Vastu Tips: ಅಡುಗೆ ಮನೆಯಲ್ಲಿ ಈ ಪದಾರ್ಥಗಳನ್ನು ಇಟ್ಟರೆ ದಾರಿದ್ರ್ಯ ಹೆಚ್ಚಾಗುತ್ತದೆ!
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥಗಳು ಮನೆಯ ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಸ್ಥಿತಿಗೆ ಪ್ರಭಾವ ಬೀರುತ್ತವೆ. ಹಾಳಾದ ಮಸಾಲೆ, ಹುಳ ಸೇರಿದ ಧಾನ್ಯಗಳು, ಹಾಳಾದ ತರಕಾರಿಗಳು ಹಾಗೂ ಮರುಬಳಕೆ ಮಾಡಿದ ಎಣ್ಣೆಯನ್ನು ಅಡುಗೆಗೆ ಬಳಸುವುದು ಅಶುಭಕರ ಎಂದು ಹೇಳಲಾಗುತ್ತದೆ.
ವಾಸ್ತು ಸಲಹೆ -
ಬೆಂಗಳೂರು: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯ ವಿನ್ಯಾಸ ಮಾತ್ರವಲ್ಲ, ಮನೆಯೊಳಗಿನ ಪ್ರತಿಯೊಂದು ವಸ್ತುವಿನ ಸ್ಥಾನವೂ ಕುಟುಂಬದ ಸುಖ-ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ ಅಡುಗೆ ಮನೆ ಮನೆತನದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಅಡುಗೆ ಮನೆ ಸ್ವಚ್ಚವಾಗಿದ್ದು, ಅಲ್ಲಿ ಬಳಸುವ ಪದಾರ್ಥಗಳು ತಾಜಾ ಮತ್ತು ಶುದ್ಧವಾಗಿದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ(Vastu Tips) ಹೇಳುತ್ತದೆ.
ಆದರೆ ಕೆಲವು ಪದಾರ್ಥಗಳನ್ನು ಅಡುಗೆ ಮನೆಯಲ್ಲಿ ಇಡುವುದು ಅಥವಾ ಅವುಗಳಿಂದ ಅಡುಗೆ ತಯಾರಿಸುವುದು ಅಶುಭಕರ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಪದಾರ್ಥಗಳು ಮನೆಯ ಆರೋಗ್ಯದ ಜೊತೆಗೆ ಆರ್ಥಿಕ ಸ್ಥಿತಿಗೂ ಹಾನಿ ಉಂಟುಮಾಡಬಹುದು ಎನ್ನಲಾಗುತ್ತದೆ.
ಹಾಳಾದ ಮಸಾಲೆ ಪದಾರ್ಥಗಳನ್ನು ಬಳಸಬೇಡಿ
ಅಡುಗೆ ಮಾಡುವಾಗ ಬಳಸುವ ಮಸಾಲೆಗಳು ಸದಾ ತಾಜಾ ಮತ್ತು ಉತ್ತಮ ಗುಣಮಟ್ಟದವಾಗಿರಬೇಕು. ಬಹಳ ದಿನಗಳವರೆಗೆ ಇಟ್ಟು ಹಾಳಾದ ಮಸಾಲೆಗಳನ್ನು ಬಳಕೆ ಮಾಡುವುದು ಆರೋಗ್ಯಕ್ಕೆ ಮಾತ್ರವಲ್ಲ, ವಾಸ್ತು ದೃಷ್ಟಿಯಿಂದಲೂ ಒಳ್ಳೆಯದಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮಸಾಲೆ ಪದಾರ್ಥಗಳನ್ನು ರಾಹು ಗ್ರಹ ಸೂಚಿಸುತ್ತದೆ. ಅವು ಹಾಳಾಗಿದ್ದರೆ ಮನೆಗೆ ದಾರಿದ್ರ್ಯ ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ.
ಹಾಳಾದ ಹಿಟ್ಟಿನಿಂದ ಅಡುಗೆ ಮಾಡಬೇಡಿ
ರೊಟ್ಟಿ ಅಥವಾ ಇತರ ಆಹಾರ ತಯಾರಿಸಲು ಬಳಸುವ ಹಿಟ್ಟು ಹಾಳಾಗಿದ್ದರೆ ಅದನ್ನು ಬಳಕೆ ಮಾಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಹಾಳಾದ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವಿಸುವುದು ಅಥವಾ ದಾನ ಮಾಡುವುದೂ ಅಶುಭಕರ. ಇದರಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಆರ್ಥಿಕ ತೊಂದರೆಗಳೂ ಎದುರಾಗಬಹುದು ಎನ್ನಲಾಗಿದೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ ಈ ಉಡುಗೊರೆಗಳನ್ನ ನೀಡಿದರೆ ಬರಲಿದೆ ಸಂಪತ್ತು ಮತ್ತು ಸಮೃದ್ಧಿ
ಕೊಳೆತ ತರಕಾರಿಗಳನ್ನು ಬಳಸುವುದು ತಪ್ಪು
ಕೆಲವರು ತರಕಾರಿ ಹಾಳಾದ ಭಾಗವನ್ನು ತೆಗೆದು ಉಳಿದ ಭಾಗವನ್ನು ಅಡುಗೆಗೆ ಬಳಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಒಳ್ಳೆಯದಾಗಿಲ್ಲ. ಯಾವುದೇ ತರಕಾರಿ ಹಾಳಾಗಿದ್ದರೆ ಅದನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಉತ್ತಮ ಎಂದು ಹೇಳಲಾಗುತ್ತದೆ.
ಹುಳ ಸೇರಿದ ಧಾನ್ಯಗಳನ್ನು ಮನೆಯಲ್ಲಿ ಇಡಬೇಡಿ
ಬೇಳೆಕಾಳುಗಳು ಅಥವಾ ಧಾನ್ಯಗಳಲ್ಲಿ ಹುಳು ಕಾಣಿಸಿಕೊಂಡರೆ ಅವುಗಳನ್ನು ತಕ್ಷಣ ಸ್ವಚ್ಚಗೊಳಿಸಬೇಕು ಅಥವಾ ಮನೆಯಿಂದ ಹೊರಗಡೆ ಇಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧಾನ್ಯಗಳು ಗುರು ಮತ್ತು ಬುಧ ಗ್ರಹಗಳನ್ನು ಸೂಚಿಸುತ್ತವೆ. ಹಾಳಾದ ಧಾನ್ಯಗಳನ್ನು ಮನೆಯಲ್ಲಿ ಇಡುವುದು ಈ ಗ್ರಹಗಳ ದೋಷಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ.
ಕರಿದ ಎಣ್ಣೆಯನ್ನು ಮರುಬಳಕೆ ಮಾಡುವುದು ತಪ್ಪು
ಒಮ್ಮೆ ಬಳಕೆ ಮಾಡಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ. ವಾಸ್ತು ಶಾಸ್ತ್ರದ ಪ್ರಕಾರ ಇಂತಹ ಎಣ್ಣೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ, ಅಡುಗೆ ಮನೆ ಸದಾ ಸ್ವಚ್ಚವಾಗಿದ್ದು, ಅಲ್ಲಿ ಬಳಸುವ ಎಲ್ಲಾ ಪದಾರ್ಥಗಳು ತಾಜಾ ಮತ್ತು ಶುದ್ಧವಾಗಿರಬೇಕು. ಇಲ್ಲವಾದರೆ ಅದು ಆರೋಗ್ಯಕ್ಕೂ ಹಾಗೂ ಮನೆಯ ಆರ್ಥಿಕ ಸ್ಥಿತಿಗೂ ಹಾನಿ ಉಂಟುಮಾಡಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.