ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud case: ಬ್ಯಾಂಕ್‌ ಮ್ಯಾನೇಜರ್‌ನಿಂದಲೇ ಭಾರೀ ದೋಖಾ! ಜನರ ದುಡ್ಡನ್ನು ಈಕೆ ಮಾಡಿದ್ದೇನು ಗೊತ್ತಾ?

ಸಾಮಾನ್ಯವಾಗಿ ಎಲ್ಲರೂ ಬ್ಯಾಂಕ್ ನಲ್ಲಿ ಹಣವಿಟ್ಟರೆ ಅದು ಸುರಕ್ಷಿತವಾಗಿರುತ್ತದೆ ಎಂದುಕೊಳ್ಳುತ್ತಾರೆ. ಆದರೆ ಇದು ಗ್ರಾಹಕರಿಗೆ ಶಾಕ್ ಕೊಡುವ ಸುದ್ದಿಯಾಗಿದೆ. ರಾಜಸ್ಥಾನದ ಕೋಟಾದ ಬ್ಯಾಂಕ್ ಅಧಿಕಾರಿಯೊಬ್ಬರು ಗ್ರಾಹಕರ 4 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ದುರ್ಬಳಕೆ (Fraud case) ಮಾಡಿಕೊಂಡಿದ್ದಾರೆ. ಅವರು ಅದನ್ನು ಷೇರುಗಳಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶವನ್ನು ಹೊಂದಿದ್ದರು.

ಜನರ ದುಡ್ಡಿನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಫುಲ್‌ ಮಜಾ!

ಕೋಟಾ: ಬ್ಯಾಂಕ್ ಮ್ಯಾನೇಜರ್‌ (bank officeer) ಗ್ರಾಹಕರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ (Rajasthan) ಕೋಟಾದಲ್ಲಿ (kota) ನಡೆದಿದೆ. ಬ್ಯಾಂಕ್ ಅಧಿಕಾರಿಯು ಗ್ರಾಹಕರ ಎಫ್ ಡಿಗಳಿಂದ (Fixed Deposit) ಕೋಟ್ಯಂತರ ರೂಪಾಯಿ ಹಣ ಕದ್ದು ಅದನ್ನು ಷೇರುಗಳಲ್ಲಿ (Share market) ಹೂಡಿಕೆ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಯು ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ 2020 ರಿಂದ 2023ರ ನಡುವೆ 41 ಗ್ರಾಹಕರ 110 ಖಾತೆಗಳಿಂದ ಅಕ್ರಮವಾಗಿ 4.58 ಕೋಟಿ ರೂ. ಗಳನ್ನು ಪಡೆದು ಅದನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭಾರಿ ನಷ್ಟವನ್ನು ಅನುಭವಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಎಲ್ಲರೂ ಬ್ಯಾಂಕ್ ನಲ್ಲಿ ಹಣವಿಟ್ಟರೆ ಅದು ಸುರಕ್ಷಿತವಾಗಿರುತ್ತದೆ ಎಂದುಕೊಳ್ಳುತ್ತಾರೆ. ಆದರೆ ಇದು ಗ್ರಾಹಕರಿಗೆ ಶಾಕ್ ಕೊಡುವ ಸುದ್ದಿಯಾಗಿದೆ. ರಾಜಸ್ಥಾನದ ಕೋಟಾದ ಬ್ಯಾಂಕ್ ಅಧಿಕಾರಿಯೊಬ್ಬರು ಗ್ರಾಹಕರ 4 ಕೋಟಿ ರೂ. ಗಿಂತ ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಅದನ್ನು ಷೇರುಗಳಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶವನ್ನು ಹೊಂದಿದ್ದರು. ಅದಕ್ಕಾಗಿ 41ಕ್ಕೂ ಹೆಚ್ಚು ಗ್ರಾಹಕರ ಖಾತೆಗಳಿಂದ ಹಣ ತೆಗೆದಿದ್ದಾರೆ. ಸುಮಾರು ಎರಡು ವರ್ಷಗಳಿಂದ ಅವರು ಇದನ್ನು ಮಾಡುತ್ತಿದ್ದರೂ ಯಾರ ಅರಿವಿಗೂ ಬಂದಿರಲಿಲ್ಲ.

ರಾಜಸ್ಥಾನದ ಕೋಟಾದ ಐಸಿಐಸಿಐ ಬ್ಯಾಂಕಿನ ರಿಲೇಷನ್ಶಿಪ್ ಮ್ಯಾನೇಜರ್ ಆಗಿದ್ದ ಸಾಕ್ಷಿ ಗುಪ್ತಾ ಅವರು 2020 ಮತ್ತು 2023 ರ ನಡುವೆ 41 ಗ್ರಾಹಕರ 110 ಸ್ಥಿರ ಠೇವಣಿ (ಎಫ್‌ಡಿ) ಖಾತೆಗಳಿಂದ ಅಕ್ರಮವಾಗಿ 4.58 ಕೋಟಿ ರೂ.ಗಳನ್ನು ಪಡೆದು ಅದನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಅನುಭವಿಸಿದ ಅನಂತರ ಅವರು ಮರಳಿ ಗ್ರಾಹಕರ ಖಾತೆಗೆ ಹಣ ಜಮಾ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ವಹಿವಾಟುಗಳ ಬಗ್ಗೆ ಗ್ರಾಹಕರಿಗೆ ಸಂದೇಶ ಸಿಗದಂತೆ ಗ್ರಾಹಕರ ಖಾತೆಗಳೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗಳನ್ನು ಸಹ ಆಕೆ ಬದಲಾಯಿಸಿದ್ದರು.

ಗ್ರಾಹಕನೊಬ್ಬ ತನ್ನ ಎಫ್‌ಡಿ ಬಗ್ಗೆ ವಿಚಾರಿಸಲು ಬ್ಯಾಂಕಿಗೆ ಬಂದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಫೆಬ್ರವರಿ 18 ರಂದು ಬ್ಯಾಂಕ್ ವತಿಯಿಂದ ಪೊಲೀಸರಿಗೆ ದೂರು ದಾಖಲಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಗುರುವಾರ ತಡರಾತ್ರಿ ಸಾಕ್ಷಿ ಗುಪ್ತಾ ತನ್ನ ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಬಂಧಿಸಿದ್ದಾರೆ. ಬಳಿಕ ಆಕೆಯನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

ಸಾಕ್ಷಿ ಗುಪ್ತಾ, ತನ್ನ ಕುಟುಂಬ ಸದಸ್ಯರ ಫೋನ್ ಸಂಖ್ಯೆಗಳನ್ನು ಈ ಖಾತೆಗಳಿಗೆ ಲಿಂಕ್ ಮಾಡಿ 4 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಪಡೆದಿದ್ದಾಳೆ. ಖಾತೆದಾರರಿಗೆ ವಂಚನೆಯ ಸುಳಿವು ಸಿಗದಂತೆ ಒಟಿಪಿಗಳನ್ನು ಪಡೆಯಲು ಅವಳು ಈ ಯೋಜನೆಯನ್ನು ರೂಪಿಸಿದ್ದಾಳೆ ಎಂದು ತನಿಖಾ ಅಧಿಕಾರಿ ಇಬ್ರಾಹಿಂ ಖಾನ್ ಹೇಳಿದರು.

ಇದನ್ನೂ ಓದಿ: ‌Viral Video: ಶಾಪಿಂಗ್‌ ಮಾಲ್‌ಗೆ ನುಗ್ಗಿದ ಗಜರಾಜ; ಈ ವಿಡಿಯೊ ನೋಡಿದ್ರೆ ಎದೆ ಝಲ್ಲೆನ್ನೋದು ಗ್ಯಾರಂಟಿ

ಈ ಕುರಿತು ಐಸಿಐಸಿಐ ಬ್ಯಾಂಕ್ ಇನ್ನೂ ಯಾವುದೇ ಸ್ಪಷ್ಟಿಕರಣವನ್ನು ನೀಡಿಲ್ಲ. ಗ್ರಾಹಕರಿಗೆ ಆಗಿರುವ ನಷ್ಟವನ್ನು ಸರಿದೂಗಿಸುವುದಾಗಿ ಬ್ಯಾಂಕಿನ ಮೂಲಗಳು ತಿಳಿಸಿವೆ. ಸಾಕ್ಷಿ ಗುಪ್ತಾ ಬಂಧನದ ಬಗ್ಗೆ ಬಳಿಕ ಗ್ರಾಹಕರು ಒಬ್ಬೊಬ್ಬರಾಗಿ ಬ್ಯಾಂಕ್ ಗೆ ಬಂದು ತಮ್ಮ ಹಣ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.