Self Harming: ಅಲ್ಲಾನಿಗೆ ಮೇಕೆ ಬದಲು ನನ್ನ ತ್ಯಾಗ ಮಾಡುತ್ತೇನೆ ಎಂದು ಹೇಳಿ ವ್ಯಕ್ತಿ ಆತ್ಮಹತ್ಯೆ
ಬಕ್ರೀದ್ ಹಬ್ಬದ ಸಲುವಾಗಿ ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಶಾ ಅವರ ದರ್ಗಾದಲ್ಲಿ ಈದ್ ಪ್ರಾರ್ಥನೆಯನ್ನು ಸಲ್ಲಿಸಿ ಬಂದ ಇಶ್ ಮೊಹಮ್ಮದ್ ಅನ್ಸಾರಿ ಅವರು ತಮ್ಮ ಮನೆಯ ಪಕ್ಕದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.


ಲಖನೌ: ಹಬ್ಬದ ಆಚರಣೆಯ ವೇಳೆ ಮೇಕೆ ಬಲಿ (Goat sacrifice) ನೀಡುವುದರಿಂದ ನೊಂದ ವ್ಯಕ್ತಿಯೊಬ್ಬರು ಬಕ್ರೀದ್ (Bakrid) ದಿನದಂದೇ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ (uttarpradesh) ಡಿಯೋರಿಯಾದಲ್ಲಿ ನಡೆದಿದೆ. 60 ವರ್ಷದ ಇಶ್ ಮೊಹಮ್ಮದ್ ಅನ್ಸಾರಿ ಮೃತರು. ಇವರು "ಅಲ್ಲಾಹನಿಗೆ ತ್ಯಾಗ" ಎಂದು ಒಂದು ಪತ್ರವನ್ನು ಬರೆದಿಟ್ಟು ಶನಿವಾರ ಬೆಳಗ್ಗೆ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಪ್ರಯೋಜನವಾಗಲಿಲ್ಲ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಬಕ್ರೀದ್ ಹಬ್ಬದ ಸಲುವಾಗಿ ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಶಾ ಅವರ ದರ್ಗಾದಲ್ಲಿ ಈದ್ ಪ್ರಾರ್ಥನೆಯನ್ನು ಸಲ್ಲಿಸಿ ಬಂದ ಇಶ್ ಮೊಹಮ್ಮದ್ ಅನ್ಸಾರಿ ಅವರು ತಮ್ಮ ಮನೆಯ ಪಕ್ಕದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕೂಗು ಕೇಳಿ ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಪೊಲೀಸರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗೋರಖ್ಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದರೂ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅನ್ಸಾರಿ ಅವರು ಈದ್ ಪ್ರಾರ್ಥನೆ ಮುಗಿಸಿ ಮನೆಗೆ ಹಿಂದಿರುಗಿದ ಅನಂತರ ನೇರವಾಗಿ ಮನೆಯ ಪಕ್ಕದ ಗುಡಿಸಲಿಗೆ ಹೋಗಿದ್ದಾರೆ. ಅಲ್ಲಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಅನ್ಸಾರಿ ಪತ್ನಿ ಹಜ್ರಾ ಖಾತೂನ್ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Stampede: ಕಬ್ಬನ್ ಪಾರ್ಕ್ನ ಗಿಡ-ಮರಗಳಿಗೆ ಹಾನಿ; ಆರ್ಸಿಬಿ, ಕೆಎಸ್ಸಿಎ ವಿರುದ್ಧ ದೂರು ದಾಖಲು
ಅನ್ಸಾರಿ ಅವರು ಆತ್ಮಹತ್ಯೆಗೆ ಯತ್ನಿಸಿದ ಸ್ಥಳದಲ್ಲಿ ಕೈಬರಹದ ಆತ್ಮಹತ್ಯೆ ಪತ್ರವೊಂದು ಸಿಕ್ಕಿದೆ. ಇದರಲ್ಲಿ ಅವರು, ಮನುಷ್ಯನು ತನ್ನ ಸ್ವಂತ ಮಗುವಿನಂತೆ ಮೇಕೆಯನ್ನು ಸಾಕುತ್ತಾರೆ ಮತ್ತು ಅನಂತರ ಅದನ್ನು ತ್ಯಾಗ ಮಾಡುತ್ತಾರೆ. ಅದೂ ಒಂದು ಜೀವಂತ ಜೀವಿ. ನಾವು ನಮ್ಮನ್ನು ತ್ಯಾಗವಾಗಿ ಅರ್ಪಿಸಿಕೊಳ್ಳಬೇಕು. ನಾನು ಅಲ್ಲಾಹನ ಸಂದೇಶವಾಹಕರ ಹೆಸರಿನಲ್ಲಿ ನನ್ನನ್ನು ಅರ್ಪಿಸುತ್ತಿದ್ದೇನೆ ಎಂದು ಹಿಂದಿಯಲ್ಲಿ ಬರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ವರ್ಮಾ, ಪ್ರಾಥಮಿಕ ತನಿಖೆಯ ಪ್ರಕಾರ ಅನ್ಸಾರಿ ಅವರು ತಮಗೆ ತಾವೇ ಗಾಯ ಮಾಡಿಕೊಂಡಿದ್ದಾರೆ. ಆದರೆ ಎಲ್ಲ ದೃಷ್ಟಿಕೋನದಿಂದಲೂ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.