ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿಕ್ಕಬಳ್ಳಾಪುರ

Dr.M.C.Sudhakar: ಜ.26, 27 ದಿನಗಳ ಫಲಪುಷ್ಪ ಪ್ರದರ್ಶನ : ದೇಶಿ, ವಿದೇಶಿ ಹೂಹಣ್ಣು ತರಕಾರಿ ಪ್ರದರ್ಶನ

ಜ.26, 27 ದಿನಗಳ ಫಲಪುಷ್ಪ ಪ್ರದರ್ಶನ

ಪ್ರಮುಖ ಆಕರ್ಷಣೆಗಳಾಗಿ ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವ ಕಪ್ ಕಲಾಕೃತಿಯ ಚಿತ್ರ , ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಪ್ರತಿಮೆ, ಡಾ ಎಂ.ಹೆಚ್.ಮರೀಗೌಡರ ಪ್ರತಿಮೆ, ಹಸು-ಕರು ಪ್ರತಿಮೆ, ಜಿಲ್ಲೆಯ ರೈತ ಮಹಿಳೆಯ ರಿಂದ ತಯಾರಿಸಲ್ಪಡುವ ಹೂವಿನ ಜೋಡಣೆ ಕಲಾಕೃತಿ, ಹೂವುಗಳಿಂದ ಅಲಂಕರಿಸಿದ ಆಧುನಿಕ ಮಹಿಳೆ ಕಲಾಕೃತಿ, ಮಾದರಿ ಕೈತೋಟ ಕಿಟೆನ್ ಗಾರ್ಡನ್ ಇರಲಿದೆ

Sandalwood actor Ganeshrao Kesarkar: ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ: ಸಿನಿಮಾ ನಟ ಗಣೇಶ್‌ರಾವ್ ಕೇಸರ್‌ಕರ್ ಅಭಿಮತ

ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ

ನಾನೂ ಕೂಡ ಶಾಲಾ ಹಂತದಲ್ಲಿ ದೊರೆತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ವೇದಿಕೆಯಿಂದಲೇ ಇಂದು ಖ್ಯಾತ ನಟನಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಯರ‍್ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದೇ ಆಗಲಿದೆ. ಯಾವುದನ್ನೂ ನಾವು ಅಮುಖ್ಯ ಎಂದು ಭಾವಿಸಿ ಕಡೆಗಣಿಸಬಾರದು.

Actor Kishore Kumar: ಪ್ರಾಕೃತಿಕ ಸಂಪನ್ಮೂಲಗಳ ಉಳಿವಿಗೆ ಶ್ರಮಿಸೋಣ : ಸಮಸಮಾಜ ಕಟ್ಟೋಣ : ಚಿತ್ರನಟ ಕಿಶೋರ್‌ಕುಮಾರ್

ಪ್ರಾಕೃತಿಕ ಸಂಪನ್ಮೂಲಗಳ ಉಳಿವಿಗೆ ಶ್ರಮಿಸೋಣ : ಸಮಸಮಾಜ ಕಟ್ಟೋಣ

ಮುಂದುವರೆದ ರಾಷ್ಟ್ರಗಳು ಪ್ರಕೃತಿಯ ಸಂಪನ್ಮೂಲಗಳನ್ನು ತಮಗೆ ಬೇಕಾದಂತೆ ಬಳಸು ವಂತೆ, ಭಾರತದಲ್ಲಿಯೂ ಕೂಡ ಹುಸಿಯಾದ ಅಭಿವೃದ್ದಿಯ ಕನಸುಗಳನ್ನು ಬಡವರ ಎದೆಗಳಿಗೆ ಬಿತ್ತಲಾಗುತ್ತಿದೆ. ಶಾಲಾ ಕಾಲೇಜು ಮಕ್ಕಳೇ ಮೊದಲಾಗಿ ಬಡವರು ಶ್ರಮಿಕರು ನಾವು ನೀವು ಎಚ್ಚರಗೊಳ್ಳಲಿಲ್ಲ ಎಂದರೆ ಶುದ್ಧವಾದ ಗಾಳಿ, ನೀರು, ಆಹಾರವನ್ನು ಹಣ ಕೊಟ್ಟು ಕೊಳ್ಳಬೇಕಾಗುವ ದಿನಗಳು ದೂರವಿಲ್ಲ

Shidlaghatta Municipal Commissioner Amrutha: ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ನಟೋರಿಯಸ್‌ ಕ್ರಿಮಿನಲ್‌, 16 ಪ್ರಕರಣಗಳು ಇದೆ, ಶೀಘ್ರವೇ ಬಂಧನ: ಎಸ್ಪಿ ಕುಶಲ್ ಚೌಕ್ಸೆ

ರಾಜೀವ್‌ ಗೌಡ ಶೀಘ್ರವೇ ಬಂಧನ: ಎಸ್ಪಿ ಕುಶಲ್ ಚೌಕ್ಸೆ

ಜನವರಿ 14 ರಂದು ರಾಜೀವ್ ಗೌಡ ವಿರುದ್ದ ಶಿಡ್ಲಘಟ್ಟ ನಗರ ಪೋಲಿಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿ ಎಫ್ಐಆರ್ ಆಗಿದೆ. ಅಂದಿನಿಂದ ಆತನಿಗಾಗಿ ಯಾವುದೇ ರಾಜಕೀಯ ಒತ್ತವಿಲ್ಲದೇ ಹಗಲು ರಾತ್ರಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಪೊಲೀಸರ ಕಾರ್ಯಾ ಚರಣೆ ನಡೆಸಿ ಹುಡುಕಾಡು ತ್ತಿದ್ದೇವೆ.

Shidlaghatta News: ಸೂರಿಲ್ಲದ ಬಡವರಿಗೆ ಮನೆ ಒದಗಿಸುವಲ್ಲಿ ಸರ್ಕಾರಗಳು ವಿಫಲ: ಮಾನವ ಹಕ್ಕುಗಳ ಕಮಿಟಿ ಮುಂದಾಳತ್ವ ಸಿ.ಎಂ.ಬೈರೇಗೌಡ ಹೇಳಿಕೆ

ಸೂರಿಲ್ಲದ ಬಡವರಿಗೆ ಮನೆ ಒದಗಿಸುವಲ್ಲಿ ಸರ್ಕಾರಗಳು ವಿಫಲ

ತಾಲ್ಲೂಕಿನ ಚೀಮನಹಳ್ಳಿ ಸಿ ಎಂ ಬೈರೇಗೌಡರ ತೋಟದಲ್ಲಿ ನಡೆದ ಮಾನವ ಹಕ್ಕುಗಳ ಕಮಿಟಿ ವತಿಯಿಂದ ಬಡವರಿಗೆ ಮನೆ ನಿರ್ಮಾಣಕ್ಕಾಗಿ ಸಿಮೆಂಟ್ ಬ್ರಿಕ್ಸ್ ಮಿಷನರಿಗಳು ಪೂಜಾ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಇದುವರೆಗೆ ಯಾವುದೇ ಸಮಾಜ ಸೇವಕರು ಕೈ ಹಾಕದ ಮಹತ್ವದ ಕಾರ್ಯಕ್ಕೆ ಮಾನವ ಹಕ್ಕುಗಳ ಕಮಿಟಿ ಮುಂದಾಗಿದ್ದು, ಜಿಲ್ಲಾದ್ಯಂತ ಹತ್ತು ಸಾವಿರ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ

Tax Collection: ತೆರಿಗೆ ಸಂಗ್ರಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ

ತೆರಿಗೆ ಸಂಗ್ರಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ

ಚಿಕ್ಕಬಳ್ಳಾಪುರ ತಾಲ್ಲೂಕು ತೆರಿಗೆ ಸಂಗ್ರಹದಲ್ಲಿ ಶೇಕಡಾ 97.82% ರಷ್ಟು ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದ್ದರೆ. ಚಿಂತಾಮಣಿ ತಾಲ್ಲೂಕು ಶೇಕಡಾ 96.72%, ಗೌರಿಬಿದನೂರು ತಾಲ್ಲೂಕು ಶೇಕಡಾ 93.71% ಪ್ರಗತಿಯೊಂದಿಗೆ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ. ಗುಡಿಬಂಡೆ-93.65%, ಶಿಡ್ಲಘಟ್ಟ-93.39%, ಮಂಚೇನಹಳ್ಳಿ-92.88%, ಚೇಳೂರ-92.68% ಮತ್ತು ಬಾಗೇಪಲ್ಲಿ ತಾಲ್ಲೂಕು ಗಳು-92.40 % ತೆರಿಗೆ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿವೆ.

Chimul Election: ಚಿಮೂಲ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಚಿಮೂಲ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಕಳೆದ ಎರಡು ದಶಕಗಳಿಂದ  ಕಾರ್ಯಕರ್ತೆಯಾಗಿ ಪಕ್ಷದ ಸಂಘಟನೆಗಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಈ ಹಿಂದೆ ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷೆಯಾಗಿದ್ದಾಗ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಪಕ್ಷದ ಕಾರ್ಯಕರ್ತರು ಹಾಗೂ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಒತ್ತಾಯದಿಂದ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ

Chimul Election: ಜಿಲ್ಲಾ ಹಾಲು ಸಹಕಾರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ 44 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ

ನಿರ್ದೇಶಕ ಸ್ಥಾನಕ್ಕೆ 44 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ

ಒಕ್ಕೂಟದ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಮುಂಬರುವ ಐದು ವರ್ಷಗಳ ಆಡಳಿತ ಸಮಿತಿಗೆ ಆಯ್ಕೆಗೆ ಜ.22 ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆ ದಿನವಾಗಿದ್ದು ಅಪಾರ ಬೆಂಬಲಿಗರೊಂದಿಗೆ ಪೈಪೋಟಿಯಲ್ಲಿ ಗುರುವಾರ ಮೆರವಣಿಗೆ ಬಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಿಯಮಾನುಸಾರ ಶುಕ್ರವಾರ ಉಮೇದುವಾರಿಕೆಯ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ

ಒತ್ತುವರಿ ತೆರವುಗೊಳಿಸಲು ಅಡ್ಡಿಪಡಿಸಿದ ಹಿನ್ನೆಲೆ ವಾಪಸ್ ಆದ ಅಧಿಕಾರಿಗಳು

ದಾರಿ ಬಿಡಿಸುವ ವಿಚಾರ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ

ಕೆಲ ರೈತರ ಜಮೀನುಗಳಲ್ಲಿ ಒತ್ತುವರಿ ತೆರವುಗೊಳಿಸಿಕೊಂಡು ಬಂದು ನಾರಾಯಣಸ್ವಾಮಿ ಎಂಬುವರ ಜಮೀನಿನಲ್ಲಿ ಒತ್ತುವರಿ ತೆರವುಗೊಳಿಸಲು ಬಂದಾಗ ಸದರಿ ಜಮೀನಿನವರು ಒತ್ತುವರಿಯನ್ನು ತೆರವು ಗೊಳಿಸಲು ಅವಕಾಶ ಕಲ್ಪಿಸಿ ಕೊಡದೆ ಜೆಸಿಬಿ ಮುಂದೆ ಕೂತು ಒತ್ತುವರಿ ತೆರವು ಕಾರ್ಯಕ್ಕೆ ಅಡ್ಡಿಪಡಿಸಿ ದ್ದಲ್ಲದೆ ಗ್ರಾಮದಿಂದ ಒತ್ತುವರಿಯನ್ನು ತೆರವು ಮಾಡಿಕೊಂಡು ಬನ್ನಿ ಹಾಗೂ ಸೂಕ್ತ ರೀತಿಯಲ್ಲಿ ಸರ್ವೆ ಕಾರ್ಯ ನಡೆದಿಲ್ಲ ಎಂದು ಪಟ್ಟು ಹಿಡಿದರು

Gauribidanur News: ಕೆಎಚ್ಪಿ ಬಣದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕೆಎಚ್ಪಿ ಬಣದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ತೊಂಡೇಭಾವಿ-ಮಂಚೇನಹಳ್ಳಿ ಕ್ಷೇತ್ರಕ್ಕೆ ಜೆ.ಕಾಂತರಾಜು, ಗೌರಿಬಿದನೂರು ಹಾಲು ಉತ್ಪಾದಕರ ನಿರ್ದೇಶಕರ ಸಾಮಾನ್ಯ ಕ್ಷೇತ್ರಕ್ಕೆ ಡಿ.ಎನ್.ವೆಂಕಟರೆಡ್ಡಿರವರು ಹಾಗೂ ಮಹಿಳಾ ಮೀಸಲು ಕ್ಷೇತ್ರಕ್ಕೆ ಬೊಮ್ಮಶೆಟ್ಟಹಳ್ಳಿಯ ಸುಧಾ ಅವರುಗಳು ನಗರದ ಸುಮಂಗಲಿ ಕಲ್ಯಾಣ ಮಂಟಪದಿಂದ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರ ನೇತೃತ್ವದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಚಿಕ್ಕಬಳ್ಳಾಪುರಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಭಾಸ್ಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.

Chikkaballapur News: ಶರಣರಿಂದ ಲಿಂಗ ಸಮಾನತೆ ಸಾಧ್ಯವಾಯಿತು: ತಹಸೀಲ್ದಾರ್ ರಶ್ಮಿ ಅಭಿಮತ

ಶರಣರಿಂದ ಲಿಂಗ ಸಮಾನತೆ ಸಾಧ್ಯವಾಯಿತು: ತಹಸೀಲ್ದಾರ್ ರಶ್ಮಿ ಅಭಿಮತ

ಶಿಕ್ಷಣವು ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ತಿಳಿಸಿಕೊಟ್ಟರೆ. ಶರಣರು ತಿಳಿಸಿ ಕೊಟ್ಟಿರುವ ಮೌಲ್ಯಗಳು ಎಷ್ಟೇ ಸಂಕಷ್ಟ ಬಂದರೂ ಸರಿ ದಾರಿಯಲ್ಲೇ ನಡೆಯುವಂತೆ ಮಾಡುತ್ತವೆ. ಅಂತಹ ಮೌಲ್ಯಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬಿಗರು ಕನ್ನಡ ಸಾಹಿತ್ಯ ವನ್ನು ವಿಶ್ವ ಮಟ್ಟಕ್ಕೆ ಪಸರಿಸಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

Chikkaballapur News: ವಾರದ ಒಳಗೆ ದಾಖಲೆ ರಹಿತ ಜನ ವಸತಿಗಳನ್ನು ಗುರ್ತಿಸಿ: ಜಿಲ್ಲಾಧಿಕಾರಿ ಜಿ. ಪ್ರಭು

ವಾರದ ಒಳಗೆ ದಾಖಲೆ ರಹಿತ ಜನ ವಸತಿಗಳನ್ನು ಗುರ್ತಿಸಿ

ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ಕೂಡ ಕೆಲವು ಕುಟುಂಬಗಳು ಈವರೆಗೂ ಶಾಶ್ವತ ನೆಲೆ ಇಲ್ಲದ ಹಾಗೆ ಜೀವನ ಸಾಗಿಸುತ್ತಿವೆ. ಆ ಹಿನ್ನೆಲೆಯಲ್ಲಿ ಸರ್ಕಾರ “ಕಂದಾಯ ಗ್ರಾಮ ಅಭಿಯಾನ” ವನ್ನು ಕೈಗೆತ್ತಿಗೊಂಡು ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಮುಂದಾಗಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ

ಆಯೋಗದ ಅಧ್ಯಕ್ಷರ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(Karnataka State Commission for Protection of Child Rights)ದ ಅಧ್ಯಕ್ಷರಾದ ಶಶಿಧರ್ ಕೋಸಂಬೆರವರು ಬುಧವಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳು, ಪೋಷಕರು ಹಾಗೂ ಶಾಲಾ ಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಗಳೊಂದಿಗೆ ಅಹವಾಲುಗಳನ್ನು ಸ್ವೀಕರಿಸಿದರು

AU Jewellers robbery case: ಎಯು ಜ್ಯೂಯೆಲ್ಲರ್ಸ್ ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿಗಳ ಬಂಧನ

ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿನ ಎ ಯು ಜ್ಯೂಯೆಲ್ಲರಿ ಅಂಗಡಿಯಲ್ಲಿ ಡಿಸೆಂಬರ್ 22 ರ ರಾತ್ರಿ 139 ಕೆ.ಜಿ. ಬೆಳ್ಳಿ ಕಳ್ಳತನವಾಗಿತ್ತು. ದರೋಡೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಯಲ್ಲಿ ಎಯು ಜ್ಯೂಯೆಲ್ಲರಿ ಮಾಲೀಕ ಜಗದೀಶ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿ ಸಿ ಕ್ಯಾಮೆರಾಗಳನ್ನು ಮುರಿದು ಒಳನುಗ್ಗಿದ್ದ ಕಳ್ಳರ ಸುಳಿವು ಪಕ್ಕದ ಜ್ಯೂಯೆಲ್ಲರಿ ಅಂಗಡಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು

ಏಕರೂಪದ ಬಾಡಿಗೆ ನಿಗದಿಗೆ ಸಂಘದ ತೀರ್ಮಾನ : ನಿಯಮ ಮೀರಿದರೆ 10 ಸಾವಿರ ದಂಡದ ಎಚ್ಚರಿಕೆ

ಏಕರೂಪದ ಬಾಡಿಗೆ ನಿಗದಿಗೆ ಸಂಘದ ತೀರ್ಮಾನ

ಜೆಸಿಬಿ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ಹೊಸ ಜೆಸಿಬಿಗಳ ಬೆಲೆ ಸದ್ಯ 42 ಲಕ್ಷಮುಟ್ಟಿದೆ. ಹಿಂದೆ 18 ಲಕ್ಷಕ್ಕೆ ಜೆಸಿಬಿ ಖರೀದಿ ಮಾಡಬಹುದಾಗಿತ್ತು.ಈ ವರ್ಷ ಏಕಾಏಕಿ ಹೊಸ ಜೆಸಿಬಿಗಳ ಮೇಲೆ 10 ಲಕ್ಷಕ್ಕೆ ಹೆಚ್ಚಳವಾಗಿದೆ. ಆಪರೇಟರ್‌ಗಳ ಸಂಬಳ 10 ಸಾವಿದಿಂದ 20 ಸಾವಿರಕ್ಕೆ ಏರಿಕೆಯಾಗಿದೆ.ಇತ್ತೀಚೆಗೆ ತೈಲಬೆಲೆಯೂ ಹೆಚ್ಚಿದೆ.  ಇವೆಲ್ಲಾ ಮಾನದಂಡಗಳ ಹಿನ್ನೆಲೆಯಲ್ಲಿ ಜೆಸಿಬಿಯಲ್ಲಿ ಒಂದು ಗಂಟೆ ಕೆಲಸಕ್ಕೆ 1100 ಬಾಡಿಗೆ,ಟ್ರಾಕ್ಟರ್ ಒಂದು ಬಾಡಿಗೆ ದಿನಕ್ಕೆ-4000, ಟಿಪ್ಪರ್ ಒಂದು ದಿನಕ್ಕೆ 7000 ಬಾಡಿಗೆ ನಿಗದಿ ಮಾಡಲಾಗಿದ್ದು ನಾಗರೀಕರು ಸಹಕರಿಸಬೇಕು

Bagepally News: ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಜೈಭೀಮ್ ಸಂಘಟನೆಯಿಂದ ಪ್ರತಿಭಟನೆ ಎಚ್ಚರಿಕೆ ರವಾನೆ

ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಪ್ರತಿಭಟನೆ

ನಿರಾಶ್ರಿತರಾಗಿರುವ ಇವರು ತುಂಬಾ ಬಡವರು, ಪ.ಜಾತಿಗೆ ಸೇರಿದವರಾಗಿರುತ್ತಾರೆ. ಈ ಕುಟುಂಬ ದವರು ನಿರ್ಮಿಸಿಕೊಂಡಿರುವ ಗುಡಿಸಲು ತೆರವುಗೊಳಿಸುವ ಕ್ರಮವನ್ನು ಕೈ ಬಿಡಿ ಇಲ್ಲವೇ ಅವರಿಗೆ ಇದೇ ಗ್ರಾಮದಲ್ಲಿನ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರು ಮಾಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಗೊಳಿಸಿದರೆ ನಮ್ಮದೇನು ಅಭ್ಯಂತರವಿಲ್ಲ, ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಗುಡಿಸಲು ತೆರುವುಗೊಳಿಸುವಂತಹ ಕ್ರಮ ಸರಿಯಲ್ಲ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದರು.

Gauribidanur News: ಡ್ರಗ್ಸ್ ನಿಯಂತ್ರಣಕ್ಕೆ ಪಂಚೇಂದ್ರಿಯಗಳ ನಿಯಂತ್ರಣ ಅವಶ್ಯಕ: ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್

ಡ್ರಗ್ಸ್ ನಿಯಂತ್ರಣಕ್ಕೆ ಪಂಚೇಂದ್ರಿಯಗಳ ನಿಯಂತ್ರಣ ಅವಶ್ಯಕ

ಇಡೀ ವಿಶ್ವದಲ್ಲಿಯೇ ಹೆಚ್ಚು ಯುವ ಶಕ್ತಿ ಹೊಂದಿರುವ ಭಾರತದಲ್ಲಿ, ಯುವ ಶಕ್ತಿಯನ್ನೇ ಗುರಿ ಯಾಗಿಸಿ ಕೊಂಡು ಕೆಲ ಬಾಹ್ಯ ದುಷ್ಟ ಶಕ್ತಿಗಳು ನಮ್ಮ ದೇಶದ ಯುವಕರನ್ನು ಷಡ್ಯಂತರದಿಂದ ಮಾದಕವಸ್ತು ಗಳ ಅಮಲಿಗೆ ದೂಡುತ್ತಾ ದೇಶದ ಭವಿಷ್ಯಕ್ಕೆ ಗಂಡಾಂತರ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆ.

Chimul Election: ಚಿಮುಲ್ ಚುನಾವಣೆ: ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ; ಒಗ್ಗಟ್ಟಿನ ಮಂತ್ರ ಜಪಿಸಿದ ಸಂಸದ ಡಾ.ಕೆ.ಸುಧಾಕರ್

ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ

ಪೆರೇಸಂದ್ರ ಕ್ಷೇತ್ರದಲ್ಲಿ ಸಂಸದ ಡಾ. ಕೆ. ಸುಧಾಕರ್(MP Dr.K.Sudhakar) ಅವರ ಸಂಬಂಧಿಕರಾದ ಗರಗಿರೆಡ್ಡಿ ಅವರು ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಆದರೆ, ಒಕ್ಕೂಟದ ಹಿತದೃಷ್ಟಿಯಿಂದ ಅನುಭವೀ ನಾಯಕ ಕೆ.ವಿ. ನಾಗರಾಜ್ ಅವರಿಗೆ ಟಿಕೆಟ್ ನೀಡ ಲಾಗಿದೆ. ಈ ಹಿನ್ನೆಲೆಯಲ್ಲಿ, ಅಸಮಾಧಾನಗೊಂಡಿ ರುವ ಗರಗಿರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ನಾಮನಿರ್ದೇಶಿತ ನಿರ್ದೇಶಕ ಸ್ಥಾನ ನೀಡಿ, ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವ ಭರವಸೆಯನ್ನು ಸಂಸದರು ನೀಡಿದ್ದಾರೆ

ಮಂತ್ರಾಲಯಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್- ಟ್ರಕ್‌ ನಡುವೆ ಅಪಘಾತ; ಓರ್ವ ಸಾವು, 10 ಮಂದಿಗೆ ಗಂಭೀರ ಗಾಯ

ಮಂತ್ರಾಲಯಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್- ಟ್ರಕ್‌ ನಡುವೆ ಅಪಘಾತ

Road Accident: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತವೊಂದು ನಡೆದಿದೆ. ಅಗಲಗುರ್ಕಿ ಬಳಿ ಮಂತ್ರಾಲಯಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಗಮ್ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಸ್ಲೀಪರ್ ಬಸ್ ಮೈಸೂರಿನಿಂದ ಬೆಂಗಳೂರು ಮೂಲಕ ಮಂತ್ರಾಲಯಕ್ಕೆ ತೆರಳುತ್ತಿತ್ತು.

Chikkaballapur News: ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಕೆಲಸ ಜಿಲ್ಲೆಯಲ್ಲಿ ಆಗಬೇಕು: ಜಿಲ್ಲಾಧಿಕಾರಿ ಜಿ.ಪ್ರಭು

ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಕೆಲಸ ಜಿಲ್ಲೆಯಲ್ಲಿ ಆಗಬೇಕು

ಪುಟ್ಬಾಲ್, ಖೋ-ಖೋ ಸೇರಿದಂತೆ ಇನ್ನಿತರ ಪ್ರಮುಖ ಕ್ರೀಡೆಗಳಿಗೆ ಕ್ರೀಡಾಂಗಣಗಳೇ ಜಿಲ್ಲಾ ಕೇಂದ್ರ ದಲ್ಲಿ ಇಲ್ಲ. ವಾಲಿಬಾಲ್, ಬಾಸ್ಕೆಟ್ ಬಾಲ್, ಕಬಡ್ಡಿ, ಥ್ರೋಬಾಲ್ ಹಾಗೂ ಅಥ್ಲೇಟಿಕ್ಸ್ ಕ್ರೀಡೆಗಳನ್ನು ಆಡಲು ಅಗತ್ಯ ಮೂಲ ಸೌಕರ್ಯಗಳು ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿಯೂ ಕೊರತೆಯಲ್ಲಿರುವುದು ಗಮನಕ್ಕೆ ಬಂದಿದೆ.

Flower and Fruit Exhibition: ಜ.26-27ರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ

ಆಹಾರ ಇಲಾಖೆ ಶಿಫಾರಸ್ಸಿನನ್ವಯ ಸಮತೋಲನ ಆಹಾರ ವಿಂಗಡಣೆ ಕುರಿತ ಕಲಾಕೃತಿ, ಹೂವು ಕುಂಡಗಳ ಜೋಡಣೆ, ವಿವಿಧ ರೀತಿಯ ದೇಶೀಯ ಹಾಗೂ ವಿದೇಶೀಯ ಹೂ, ಹಣ್ಣು ಹಾಗೂ ತರಕಾರಿ ಗಳ ಪ್ರದರ್ಶನ, , ಇಲಾಖಾ ಯೋಜನೆಗಳ ಮಾಹಿತಿ ಹಾಗೂ ಇತ್ಯಾದಿ, ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಿಸಲಾಗಿರುವ ಕಸಿ ಸಸಿಗಳ ಮಾರಾಟಕ್ಕಾಗಿ ಸಸ್ಯಸಂತೆ ಕಾರ್ಯಕ್ರಮವನ್ನು ಸಹ ಆಯೋಜಿಸ ಲಾಗಿದೆ

Chimul Election: ಚೀಮುಲ್ ಚುನಾವಣೆ: ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಚಟುವಟಿಕೆ ಗರಿಗೆದರಿಕೆ

ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಚಟುವಟಿಕೆ ಗರಿಗೆದರಿಕೆ

ತಾಲ್ಲೂಕಿನ ಮೇಲೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಚೀಮುಲ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಚೀಮುಲ್ ಚುನಾವಣೆಯಲ್ಲಿ ಸ್ವಾಭಿಮಾನಿ ಮತ ದಾರರನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಬೇಕು ಎಂದರು

Untouchability: ಗ್ರಾಮದೇವತೆಯ ಮೆರವಣಿಗೆಯಲ್ಲಿ ಅಸ್ಪೃಶ್ಯತೆ ಆಚರಣೆ: ಗ್ರಾಮದಲ್ಲಿ ಬಿಗುವಿನ ವಾತಾವರಣ

ಗ್ರಾಮದೇವತೆಯ ಮೆರವಣಿಗೆಯಲ್ಲಿ ಅಸ್ಪೃಶ್ಯತೆ ಆಚರಣೆ

ತಾಲೂಕಿನ ಆನೆಮೊಡುಗು ಕೊತ್ತೂರು ಗ್ರಾಮದಲ್ಲಿಯೇ ಈ ಘಟನೆ ನಡೆದಿದೆ. ಘಟನೆಯ ಮಾಹಿತಿ ಪಡೆದ ಕೂಡಲೇ ತಹಶೀಲ್ದಾರ್ ರಶ್ಮಿ, ಇಒ ಮಂಜುನಾಥ್ ಎಎಸ್ಪಿ ಜಗನ್ನಾಥ ರೈ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದು ಶಾಂತಿ ಸಭೆ ಏರ್ಪಡಿಸಿ ಕಲಹ ತಿಳಿಯಾಗುವಂತೆ ಮಾಡಿದ್ದಾರೆ.

ಚಿಮುಲ್ ಚುನಾವಣೆ: ಮೊದಲ ದಿನ 3 ಮಂದಿ ಉಮೇದುವಾರಿಕೆ ಸಲ್ಲಿಕೆ

ಮೊದಲ ದಿನ 3 ಮಂದಿ ಉಮೇದುವಾರಿಕೆ ಸಲ್ಲಿಕೆ

ಜ.19 ರಿಂದ ಜ.22ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು ಸೋಮವಾರ ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಿಂದ ಉಮೇದುವಾರಿಕೆ ಬಯಸಿ ಕಾಮಗಾನಹಳ್ಳಿ ಹಾಲು ಉತ್ಪಾಧಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ,ಕೋಚಿಮುಲ್ ಮಾಜಿ ನಿರ್ದೇಶಕಿ ಸುನಂದಮ್ಮ, ಕೈವಾರ ಕ್ಷೇತ್ರದಿಂದ ಉಮೇದುವಾರಿಕೆ ಬಯಸಿ ಚಿಂತಾಮಣಿ ತಾಲೂಕು ಕೆಂಪದೇನಹಳ್ಳಿ ಹಾಲು ಉತ್ಪಾದಕರ ಸರಕಾರ ಸಂಘದ ಅಧ್ಯಕ್ಷರಾದ ಕೆ.ಎನ್. ಆವಲಪ್ಪ,ಚಿಂತಾಮಣಿ ತಾಲೂಕು ಪಾಲೇನಹಳ್ಳಿ ಹಾಲು ಉತ್ಪಾ ದಕರ ಸಂಘದ ಅಧ್ಯಕ್ಷ ದೇವರಾಜರೆಡ್ಡಿ ಸೇರಿದಂತೆ ಮೂವರು ಉಮೇದುವಾರಿಕೆ ಸಲ್ಲಿಸಿದ್ದಾರೆ

Loading...