ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೇಲಿಂದ ಕೆಳಕ್ಕೆ ತಳ್ಳಿದ್ರೂ ಬದುಕುಳಿದ! ಕೊನೆಗೆ ಟಾಯ್ಲೆಟ್ ಕ್ಲೀನರ್ ಇಂಜೆಕ್ಷನ್ ನೀಡಿ ಪತಿಯನ್ನು ಕೊಂದ ಪತ್ನಿ

Wife Kills Husband: ಮಹಿಳೆಯೊಬ್ಬಳು ತನ್ನ ಪತಿಯ ಇಂಟ್ರಾವೆನಸ್ (IV) ಲೈನ್‌ಗೆ ಶೌಚಾಲಯ ಶುಚಿಗೊಳಿಸುವ ದ್ರವವನ್ನು ಚುಚ್ಚಿ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮೃತನ ತಾಯಿ ದೂರು ನೀಡಿದ ಬಳಿಕ ಕೊಲೆ ಎಂಬುದು ಬಹಿರಂಗವಾಗಿದೆ.

ಟಾಯ್ಲೆಟ್ ಕ್ಲೀನರ್ ಇಂಜೆಕ್ಷನ್ ನೀಡಿ ಪತಿಯನ್ನು ಕೊಂದ ಪತ್ನಿ

ಮೃತ ಪ್ರಶಾಂತ್ (ಎಡ), ಆರೋಪಿ ಪತ್ನಿ (ಬಲ) -

Priyanka P
Priyanka P Jul 7, 2026 2:03 PM

ಹೈದರಾಬಾದ್, ಜು.7: ಪತಿ, ಪತ್ನಿಯನ್ನು ಹತ್ಯೆ ಮಾಡುವುದು ಅಥವಾ ಪತ್ನಿಯು ಪತಿಯನ್ನು ಹತ್ಯೆ ಮಾಡುವಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚಾದಂತೆ ಕಂಡುಬಂದಿದೆ. ತೆಲಂಗಾಣದ (Telangana) ನಿಜಾಮಾಬಾದ್ ಜಿಲ್ಲೆಯಲ್ಲಿ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ನರ್ಸ್ ಆಗಿರುವ ಮಹಿಳೆಯೊಬ್ಬಳು ತನ್ನ ಪತಿಯ ಇಂಟ್ರಾವೆನಸ್ (IV) ಲೈನ್‌ಗೆ ಶೌಚಾಲಯ ಶುಚಿಗೊಳಿಸುವ ದ್ರವವನ್ನು ಚುಚ್ಚಿ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಹಿಂದೆ, ಪ್ರಿಯಕರನೊಂದಿಗೆ ಸೇರಿ ಛಾವಣಿಯಿಂದ ತಳ್ಳಿ ಪತಿಯನ್ನ ಕೊಲ್ಲಲು ಯತ್ನಿಸಿ ವಿಫಲರಾಗಿದ್ದರು (Crime News).

ಆರೋಪಿ ಮಹಿಳೆಯನ್ನು ಸಂಧ್ಯಾ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಅನಿಲ್ ಮತ್ತು ಆತನ ಸ್ನೇಹಿತ ವೆಂಕಟ್ ಸಾಯಿಯನ್ನು ಮಹಿಳೆಯ ಪತಿ ಪ್ರಶಾಂತ್ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖಾಧಿಕಾರಿಗಳು ಈ ಕೊಲೆ ವಿವಾಹೇತರ ಸಂಬಂಧದಿಂದ ನಡೆಸಲ್ಪಟ್ಟ ಪೂರ್ವಯೋಜಿತ ಕೃತ್ಯ ಎಂದು ಆರೋಪಿಸಿದ್ದಾರೆ.

ಅನಿಲ್ ಜೊತೆಗಿನ ಸಂಬಂಧದ ಬಗ್ಗೆ ಸಂಧ್ಯಾ ಮತ್ತು ಪ್ರಶಾಂತ್ ಇಬ್ಬರೂ ವೈವಾಹಿಕ ಭಿನ್ನಾಭಿಪ್ರಾಯ ಹೊಂದಿದ್ದರು. ಇದು ದಂಪತಿಗಳ ಮಧ್ಯೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಗಲ್ಫ್‌ನಿಂದ ಹಿಂದಿರುಗಿದ್ದ ಪ್ರಶಾಂತ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಆತನನ್ನು ಕೊಲ್ಲಲು ಮೂವರು ಸಂಚು ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಪ್ರೇಯಸಿಯ ಮನೆಗೆ ಪತ್ನಿಯನ್ನು ಕರೆದೊಯ್ದು ಗುಂಡಿಟ್ಟು ಕೊಂದ ಪತಿ: ನೇಪಾಳಕ್ಕೆ ಪರಾರಿಯಾದ ಜೋಡಿ ಹಕ್ಕಿ ಸಿಕ್ಕಿ ಬಿದ್ದಿದ್ದಿ ಹೇಗೆ?

ಮೂವರು ಆರೋಪಿಗಳು ಪ್ರಶಾಂತ್‌ಗೆ ಅತಿಯಾಗಿ ಮದ್ಯ ಕುಡಿಸಿದ ನಂತರ ಮೊದಲ ಪ್ರಯತ್ನ ಮಾಡಿದರು. ಅನಿಲ್ ಮತ್ತು ವೆಂಕಟ್ ಸಾಯಿ ಪ್ರಶಾಂತ್ ಮೇಲೆ ಹಲ್ಲೆ ನಡೆಸಿ, ನಂತರ ಅವರನ್ನು ಮನೆಯ ಮೇಲ್ಛಾವಣಿಯಿಂದ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಕೆಳಕ್ಕೆ ಬಿದ್ದು ಗಂಭೀರ ಗಾಯಗಳಾಗಿದ್ದರೂ ಪ್ರಶಾಂತ್ ಬದುಕುಳಿದರು. ಮದ್ಯ ಸೇವನೆ ಮಾಡಿದ್ದರಿಂದ ಆಕಸ್ಮಿಕವಾಗಿ ಬಿದ್ದಿರುವುದಾಗಿ ನಂಬಿಸಿದ ಆರೋಪಿಗಳು ಪ್ರಶಾಂತ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಪ್ರಶಾಂತ್ ಹತ್ಯೆಗೆ ಎರಡನೇ ಪಿತೂರಿ ಯೋಜಿಸಿದರು. ಪ್ರಶಾಂತ್ ಚಿಕಿತ್ಸೆ ಪಡೆಯುತ್ತಿದ್ದಾಗ, ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಸಂಧ್ಯಾ, ಶೌಚಾಲಯ ಸ್ವಚ್ಛಗೊಳಿಸುವ ದ್ರವವನ್ನು ಇಂಜೆಕ್ಟ್ ಮಾಡಿದ್ದಾಳೆ ಎನ್ನಲಾಗಿದೆ. ಆ ವಿಷಕಾರಿ ವಸ್ತುವೇ ಪ್ರಶಾಂತ್ ಸಾವಿಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಶಾಂತ್ ಅವರ ತಾಯಿಯು ತನ್ನ ಪುತ್ರನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜುಲೈ 1 ರಂದು ದೂರು ನೀಡಿದ ನಂತರ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿತು. ತನಿಖೆಯ ಸಮಯದಲ್ಲಿ, ಪೊಲೀಸರು ಮೂವರು ಆರೋಪಿಗಳನ್ನು ಪ್ರಶ್ನಿಸಿದಾಗ ಪಿತೂರಿ ಬಯಲಾಗಿದೆ. ವೆಂಕಟ್ ಸಾಯಿ ವಿಚಾರಣೆಯ ಸಮಯದಲ್ಲಿ, ಪ್ರಶಾಂತ್‌ನನ್ನು ಛಾವಣಿಯಿಂದ ತಳ್ಳಲು ಸಹಾಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಆರೋಪಿಗಳಾದ ಸಂಧ್ಯಾ, ಅನಿಲ್ ಮತ್ತು ವೆಂಕಟ್ ಸಾಯಿ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.