ಪಿಸ್ತೂಲ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ತಗುಲಿದ ಗುಂಡು; ಸ್ಥಳದಲ್ಲಿಯೇ ಯುವಕ ಸಾವು
Viral Video: ಪಿಸ್ತೂಲ್ ಲೋಡ್ ಮಾಡುವಾಗ 28 ವರ್ಷದ ಯುವಕನೊಬ್ಬ ಆಕಸ್ಮಿಕವಾಗಿ ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಡಲ್ಲುಪುರ ಗ್ರಾಮದ ನಿವಾಸಿ ಪವನ್ ಕುಮಾರ್ ಎಂದು ಗುರುತಿಸಲ್ಪಟ್ಟವರು ಮೃತ ವ್ಯಕ್ತಿಯಾಗಿದ್ದಾರೆ. ಎದೆಯ ಎಡಭಾಗಕ್ಕೆ ಗುಂಡೇಟಿನಿಂದ ಗಾಯವಾಗಿದ್ದು ಆದಾಗ್ಯೂಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾರೆ.
ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡ ಯುವಕ -
ನವದೆಹಲಿ,ಮಾ.17:ದೆಹಲಿಯಲ್ಲಿ (Delhi) ಆತಂಕಕಾರಿ ಘಟನೆಯೊಂದು ಕಂಡು ಬಂದಿದೆ. ಪಿಸ್ತೂಲ್ ಲೋಡ್ ಮಾಡುವಾಗ 28 ವರ್ಷದ ಯುವಕನೊಬ್ಬ ಆಕಸ್ಮಿಕವಾಗಿ ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಡಲ್ಲುಪುರ ಗ್ರಾಮದ ನಿವಾಸಿ ಪವನ್ ಕುಮಾರ್ ಎಂದು ಗುರುತಿಸಲ್ಪಟ್ಟವರು ಮೃತ ವ್ಯಕ್ತಿಯಾಗಿದ್ದಾರೆ. ಎದೆಯ ಎಡಭಾಗಕ್ಕೆ ಗುಂಡೇಟಿನಿಂದ ಗಾಯವಾಗಿತ್ತು. ಆದಾಗ್ಯೂ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು, ಆದರೆ ಅವರು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪೂರ್ವ ದೆಹಲಿಯ ನ್ಯೂ ಅಶೋಕ್ ನಗರದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಪವನ್ ಕುಮಾರ್ ಎನ್ನುವ ವ್ಯಕ್ತಿ ಎದೆಯ ಎಡಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದರು. ಗಾಯಗೊಂಡಿದ್ದ ಅವರನ್ನು ತಕ್ಷಣ ಧರಂಶಿಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಡಿಯೋ ನೋಡಿ:
दल्लूपुरा इलाके में पिस्टल के साथ वीडियो बनाने के चक्कर में एक युवक की जान चली गई
— Lavely Bakshi 🔺 (@lavelybakshi) March 17, 2026
बताया जा रहा है कि युवक अपने दोस्त की लाइसेंसी पिस्टल देख रहा था वीडियो में एक युवक को कहते हुए भी सुना गया कि “भाई, चलाना मत”, लेकिन युवक पवन ने ट्रिगर दबा दिया गोली लगने से मौके पर ही मौत हो गई pic.twitter.com/D2yvHgvDGQ
ಘಟನೆಯಲ್ಲಿ ಬಳಸಲಾದ ಬಂದೂಕು ಕುಮಾರ್ ಅವರ ಸೋದರ ಸಂಬಂಧಿ ಹಿಮಾಂಶು ಎಂದು ಗುರುತಿಸಲಾದ ಪರವಾನಗಿ ಪಡೆದ ಪಿಸ್ತೂಲ್ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅವನ ಸೋದರಸಂಬಂಧಿ ತಿಳಿಯದೇ ಲಇಡೀ ದೃಶ್ಯವನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಅಂತಿಮ ಕ್ಷಣಗಳನ್ನು ಸೆರೆಹಿಡಿಯುವ ಈ ದೃಶ್ಯ ಆಘಾತ ಮತ್ತು ಕಳವಳವನ್ನು ವ್ಯಕ್ತಪಡಿಸಿದೆ
Viral Video: ಆಟೋ ರಿಕ್ಷಾವನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ; ರಸ್ತೆ ಮಧ್ಯೆಯೇ ರೊಮ್ಯಾನ್ಸ್
ವಿಡಿಯೋದಲ್ಲಿ ಪವನ್ ಪಿಸ್ತೂಲ್ ಹಿಡಿದು ನಿಂತಿರುವುದು ಕಂಡು ಬಂದಿದೆ. ಅವನ ಸೋದರ ಸಂಬಂಧಿ ಮ್ಯಾಗಜೀನ್ ಅನ್ನು ಸೇರಿಸಲು ಮಾರ್ಗದರ್ಶನ ನೀಡುತ್ತಿರುವಂತೆ ತೋರುತ್ತದೆ. ಗುಂಡು ಹಾರಿಸದಂತೆ ಆತ ಎಚ್ಚರಿಕೆಯನ್ನು ನೀಡುತ್ತಾನೆ. ಇದರ ಹೊರತಾಗಿಯೂ, ಕುಮಾರ್ ಕ್ಯಾಮೆರಾದ ಕಡೆಗೆ ನಗುತ್ತಾ, ಬಂದೂಕನ್ನು ಅವನ ಎದೆಗೆ ಇರಿಸಿ, ಟ್ರಿಗರ್ ಎಳೆದಿದ್ದಾನೆ.
ಅಧಿಕಾರಿಗಳ ಪ್ರಕಾರ, ದಲ್ಲುಪುರದಲ್ಲಿರುವ ಕುಮಾರ್ ಅವರ ನಿವಾಸದಲ್ಲಿ ಘಟನೆ ನಡೆದಿದೆ. ವಿಧಿವಿಜ್ಞಾನ ಮತ್ತು ಅಪರಾಧ ತಂಡಗಳು ಸ್ಥಳ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಲ್ಬಿಎಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.