ಭಾರತ ಕಂಡ ಕಡು ಪ್ರಾಮಾಣಿಕ ಪ್ರಧಾನಿ ಶ್ರೀವಾಸ್ತವ್ !
ಸತ್ಯಕ್ಕೆ ಸಾವಿಲ್ಲ. ಶಾಶ್ವತವಾಗಿ ಮುಚ್ಚಿಡೋಕೂ ಸಾಧ್ಯವಿಲ್ಲ. ಹೀಗಾಗಿ ತಡವಾಗಿಯಾದರೂ ಶಾಸ್ತ್ರಿ ಯವರ ಬದುಕಿನ ವಿಸ್ತೃತ ಪರಿಚಯ ಭಾರತದ ಹೊಸ ಪೀಳಿಗೆಗೆ ಆಗಿದೆ. ತಾಷ್ಕೆಂಟ್ ಫೈಲ್'ಗಳ ಹಿಂದಿನ ಕಥೆ, ಅವರ ಅನುಮಾನಾಸ್ಪದ ಸಾವಿನ ಕುರಿತ ವಿಚಾರಗಳು ಒಂದೊಂದಾಗಿ ಹೊರಬಂದಿವೆ. ದಶಕಗಳ ಕಾಲ ಬದಿಗೊತ್ತಲ್ಪಟ್ಟಿದ್ದ ಅವರ ಜನ್ಮದಿನಕ್ಕೆ ಮಾನ್ಯತೆ ಬಂದಿದೆ. ಅದೇ ದಿನಾಂಕದಂದು ಹುಟ್ಟಿದ ಮಹಾತ್ಮನ ಅಬ್ಬರದ ನಡುವೆಯೂ ಶಾಸ್ತ್ರೀಜಿ ಜನ್ಮದಿನಕ್ಕೆ ಎಂದಿಗಿಂತ ದೊಡ್ಡ ಜನಪ್ರಿಯತೆ ದಕ್ಕಿದೆ