧವಾಗುತ್ತೇವೆ. ನಾನಾ ರೀತಿಯ ವಸ್ತುಗಳನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಇಂತಹ ಒಂದು ವಸ್ತುಗಳಲ್ಲಿ ಸ್ಪಟಿಕದ ಮರವು ಒಂದು. ಯಾರೋ ಹೇಳಿದರೆಂದು ನಾವು ಇದನ್ನು ಮನೆಯಲ್ಲಿ ತಂದಿಡುವುದು ಸರಿಯಲ್ಲ. ಅದರ ಬಗ್ಗೆ ಸಂಪೂರ್ಣ ತಿಳಿದು ತಂದಿಟ್ಟರೆ ಅದರಿಂದ ಸಾಕಷ್ಟು ಲಾಭವಾಗುತ್ತದೆ.

Vastu Tips: ಆರೋಗ್ಯ ಸಮಸ್ಯೆಯನ್ನು ದೂರವಿರಿಸಲು ಇಲ್ಲಿದೆ ಸುಲಭ ಉಪಾಯ

ವಾಸ್ತು ಸಲಹೆ ಪಾಲಿಸಿ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಿ

ಮನೆಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದರೆ ಎಲ್ಲಾದರೂ ತೊಂದರೆ ಇವೆ ಎಂದೇ ಅರ್ಥ. ವಾಸ್ತು ಸಲಹೆಗಳನ್ನು ಪಾಲಿಸುವ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ಮನೆ ಮಂದಿ ಆರೋಗ್ಯವಾಗಿರಲು ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಇದನ್ನು ಪಾಲಿಸುವುದರಿಂದ ಮನೆಯವರೆಲ್ಲ ಆರೋಗ್ಯವನ್ನು ಕಾಪಾಡಬಹುದು ಎನ್ನುತ್ತಾರೆ ವಾಸ್ತು ತಜ್ಞರು.

Vastu Tips: ಅಡುಗೆ ಮನೆ ಉತ್ತರ ದಿಕ್ಕಿನಲ್ಲಿ ಇದೆಯೇ? ಹಾಗಿದ್ದರೆ ಈ ನಿಯಮ ಪಾಲಿಸಿ, ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಿ

ಉತ್ತರ ದಿಕ್ಕಿನಲ್ಲಿರುವ ಅಡುಗೆ ಮನೆಗೆ ಸಲಹೆಗಳು

ಸಾಮಾನ್ಯವಾಗಿ ಅಡುಗೆ ಮನೆಯು ಅಗ್ನೇಯ ದಿಕ್ಕಿನಲ್ಲಿರಬೇಕು ಎನ್ನುತ್ತದೆ ವಾಸ್ತು. ಆದರೆ ಸ್ಥಳಾವಕಾಶದ ಕೊರತೆ, ವಿನ್ಯಾಸದ ಸಮಸ್ಯೆಯಿಂದಾಗಿ ಕೆಲವೊಮ್ಮೆ ಅಡುಗೆ ಮನೆಯನ್ನು ಉತ್ತರ ದಿಕ್ಕಿನಲ್ಲಿ ನಿರ್ಮಿಸುತ್ತೇವೆ. ಈ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಬಹುದು.

Vastu Tips: ಬಿದಿರಿನ ಗಿಡ ಮನೆಯಲ್ಲಿದ್ದರೆ ಏನೆಲ್ಲಾ ಲಾಭವಿದೆ ಗೊತ್ತೇ?

ಬಿದಿರಿನ ಗಿಡ ಮನೆಯಲ್ಲಿ ಇಡಬಹುದೇ?

ಮನೆಯ ಅಲಂಕಾರದಲ್ಲಿ ನಾವು ಕೆಲವೊಂದು ಗಿಡಗಳನ್ನು ಇಡುತ್ತೇವೆ. ಇಂತಹ ಗಿಡಗಳನ್ನು ವಾಸ್ತು ನಿಯಮಗಳ ಪ್ರಕಾರ ಇರಿಸುವುದು ಸಾಕಷ್ಟು ಲಾಭದಾಯಕ ಮತ್ತು ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತದೆ. ಅಂತಹ ಒಂದು ಸಸ್ಯಗಳಲ್ಲಿ ಒಂದು ಬಿದಿರಿನ ಗಿಡ. ವಾಸ್ತು (Vastu Tips) ಸಲಹೆಗಳನ್ನು ಪಾಲಿಸಿ ಈ ಸಸ್ಯವನ್ನು ನೆಡುವುದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು. ಅದು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Vastu Tips: ಬಿದಿರಿನ ಗಿಡ ಮನೆಯಲ್ಲಿದ್ದರೆ ಏನೆಲ್ಲ ಲಾಭವಿದೆ ಗೊತ್ತೇ?

ಬಿದಿರಿನ ಗಿಡ ಮನೆಯಲ್ಲಿ ಇಡಬಹುದೇ?

ಮನೆಯ ಅಲಂಕಾರಕ್ಕೆ ನಾವು ಕೆಲವೊಂದು ಗಿಡಗಳನ್ನು ಇಡುತ್ತೇವೆ. ಇಂತಹ ಗಿಡಗಳನ್ನು ವಾಸ್ತು ನಿಯಮಗಳ ಪ್ರಕಾರ ಇರಿಸುವುದು ಸಾಕಷ್ಟು ಲಾಭದಾಯಕ ಮತ್ತು ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತದೆ. ಅಂತಹ ಸಸ್ಯಗಳಲ್ಲಿ ಒಂದು ಬಿದಿರಿನ ಗಿಡ ಕೂಡ ಒಂದು. ವಾಸ್ತು ಸಲಹೆಗಳನ್ನು ಪಾಲಿಸಿ ಈ ಸಸ್ಯವನ್ನು ನೆಡುವುದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು.

Vastu Tips: ತುಳಸಿ, ಅಲೋವೆರಾ ಒಟ್ಟಿಗೆ ನೆಡಬಹುದೇ? ಏನು ಹೇಳುತ್ತದೆ ವಾಸ್ತು ಶಾಸ್ತ್ರ?

ತುಳಸಿ, ಅಲೋವೆರಾ ಒಟ್ಟಿಗೆ ನೆಡಬಹುದೇ?

ಪ್ರತಿಯೊಂದು ಸಸ್ಯವೂ ಒಂದೊಂದು ವಿಶೇಷತೆಗಳನ್ನು ಹೊಂದಿದೆ. ಹೀಗಾಗಿ ಮನೆ ಸುತ್ತಮುತ್ತ ಗಿಡಗಳನ್ನು ನೆಡುವಾಗ ಕೆಲವೊಂದು ವಾಸ್ತು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಇದರಿಂದ ಮನೆಗೆ ಸುಖ, ಸಮೃದ್ಧಿಯನ್ನು ಆಹ್ವಾನಿಸಿಕೊಳ್ಳಬಹುದು. ಜಾಗದ ಕೊರತೆಯೋ ಅಥಾವ ಇನ್ಯಾವುದೋ ಕಾರಣದಿಂದ ಎರಡು ಗಿಡಗಳನ್ನು ಮುಖ್ಯವಾಗಿ ತುಳಸಿ ಮತ್ತು ಅಲೋವೆರಾವನ್ನು ಒಟ್ಟಿಗೆ ನೆಡುವುದು ಮನೆಗೆ ಪ್ರಯೋಜನಕಾರಿಯೇ? ಈ ಕುರಿತು ವಾಸ್ತು ತಜ್ಞರು ಹೇಳುವುದು ಏನು?

Vastu Tips: ಜೀವನದಲ್ಲಿ ಪ್ರಗತಿಗೆ ಅಡ್ಡಿಯಾಗಬಹುದು ಈ ತಪ್ಪುಗಳು...

ದೇವರ ಮನೆಯಲ್ಲಿ ಈ ತಪ್ಪು ಮಾಡಬೇಡಿ

ಮನೆಯ ದೇವರ ಕೋಣೆ ಎಂದರೆ ಅದು ಅತ್ಯಂತ ಪವಿತ್ರ ಸ್ಥಳ. ಇಲ್ಲಿ ಮಾಡುವ ಕೆಲವೊಂದು ತಪ್ಪುಗಳು ಮನೆ ಮಂದಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ನಮ್ಮ ಪ್ರಗತಿಯ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಮನೆ ದೇವಾಲಯದಲ್ಲಿ ಮುಖ್ಯವಾಗಿ ಈ ನಾಲ್ಕು ತಪ್ಪುಗಳಾಗದಂತೆ ನೋಡಿಕೊಳ್ಳಿ. ಅದೇನು ಎನ್ನುವ ವಿವರ ಇಲ್ಲಿದೆ.

Vastu Tips: ಸುದೀರ್ಘ ಕಾಲದಿಂದ ಮುಚ್ಚಿರುವ ಮನೆಯೊಳಗೆ ಪ್ರವೇಶಿಸುವ ಮುನ್ನ ಪಾಲಿಸಿ ವಾಸ್ತು ನಿಯಮ

ದೀರ್ಘ ಕಾಲದಿಂದ ಮುಚ್ಚಿರುವ ಮನೆ ಖರೀದಿ ವೇಳೆ ಪಾಲಿಸಿ ಈ ನಿಯಮ

ಒಂದು ಮನೆ ದೀರ್ಘ ಕಾಲದಿಂದ ಮುಚ್ಚಿದ್ದರೆ ಅಂತಹ ಮನೆ ಖರೀದಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಇಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿಗಳು ವಾಸ ಮಾಡುತ್ತಿರಬಹುದು. ಹೀಗಾಗಿ ಹೊಸ ಮನೆ ಖರೀದಿ ಮಾಡಿ ಅಲ್ಲಿ ವಾಸಿಸುವ ಯೋಚನೆ ಇದ್ದರೆ ಮೊದಲು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಪರಿವರ್ತಿಸುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ ಮೊದಲು ಮನೆಯ ಶಕ್ತಿ ಮತ್ತು ಪರಿಸರವನ್ನು ಸಕಾರಾತ್ಮಕವಾಗಿಸುವುದು ಬಹು ಮುಖ್ಯ.

Vastu Tips: ದಂಪತಿಯ ನಡುವೆ ಪ್ರೀತಿ ಹೆಚ್ಚಿಸಲು ಸಹಾಯ ಮಾಡುತ್ತೆ ಈ ಗಿಡಗಳು

ಮನೆಯ ಸುತ್ತಮುತ್ತ ಇರಲಿ ಈ ಗಿಡಗಳು

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕು ಎನ್ನುವ ಬಯಕೆ ಎಲ್ಲರದ್ದು. ಆದರೆ ದಂಪತಿಯ (vastu tips for couples) ನಡುವೆ ಬರುವ ಕೆಲವು ಸಣ್ಣಪುಟ್ಟ ಮನಸ್ತಾಪಗಳು ಮನೆ ಮಂದಿಯ ಸುಖ, ಶಾಂತಿ, ನೆಮ್ಮದಿಯನ್ನು ಹಾಳು ಮಾಡುತ್ತದೆ. ದಂಪತಿಯ ನಡುವೆ ಮನಸ್ತಾಪಗಳಿಗೆ ಕೆಲವೊಮ್ಮೆ ವಾಸ್ತು ದೋಷಗಳೂ ಕಾರಣವಾಗುತ್ತದೆ. ಇದನ್ನು ಕೆಲವು ಸುಲಭ ವಿಧಾನದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿದೆ.

Vastu Tips: ಊಟದ ಮೇಜಿನ ಮೇಲೆ ಇವುಗಳನ್ನು ಇಡಲೇಬಾರದು ಎನ್ನುತ್ತದೆ ವಾಸ್ತು

ಸ್ವಚ್ಛವಾಗಿರಲಿ ಊಟದ ಮೇಜು

ಮನೆಯಲ್ಲಿ ಪ್ರತಿಯೊಂದು ವಸ್ತುಗಳನ್ನು ಇಡುವಾಗಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲು ಸಾಧ್ಯವಿದೆ. ನಾವು ಮಾಡುವ ಕೆಲವೊಂದು ತಪ್ಪುಗಳು ವಾಸ್ತು (Vastu tips) ದೋಷವನ್ನು ಉಂಟು ಮಾಡುತ್ತದೆ. ಅಂತಹ ಒಂದು ತಪ್ಪನ್ನು ನಾವು ಹೆಚ್ಚಾಗಿ ಊಟದ ಟೇಬಲ್ ನಲ್ಲಿ ಮಾಡುತ್ತೇವೆ. ಅದು ಯಾವುದು, ಅದಕ್ಕೆ ಏನು ಪರಿಹಾರ ಇಲ್ಲಿದೆ ಈ ಕುರಿತು ಮಾಹಿತಿ.

Vastu Tips: ಸಮಸ್ಯೆಗಳಿಗೆ ಅಹ್ವಾನ ಕೊಡುವ ಮೂರು ಮೂಲೆಯ ಮನೆ

ಮೂರು ಮೂಲೆಯ ಮನೆ ಬೇಡವೇ ಬೇಡ

ಮೂರು ಮೂಲೆಯ ಜಾಗದ ಮನೆ ಖರೀದಿ ಮಾಡಬಾರದು ಎನ್ನುತ್ತಾರೆ ವಾಸ್ತು ತಜ್ಞರು. ಇದು ಯಾಕೆ ಎನ್ನುವುದು ಹೆಚ್ಚಿನವರು ತಿಳಿದಿರಲಿಕ್ಕಿಲ್ಲ. ವಾಸ್ತು ಶಾಸ್ತ್ರಗಳ ಪ್ರಕಾರ ಮೂರು ಮೂಲೆಯ ಮನೆ, ಜಾಗಗಳು ನಾನಾ ರೀತಿಯ ಸಮಸ್ಯೆಗಳಿಗೆ ಅಹ್ವಾನ ನೀಡುತ್ತದೆ. ಹೀಗಾಗಿ ಮೂರು ಮೂಲೆಯ ಮನೆ, ಜಾಗ ಖರೀದಿ ಮಾಡಿದರೆ ಜೀವನದಲ್ಲಿ ತೊಂದರೆಗಳು ಹೆಚ್ಚಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

Vastu Tips: ಮನೆಯ ಈ ಭಾಗದಲ್ಲಿ ಎಂದಿಗೂ ಚಪ್ಪಲಿ ಇಡಬೇಡಿ

ಅಪ್ಪಿತಪ್ಪಿಯೂ ಮನೆಯ ಈ ಭಾಗದಲ್ಲಿ ಚಪ್ಪಲಿ ಇಡಬೇಡಿ

ಮನೆಯ ಪ್ರತಿಯೊಂದು ದಿಕ್ಕು ಕೂಡ ಪವಿತ್ರವಾಗಿರುತ್ತದೆ. ಒಂದೊಂದು ದಿಕ್ಕಿನಲ್ಲಿ ಒಂದೊಂದು ದೇವರು ಇರುತ್ತಾರೆ ಎನ್ನುವ ನಂಬಿಕೆ ಹಿಂದೂಗಳದ್ದು. ಹೀಗಿರುವಾಗ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕೆಲವೊಂದು ಭಾಗದಲ್ಲಿ ಶೂ, ಚಪ್ಪಲಿಗಳನ್ನು ಇಡಲೇಬಾರದು. ಇದರಿಂದ ಮನೆ ಮಂದಿಗೆ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.

Vastu Tips: ಬೆಳಗ್ಗೆ ಕಸ ಗುಡಿಸುವಾಗ ಈ ನಿಯಮ ಪಾಲಿಸಿ; ಮನೆಗೆ ಸಂಪತ್ತು ಆಕರ್ಷಿಸಿ

ಸಂಪತ್ತನ್ನು ಆಕರ್ಷಿಸಲು ಬೆಳಗ್ಗೆ ಈ ನಿಯಮ ಪಾಲಿಸಿ

ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಬೆಳಗ್ಗೆ ಕಸ ಗುಡಿಸಿ ಸ್ವಚ್ಛಗೊಳಿಸುವ ವಾಡಿಕೆ ಇದೆ. ಆದರೆ ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಮನೆಯನ್ನು ಸ್ವಚ್ಛಗೊಳಿಸುವುದು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು ಇರುವ ಒಂದು ಪ್ರಮುಖ ದಾರಿ.

Vastu Tips: ಮನೆ ಮಂದಿಯ ಪ್ರಗತಿಗೆ ಅಡ್ಡಿಯಾಗಬಹುದು ಈ ಸಸ್ಯಗಳು

ಮನೆಯಲ್ಲಿ ಸಸ್ಯಗಳನ್ನು ಯಾವ ರೀತಿ ಇಡಬೇಕು ಗೊತ್ತೆ?

Vastu for plant: ಪರಿಸರ ಪ್ರಿಯರು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿ ಸಸ್ಯಗಳನ್ನು ಇಡುತ್ತಾರೆ. ಈ ಸಸ್ಯಗಳನ್ನು ನಿಯಮ ಪ್ರಕಾರ ಇರಿಸದೇ ಇದ್ದರೆ ಅದು ಮನೆ ಮಂದಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಮನೆಯಲ್ಲಿ ಸಸ್ಯಗಳನ್ನು ಇರಿಸುವಾಗ ಸರಿಯಾದ ಕ್ರಮವನ್ನು ಪಾಲಿಸುವುದು ಬಹುಮುಖ್ಯ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

Vastu Tips: ಮನೆಯ ಸಮೀಪದಲ್ಲಿ ದೇವಾಲಯವಿದ್ದರೆ ಪಾಲಿಸಬೇಕಾದ ನಿಯಮಗಳು ಏನು?

ಮನೆಯ ಸಮೀಪದಲ್ಲಿ ದೇವಸ್ಥಾನ ಇದ್ದರೆ ಶುಭವೇ?

ನಗರಗಳಲ್ಲಿ ಸಾಮಾನ್ಯವಾಗಿ ಮನೆಯ (Vastu for home) ಸಮೀಪದಲ್ಲಿ ದೇವಾಲಯಗಳು ಇರುತ್ತವೆ. ಈ ಸಂದರ್ಭದಲ್ಲಿ ನಾವು ಮಾಡುವ ಕೆಲವೊಂದು ಕೆಲಸ ಕಾರ್ಯಗಳಿಂದ ಸ್ಥಳದ ಪಾವಿತ್ರ್ಯತೆ ಹಾಳಾಗುತ್ತದೆ ಎನ್ನುವ ಆತಂಕವಿರುತ್ತದೆ. ಆದರೆ ವಾಸ್ತು ನಿಯಮ ಪಾಲಿಸಿದರೆ ದೇವಾಲಯದ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಮನೆಯಲ್ಲೂ ಸಾಮರಸ್ಯ ಸದಾ ಕಾಲ ನೆಲೆಯಾಗುವಂತೆ ಮಾಡಬಹುದು.

Vastu Tips: ಮನೆಯ ಸುಖ, ಶಾಂತಿ, ಸಮೃದ್ಧಿಗೆ ಯಾವ ರೀತಿಯ ನವಿಲಿನ ಮೂರ್ತಿಯನ್ನು ಇಟ್ಟುಕೊಳ್ಳಬೇಕು?

ಮನೆಯಲ್ಲಿ ಯಾವ ರೀತಿಯ ನವಿಲಿನ ಮೂರ್ತಿ ಇಡಬಹುದು?

ಮನೆಯ ಸುಖ, ಶಾಂತಿ, ಸಮೃದ್ಧಿಗಾಗಿ ಕೆಲವರು ಅವರವರ ನಂಬಿಕೆಗೆ ಅನುಗುಣವಾದ ಮೂರ್ತಿಯನ್ನು ಇಟ್ಟುಕೊಳ್ಳುತ್ತಾರೆ. ಇದರಲ್ಲಿ ನವಿಲಿನ ಮೂರ್ತಿಯೂ ಸೇರಿದೆ. ಮನೆಯಲ್ಲಿ ನವಿಲಿನ ಮೂರ್ತಿ ಇರಿಸುವ ಪಾಲಿಸಬೇಕಾದ ನಿಯಮಗಳೇನು, ಯಾವ ರೀತಿಯ ನವಿಲಿನ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು, ಹೇಗೆ ಇಟ್ಟುಕೊಳ್ಳಬೇಕು, ಈ ಬಗ್ಗೆ ವಾಸ್ತು ಶಾಸ್ತ್ರ (Vastu Tips) ಏನು ಹೇಳಿದೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

Vastu Tips: ಕಾರಿನಲ್ಲಿ ದೇವರ ವಿಗ್ರಹ ಇಡುವಾಗ ಪಾಲಿಸಬೇಕಾದ  ನಿಯಮಗಳೇನು?

ಕಾರಿನಲ್ಲಿ ದೇವರ ವಿಗ್ರಹ ಇಡುವುದು ಸರಿಯೇ?

ಸಾಮಾನ್ಯವಾಗಿ ಕಾರಿನಲ್ಲಿ ವಿಗ್ರಹಗಳನ್ನು ಇಡುತ್ತೇವೆ. ಇದು ಸರಿಯೇ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ? ಎನ್ನುವ ಪ್ರಸ್ನೆ ನಿಮ್ಮಲ್ಲೂ ಉದ್ಬವಿಸಿರಬಹುದು. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ವಿಗ್ರಹಗಳನ್ನು ಇಡುವಾಗ ಪಾಲಿಸಬೇಕಾದ ನಿಯಮಗಳನ್ನು ಕೂಡ ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಇದರಿಂದ ಜೀವನದಲ್ಲಿ ಯಾವುದೇ ನಕಾರಾತ್ಮಕ ಪರಿಣಾಮಗಳು ಉಂಟಾಗುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

Loading...