ಯುವಕರು ಕಾಯಕದ ಕಡೆ ಮುಖ ಮಾಡಿದರೆ ನಾಯಕರಾಗಲು ಸಾಧ್ಯ: ಡಾ.ಮಹಾಂತಪ್ರಭು ಶ್ರೀ
Hukkeri Matha: ಹಾವೇರಿಯ ಹುಕ್ಕೇರಿ ಮಠದ ನಮ್ಮೂರ ಜಾತ್ರಾ ಮಹೋತ್ಸವ ಸಮಾರಂಭಕ್ಕೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಶೇಗುಣಸಿ ವಿರಕ್ತಮಠದ ಡಾ. ಮಾಹಂತಪ್ರಭು ಸ್ವಾಮೀಜಿ ಅವರು ಮಾತನಾಡಿ, ಯುವಕರು ಕಾಯಕದ ಕಡೆ ಮುಖ ಮಾಡಬೇಕು. ಕಾಯಕ ಬೆನ್ನು ಹತ್ತಿದರೆ ನೀವು ನಾಯಕರಾಗುತ್ತೀರಿ ಎಂದು ಸಲಹೆ ನೀಡಿದರು.