ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂವಿಧಾನದ ಚಿತ್ರಗಳು

ಸಂವಿಧಾನದ 363ನೇ ವಿಧಿಯು ಸಂವಿಧಾನವನ್ನು ಅಂಗೀಕರಿಸುವ ಮೊದಲು ಮಾಡಿಕೊಂಡ ಒಪ್ಪಂದ ಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದನ್ನು ಅನುಮತಿಸುವುದಿಲ್ಲ. ಉದಾ ಹರಣೆಗೆ ಶ್ರೀ ಅನಂತಪದ್ಮನಾಭ ಸ್ವಾಮಿಯ ಹೆಸರಿನಲ್ಲಿ ಆಳ್ವಿಕೆ ನಡೆಸಿದ ತಿರುವಾಂಕೂರಿನ ದೊರೆಗಳೊಂದಿಗೆ ಒಪ್ಪಿದ ದೇವಾಲಯದ ಹಕ್ಕುಗಳನ್ನು ಇದು ಒಳಗೊಂಡಿದೆ. ಭಾರತದ ಸಂವಿಧಾನ ಒಂದು ಆಕರ್ಷಕ ಕಲಾಕೃತಿಯಾಗಿದೆ.

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂವಿಧಾನದ ಚಿತ್ರಗಳು

-

ವೀಕೆಂಡ್‌ ವಿತ್‌ ಮೋಹನ್

ಸಂವಿಧಾನದ ಮೂಲಭೂತ ಹಕ್ಕುಗಳ ಭಾಗವು ಶ್ರೀರಾಮ, ಲಕ್ಷ್ಮಣ, ಸೀತೆಯ ಚಿತ್ರಣದಿಂದ ಚಿತ್ರಿಸಲ್ಪಟ್ಟಿತ್ತು ಮತ್ತು ರಾಜ್ಯನೀತಿಯು ಭಗವದ್ಗೀತೆಯಲ್ಲಿರುವ ಅರ್ಜುನ ಮತ್ತು ಶ್ರೀಕೃಷ್ಣನ ನಡುವಿನ ಸಂಭಾಷಣೆಯ ಸಾಂಪ್ರದಾಯಿಕ ದೃಶ್ಯದೊಂದಿಗೆ ಪ್ರಾರಂಭ ವಾಗುತ್ತದೆ. ಬುದ್ಧನ ಜ್ಞಾನೋದಯದ ಚಿತ್ರವನ್ನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಗಳಿಗೆ ಸಂಬಂಧಿಸಿದ ನಿಯಮಗಳ ಭಾಗದಲ್ಲಿ ಕಾಣಬಹುದು. ‘ಜ್ಞಾನೋದಯ’ ಎಂಬ ಪದವನ್ನು ಮಾನವ ಜನಾಂಗದ ಮುಗ್ಧತೆ ಯಿಂದ ಪ್ರeಗೆ ಜಾಗೃತಗೊಳಿಸುವುದು ಎಂದು ಅರ್ಥೈಸಿಕೊಳ್ಳಬಹುದು.

ಕೈ ಬರಹದಲ್ಲಿನ ಭಾರತದ ಮೂಲ ಸಂವಿಧಾನವು, ಅಯೋಧ್ಯೆಯಲ್ಲಿ ರಾಮರಾಜ್ಯ ಸ್ಥಾಪಿಸಲು ಲಂಕೆಯಿಂದ ಹಿಂದಿರುಗಿದ ಶ್ರೀರಾಮಚಂದ್ರ, ಸೀತಾದೇವಿ ಮತ್ತು ಲಕ್ಷ್ಮಣನ ಚಿತ್ರಗಳನ್ನು ಹೊಂದಿ ತ್ತು. ರಾಮರಾಜ್ಯ ಸ್ಥಾಪನೆ ಮಾಡುವುದು ನಮ್ಮ ಸಂವಿಧಾನದ ಮೂಲಭೂತ ರಚನೆಯ ಭಾಗ ವಾಗಿದೆ ಎಂದು ಹೇಳಲಾಗುತ್ತದೆ.

ಮಹಾತ್ಮ ಗಾಂಧಿಯವರೂ ಭಾರತದಲ್ಲಿ ರಾಮರಾಜ್ಯ ಸ್ಥಾಪಿಸಲು ತೋರಿಸಿದ್ದ ಉತ್ಸುಕತೆಯನ್ನು ಮರೆಯುವ ಹಾಗಿಲ್ಲ. ಮೂಲಭೂತ ಹಕ್ಕುಗಳ ಅಧ್ಯಾಯವನ್ನು ಒಳಗೊಂಡಿರುವ ಸಂವಿಧಾನದ ಭಾಗ- ೩ರಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾದೇವಿಯ ಚಿತ್ರಗಳಿದ್ದವು. ಆ ಚಿತ್ರಗಳನ್ನು ಬಳಸುವು ದರ ಹಿಂದಿನ ಕಲ್ಪನೆ ಭಾರತದ ಪ್ರಾಚೀನ ಪರಂಪರೆ, ಸಂಸ್ಕೃತಿ, ಪುರಾತನ ಪದ್ಧತಿಗಳು, ಜೀವನಶೈಲಿ ಮತ್ತು ಆಧುನಿಕ ಕಾಲದವರೆಗಿನ ಭಾರತದ ಆತ್ಮವನ್ನು ಪ್ರತಿನಿಧಿಸುತ್ತದೆ.

ಬಾಬಾಸಾಹೇಬರು ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರಿಗೆ ವೈಯಕ್ತಿಕ ವಾಗಿ ಈ ಚಿತ್ರಸಹಿತ ಸಂವಿಧಾನವನ್ನು ಪ್ರಸ್ತುತಪಡಿಸಿದ್ದರು. ಈ ವಿಚಾರವನ್ನು ಅಂದು ವಿರೋಧಿ ಸಿದ ಸಂವಿಧಾನ ಸಭೆಯ ಒಬ್ಬ ಸದಸ್ಯನ ಬಗ್ಗೆ ಇತಿಹಾಸದಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ದೇಶವು ತನ್ನ ಸಾಂವಿಧಾನಿಕ ಭರವಸೆಯನ್ನು ಈಡೇರಿಸಬೇಕೆಂಬುದು ರಾಮರಾಜ್ಯದ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ತಮ್ಮ ರಾಜ್ಯಗಳನ್ನು ವಿಲೀನಗೊಳಿಸಿದ ರಾಜಮನೆತನಗಳಿಗೆ ನೀಡಿದ್ದ ಹಲವು ಭರವಸೆಗಳನ್ನು ಮುರಿದಾಗ ಆ ತತ್ವದ ಉಲ್ಲಂಘನೆಯಾಗುತ್ತದೆ.

ಇದನ್ನೂ ಓದಿ: Mohan Vishwa Column: ʼರೋಮ್‌ʼನ ಭೂಮಿಯೊಳಗಿನ ಪ್ರಪಂಚ

ಆ ಭರವಸೆಗಳನ್ನು ಸರ್ದಾರ್ ವಲ್ಲಭ್‌ಭಾಯ್ ಪಟೇಲರು ಸಂವಿಧಾನದಲ್ಲಿ ಅಳವಡಿಸಿದ್ದರು. ಆದರೆ 1970ರಲ್ಲಿ ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನದ 26ನೆಯ ತಿದ್ದುಪಡಿ ಮೂಲಕ ಇದನ್ನು ತೆಗೆದು ಹಾಕಿದರು. ಖ್ಯಾತ ಸಂವಿಧಾನ ವಕೀಲರಾದ ದಿವಂಗತ ನಾನಿ ಪಾಲ್ಖಿವಾಲಾ ಅವರು ಭಾರತ ಸರಕಾರದ ಈ ಕ್ರಮ ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ ಎಂದು ಭಾವಿಸಿದ್ದರು.

ಆದ್ದರಿಂದ ರಾಮರಾಜ್ಯ ನಮ್ಮ ಸಂವಿಧಾನದ ಮೂಲಭೂತ ರಚನೆಯಾಗಿದೆ ಎಂಬುದನ್ನು ಸ್ಪಷ್ಟ ವಾಗಿ ಹೇಳಬಹುದು. ನಮ್ಮ ಸಂವಿಧಾನದ ವ್ಯಾಖ್ಯಾನವನ್ನು ನಿಯಂತ್ರಿಸುವ ಸಾಂವಿಧಾನಿಕ ನೈತಿಕತೆಯ ತತ್ವಗಳು ರಾಮನ ಆದರ್ಶಗಳಿಂದ ಮಾರ್ಗದರ್ಶಿಸಲ್ಪಟ್ಟಿವೆ ಎಂದು ಖಚಿತಪಡಿಸು ತ್ತವೆ.

ಸಂವಿಧಾನದ 363ನೇ ವಿಧಿಯು ಸಂವಿಧಾನವನ್ನು ಅಂಗೀಕರಿಸುವ ಮೊದಲು ಮಾಡಿಕೊಂಡ ಒಪ್ಪಂದಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದನ್ನು ಅನುಮತಿಸುವುದಿಲ್ಲ. ಉದಾ ಹರಣೆಗೆ ಶ್ರೀ ಅನಂತಪದ್ಮನಾಭ ಸ್ವಾಮಿಯ ಹೆಸರಿನಲ್ಲಿ ಆಳ್ವಿಕೆ ನಡೆಸಿದ ತಿರುವಾಂಕೂರಿನ ದೊರೆಗಳೊಂದಿಗೆ ಒಪ್ಪಿದ ದೇವಾಲಯದ ಹಕ್ಕುಗಳನ್ನು ಇದು ಒಳಗೊಂಡಿದೆ. ಭಾರತದ ಸಂವಿಧಾನ ಒಂದು ಆಕರ್ಷಕ ಕಲಾಕೃತಿಯಾಗಿದೆ.

Screenshot_1 R

ಭೂತಕಾಲವನ್ನು ನಿರಂತರವಾಗಿ ಅಂಗೀಕರಿಸಿ, ವರ್ತಮಾನಕ್ಕೆ ಮಾರ್ಗದರ್ಶನ ನೀಡಿ ಮತ್ತು ನಮ್ಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವ ಗ್ರಂಥವಾಗಿದೆ. ನಾವು ಅದರ ಆಳಕ್ಕೆ ಹೊಕ್ಕು ನೋಡಬೇಕಷ್ಟೆ. ಸಂವಿಧಾನವು ನಾಗರಿಕರಾಗಿ ನಮ್ಮ ಹಕ್ಕುಗಳನ್ನು ರಕ್ಷಿಸುವ ದಾಖಲೆಯಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಸಂವಿಧಾನದ ಪ್ರತಿಯೊಂದು ಭಾಗವು ನಮ್ಮ 5000 ವರ್ಷಗಳ ಇತಿಹಾಸವನ್ನು ಗುರುತಿಸುವ ಕಲೆಯೊಂದಿಗೆ ಪ್ರಾರಂಭವಾಗುತ್ತದೆ.

ಜನಪ್ರಿಯ ಸಿಂಧೂ ಕಣಿವೆಯ ನಾಗರಿಕತೆಯನ್ನು ಬಿಂಬಿಸುವ ಗೂಳಿಯ ಚಿಹ್ನೆಯನ್ನು ಸಂವಿಧಾನ ದಲ್ಲಿ ಕಾಣಬಹುದು. ಈ ಗೂಳಿಯು ಹರಪ್ಪ ಮತ್ತು ಮೊಹೆಂಜೊದಾರೋದಲ್ಲಿ ಕಂಡುಬಂದಿದ್ದ ಅತ್ಯಂತ ಶಕ್ತಿಶಾಲಿ ಕುಲ ಮತ್ತು ಉನ್ನತ ಅಧಿಕಾರಿಗಳನ್ನು ಪ್ರತಿನಿಧಿಸುತ್ತದೆ.

ಎಡಚರರು ತಲೆಬುಡವಿಲ್ಲದೆ ಹಬ್ಬಿಸಿರುವ ಆರ್ಯ ಮತ್ತು ದ್ರಾವಿಡರೆಂಬ ಸುಳ್ಳು ಇತಿಹಾಸದ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಅವರ ಸುಳ್ಳು ಇತಿಹಾಸಕ್ಕೆ ಇದುವರೆಗೂ ಯಾವುದೇ ಪುರಾವೆ ಸಿಕ್ಕಿಲ್ಲ. ಭಾರತಕ್ಕೆ ಆಗಮಿಸಿದ ಮೊದಲ ಆರ್ಯನ್ ದೊರೆ ಯಾರು? ಭಾರತದ ಕೊನೆಯ ಆರ್ಯರ ಸಂತತಿ ಯಾರು? ಆರ್ಯರು ಯಾವ ದ್ರಾವಿಡ ಜನರ ಮೇಲೆ ದಾಳಿ ನಡೆಸಿದರು? ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ.

ಸಂವಿಧಾನದ ಮೂಲಭೂತ ಹಕ್ಕುಗಳ ಭಾಗವು ಶ್ರೀರಾಮ, ಲಕ್ಷ್ಮಣ, ಸೀತೆಯ ಚಿತ್ರಣದಿಂದ ಚಿತ್ರಿಸ ಲ್ಪಟ್ಟಿತ್ತು ಮತ್ತು ರಾಜ್ಯನೀತಿಯು ಭಗವದ್ಗೀತೆಯಲ್ಲಿರುವ ಅರ್ಜುನ ಮತ್ತು ಶ್ರೀಕೃಷ್ಣನ ನಡುವಿನ ಸಂಭಾಷಣೆಯ ಸಾಂಪ್ರದಾಯಿಕ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಬುದ್ಧನ ಜ್ಞಾನೋದಯದ ಚಿತ್ರವನ್ನು ರಾಷ್ಟ್ರಪತಿ ಮತ್ತು ಉಪಾರಾಷ್ಟ್ರ ಪತಿಗಳಿಗೆ ಸಂಬಂಧಿಸಿದ ನಿಯಮಗಳ ಭಾಗದಲ್ಲಿ ಕಾಣಬಹುದು.

‘ಜ್ಞಾನೋದಯ’ ಎಂಬ ಪದವನ್ನು ಮಾನವ ಜನಾಂಗದ ಮುಗ್ಧತೆಯಿಂದ ಪ್ರಜ್ಞೆ ಜಾಗೃತ ಗೊಳಿಸುವುದು ಎಂದು ಅರ್ಥೈಸಿಕೊಳ್ಳಬಹುದು. ಗುಪ್ತರ ಕಾಲವನ್ನು ಭಾರತದ ಸುವರ್ಣ ಯುಗ ಎಂದು ಹೇಳಲಾಗುತ್ತದೆ. ಅಜಂತ ಮತ್ತು ಎರದ ಚಿತ್ರಗಳು, ಕಾಳಿದಾಸನ ಗ್ರಂಥಗಳು, ಆರ್ಯ ಭಟನ ಗಣಿತ ಇವೆಲ್ಲವೂ ಗುಪ್ತರ ಕಾಲದ ಭಾಗವಾಗಿದ್ದವು. ಆ ಸಮಯದಲ್ಲಿ, ಭಾರತ ವಿಶ್ವದ ಜಿಡಿಪಿಗೆ ಶೇಕಡಾ ೨೫ ಕೊಡುಗೆ ನೀಡುತ್ತಿತ್ತು ಮತ್ತು ಸುಮಾರು 1000 ವರ್ಷಗಳವರೆಗೆ ಜಗತ್ತಿನಲ್ಲಿ ಮೊದಲ ನೆಯ ಸ್ಥಾನದಲ್ಲಿತ್ತು.

ನಳಂದ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಕಲಾಕೃತಿಯಲ್ಲಿ ಗುಪ್ತರ ಆಳ್ವಿಕೆಯು ಸ್ವತಃ ಪ್ರಕಟ ವಾಗುತ್ತದೆ. ನಳಂದ ವಿಶ್ವವಿದ್ಯಾಲಯದಲ್ಲಿ ವಿವಿಧ ಸಂಸ್ಕೃತಿಗಳ ಮಿಲನವು ಸಾಮಾನ್ಯವಾಗಿತ್ತು. ಸ್ವಾತಂತ್ರ್ಯ ಹೋರಾಟವನ್ನು ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರಿಂದ ಪ್ರಾರಂಭಿಸಿ, ಮಹಾತ್ಮ ಗಾಂಧಿಯವರ ದಂಡಿ ಸತ್ಯಾಗ್ರಹದ ಮೆರವಣಿಗೆಯವರೆಗೂ ಮೂಲ ಸಂವಿಧಾನದಲ್ಲಿ ಚಿತ್ರದ ಮೂಲಕ ತೋರಿಸಲಾಗಿತ್ತು.

ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಿಗೂ ಒಂದು ಕಲಾಕೃತಿಯನ್ನು ಸಮರ್ಪಿಸಲಾಗಿದೆ. ಕೆಲ ಎಡಚರರು ‘ಮೂಲ ಸಂವಿಧಾನದ ವಿವರಣೆಗಳು ಅಲಂಕಾರದ ಉದ್ದೇಶಕ್ಕಾಗಿ ಮಾತ್ರ’ ಎಂಬ ಭಂಡವಾದವನ್ನು ಮಾಡುತ್ತಾರೆ. ಆದರೆ ಮೂಲ ಸಂವಿಧಾನವು ಭಾರತದ ಸಾವಿರಾರು ವರ್ಷಗಳ ಇತಿಹಾಸವನ್ನು ಹೇಳುತ್ತದೆಂಬ ಸತ್ಯವನ್ನು ಅವರು ಒಪ್ಪಿಕೊಳ್ಳುವುದಿಲ್ಲ.

ಸಂವಿಧಾನವು ಜಾರಿಗೆ ಬರುವ ಮೊದಲು ಪ್ರಾಂತ್ಯಗಳನ್ನು ಅಳುತ್ತಿದ್ದ ರಾಜಮನೆತನದ ಆಡಳಿತ ಗಾರರು ಮಾಡಿಕೊಂಡ ಒಪ್ಪಂದಗಳಿಗೆ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದನ್ನು 363ನೇ ವಿಧಿ ನಿರ್ದಿಷ್ಟವಾಗಿ ತಡೆಯುತ್ತದೆ. ಈ ಅಪರೂಪದ ರೇಖಾಚಿತ್ರಗಳು ಕೇವಲ ಅಲಂಕಾರವಲ್ಲ, ಆದ್ದರಿಂದ ಸಾಮಾನ್ಯ ನಾಗರಿಕರ ಮನಸ್ಸಿನಲ್ಲಿ ಉಳಿದಿರುವ ಅಂಥ ಅನುಮಾನಗಳನ್ನು ತೆಗೆದು ಹಾಕುವುದು ಅತ್ಯಗತ್ಯ.

ಸಂವಿಧಾನದ ಕೆಲವು ಪುಟಗಳು ನಮ್ಮ ಇತಿಹಾಸದ ಬಗ್ಗೆ ನೆನಪಿರುವ ಎಲ್ಲವನ್ನೂ ವಿವರಿಸುತ್ತವೆ. ಮೊಘಲರ ಆಳ್ವಿಕೆಯನ್ನು ಚಿತ್ರಿಸುವ ಅಕ್ಬರನ ಆಸ್ಥಾನದ ದೃಶ್ಯ, ನಂತರ ಅವರ ಆಕ್ರಮಣದ ಪರಿಣಾಮವಾಗಿ ಮರಾಠ ಮತ್ತು ಸಿಖ್ ಸಾಮ್ರಾಜ್ಯಗಳ ದೊಡ್ಡಮಟ್ಟದ ಉದಯಕ್ಕೆ ಕಾರಣವಾಗು ತ್ತದೆ.

ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಗುರು ಗೋಬಿಂದ್ ಸಿಂಗ್ ಆಡಳಿತವು ಅಂತಿಮವಾಗಿ ಮೊಘಲರ ಆಳ್ವಿಕೆಯನ್ನು ದುರ್ಬಲಗೊಳಿಸಿತು ಮತ್ತು ಯುರೋಪಿಯನ್ ವ್ಯಾಪಾರ ನಮಗೆ ತಿಳಿದಿರುವ ಸಾಮ್ರಾಜ್ಯಶಾಹಿ ಆಳ್ವಿಕೆಗೆ ದಾರಿ ಮಾಡಿಕೊಟ್ಟಿತೆಂಬುದನ್ನು ಹೇಳುತ್ತದೆ. ಧರ್ಮವನ್ನು ರಕ್ಷಿಸುವ ಧಾರ್ಮಿಕ ಉದ್ದೇಶದಿಂದ ಹಿಂದೂ ದೇವತೆಗಳು ನಮ್ಮ ದೇವಾಲಯಗಳಲ್ಲಿ ಅವತರಿಸಿ ದ್ದಾರೆ.

ಅನೇಕ ಆಕ್ರಮಣಗಳ ನಂತರವೂ ದೇವತೆಗಳು ಭಾರತದ ಹೆಚ್ಚಿನ ಭಾಗಗಳಲ್ಲಿ ಧರ್ಮದ ರಕ್ಷಣೆ ಯನ್ನು ಮಾಡಿದ್ದಾರೆ ಮತ್ತು ಸನಾತನ ಧರ್ಮವನ್ನು ಅದರ ಮೂಲ ಭೂಮಿಯಲ್ಲಿಯೇ ಅಳಿವಿ ನಂಚಿನಲ್ಲಿರುವಂತೆ ಮಾಡುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲಾಗಿದೆ. ಮೊಘಲರ ಆಕ್ರಮಣಗಳ ಸಮಯದಲ್ಲಿ ಸನಾತನ ಹಿಂದೂ ಧರ್ಮವನ್ನು ರಕ್ಷಿಸಿದ ಪ್ರಾಚೀನ ಮಠಗಳ ಹಕ್ಕುಗಳನ್ನು ಸಂವಿಧಾನದ 26ನೆಯ ವಿಧಿಯು ರಕ್ಷಿಸುತ್ತದೆ.

ಪೆರಿಯಾರ್ ಸಿದ್ಧಾಂತದ ಮೋಡಿಗೆ ಒಳಗಾಗಿ ದಶಕಗಳಿಂದ ದ್ರಾವಿಡ ರಾಜಕಾರಣ ಮಾಡಿಕೊಂಡು ಬಂದಿರುವ ತಮಿಳುನಾಡಿನ ದ್ರಾವಿಡ ಪಕ್ಷದ ನಾಯಕರಿಗೆ ಸನಾತನ ಧರ್ಮದ ಮೇಲಿನ ಅವಹೇಳನಕಾರಿ ಮಾತುಗಳು ದಿನನಿತ್ಯದ ಆಹಾರವಾಗಿದೆ. ಸಂವಿಧಾನದಲ್ಲಿ ಹಿಂದೂ ಧರ್ಮಕ್ಕೆ ನೀಡಿರುವ ರಕ್ಷಣೆಯ ಅರಿವಿಲ್ಲದವರು ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂ ಧರ್ಮದ ಅವಹೇಳನಕಾರಿಕೆಯಲ್ಲಿ ತೊಡಗಿದ್ದಾರೆ.

ಭಾರತದ ಸರ್ವೋಚ್ಚ ನ್ಯಾಯಾಲಯ ತನ್ನ ಲಾಂಛನದಲ್ಲಿ ‘ಯತೋ ಧರ್ಮಸ್ತತೋ ಜಯಃ’ (ಎಲ್ಲಿ ಧರ್ಮವಿದೆಯೋ ಅಲ್ಲಿ ವಿಜಯವಿದೆ) ಎಂಬ ಧ್ಯೇಯವಾಕ್ಯವನ್ನು ಹೊಂದಿದೆ. ‘ಧರ್ಮೇಣ ಹನ್ಯತೇ ವ್ಯಾಧಿಃ ಹನ್ಯನ್ತೇ ವೈ ತಥಾ ಗ್ರಹಾಃ | ಧರ್ಮೇಣ ಹನ್ಯತೇ ಶತ್ರುಃ ಯಥೋ ಧರ್ಮಸ್ತತೋ ಜಯಃ|’ (ಧರ್ಮವನ್ನು ಅನುಸರಿಸುವುದರಿಂದ ನಾವು ಹಲವು ರೋಗಗಳ ಮೇಲೆ ಜಯವನ್ನು ಪಡೆಯುತ್ತೇವೆ,

ಇದು ಮಹಾಭಾರತದಲ್ಲಿರುವ ಸಲಹೆ. ಕೋವಿಡ್, ಚೀನಾದ ಬೆದರಿಕೆ, ರಷ್ಯಾ-ಉಕ್ರೇನ್ ಯುದ್ಧ, ಅಮೆರಿಕದ ವ್ಯಾಪಾರ ನೀತಿ ತರಹದ ಗಂಭೀರ ಆರ್ಥಿಕ ಸವಾಲುಗಳ ನಡುವೆಯೂ ಭಾರತವು ಬಿಕ್ಕಟ್ಟನ್ನು ಎದುರಿಸಿದ ರೀತಿಯನ್ನು ಮಹಾಭಾರತದ ಈ ಶ್ಲೋಕ ನೆನಪಿಸುತ್ತದೆ.

ರಾಮರಾಜ್ಯದ ಧರ್ಮದ ಮನೋಭಾವವನ್ನು ಅನೇಕ ಪ್ರಾಚೀನ ಸಾಮ್ರಾಜ್ಯಗಳು ಅನುಸರಿಸಿದ್ದವು. ಅವರು ತಮ್ಮ ರಾಜ್ಯಗಳಿಗೆ ಪ್ರತ್ಯೇಕ ಸಂವಿಧಾನದ ಆಯ್ಕೆಯನ್ನು ಬಯಸಲಿಲ್ಲ. ಏಕೆಂದರೆ ಅವರು ಭಾರತೀಯ ಒಕ್ಕೂಟದ ಸೇರ್ಪಡೆಯ ಸಾಧನಗಳಿಗೆ ಸಹಿ ಹಾಕಿದಾಗ ಸರ್ದಾರ್ ವಲ್ಲಭ್‌ಭಾಯ್ ಪಟೇಲ್ ನೀಡಿದ್ದ ಭರವಸೆಗಳನ್ನು ನಂಬಿದ್ದರು. ಆ ಕಾರಣಕ್ಕಾಗಿ ಶ್ರೀ ಕೃಷ್ಣದೇವರಾಯನ ಮನೆತನದ ಪತ್ರದ ಮಾದರಿಯಲ್ಲಿ ಪ್ರಾಚೀನ ಅರಸರ ಕುಟುಂಬಗಳಿಂದ ಬೆಂಬಲ ಪತ್ರಗಳನ್ನು ಕೇಳಲಾಗಿತ್ತು.

ಮಹಾಭಾರತದ ಸಂದರ್ಭದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಸಲಹೆ ನೀಡುತ್ತಿರುವ ಚಿತ್ರ ಕೂಡ ನಮ್ಮ ಮೂಲ ಸಂವಿಧಾನದ ಭಾಗವಾಗಿತ್ತು. ತಿರುವಾಂಕೂರು ರಾಜಮನೆತನದ ದೊರೆ, ಶ್ರೀ ಪದ್ಮನಾಭ ದಾಸ ಬಾಲರಾಮ ವರ್ಮರು ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಭಾರತ ಸರಕಾರದೊಂದಿಗೆ ರಾಮನ ತತ್ವಗಳ ಪ್ರಕಾರ ರಾಜ್ಯದ ಆಡಳಿತ ನಡೆಯ ಬೇಕೆಂಬುದನ್ನು ಖಚಿತಪಡಿಸಿಕೊಂಡರು.

ನಂತರವಷ್ಟೇ ಅವರು ‘ಯುನೈಟೆಡ್ ಸ್ಟೇಟ್ ಆಫ್ ಟ್ರಾವಂಕೂರ್ ಮತ್ತು ಕೊಚ್ಚಿನ್’ಗಾಗಿ ಭಾರತದ ಸಂವಿಧಾನವನ್ನು ಅಳವಡಿಸಿಕೊಂಡರು. ತಿರುವಾಂಕೂರು ರಾಜ್ಯದಲ್ಲಿ ಅಳವಡಿಸಿಕೊಂಡ ಅನೇಕ ಸುಧಾರಣಾ ಕ್ರಮಗಳು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಅಧ್ಯಾಯದಲ್ಲಿ ತಮ್ಮ ಸ್ಥಾನ ವನ್ನು ಕಂಡುಕೊಳ್ಳುತ್ತವೆ. ಉದಾಹರಣೆಗೆ ಸಂವಿಧಾನದ 25ನೇ ವಿಧಿಯ ರೂಪದಲ್ಲಿ ದೇವಾಲಯ ಪ್ರವೇಶದ ಘೋಷಣೆಯಾಗಿದೆ.

ಭಾರತದ ಸಂವಿಧಾನ ಭೂತಕಾಲವನ್ನು ನಿರಂತರವಾಗಿ ಅಂಗೀಕರಿಸಿ, ವರ್ತಮಾನಕ್ಕೆ ಮಾರ್ಗ ದರ್ಶನ ನೀಡಿ, ನಮ್ಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವ ಗ್ರಂಥವಾಗಿದೆ.