ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಚಿಕ್ಕಬಳ್ಳಾಪುರ
ನಗರಸಭೆ ಅಂಗಡಿ ಮಳಿಗೆಗಳ ಬಾಡಿಗೆ ಬಾಕಿ ಅಂಗಡಿಗಳಿಗೆ ಬೀಗ ಜಡೆದ ಮುನ್ಸಿಪಾಲ್ ಕಮಿಷನರ್

ವರ್ತಕರಿಗೆ ಬಿಸಿ ಮುಟ್ಟಿಸಿದ ಮುನ್ಸಿಪಾಲ್ ಕಮಿಷನರ್

ಚಿಂತಾಮಣಿ ನಗರದ ಜೋಡಿ ರಸ್ತೆಯ ಐ ಡಿ ಎಸ್ ಎಂ ಟಿ ಮಾರುಕಟ್ಟೆಯಲ್ಲಿರುವ ನಗರ ಸಭೆಯ ಅಂಗಡಿ ಮಳಿಗೆಗಳು ಸುಮಾರು ಜನರು ಹರಾಜಿಗೆ ಪಡೆದು ಬೇರೆ ವ್ಯಕ್ತಿಗಳಿಗೆ ದುಪಟ್ಟು ಬಾಡಿಗೆಗೆ ನೀಡಿದ್ದು ಅವರು ಸಮಯಕ್ಕೆ ಸರಿಯಾಗಿ ಲಕ್ಷಾಂತರ ರೂಪಾಯಿ ಬಾಡಿಗೆ ನೀಡದೆ ತೆರಿಗೆ ಕಟ್ಟದೆ ನಿರ್ಲಕ್ಷ ಮಾಡಿದ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಮೂರು ಬಾರಿ ನಗರಸಭೆಯಿಂದ ಎಚ್ಚರಿಕೆ ಕೊಡಲಾಗಿತ್ತು.

Chikkaballapur News: ಗ್ರಾಮ ಗ್ರಾಮಗಳಲ್ಲಿಯೂ ಮೊಳಗಿದ ಮಧುಸೂದನ ಸಾಯಿ ಜಯ ಘೋಷ

ಸದ್ಗುರು ಶ್ರೀ ಮಧುಸೂದನ ಸಾಯಿ ವರ್ಧಂತಿ ಉತ್ಸವದ ಪ್ರಯುಕ್ತ ಗ್ರಾಮ ಸೇವೆ

ನುಡಿದಂತೆ ನಡೆಯುತ್ತಾ ಪ್ರಪಂಚಕ್ಕೆ ಮಾದರಿಯಾಗಲು ತಮ್ಮ ವರ್ಧಂತಿ ಉತ್ಸವದ ಮೂಲಕ ಅನುಯಾಯಿಗಳಿಗೆ ಆದರ್ಶದ ಪಾಠವನ್ನು ಪ್ರೇಮ ಸಂದೇಶದ ಮೂಲಕ ಗ್ರಾಮ ಗ್ರಾಮಗಳಲ್ಲೂ ಬೋಧಿಸಿದರು. ಸುಮಾರು ೮೫೦ ಮಂದಿ ವಿದ್ಯಾರ್ಥಿಗಳು, ೧೫೦ ಮಂದಿ ಶಿಕ್ಷಕರು ಹಾಗೂ ಭಕ್ತರ ನ್ನೊಳಗೊಂಡ ವೃಂದವು ಗ್ರಾಮ ಸೇವೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿತು.

Chikkaballapur News: ಡಿಸಿಸಿ- ಡಿ.ಎಲ್.ಆರ್.ಸಿ ಸಭೆಯಲ್ಲಿ ಆದ್ಯತೆ ಸಾಲ ನೀಡಬೇಕು: ಸಿ.ಇ.ಓ ಡಾ. ವೈ.ನವೀನ್ ಭಟ್

ಡಿಸಿಸಿ- ಡಿ.ಎಲ್.ಆರ್.ಸಿ ಸಭೆಯಲ್ಲಿ ಆದ್ಯತೆ ಸಾಲ ನೀಡಬೇಕು

೨೦೨೪- ೨೦೨೫ನೇ ಸಾಲಿನ ಕೃಷಿ ಸಾಲ ವಿತರಣೆಗೆ ೩೦೮೩.೫೩ ಕೋಟಿ ಗುರಿ ನೀಡಲಾಗಿದ್ದು ಆ ಪೈಕಿ ೩೮೦೮.೮೦ ಕೋಟಿ ಗುರಿ ತಲುಪಲಾಗಿದೆ. ಒಟ್ಟು  ಆದ್ಯತೆ ಸಾಲ ೪೦೪೧.೧೯ ಕೋಟಿ ಗುರಿ ನಿಗದಿ ಪಡಿಸಲಾಗಿದ್ದು ಅದರಲ್ಲಿ ೪೬೬೦.೬೭ ಕೋಟಿ ಗುರಿ ಮುಟ್ಟಲಾಗಿದೆ. ೨೦೨೫-೨೬ ನೇ ಸಾಲಿಗೆ ಕೃಷಿ ಸಾಲ ೪೨೦೮.೯೧ಕೋಟಿ ನೀಡಲು ಗುರಿ ನಿಗದಿಪಡಿಸಲಾಗಿದ್ದು ಒಟ್ಟು ಆದ್ಯತೆ ಸಾಲದ ಗುರಿಯಾಗಿ ೫೨೯೨.೭೬ ಕೋಟಿ ನೀಡುವಂತೆ ತಿಳಿಸಲಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನಿರ್ಮಾಣ : ಉಪಾಧ್ಯಕ್ಷ ನಾಗರಾಜ್

ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನಿರ್ಮಾಣ

ಎಂ.ಜಿ.ರಸ್ತೆಯ ವಿಸ್ತರಣೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಚನ್ನಯ್ಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ತಾತ್ಕಾಲಿಕ ತಳ್ಳು ಗಾಡಿಗಳು, ಪೆಟ್ಟಿಗೆ ಅಂಗಡಿಗಳನ್ನಿಟ್ಟುಕೊಂಡಿರುವ ಬೀದಿಬದಿಯ  ವ್ಯಾಪಾರಸ್ಥರು ಹೂವು, ಹಣ್ಣು, ಎಲೆ ಅಡಕೆ, ಸಿಹಿ ತಿಂಡಿ ತಿನಿಸು ಸೇರಿದಂತೆ ಇತರ ಸಾಮಗ್ರಿಗಳ ವಹಿವಾಟಿನ ಆದಾಯವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.

Chikkaballapur News: ಬಜಾರ್ ರಸ್ತೆ , ಗಂಗಮ್ಮಗುಡಿ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಆಯುಕ್ತರಿಂದ ಜೀವಂತಿಕೆ

ನಗರದ ಸಂಚಾರಿ ಸಮಸ್ಯೆ ನಿವಾರಣೆಗೆ ಮುಂದಾದ ನಗರಸಭೆ

ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬಜಾರ್ ರಸ್ತೆ ಹಾಗೂ ಗಂಗಮ್ಮನಗುಡಿ ರಸ್ತೆ ಅಗಲೀ ಕರಣದ ಕೂಗು ಶತಮಾನದಷ್ಟು ಹಳೆಯದು.ಇವುಗಳ ಅಗಲೀಕರಣ ಸಂಬಂಧ ಮತ್ತೆ ಮತ್ತೆ ಸರ್ವೇ ಕಾರ್ಯ ವನ್ನು ಮಾಡುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂಬ ನಗರವಾಸಿಗಳ ಬೇಸರದ ನಡುವೆ ಮತ್ತೆ ನಗರಸಭೆ ಆಯುಕ್ತರು ಅಗಲೀಕರಣ ಸಂಬಂಧ ಕಟ್ಟಡಗಳಿಗೆ ಗುರುತು ಹಾಕುವ ಕೆಲಸ ಮಾಡಲು ಮುಂದಾಗಿದ್ದಾರೆ.

Chikkaballapur News: : ಅಪ್ರಾಪ್ತರಿಗೆ ವಾಹನ ನೀಡಿದರೆ 25 ಸಾವಿರ ದಂಡ ಹಾಕ್ತಿವಿ: ಎಸ್ ಪಿ ರವರಿಂದ ಖಡಕ್ ವಾರ್ನಿಂಗ್

ಅಪ್ರಾಪ್ತರಿಗೆ ವಾಹನ ನೀಡಿದರೆ 25 ಸಾವಿರ ದಂಡ ಹಾಕ್ತಿವಿ

ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ನಿಯಂತ್ರಣ ಕುರಿತು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪೊಲೀ ಸರು ಕಾರ್ಯಾಚರಣೆ ನಡೆಸುತ್ತಿದ್ದು,ಇಲ್ಲಿಯವರೆಗೆ ಚಿಕ್ಕಬಳ್ಳಾಪುರದಲ್ಲಿ 40 ಹಾಗೂ ಬಾಗೇಪಲ್ಲಿಯಲ್ಲಿ 22 ವಾಹನಗಳು ವಶಕ್ಕೆ ತೆಗೆದಿದ್ದು,ಅವರ ಪೋಷಕರನ್ನು ಕರೆಸಿ ಕಾನೂನಿನ ಅರಿವು ಮೂಡಿಸಲಾಗಿದೆ.

Chikkaballapur News: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳಗಳ ಪರಿಶೀಲನೆ

ಜಲ ಜೀವನ್ ಮಿಷನ್ ಯೋಜನೆ: ಕಾಮಗಾರಿಗಳ ಪರಿಶೀಲನೆ

ತಾಲ್ಲೂಕಿನ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡ್ರಮರದಹಳ್ಳಿ ಮತ್ತು ಪೆರೇಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪಾರೆಡ್ಡಿ ನಾಗೇನಹಳ್ಳಿ ಗ್ರಾಮದ ಜಲ ಜೀವನ್ ಮಿಷನ್ ಯೋಜನೆ ಯಡಿ ಮಂಜೂರಾದ ಕಾಮಗಾರಿ ಸ್ಥಳಕ್ಕೆ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

Chikkaballapur News: ವಿದ್ಯಾರ್ಥಿ ಸಮೂಹ ದುಶ್ಚಟಗಳಿಂದ ದೂರವಿದ್ದರೆ ಕಾಲೇಜು ಶಿಕ್ಷಣ ಭವಿಷ್ಯ ನೀಡಲಿದೆ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ದುಶ್ಚಟಗಳಿಂದ ದೂರವಿದ್ದರೆ ಕಾಲೇಜು ಶಿಕ್ಷಣ ಭವಿಷ್ಯ ನೀಡಲಿದೆ

ಒಂದು ವರ್ಷದ ಹಿಂದೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ಅವರು ನನ್ನನ್ನು ಭೇಟಿಯಾಗಿ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಕೊಠಡಿಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅದರಂತೆ ವಿವೇಕ ಯೋಜನೆಯಡಿ ಐದು ಶಾಲಾ ಕೊಠಡಿಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬರಲಾಯಿತು.

ಅಮಾವಾಸ್ಯೆಯ ಅಂಗವಾಗಿ ಓಂ ಶಕ್ತಿ ದೇವಾಲಯದಲ್ಲಿ ಚಂಡಿಕಾಯಾಗ ಸಮರ್ಪಣೆ

ಓಂ ಶಕ್ತಿ ದೇವಾಲಯದಲ್ಲಿ ಚಂಡಿಕಾಯಾಗ ಸಮರ್ಪಣೆ

ಮಹಾ ಮಂಗಳಾರತಿ ನಂತರ ಓಂಶಕ್ತಿ ದೇವತೆಯ ಉತ್ಸವ ಮೂರ್ತಿಯನ್ನು ಹೂವುಗಳಿಂದ ಅಲಂಕೃತ ವಾದ ರಥದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರುವಣಿಗೆಯಲ್ಲಿ ನೂರಾರು ಮಂದಿ ಮಹಿಳೆಯರು ಅಂಬಲಿ ಕಲಶೋತ್ಸವದಲ್ಲಿ ಪಾಲ್ಗೊಂಡಿ ದ್ದರು. ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಅಗ್ನಿಕುಂಡವನ್ನು  ಭಕ್ತಗಣ ತುಳಿದು ಭಕ್ತಿಯನ್ನು ಸಮರ್ಪಿಸಿತು.

Chikkaballapur News: ಸಿಇಒ ಡಾ.ನವೀನ್ ಭಟ್.ವೈ ರಿಂದ ಜೆಜೆಎಂ ಕಾಮಗಾರಿ ವೀಕ್ಷಣೆ

ಸಿಇಒ ಡಾ.ನವೀನ್ ಭಟ್.ವೈ ಅವರಿಂದ ಜೆಜೆಎಂ ಕಾಮಗಾರಿ ವೀಕ್ಷಣೆ

ಪ್ರತಿ ಮನೆಗೂ ನಳ ಸಂಪರ್ಕ ಕಲ್ಪಿಸಬೇಕು ಹಾಗೂ ಕಾಮಗಾರಿ ಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಪೈಪ್ ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದಿದ್ದು, ಆ ಕಾಮಗಾರಿ ಪೂರ್ಣಗೊಂಡ ಬಳಿಕ ಯಥಾಸ್ಥಿತಿ ಯಲ್ಲಿ ರಸ್ತೆಗಳನ್ನು ಕಾಂಕ್ರಿಟ್ ಹಾಕಿ ಮುಚ್ಚಬೇಕು. ಪೈಪ್ ಲೈನ್ ಹಾಗೂ ನಲ್ಲಿಗಳು ಹಾಳಾದಲ್ಲಿ ತಕ್ಷಣವೇ ದುರಸ್ತಿ ಕೈಗೊಳ್ಳಬೇಕು

Chikkaballapur News: ಯುವಜನರ ಭವಿಷ್ಯಕ್ಕಾಗಿ ಯುವನಿಧಿ ಯೋಜನೆ ಜಾರಿ : ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್ ರಮೇಶ್

ಯುವಜನರ ಭವಿಷ್ಯಕ್ಕಾಗಿ ಯುವನಿಧಿ ಯೋಜನೆ ಜಾರಿ

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಯಲುವಳ್ಳಿ ಎನ್ ರಮೇಶ್ ಮತ್ತು ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ ನವೀನ್ ಭಟ್ ರವರು ಯುವನಿಧಿ ಪೋಸ್ಟರ್ ಬಿಡುಗಡೆ ಮಾಡಿ ಯುವಜನರ ಭವಿಷ್ಯಕ್ಕಾಗಿ ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯನ್ನು ಜಿಲ್ಲೆಯ ಅರ್ಹ ಉದ್ಯೋಗಾಕಾಂಕ್ಷಿ ಯುವಕ ಯುವತಿಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಆರೋಪಿಗಳಿಂದ 41 ಗ್ರಾಂ.ಬಂಗಾರದ ಒಡವೆಗಳು ಹಾಗೂ ನಗದು ಹಣ ಅಮಾನತ್ತು

ಮೂವರು ಕಳ್ಳರನ್ನು ಅರೆಸ್ಟ್ ಮಾಡಿದ ನಗರ ಠಾಣೆಯ ಪೊಲೀಸರು

ಕಳ್ಳತನ ಮಾಡಿರುವ ಆರೋಪಿಗಳನ್ನು ಬಂಧಿಸಿ ಅವರಿಂದ ನಗದು ಹಣ ಹಾಗೂ ಒಡವೆಗಳನ್ನು ವಶಕ್ಕೆ ಪಡೆಯುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಜಗನ್ ಬಿನ್ ಸಂದ್ಯಾರಾಜನ್, ತಮಿಳುನಾಡು,ಸಾಧಿಕ್ ಪಾಷ,ಶಾಂತಿ ನಗರ ಹಾಗೂ ಟಿಪ್ಪು ಬೇಗ್ ಅಗ್ರಹಾರ ಎಂದು ಗುರುತಿಸಲಾಗಿದೆ.

Road Accident: ಗೌರಿಬಿದನೂರಿನಲ್ಲಿ ಸ್ಕೂಟಿ-ಲಾರಿ ಡಿಕ್ಕಿಯಾಗಿ 5 ತಿಂಗಳ ಗರ್ಭಿಣಿ, ಪತಿ ದುರ್ಮರಣ

ಸ್ಕೂಟಿ-ಲಾರಿ ಡಿಕ್ಕಿಯಾಗಿ 5 ತಿಂಗಳ ಗರ್ಭಿಣಿ, ಪತಿ ದುರ್ಮರಣ

Gauribidanur News: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ದಂಪತಿ, ಸಂಬಂಧಿಕರೊಬ್ಬರ ಕಾರ್ಯಕ್ರಮ ಮುಗಿಸಿಕೊಂಡು ಸ್ಕೂಟಿಯಲ್ಲಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಐದು ತಿಂಗಳ ಗರ್ಭಿಣಿ ಮತ್ತು ಆಕೆಯ ಪತಿ ಮೃತಪಟ್ಟಿದ್ದಾರೆ.

MLA S N Subbareddy: 70 ಲಕ್ಷ ವೆಚ್ಚದಲ್ಲಿ ಪೋತೇಪಲ್ಲಿ ರಸ್ತೆ ಕಾಮಗಾರಿ; ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ

70 ಲಕ್ಷ ವೆಚ್ಚದಲ್ಲಿ ಪೋತೇಪಲ್ಲಿ ರಸ್ತೆ ಕಾಮಗಾರಿ

ಅನೇಕ ವರ್ಷಗಳಿಂದ 4 ಗ್ರಾಮಗಳಿಗೆ ವಾಹನ ಸವಾರರು, ಬಸ್ ಗಳ, ಜನರು ಸಂಚರಿಸಲು ತೊಂದರೆ ಆಗಿದೆ. ಗುಂಡಿಗಳು ಬಿದ್ದಿವೆ. ಜಲ್ಲು, ಕಲ್ಲುಗಳ ಚೆಲ್ಲಾಪಿಲ್ಲೆ ಆಗಿದೆ. ಬಸ್ ಗಳ ಸಂಚಾರಕ್ಕೆ ಸಮಸ್ಯೆ ಇರುವುದರಿಂದ ಗ್ರಾಮಸ್ಥರು, ಮಹಿಳೆಯರು, ಮಕ್ಕಳು, ವೃದ್ಧರು ಸಂಚರಿಸಲು ತೊಂದರೆ ಆಗಿದೆ ಎಂದು 4 ಗ್ರಾಮಸ್ಥರು ಜನತಾ ದರ್ಶನದಲ್ಲಿ ಮನವಿ ಮಾಡಿದ್ದರು

ಭೋಗನಂದೀಶ್ವರನ ಸನ್ನಿಧಾನದಲ್ಲಿ ನೂರಾರು ವರ್ಷಗಳಿಂದ ನಡೆದಿದೆ ನಂದಿಗಿರಿ ಪ್ರದಕ್ಷಿಣೆಯೆಂಬ ವಿಶಿಷ್ಟ ಆಚರಣೆ

ನೂರಾರು ವರ್ಷಗಳಿಂದ ನಡೆದಿದೆ ನಂದಿಗಿರಿ ಪ್ರದಕ್ಷಿಣೆ- ವಿಶಿಷ್ಟ ಆಚರಣೆ

ದೇವರನಾಮಗಳನ್ನು ಭಜಿಸುತ್ತಾ ಭಗವಂತನನ್ನು ಹೃದಯದಲ್ಲಿ ಆರಾಧಿಸುತ್ತಾ ನಂದಿಗ್ರಾಮ ದಲ್ಲಿರುವ ಭೋಗನಂದೀಶ್ವರನಿಗೆ ಪೂಜೆ ಸಲ್ಲಿಸಿ ಪ್ರಾರಂಭವಾಗುವ ಕಾಲ್ನಡಿಗೆ ಪ್ರಯಾಣವು ನಂದಿ ಬೆಟ್ಟದ ಬುಡವನ್ನು ಒಂದು ಸುತ್ತು ಬಳಸಿ ಬರುವುದಕ್ಕೆ ಗಿರಿಪ್ರಕ್ಷಿಣೆ ಎನ್ನುತ್ತಾರೆ. ಇದು ಸುಮಾರು ೧೬ ಕಿ.ಮೀ. ಅಂತರ ಹೊಂದಿದ್ದು ಬೆಳಿಗ್ಗೆ ೬.೩೦ಕ್ಕೆ  ಪ್ರಾರಂಭವಾಗುವ ಗಿರಿ ಪ್ರದಕ್ಷಿಣಿ ೧೦ಕ್ಕೆ ಮುಗಿಯುತ್ತದೆ.

Chikkaballapur News: ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಿ : ಕೆ.ವಿ.ನವೀನ್‌ಕಿರಣ್

ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಿ

ಪಂಚಗಿರಿ ವಿದ್ಯಾ ಸಂಸ್ಥೆಯ ೨೯ನೇ ದತ್ತಿ ದಿನಾಚರಣೆ ಹಾಗೂ ಸಿ.ವಿ.ವೆಂಕಟರಾಯಪ್ಪಯವರ 110ನೇ ಜಯಂತಿಯನ್ನು ಜು.೨೩ರ ಬುಧವಾರ ನಗರದ ಹೊರವಲಯದ ಸಿವಿವಿ ಕ್ಯಾಂಪಸ್‌ನಲ್ಲಿ ನಡೆಸಲಾಗು ತ್ತಿದೆ. ಇದರ ಅಂಗವಾಗಿ ಪ್ರತಿ ವರ್ಷ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ. ಇದೊಂದು ಪರೋಪಕಾರದ ಕೆಲಸವಾಗಿದ್ದು ಪ್ರತಿಯೊಬ್ಬರೂ ಕೈಜೋಡಿಸಬೇಕು

Chikkaballapur News: ನಿರಂತರ ರಚನಾತ್ಮಕ ಅಧ್ಯಯನದಿಂದ ದೊಡ್ಡ ಸಾಧನೆ ಸಾಧ್ಯ : ಐಐಟಿ ವಿದ್ಯಾರ್ಥಿ ಕಿಶೋರ್ ಪ್ರೀತಂ

ನಿರಂತರ ರಚನಾತ್ಮಕ ಅಧ್ಯಯನದಿಂದ ದೊಡ್ಡ ಸಾಧನೆ ಸಾಧ್ಯ

ಗುರುಗಳು, ತಾಯಿ-ತಂದೆಯ ಮಾರ್ಗದರ್ಶನ ಮತ್ತು ಅಜ್ಜಿಯ ಪ್ರೀತಿಯ ಬೆಂಬಲ ನನ್ನ ಸಾಧನೆಗೆ ಮುಖ್ಯವಾದ ಕಾರಣಗಳಾಗಿವೆ. ಈವರೆಗಿನ ಅಧ್ಯಯನ ಕ್ರಮದ ಜೊತೆಗೆ ಮುಂದೆ ಇನ್ನೂ ಆಧುನಿಕ ಉಪಕ್ರಮಗಳನ್ನು ಅಳವಡಿಸಿಕೊಂಡು ಹೆಚ್ಚಿನ ಸಾಧನೆ ಮಾಡುವ ವಿಶ್ವಾಸವಿದೆ. ನಾನು ಮ್ಯೆಕಾ ನಿಕಲ್ ಇಂಜಿನಿಯರ್ ಕ್ಷೇತ್ರದಲ್ಲಿ ಉನ್ನತ ಸಾಧನೆಮಾಡಿ ಸಮಾಜ ಮತ್ತು ದೇಶಕ್ಕೆ ಅಳಿಲಿನಷ್ಟು ಸೇವೆ ಸಲ್ಲಿಸ ಬೇಕೆಂಬ ಬಯಕೆ ನನಗಿದೆ

Chikkaballapur News: ತಪ್ಪು ಬಚ್ಚಿಟ್ಟುಕೊಳ್ಳಲು ಪೊಲೀಸ್ ಇಲಾಖೆ ದುರ್ಬಳಕೆ: ಸಿ.ಮುನಿರಾಜು ವಿರುದ್ದ ಸುಳ್ಳು ಪ್ರಕರಣ ದಾಖಲು

ತಪ್ಪು ಬಚ್ಚಿಟ್ಟುಕೊಳ್ಳಲು ಪೊಲೀಸ್ ಇಲಾಖೆ ದುರ್ಬಳಕೆ

ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಶಾಸಕ ಸುಬ್ಬಾರೆಡ್ಡಿ ವಿರುದ್ದ ಹೈ ಕೋರ್ಟ್ ನಲ್ಲಿ ಚುನಾವಣಾ ಅಕ್ರಮ ಕುರಿತು ದಾವೆ ಹಾಕಿ ಎರಡು ವರ್ಷಗಳು ಪೂರ್ಣಗೊಂಡಿವೆ. ಶಾಸಕರ ಮೇಲೆ ಇಡಿ ದಾಳಿ ನಡೆದು ತಿಂಗಳು ಆಗದಿದ್ದರೂ ಇಡಿ ದಾಳಿಗೆ ಬಿಜೆಪಿಯ ಮುನಿರಾಜು ಕಾರಣ ಎಂದು ದೂರಿನಲ್ಲಿ ಸುಳ್ಳು ವಿಳಾಸ ಸಲ್ಲಿಸಿದ್ದಾರೆ.

ನಂದಿಗಿರಿ ಪ್ರದಕ್ಷಿಣೆಗೆ ಹರಿದು ಬಂತು ಜನಸಾಗರ: ತಂಪಾದ ಹೊತ್ತಲ್ಲಿ ಸಾಗಿದ ಜನಜಾತ್ರೆ

ನಂದಿಗಿರಿ ಪ್ರದಕ್ಷಿಣೆಗೆ ಹರಿದು ಬಂತು ಜನಸಾಗರ

ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರದಂದು ಹಮ್ಮಿಕೊಳ್ಳುವ ನಂದಿಗಿರಿ ಪ್ರದಕ್ಷಿಣೆಯಲ್ಲಿ ನೂರಾರು ಭಕ್ತರು ಇಂದು ಸೋಮವಾರ ಬೆಳಗ್ಗೆ ದೇವರ ನಾಮ ಸ್ಮರಣೆಯೊಂದಿಗೆ ಪ್ರಾಕೃತಿಕ ರಮ್ಯ ತಾಣ ನಂದಿ ಪ್ರದಕ್ಷಿಣೆ ಹಾಕಿ ಸಹಸ್ರರು ಭಕ್ತರು ತಮ್ಮ ಭಕ್ತಿ ಸಮರ್ಪಣೆ ಮಾಡಿದರು.

Chikkaballapur News: ಎಪಿಎಂಸಿ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯಗಳಿಗೆ ಒತ್ತು ನೀಡಿ, ದಲ್ಲಾಳಿಗಳ ಕಮಿಷನ್ ತಪ್ಪಿಸಲು ಕ್ರಮ : ತಹಸೀಲ್ದಾರ್ ಮನಿಷಾ ಮಹೇಶ್ ಎನ್ ಪತ್ರಿ

ಎಪಿಎಂಸಿ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯಗಳಿಗೆ ಒತ್ತು ನೀಡಿ

ಹಲವು ತಿಂಗಳುಗಳಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪಗಳ ಅಳವಡಿಕೆ, ದಳ್ಳಾಳಿಗಳ ಕಾಟ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ರೈತರು ನೋವು ತೋಡಿಕೊಳ್ಳುತ್ತಿದ್ದರು. ಇದರ ಹಿನ್ನಲೆಯಲ್ಲಿ ಸಭೆ ನಡೆಸಿ,ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಎಪಿಎಂಸಿ ಕಾರ್ಯದರ್ಶಿ ಯವರಿಗೆ ಸೂಚಿಸಲಾಗಿದೆ

Street Light Facility: ರಾತ್ರಿ ವೇಳೆ ಕಾಡುತ್ತಿದ್ದ ಕತ್ತಲಿಗೆ ದಾನಿಗಳ ನೆರವಿನಿಂದ ಮುಕ್ತಿ

ರಾತ್ರಿ ವೇಳೆ ಕಾಡುತ್ತಿದ್ದ ಕತ್ತಲಿಗೆ ದಾನಿಗಳ ನೆರವಿನಿಂದ ಮುಕ್ತಿ

ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆಯ ಬಲಭಾಗದಲ್ಲಿ ಕೆರೆಕಟ್ಟೆ, ಎಡ ಭಾಗದಲ್ಲಿ ಖಾಲಿಯಾದ ಜನಸಂದಣಿಯಿಲ್ಲದ ಲೇಔಟ್ ಇದೆ. ಇಲ್ಲಿನ ರಸ್ತೆಯಲ್ಲಿ ಬಿಜಿಎಸ್ ಶಾಲೆಗೆ ಹೋಗುವ ವಿದ್ಯಾರ್ಥಿಗಳು ವಾರ್ಡಿನ ನಾಗರೀಕರು ಸಂಚರಿಸುತ್ತಾರೆ. ಆದರೆ ಸದರಿ ರಸ್ತೆಗೆ ಇದುವರೆಗೂ ಬೀದಿ ದೀಪಗಳನ್ನು ನಗರಸಭೆಯವರು ಅಳವಡಿಸದ ಕಾರಣ ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಜನರು ಸಂಚರಿಸಲು ಭಯದಿಂದ ಹಿಂದೇಟು ಹಾಕುತ್ತಿದ್ದರು.

Chikkaballapur News: ಕಸಾಪದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಕನ್ನಡ ಸಾಹಿತ್ಯ ಪರಿಷತ್ತು ಚಿಂತಾಮಣಿ ಘಟಕದ ವತಿಯಿಂದ ನಗರದ ಎನ್ ಆರ್ ಬಡಾವಣೆಯ ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2024 -25ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಭಾಗವಾಗಿ 22ನೇ ವಾರ್ಡ್ ವಿನಾಯಕ ಲೇಔಟ್ ಮನೆ ಮನೆ ಭೇಟಿ ಸಮಸ್ಯೆ ಆಲಿಸಿದ ಶಾಸಕ ಪ್ರದೀಪ್ ಈಶ್ವರ್

ಮನೆ ಮನೆ ಭೇಟಿ ಸಮಸ್ಯೆ ಆಲಿಸಿದ ಶಾಸಕ ಪ್ರದೀಪ್ ಈಶ್ವರ್

ಮಳೆ ಬಂದಾಗ ಈ ಪ್ರದೇಶ ಜಲಾವೃತವಾಗುವುದನ್ನು ನಿವಾಸಿಗಳಿಂದ ಮಾಹಿತಿ ಪಡೆದು ಕೂಡಲೇ ಇಲ್ಲಿ ರಸ್ತೆ , ಚರಂಡಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಕುಡಿಯುವ ನೀರಿಗೆ ಬೋರ್ ವೆಲ್ ಹಾಕಿಕೊಡಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಪ್ರದೀಪ ಈಶ್ವರ ಮೂರು ಕೋಟಿ ವೆಚ್ಚದಲ್ಲಿ ಇಲ್ಲಿನ ಸಮಸ್ಯೆ ಪರಿಹರಿಸಿ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಿದರು.

MLA Pradeep Eshwar: ಕಾಂಗ್ರೆಸ್ ಮುಖಂಡ ಕುಪೇಂದ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶಾಸಕ ಪ್ರದೀಪ್ ಈಶ್ವರ್

ಕಾಂಗ್ರೆಸ್ ಮುಖಂಡ ಕುಪೇಂದ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶಾಸಕ

ನಮ್ಮ ತಾತನ ಕಾಲದಿಂದಲೂ ನಾವು ಕಾಂಗ್ರೆಸ್ ನಲ್ಲಿ ದುಡಿದು ಬಂದವರು. ನಮ್ಮ ಶ್ರಮಕ್ಕೆ ಪ್ರತಿ ಫಲ ಸಿಗುವ ಸಮಯ ಬಂದಿದ್ದು ಈ ಅವಧಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮುಂದೆ ಕರೆದುಕೊಂಡು ಹೋಗಲಾಗುವುದು.ನನಗೆ ಅಧಿಕಾರ ದೊರೆತಾಗ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕಾರ್ಯೋನ್ಮುಖ ನಾಗಿ ದುಡಿಯುತ್ತೇನೆ

Loading...