ಈ ಮಾತು ಅಭಿಮಾನಿಗಳಿಗೆ ಇಷ್ಟವಾಗಲಿಕ್ಕಿಲ್ಲ, That's ok!
ನಟ ವಿಷ್ಣುವರ್ಧನ್ ಬ್ರಾಹ್ಮಣ ಎಂಬ ಕಾರಣಕ್ಕೆ ಈ ರೀತಿ ಸತತ ನೋವುಣ್ಣುತ್ತಿದ್ದಾರೆ ಎಂಬ ವಾದಕ್ಕೆ ಈ ಲೇಖನ ಬರೆಯುವ ಹೊತ್ತಲ್ಲಿ ನಾನಿಲ್ಲ. ವಿಷ್ಣುವಿಗಾದ ಎಲ್ಲ ನೋವುಗಳಿಗೂ ರಾಜ್ ಕುಟುಂಬವೇ ಕಾರಣ ಎಂಬ ಆರೋಪವನ್ನಂತೂ ನಾನು ಸುತರಾಂ ಒಪ್ಪುವುದೇ ಇಲ್ಲ. ಆದರೆ ವಿಷ್ಣು ನಿಜಾರ್ಥದಲ್ಲಿ ಶಾಪಗ್ರಸ್ತ ಗಂಧರ್ವ. ಇಂಡಸ್ಟ್ರಿಗೆ ಬಂದಾಗಿನಿಂದ ಹಿಡಿದು ಸಮಾಧಿ-ಸ್ಮಾರಕಗಳ ವಿವಾದದ ತನಕ ವಿಷ್ಣುವಿಗೆ ಮತ್ತು ವಿಷ್ಣು ಆತ್ಮಕ್ಕೆ ನೆಮ್ಮದಿಯೇ ಇಲ್ಲದಂತಾಗಿರುವು ದಂತೂ ಸತ್ಯ.