ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪೊಲೀಸರ ಮೇಲೆ ವಕೀಲರ ದಾಳಿ; ನ್ಯಾಯಾಲಯವಾಯ್ತು ರಣರಂಗ, ವಿಡಿಯೋ ವೈರಲ್

Clash Erupts in Varanasi Court: ವಕೀಲರ ಗುಂಪೊಂದು ಇಬ್ಬರು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ವಾರಣಸಿಯ ನ್ಯಾಯಾಲಯವೊಂದರಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ದೃಶ್ಯ ವೈರಲ್ ಆಗಿದೆ.

ಪೊಲೀಸರ ಮೇಲೆ ವಕೀಲರ ದಾಳಿ; ನ್ಯಾಯಾಲಯವಾಯ್ತು ರಣರಂಗ

-

Priyanka P Priyanka P Sep 17, 2025 8:17 PM

ಲಖನೌ: ಮಂಗಳವಾರ ವಾರಣಾಸಿಯ ನ್ಯಾಯಾಲಯ (Varanasi court)ವೊಂದರಲ್ಲಿ ವಕೀಲರು ಗುಂಪುಗೂಡಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಥಳಿಸಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡುತ್ತಿರುವ ದೃಶ್ಯದ ಸಿಸಿಟಿವಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ (Viral Video) ಆಗಿದೆ.

ಬರಗಾಂವ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಸಬ್-ಇನ್ಸ್‌ಪೆಕ್ಟರ್ ಮಿಥಿಲೇಶ್ ಪ್ರಜಾಪತಿ (37) ಅವರನ್ನು ವಕೀಲರು ಸುತ್ತುವರೆದಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಪೋರ್ಟಿಕೋ ಬಳಿ ಅವರ ಮೇಲೆ ಗುದ್ದಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ವಿಡಿಯೊದಲ್ಲಿ ವಕೀಲರ ಗುಂಪು ಪ್ರಜಾಪತಿಯನ್ನು ಬೆನ್ನಟ್ಟಿ, ಒದ್ದು, ಗುದ್ದಾಡುತ್ತಿರುವುದನ್ನು ಕಾಣಬಹುದು.

ಹೊಡೆತದಿಂದ ಸಬ್-ಇನ್ಸ್‌ಪೆಕ್ಟರ್ ಪ್ರಜ್ಞೆ ತಪ್ಪಿದಾಗ, ವಕೀಲರು ಅವರನ್ನು ಕಚೇರಿಗೆ ಎಳೆದೊಯ್ದು ಅಲ್ಲಿಯೂ ಹಲ್ಲೆ ಮುಂದುವರಿಸಿದರು. ನ್ಯಾಯಾಲಯದಲ್ಲಿದ್ದ ಇತರ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಅವರನ್ನು ತಮ್ಮ ಹಿಡಿತದಿಂದ ರಕ್ಷಿಸುವವರೆಗೂ ಅವರು ಪ್ರಜಾಪತಿಯನ್ನು ಥಳಿಸಿದ್ದಾರೆ. ನ್ಯಾಯಾಲಯದಲ್ಲಿ ರಿಮಾಂಡ್ ವಿಚಾರಣೆಗೆ ಪ್ರಜಾಪತಿ ಜತೆ ಹೋಗುತ್ತಿದ್ದ ಕಾನ್‌ಸ್ಟೇಬಲ್ ರಾಣಾ ಪ್ರಸಾದ್ (27) ಕೂಡ ಗಲಾಟೆಯಲ್ಲಿ ಸಿಲುಕಿಕೊಂಡು ತೀವ್ರವಾಗಿ ಗಾಯಗೊಂಡರು.

ವಿಡಿಯೊ ವೀಕ್ಷಿಸಿ:



ಗಾಯಗಳು ಮತ್ತು ಬಹು ಆಂತರಿಕ ಗಾಯಗಳಿಂದ ಬಳಲುತ್ತಿರುವ ಪ್ರಜಾಪತಿ ಅವರಿಗೆ ಬಿಎಚ್‌ಯು ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾನ್‌ಸ್ಟೇಬಲ್ ಪ್ರಸಾದ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬರಗಾಂವ್‌ನಲ್ಲಿ ನಡೆದ ಭೂ ವಿವಾದ ಪ್ರಕರಣದ ಹಿನ್ನೆಲೆಯಲ್ಲಿ ಈ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ. ಕೆಲವು ದಿನಗಳ ಹಿಂದೆ, ಪ್ರಜಾಪತಿ ಅಧಿಕಾರಿಯ ಮೇಲೆ ಅನುಚಿತ ವರ್ತನೆ ಮತ್ತು ಹಲ್ಲೆ ಆರೋಪ ಹೊರಿಸಿದ ಒಬ್ಬ ವಕೀಲ ಸೇರಿದಂತೆ ಎರಡೂ ಕಡೆಯವರ ವಿರುದ್ಧ ಸೆಕ್ಷನ್ 151ರ ಅಡಿಯಲ್ಲಿ ದೂರು ದಾಖಲಿಸಿದ್ದರು. ವಕೀಲರ ಗುಂಪು ಪ್ರತೀಕಾರಕ್ಕಾಗಿ ನ್ಯಾಯಾಲಯದಲ್ಲಿ ಕಾಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಲು ವಕೀಲರು ಒಂದು ಗುಂಪು ಅನ್ನು ರಚಿಸಿಕೊಂಡಿದ್ದಾರೆ ಎಂದು ಪ್ರಜಾಪತಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅವರು ಶಸ್ತ್ರಸಜ್ಜಿತರಾಗಿ ಬಂದು ಕೊಲ್ಲುವ ಉದ್ದೇಶದಿಂದ ತನ್ನನ್ನು ಪ್ರಜ್ಞೆ ತಪ್ಪಿಸಿ ಹೊಡೆದು, ನಂತರ ಚರಂಡಿಗೆ ಎಸೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪೊಲೀಸ್ ಐಡಿ, ಇತರ ಗುರುತಿನ ಚೀಟಿಗಳು ಮತ್ತು 4,200 ರೂ. ನಗದನ್ನು ದೋಚಿದ್ದಾರೆ ಎಂದು ಅವರು ದೂರಿದ್ದಾರೆ. ಇನ್ನು ಈ ಸಂಬಂಧ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ 10 ವಕೀಲರ ವಿರುದ್ಧ ಮತ್ತು 50ರಿಂದ 60 ಅಪರಿಚಿತ ವಕೀಲರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral News: ನೀರಿನ ಬಾಟಲಿಯ ಮುಚ್ಚಳಗಳು ಯಾವಾಗಲೂ ನೀಲಿ ಬಣ್ಣದಲ್ಲಿಯೇ ಇರುವುದು ಏಕೆ ಗೊತ್ತಾ? ಇಲ್ಲಿದೆ ಕಾರಣ