ಟಿಕೆಟ್ ಕೊಡಿಸಲಾಗದವ ಯಾವ ಸೀಮೆ ಶಾಸಕ !?
ವಿಧಾನಸಭಾ ಅಧಿವೇಶನದ ನಡುವೆ ಸದನದಲ್ಲಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರು ಆಡಿದ ಮಾತುಗಳು ಮೂರ್ನಾಲ್ಕು ದಿನಗಳ ಸೋಷಿಯಲ್ ಮೀಡಿಯಾ ಸರಕಾಯ್ತು. ರಾಜ್ಯವು ಸಮಸ್ಯೆಗಳಿಂದ ತತ್ತರಿಸುತ್ತಾ ಇರುವಾಗ, ಜಗತ್ತು ಯುದ್ಧದ ಅಡ್ಡಪರಿಣಾಮ ಎದುರಿ ಸುತ್ತಿರುವಾಗ, ಜನಪ್ರತಿನಿಧಿಯಾಗಿ ಸದನದಲ್ಲಿ ಮಂಡಿಸಲು ಹಲವಾರು ವಿಷಯಗಳು ಇರು ವಾಗ ಐಪಿಎಲ್ ಟಿಕೆಟ್ ಬೇಕು ಅಂತ ಕೇಳಿದ್ದು ವ್ಯಾಪಕ ಟೀಕೆ, ಟ್ರೋಲ್ ಮತ್ತು ಆಕ್ರೋಶ ಕ್ಕೆ ಗುರಿಯಾಯ್ತು