ಒಣ ಮೆಣಸಿನಕಾಯಿ ಖರೀದಿಸಿ ಹಣ ಕೊಡದೆ ರೈತನಿಗೆ 50 ಲಕ್ಷ ರೂ. ಪಂಗನಾಮ!
ಬ್ಯಾಡಗಿ ಒಣ ಮೆನಸಿನಕಾಯಿ ಮಾರುಕಟ್ಟೆಯ ತಿಪ್ಪೇಸ್ವಾಮಿ ಟೇಡರ್ಸನ ಮಾಲೀಕ ನಾಗಪ್ಪ ಹಡಗಲಿ ರೈತನಿಂದ 127 ಕ್ವಿಂಟಾಲ್ ಒಣ ಮೆಣನಸಿನಕಾಯಿ ಖರೀದಿಸಿ ಹಣ ಕೊಡದೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಣ ಕೇಳಿದ್ದಕ್ಕೆ ಆರೋಪಿ ರೈತನಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.