ಆಡಳಿತದ ನಿರ್ಲಕ್ಷ್ಯಕ್ಕೆ ಕುಸಿದ ಕುಮದ್ವತಿ ನದಿ ದಂಡೆ
ಇತಿಹಾಸವನ್ನು ಅಳಿಸಿ ಹಾಕುವುದು ಸುಲಭ. ಆದರೆ ಅದನ್ನು ಮತ್ತೆ ಕಟ್ಟುವುದು ಅಸಾಧ್ಯ. ರಟ್ಟಿಹಳ್ಳಿ ಯ ಹೃದಯ ಭಾಗದಲ್ಲಿ ಹರಿಯುವ ಕುಮದ್ವತಿ ನದಿ ಇದಕ್ಕೆ ಜೀವಂತ ಸಾಕ್ಷಿ. ಶತಮಾನಗಳ ಇತಿಹಾಸ ಹೊತ್ತ ಕದಂಬೇಶ್ವರ ದೇವಾಲಯದ ಪಕ್ಕದಲ್ಲಿರುವ ಕಲ್ಲಿನ ಮೆಟ್ಟಿಲುಗಳು ಕುಸಿದು ಬೀಳುತ್ತಿದ್ದು, ಈ ಪ್ರದೇಶದ ಪರಂಪರೆ ನಿಧಾನವಾಗಿ ಕಣ್ಮರೆಯಾಗುತ್ತಿದೆ.