ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಮೋಹನ್‌ ವಿಶ್ವ

columnist

[email protected]

ಮೋಹನ್ ವಿಶ್ವ ಮೂಲತಃ ಬೆಂಗಳೂರಿನವರು, ಕನ್ನಡ ಮಾದ್ಯಮದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಬೆಂಗಳೂರಿನ ಪ್ರತಿಷ್ಟಿತ ವಿಜಯಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ತಮ್ಮ 23 ನೇ ವಯಸ್ಸಿನಲ್ಲಿ Chartered Accountant ಮತ್ತು Company Secretary ಸ್ನಾತಕೋತ್ತರ ಪದವಿ ಪಡೆದವರು. 15 ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಚೇರಿ ನಡೆಸುತ್ತಿದ್ದಾರೆ. ಪ್ರತಿಷ್ಟಿತ ಬಹುರಾಷ್ಟೀಯ ಕಂಪೆನಿಗಳಿಗೆ ಸತತ ವಾಗಿ 15 ವರ್ಷಗಳಿಂದ ದೇಶದಾದ್ಯಂತ ವ್ಯಾವಹಾರಿಕ ಸಲಹೆ ನೀಡುತ್ತಾ ಬಂದಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ವಿಶ್ವೇಶ್ವರ ಭಟ್ಟರ ಸಲಹೆಯ ಮೇರೆಗೆ ಅಂಕಣ ಬರೆಯಲು ಪ್ರಾರಂಭಿಸಿದರು.ವಿಶ್ವವಾಣಿ ಪತ್ರಿಕೆಯ ಮೊದಲ ದಿನದಿಂದ 10 ವರ್ಷಗಳ ಕಾಲ ಅಂಕಣ ಬರೆಯುತ್ತಿದ್ದಾರೆ. ಜಕೀಯ,ಅಂತರಾಷ್ಟೀಯ ವಿಚಾರ, ಆರ್ಥಿಕತೆ, ಇತಿಹಾಸ, ವೈಚಾರಿಕತೆ, ಧರ್ಮಗಳ ಕುರಿತು 300 ಕ್ಕೂ ಅಧಿಕ ಅಂಕಣಗಳನ್ನು ಬರೆದಿದ್ದಾರೆ. ಪಾಕಿಸ್ತಾನದ ಆರ್ಥಿಕ ದಿವಾಳಿತನ ಕುರಿತು ‘ದಾರಿ ತಪ್ಪಿದ ದೇಶ ಪಾಕಿಸ್ತಾನ/ʼ ಎಂಬ ಪುಸ್ತಕ ಬರೆದಿದ್ದಾರೆ. ಕಳೆದ 12 ವರ್ಷಗಳಿಂದ ಹಲವು ವಿಷಯಗಳ ವಿಶ್ಲೇಷಕರಾಗಿ ರಾಜ್ಯ ಮತ್ತು ರಾಷ್ಟೀಯ ಮಟ್ಟದ ಪ್ರತಿಷ್ಟಿತ ಟಿ.ವಿ.ಮಾದ್ಯಮಗಳಲ್ಲಿ 5000 ಕ್ಕೂ ಅಧಿಕ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷ - ಕರ್ನಾಟಕದ ರಾಜ್ಯ ವಕ್ತಾರರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..

Articles
Mohan Vishwa Column: ಕಾಲ್ಚೆಂಡಿನ ಕಲಾವಿದ ಲಿಯೋನೆಲ್ ಮೆಸ್ಸಿ

Mohan Vishwa Column: ಕಾಲ್ಚೆಂಡಿನ ಕಲಾವಿದ ಲಿಯೋನೆಲ್ ಮೆಸ್ಸಿ

1987ರ ಜೂನ್ 24ರಂದು ಅರ್ಜೆಂಟೀನಾದ ರೊಸಾರಿಯೋದಲ್ಲಿ ಜನಿಸಿದ ಮೆಸ್ಸಿ, ಮಧ್ಯಮ ವರ್ಗದ ಸರಳ ಕುಟುಂಬದಲ್ಲಿ ಬೆಳೆದರು. ಅವರ ತಂದೆ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸ್ಥಳೀಯ ಫುಟ್ಬಾಲ್ ತಂಡವೊಂದನ್ನು ತರಬೇತುಗೊಳಿಸುತ್ತಿದ್ದರು; ತಾಯಿ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದ ಜೀವನದಲ್ಲಿ ಫುಟ್ಬಾಲ್ ಆಳವಾಗಿ ಬೆರೆತು ಹೋಗಿತ್ತು, ಮೆಸ್ಸಿ ನಡೆಯಲು ಆರಂಭಿಸಿದ ಕೂಡಲೇ ಆಟಕ್ಕೆ ಪರಿಚಯಿಸಲ್ಪಟ್ಟರು.

Mohan Vishwa Column: ಭಾರತದ ನೈಸರ್ಗಿಕ ಆರ್ಥಿಕ ಬಂಡವಾಳ !

Mohan Vishwa Column: ಭಾರತದ ನೈಸರ್ಗಿಕ ಆರ್ಥಿಕ ಬಂಡವಾಳ !

2023ರ ಅರಣ್ಯ ಸಮೀಕ್ಷೆ ವರದಿ ಪ್ರಕಾರ ಭಾರತದಲ್ಲಿ ಸುಮಾರು 7.15 ಲಕ್ಷ ಚದರ ಕಿಲೋಮೀಟರ್ ಅರಣ್ಯ ಪ್ರದೇಶವಿದ್ದು, ಮರಗಳ ಆವರಣ ಸೇರಿಸಿದರೆ ಅದು 8.27 ಲಕ್ಷ ಚದರ ಕಿಲೋಮೀಟರ್‌ಗಿಂತ ಹೆಚ್ಚಾಗಿದೆ. ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದ ಸುಮಾರು 25% ಶೇಕಡಾ ಭಾಗವು ಅರಣ್ಯ ಮತ್ತು ಮರಗಳ ಆವರಣದಿಂದ ಕೂಡಿದೆ.

Mohan Vishwa Column: ಸಾಂಸ್ಕೃತಿಕ ತಂತು ಪ್ರಾಂಬನನ್ ದೇವಾಲಯ

Mohan Vishwa Column: ಸಾಂಸ್ಕೃತಿಕ ತಂತು ಪ್ರಾಂಬನನ್ ದೇವಾಲಯ

ಪ್ರಾಂಬನನ್ ದೇವಾಲಯ ಇಂಡೋನೇಷ್ಯಾದ ಯೋಗ್ಯಕರ್ತದ ಸಮೀಪದಲ್ಲಿದ್ದು, ಕ್ರಿ.ಶ. 9ನೇ ಶತಮಾನ ದಲ್ಲಿ ‘ಸಂಜಯ’ ರಾಜವಂಶದ ಆಡಳಿತಾವಧಿಯಲ್ಲಿ ನಿರ್ಮಿಸಲಾಯಿತು. ಆ ಕಾಲದಲ್ಲಿ ಮಧ್ಯ ಜಾವಾದಲ್ಲಿ ಹಿಂದೂ ಮತ್ತು ಬೌದ್ಧ ರಾಜ್ಯಗಳ ನಡುವೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ಪರಸ್ಪರ ಪ್ರಭಾವ ಎರಡೂ ಕಂಡುಬಂದವು.

‌Mohan Vishwa Column: ದಶಕದಲ್ಲಿ ಬದಲಾದ ಭಾರತೀಯ ರೈಲ್ವೆ

‌Mohan Vishwa Column: ದಶಕದಲ್ಲಿ ಬದಲಾದ ಭಾರತೀಯ ರೈಲ್ವೆ

ರೈಲ್ವೆ ಸಚಿವಾಲಯವು ವೇಗ, ಸುರಕ್ಷತೆ, ಆಧುನೀಕರಣ, ವಿದ್ಯುದೀಕರಣ, ಸರಕು ಸಾಗಣೆ, ಪ್ರಯಾಣಿಕರ ಅನುಕೂಲತೆ ಹಾಗೂ ಡಿಜಿಟಲ್ ವ್ಯವಸ್ಥೆಗಳ ಮೇಲೆ ವಿಶೇಷ ಗಮನಹರಿಸಿತು. ಈ ಬದಲಾವಣೆಯ ಮೊದಲ ಸೂಚನೆ ಬಜೆಟ್‌ನಲ್ಲಿಯೇ ಕಂಡು ಬಂತು. 2013-14ರಲ್ಲಿ ಭಾರತೀಯ ರೈಲ್ವೆಗೆ ವಾರ್ಷಿಕ ಬಂಡವಾಳ ವೆಚ್ಚ ಸುಮಾರು ರೂ.28000 ಕೋಟಿ ಮಟ್ಟದಲ್ಲಿದ್ದರೆ, 2025-26ರ ವೇಳೆಗೆ ಅದು ರೂ.2.5 ಲಕ್ಷ ಕೋಟಿಗೆ ತಲುಪಿದೆ.

Mohan Vishwa Column: ಬ್ರಿಟನ್‌ ಪ್ರಧಾನಿಗಳ ರಾಜೀನಾಮೆ ಸರಮಾಲೆ

ಬ್ರಿಟನ್‌ ಪ್ರಧಾನಿಗಳ ರಾಜೀನಾಮೆ ಸರಮಾಲೆ

ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಸ್ಥಿರ ಸಂಸದೀಯ ಪ್ರಜಾಪ್ರಭುತ್ವಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಬ್ರಿಟನ್ ಇಂದು ರಾಜಕೀಯ ಅನಿಶ್ಚಿತತೆ, ನಾಯಕತ್ವದ ಬಿಕ್ಕಟ್ಟುಗಳು ಹಾಗೂ ಜನರ ನಿರಾಶೆಯ ಸಂಕೇತವಾಗಿ ಮಾರ್ಪಟ್ಟಿದೆ. ಈ ಅಸ್ಥಿರತೆಯ ಬೇರುಗಳನ್ನು 2016ರ ಬ್ರೆಕ್ಸಿಟ್‌ ಜನಮತ ಸಂಗ್ರಹದಲ್ಲಿ ಕಾಣಬಹುದು.

Mohan Vishwa Column: ಬ್ರಿಟಿಷರ ಪಕ್ಷದಿಂದ ಆರ್‌ʼಎಸ್‌ʼಎಸ್‌ ಬಗ್ಗೆ ಪ್ರಶ್ನೆ

ಬ್ರಿಟಿಷರ ಪಕ್ಷದಿಂದ ಆರ್‌ʼಎಸ್‌ʼಎಸ್‌ ಬಗ್ಗೆ ಪ್ರಶ್ನೆ

ಆರ್‌ಎಸ್‌ಎಸ್ ವ್ಯಕ್ತಿಗಳ ಸ್ವಯಂಪ್ರೇರಿತ ಸಂಘವಾಗಿದ್ದು, ಪ್ರಸ್ತುತ ಭಾರತೀಯ ಕಾನೂನುಗಳ ಅಡಿಯಲ್ಲಿ ಅದು ನೋಂದಣಿಗೆ ಬದ್ಧವಾಗಿಲ್ಲ. ಇಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆಯೆಂದರೆ, ಕಾಂಗ್ರೆಸ್ ಈ ವಿಚಾರವನ್ನು ಈಗ ಏಕೆ ಪ್ರಸ್ತಾಪಿಸುತ್ತಿದೆ? ಸ್ವಾತಂತ್ರ್ಯಾನಂತರ ದಶಕಗಳ ಕಾಲ ದೇಶವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರಗಳು ಆರ್‌ಎಸ್‌ಎಸ್‌ಗೆ ನೋಂದಣಿ ಕಡ್ಡಾಯ ಗೊಳಿಸುವ ಯಾವುದೇ ಕಾನೂನು ತರಲಿಲ್ಲ.

Mohan Vishwa Column: 1991ರ ಆರ್ಥಿಕ ದುರಂತಕ್ಕೆ ಹೊಣೆ ಯಾರು ?

Mohan Vishwa Column: 1991ರ ಆರ್ಥಿಕ ದುರಂತಕ್ಕೆ ಹೊಣೆ ಯಾರು ?

ಮೋದಿಯವರು ಚುನಾಯಿತ ಪ್ರಧಾನ ಮಂತ್ರಿಯಾಗಿ ನೆಹರು ದಾಖಲೆಯನ್ನು ಮುರಿದಿದ್ದಾರೆ, ಈ ಸಮಯದಲ್ಲಿಎಪ್ಪತ್ತು ವರ್ಷದ ಹಿಂದಿನ ನೆಹರು ಭಾರತದ ಬಗ್ಗೆ ಈಗಿನ ಭಾರತದ ಹೋಲಿಕೆ ಮಾಡುವುದು ಸರಿಯಲ್ಲ ಎಂಬ ಟೊಳ್ಳು ವಾದವನ್ನು ಕಾಂಗ್ರೆಸ್ಸಿಗರು ಮುಂದಿಡು ತ್ತಿದ್ದಾರೆ. ಆದರೆ 1947ರಿಂದ 1991ರ ವರೆಗೂ ಸತತವಾಗಿ ನಾಲ್ಕು ದಶಕಗಳ ಕಾಲ ಭಾರತ ವನ್ನಾಳಿದ ನೆಹರು ಕುಟುಂಬಸ್ಥರು ದೇಶಕ್ಕಾಗಿ ಮಾಡಿದ್ದಾದರೂ ಏನು? 1991ರ ಆರ್ಥಿಕ ಉದಾರೀಕರಣದ ಬಗ್ಗೆ ತಮ್ಮ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ಸಿಗರು, 1991ರಲ್ಲಿ ಭಾರತದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಯಾರೆಂಬುದರ ಚರ್ಚೆಗೆ ಬರುವುದಿಲ್ಲ.

Mohan Vishwa Column: ಭಾರತದ ಪ್ರಾಚೀನ ವ್ಯಾಪಾರ ಜಾಲ

Mohan Vishwa Column: ಭಾರತದ ಪ್ರಾಚೀನ ವ್ಯಾಪಾರ ಜಾಲ

ಚೀನಾದಿಂದ ಯುರೋಪ್‌ವರೆಗೆ ಸಂಪರ್ಕ ಕಲ್ಪಿಸಿದ ರೇಷ್ಮೆ ಮಾರ್ಗವು ಜಗತ್ತಿನ ಅತ್ಯಂತ ಪ್ರಸಿದ್ಧ ವ್ಯಾಪಾರ ಮಾರ್ಗವಾಗಿತ್ತು. ಈ ಮಾರ್ಗದ ಪ್ರಮುಖ ಕೇಂದ್ರಗಳಲ್ಲಿ ಭಾರತವೂ ಒಂದಾಗಿತ್ತು. ಉತ್ತರ ಭಾರತದ ನಗರಗಳು, ಜಮ್ಮು ಮತ್ತು ಕಾಶ್ಮೀರವನ್ನೂ ಒಳಗೊಂಡಂತೆ - ತಕ್ಷಶಿಲೆ ವ್ಯಾಪಾರ ಹಾಗೂ ಜ್ಞಾನ ವಿನಿಮಯದ ಕೇಂದ್ರಗಳಾಗಿದ್ದವು.

Mohan Vishwa Column: ಪ್ರಾಚೀನ ಭಾರತದ ದೇವಾಲಯ ಆರ್ಥಿಕತೆ

Mohan Vishwa Column: ಪ್ರಾಚೀನ ಭಾರತದ ದೇವಾಲಯ ಆರ್ಥಿಕತೆ

ವಿಶೇಷವಾಗಿ ಹಂಪಿ ನಗರವು ಆ ಕಾಲದ ವಿಶ್ವದ ಶ್ರೀಮಂತ ನಗರಗಳಲ್ಲಿ ಒಂದಾಗಿತ್ತು. ಇಂದಿನ ಕಾಲದಲ್ಲಿ ಪ್ರವಾಸೋದ್ಯಮ ನಗರಗಳಿಗೆ ಹೇಗೆ ಆದಾಯ ತರುತ್ತದೆಯೋ, ಅದೇ ರೀತಿಯಲ್ಲಿ ದೇವಾಲಯ ಯಾತ್ರೆಗಳು ವಿಜಯನಗರ ಕಾಲದಲ್ಲಿ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆ ಗಳಿಗೆ ಜೀವ ತುಂಬುತ್ತಿದ್ದವು. ಹಂಪಿ ವಿರೂಪಾಕ್ಷ ದೇವಾಲಯ, ವಿಠ್ಠಲನ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಷ್ಟೇ ಅಲ್ಲ, ವ್ಯಾಪಾರ, ಉದ್ಯೋಗ ಮತ್ತು ಸಾಮಾಜಿಕ ವ್ಯವಸ್ಥೆ ಗಳ ಕೇಂದ್ರಗಳಾಗಿದ್ದವು.

Mohan Vishwa Column: ಯುದ್ಧದ ಬೆಂಕಿಯಲ್ಲಿ ದುಬೈ ರಿಯಲ್‌ ಎಸ್ಟೇಟ್‌ !

Mohan Vishwa Column: ಯುದ್ಧದ ಬೆಂಕಿಯಲ್ಲಿ ದುಬೈ ರಿಯಲ್‌ ಎಸ್ಟೇಟ್‌ !

ಸುರಕ್ಷಿತ ಹೂಡಿಕೆ ತಾಣ ಎಂದು ಪರಿಗಣಿಸಲ್ಪಟ್ಟ ಯುಎಇ, ಯುದ್ಧದ ನಂತರ ಅಪಾಯದ ಪ್ರದೇಶ ವೆಂದು ಕಾಣಿಸಿಕೊಳ್ಳಲು ಆರಂಭಿಸಿದೆ. ಪಾಮ್ ದ್ವೀಪ ಮತ್ತು ಬುರ್ಜ್ ಖಲೀಫಾ ಸುತ್ತಮುತ್ತಲಿನ ಐಷಾರಾಮಿ ಮನೆಗಳನ್ನು ಖರೀದಿಸಲು ಸ್ಪರ್ಧಿಸುತ್ತಿದ್ದ ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ. ಯುದ್ಧದ ಮೊದಲು ದುಬೈ ರಿಯಲ್ ಎಸ್ಟೇಟ್ ಮಾರುಕಟ್ಟೆ ಐತಿಹಾಸಿಕ ಏರಿಕೆಯನ್ನು ಕಂಡಿತ್ತು,

Mohan Vishwa Column: ಹಿಜಾಬ್:‌ ಇರಾನ್‌ʼನಲ್ಲಿ ಬಂಡಾಯ, ರಾಜ್ಯದಲ್ಲಿ ಮಾನ್ಯತೆ

ಹಿಜಾಬ್:‌ ಇರಾನ್‌ʼನಲ್ಲಿ ಬಂಡಾಯ, ರಾಜ್ಯದಲ್ಲಿ ಮಾನ್ಯತೆ

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿರುವ ಸಮಯದಲ್ಲಿ ಆದೇಶವನ್ನು ಪ್ರಕಟಿಸು ವುದು ಸಂವಿಧಾನ ಬಾಹಿರ ಕೆಲಸ. ಹಿಜಾಬ್ ಜೊತೆಗೆ ಜನಿವಾರ, ರುದ್ರಾಕ್ಷಿ ಮತ್ತು ಶಿವದಾರವನ್ನು ಧರಿಸಬಹುದೆಂಬುದನ್ನು ಆದೇಶದಲ್ಲಿ ಹೇಳಿದೆ. ವಿಚಿತ್ರವೆಂದರೆ ಜನಿವಾರ, ಶಿವದಾರವನ್ನು ಹಿಜಾಬ್‌ ನೊಂದಿಗೆ ತಾಳೆ ಮಾಡುವುದು ದೊಡ್ಡ ತಪ್ಪು. ಜನಿವಾರ ಮತ್ತು ಶಿವದಾರವನ್ನು ದಿನದ 24 ಗಂಟೆ ಧರಿಸಲೇ ಬೇಕು.

Mohan Vishwa Column: ಗ್ರೇಟ್‌ ನಿಕೋಬಾರ್:‌ ಸಮುದ್ರಾಧಿಪತ್ಯದ ಮಹಾದ್ವಾರ

ಗ್ರೇಟ್‌ ನಿಕೋಬಾರ್:‌ ಸಮುದ್ರಾಧಿಪತ್ಯದ ಮಹಾದ್ವಾರ

ಭಾರತದ ದೃಷ್ಟಿಯಿಂದ ಈ ಹೊಸ ಕಾರ್ಯತಂತ್ರದ ವಾಸ್ತವಿಕತೆಯನ್ನು ಅತ್ಯಂತ ಸ್ಪಷ್ಟವಾಗಿ ಪ್ರತಿಬಿಂಬಿಸುವ ಸ್ಥಳವೆಂದರೆ ‘ಗ್ರೇಟ್ ನಿಕೋಬಾರ್ ದ್ವೀಪ’. ಭಾರತದ ಮುಖ್ಯ ಭೂಭಾಗದಿಂದ ದೂರವಿರುವ ದ್ವೀಪವೆಂದು ಕಾಣಿಸಿಕೊಂಡರೂ, ಗ್ರೇಟ್ ನಿಕೋಬಾರ್ ಭಾರತಕ್ಕೆ ಅತ್ಯಂತ ಅಮೂಲ್ಯವಾದ ಕಾರ್ಯತಂತ್ರದ ಸ್ಥಳವಾಗಿದೆ. ಅದರ ಭೌಗೋಳಿಕ ಸ್ಥಾನ, ಆರ್ಥಿಕ ಸಾಮರ್ಥ್ಯ ಹಾಗೂ ರಕ್ಷಣಾತ್ಮಕ ಮಹತ್ವ ಎಲ್ಲವೂ ಸೇರಿ ಭಾರತದ ಸಮುದ್ರ ಭದ್ರತಾ ವ್ಯವಸ್ಥೆಯ ಕೇಂದ್ರ ಬಿಂದುವಾಗಿ ರೂಪುಗೊಳ್ಳುತ್ತಿದೆ.

Mohan Vishwa Column: ಗಾಮೀಣ ಹೃದಯದ ನಾಯಕ ಬಿಎಸ್‌ʼವೈ

Mohan Vishwa Column: ಗಾಮೀಣ ಹೃದಯದ ನಾಯಕ ಬಿಎಸ್‌ʼವೈ

ರೈತರ ಬೆಳೆಗಳಿಗೆ ನ್ಯಾಯಯುತವಾದ ಬೆಲೆ, ಸಾಲಮನ್ನಾ,ನೀರಾವರಿ ಸೌಲಭ್ಯಗಳ ವಿಸ್ತರಣೆ, ಇವುಗಳಿ ಗಾಗಿ ಯಡಿಯೂರಪ್ಪನವರು ಅನೇಕ ಬಾರಿ ಪ್ರತಿಭಟನೆಗಳಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆದು ರೈತರ ಪರವಾಗಿ ನಿಂತಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ, ರೈತಪರ ನೀತಿಗಳನ್ನು ಜಾರಿಗೆ ತರುವತ್ತ ವಿಶೇಷ ಗಮನ ಹರಿಸಿದರು.

Mohan Vishwa Column: ಸೋಲಿನ ಹತಾಶೆ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ

ಸೋಲಿನ ಹತಾಶೆ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ

ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿ ಮೋದಿಯವರನ್ನು ‘ಮೌತ್ ಕಾ ಸೌದಾಗರ್’ ಎಂದು ಹೇಳಿದ್ದರು, ಮತ್ತೊಬ್ಬ ಕಾಂಗ್ರೆಸ್‌ನ ನಾಯಕ ಮಣಿ ಶಂಕರ್ ಅಯ್ಯರ್ ಮೋದಿಯವರನ್ನು ‘ನೀಚ್ ಆದ್ಮಿ’ ಎಂದು ಅವಹೇಳನ ಮಾಡಿದ್ದರು, ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಪದವನ್ನು ಚುನಾವಣಾ ಪ್ರಚಾರದಲ್ಲಿ ಬಳಸಿದ್ದರು.

Mohan Vishwa Column: ಮಹಿಳಾ ಮೀಸಲು: ವಾಗ್ದಾನದಿಂದ ಇತಿಹಾಸದತ್ತ

Mohan Vishwa Column: ಮಹಿಳಾ ಮೀಸಲು: ವಾಗ್ದಾನದಿಂದ ಇತಿಹಾಸದತ್ತ

ಭಾರತದಲ್ಲಿ ಮಹಿಳೆಯರು ದೇಶದ ಜನಸಂಖ್ಯೆಯ ಅರ್ಧ ಭಾಗವಾಗಿದ್ದರೂ, ಅವರ ರಾಜಕೀಯ ಪ್ರತಿನಿಧಿತ್ವ ಕಡಿಮೆ ಇರುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು, ಈ ಕಾಯ್ದೆ ಆ ಕೊರತೆಯನ್ನು ನೀಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮಹಿಳಾ ಮೀಸಲಾತಿ ಮಸೂದೆ ಮೊದಲ ಬಾರಿಗೆ 1996ರಲ್ಲಿ ಪರಿಚಯಿಸಲಾಯಿತು, ನಂತರ ಹಲವು ಬಾರಿ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಯಿತಾ‌ ದರೂ, ಅದು ಕಾನೂನಾಗಲಿಲ್ಲ.

Mohan Vishwa Column: ಭಾರತಕ್ಕೆ ತನ್ನನ್ನೇ ಅರ್ಪಿಸಿದ ಸಿಸ್ಟರ್‌ ನಿವೇದಿತಾ

Mohan Vishwa Column: ಭಾರತಕ್ಕೆ ತನ್ನನ್ನೇ ಅರ್ಪಿಸಿದ ಸಿಸ್ಟರ್‌ ನಿವೇದಿತಾ

1867ರಲ್ಲಿ ಜನಿಸಿದ ಮಾರ್ಗರೇಟ್, ಬಾಲ್ಯದಿಂದಲೇ ಧಾರ್ಮಿಕ ಮೌಲ್ಯಗಳು ಮತ್ತು ಮಾನವೀಯತೆ ಯ ಮೇಲೆ ಆಳವಾದ ಆಸಕ್ತಿ ಹೊಂದಿದ್ದರು. ಶಿಕ್ಷಕಿಯಾಗಿ ತನ್ನ ವೃತ್ತಿಜೀವನ ಆರಂಭಿಸಿದ ಅವರು, ಸಮಾಜ ಸುಧಾರಣೆಗಾಗಿ ಶಿಕ್ಷಣವೇ ಮುಖ್ಯ ಸಾಧನವೆಂದು ನಂಬಿದ್ದರು. ಆದರೆ, 1895ರಲ್ಲಿ ಲಂಡನ್‌ ನಲ್ಲಿ ಸ್ವಾಮಿ ವಿವೇಕಾನಂದರನ್ನು ಭೇಟಿಯಾದ ಕ್ಷಣ ಅವರ ಜೀವನದಲ್ಲಿ ಮಹತ್ವದ ತಿರುವು ಪಡೆದು ಕೊಂಡಿತು.

Mohan Vishwa Column: ಕಾಂಗ್ರೆಸ್ಸಿನ ಮುಸ್ಲಿಂ ವೋಟ್‌ ಬ್ಯಾಂಕ್‌ ಆಟಕ್ಕೆ ತೆರೆ !

ಕಾಂಗ್ರೆಸ್ಸಿನ ಮುಸ್ಲಿಂ ವೋಟ್‌ ಬ್ಯಾಂಕ್‌ ಆಟಕ್ಕೆ ತೆರೆ !

ಕಾಂಗ್ರೆಸ್ ಅವಧಿಯಲ್ಲಿ ದಶಕಗಳ ಕಾಲ ಮುಸ್ಲಿಂ ಯುವಕರು ಗುಣಮಟ್ಟದ ಶಿಕ್ಷಣ ಮತ್ತು ಸಮರ್ಪಕ ಉದ್ಯೋಗಾವಕಾಶಗಳಿಂದ ವಂಚಿತರಾದರು, ಉದ್ದೇಶಪೂರ್ವಕವಾಗಿ ಈ ಕೆಲಸ ವನ್ನು ಕಾಂಗ್ರೆಸ್ ಮಾಡಿತ್ತು. ಅವರ ಪರಿಸ್ಥಿತಿಯನ್ನು ಬದಲಾಯಿಸಲು ಯಾವುದೇ ದೀರ್ಘ ಕಾಲೀನ ದೃಷ್ಟಿಕೋನವನ್ನು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ತೋರಿಸಲಿಲ್ಲ.

Mohan Vishwa Column: ಮೋದಿ ಯುಗದಲ್ಲಿ ಭಾರತದ ರಾಜತಾಂತ್ರಿಕತೆ

Mohan Vishwa Column: ಮೋದಿ ಯುಗದಲ್ಲಿ ಭಾರತದ ರಾಜತಾಂತ್ರಿಕತೆ

ಕತಾರ್ ದೇಶದಿಂದ ಆಮದು ಮಾಡಿಕೊಳ್ಳುವ ಎಲ್ʼಪಿಜಿಯು ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕು. ಯುದ್ಧ ಆರಂಭವಾದ ದಿನದಿಂದಲೂ ಭಾರತವು ತಾನು ಶಾಂತಿ ಯನ್ನು ಬಯಸುತ್ತಿರುವ ಮಾತನ್ನು ಹೇಳುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯ ರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿನ ರಾಜಮನೆತನದ ಜತೆ ಪ್ರಧಾನಿ ಮೋದಿಯವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

‌Mohan Vishwa Column: ನೋಟ್‌ ಬ್ಯಾನ್ ನೆನಪಿಸಿದ ದುರಂಧರ್‌

‌Mohan Vishwa Column: ನೋಟ್‌ ಬ್ಯಾನ್ ನೆನಪಿಸಿದ ದುರಂಧರ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನುಸುಳಿಸಿ ಭಾರತದಲ್ಲಿ ದುಷ್ಕೃತ್ಯ ಗಳನ್ನು ನಡೆಸಲು ಪಾಕಿಸ್ತಾನಕ್ಕೆ ಬೇಕಿದ್ದ ಹಣದ ಮೂಲ ನಕಲಿ ನೋಟುಗಳು. ಈ ನಕಲಿ ನೋಟಿನ ಬಹುದೊಡ್ಡ ಜಾಲವನ್ನು ಹೊಂದಿದ್ದ ಪಾಕಿಸ್ತಾನದ ಏಜೆಂಟ್‌ಗಳು ಸಾವಿರಾರು ಕೋಟಿ ರು. ಮೌಲ್ಯದ ನಕಲಿ ನೋಟುಗಳನ್ನು ‘ಹವಾಲಾ’ ವ್ಯವಸ್ಥೆಯ ಮೂಲಕ ಭಾರತದ ವಿವಿಧೆಡೆಗೆ ಕಳುಹಿಸುತ್ತಿದ್ದರು.

Mohan Vishwa Column: ಇಂಧನ ನಿರ್ವಹಣೆ: ಯುಪಿಎ V/s ಎನ್ʼಡಿಎ

Mohan Vishwa Column: ಇಂಧನ ನಿರ್ವಹಣೆ: ಯುಪಿಎ V/s ಎನ್ʼಡಿಎ

ಸರಕಾರಿ ನೌಕರರು ಅಥವಾ ದೊಡ್ಡ ವ್ಯವಹಾರಸ್ಥರ ಮನೆಯಲ್ಲಿ ಮಾತ್ರ ಅಡುಗೆ ಅನಿಲ ಹೆಚ್ಚಾಗಿ ಕಾಣಿಸುತ್ತಿತ್ತು. ನಂತರದ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಅಡುಗೆ ಅನಿಲದ ಬಳಕೆ ಯಲ್ಲಿ ಏರಿಕೆಯಾದರೂ, ವರ್ಷಕ್ಕೆ ಮೂರರಿಂದ ಐದು ಸಿಲಿಂಡರ್ ಮಾತ್ರ ಸಿಗುತ್ತಿತ್ತು. ಹಳ್ಳಿ ಜನರಿಗೆ ಅದೂ ಸಿಗುತ್ತಿರಲಿಲ್ಲ.

M‌ohan Vishwa Column: ಸುತ್ತಲ ಶತ್ರುತ್ವದಿಂದ ಬೆಳೆದ ಪುಟ್ಟ ದೇಶ ಇಸ್ರೇಲ್

M‌ohan Vishwa Column: ಸುತ್ತಲ ಶತ್ರುತ್ವದಿಂದ ಬೆಳೆದ ಪುಟ್ಟ ದೇಶ ಇಸ್ರೇಲ್

ಬೇರೆ ದೇಶದವರ ಜತೆಗಿನ ವ್ಯಾಪಾರ ಸ್ತಬ್ಧವಾಗಿದ್ದ ಕಾರಣ ಇಸ್ರೇಲಿಗಳಿಗೆ ವಸ್ತುಗಳ ಮಾರಾಟ ಮರೀಚಿಕೆಯಾಗಿತ್ತು. ವಿಽಯಿಲ್ಲದೆ ಇಸ್ರೇಲ್ ಕುಳಿತಲ್ಲಿ ಏನಾದರೊಂದು ಕೆಲಸ ಮಾಡಬೇಕೆಂಬ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಅಂದಿನ ಅನಿವಾರ್ಯತೆ ಇಂದು ಇಸ್ರೇಲ್ ದೇಶ ಜಗತ್ತಿನಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು.

Mohan Vishwa Column: ಸಮಸ್ಯೆಗಳ ಸೂತ್ರಧಾರ ನೆಹರು

Mohan Vishwa Column: ಸಮಸ್ಯೆಗಳ ಸೂತ್ರಧಾರ ನೆಹರು

ನೆಹರು ಮಾಡಿದ್ದ ಪ್ರಮಾದವನ್ನು ಅವರದ್ದೇ ಪಕ್ಷದ ನಾಯಕ ಶಶಿ ತರೂರ್ ಒಪ್ಪಿಕೊಂಡಿ ದ್ದರು. ಪ್ರಧಾನಿಯಾದವರು ತಮ್ಮ ದೇಶವನ್ನು ಮುಂದುವರಿಸಲು ಬಯಸುತ್ತಾರೋ ಅಥವಾ ಬೇರೆಯವರಿಗೆ ಸಹಾಯಮಾಡಿ ತಾವು ಹಿಂದೆ ಹೋಗಲು ಬಯಸುತ್ತಾರೋ? ಆ ಮಟ್ಟದ ತಿಳಿವಳಿಕೆ ಇಲ್ಲದ ವ್ಯಕ್ತಿಯನ್ನು ದೇಶದ ಮೊದಲ ಪ್ರಧಾನಿಯನ್ನಾಗಿ ಪಡೆದದ್ದು ನಮ್ಮ ದೌರ್ಭಾಗ್ಯ.

Mohan Vishwa Column: ಮೈ ಡಿಯರ್‌ ಎಡ್ವಿನಾ ಮೌಂಟ್‌ ಬ್ಯಾಟನ್‌ !

Mohan Vishwa Column: ಮೈ ಡಿಯರ್‌ ಎಡ್ವಿನಾ ಮೌಂಟ್‌ ಬ್ಯಾಟನ್‌ !

ಕದ್ರಿಯವರು ಹೇಳುವಂತೆ ಸೋನಿಯಾ ಗಾಂಧಿಯವರು ತೆಗೆದುಕೊಂಡು ಹೋಗಿದ್ದ ಪೆಟ್ಟಿಗೆ ಗಳಲ್ಲಿ ನೆಹರು ಅವರು ಎಡ್ವಿನಾ ಮೌಂಟ್ ಬ್ಯಾಟನ್, ಆಲ್ಬರ್ಟ್ ಐನ್‌ಸ್ಟೀನ್, ಜಯಪ್ರಕಾಶ್ ನಾರಾಯಣ, ಪದ್ಮಜಾ ನಾಯ್ಡು, ವಿಜಯ ಲಕ್ಷ್ಮಿ ಪಂಡಿತ್ ಮತ್ತು ಬಾಬು ಜಗಜೀವನ್ ರಾಮ್ ಅವರಿಗೆ ಬರೆದ ಪತ್ರಗಳಿದ್ದು, ಅಷ್ಟೂ ಪತ್ರಗಳನ್ನು ಹಿಂದಿರುಗಿಸಿದರೆ ಅನೇಕ ಸಂಶೋಧನೆಗಳಿಗೆ ಉಪಯೋಗವಾಗಲಿದೆ.

Mohan Vishwa Column: ಜಿನ್ನಾ ಓಲೈಕೆ, ವಂದೇ ಮಾತರಂಗೆ ಕತ್ತರಿ

ಜಿನ್ನಾ ಓಲೈಕೆ, ವಂದೇ ಮಾತರಂಗೆ ಕತ್ತರಿ

ಗೀತೆಯ ನಾಲ್ಕು ಮತ್ತು ಐದನೇ ಚರಣದಲ್ಲಿ ದುರ್ಗಾ ಮಾತೆಯ ಉಲ್ಲೇಖವಿದ್ದು ಮುಸಲ್ಮಾನರು ಅದನ್ನು ಒಪ್ಪುವುದಿಲ್ಲವೆಂದು ತಕರಾರು ತೆಗೆದಿದ್ದರು. ಅಂದು ಜಿನ್ನಾ ಮತ್ತು ಮುಸಲ್ಮಾನರನ್ನು ಓಲೈಸಲು ನೆಹರು ಮತ್ತು ಕಾಂಗ್ರೆಸ್ ಪಕ್ಷ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು ಹೇಳಿತ್ತು.

Loading...