ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲಬುರಗಿ

Digital Revolution in KKRTC: ಕೆಕೆಆರ್‌ʼಟಿಸಿ ಬಸ್‌ʼಗಳಲಿ ಡಿಜಿಟಲ್‌ ಕ್ರಾಂತಿ

ಕೆಕೆಆರ್‌ʼಟಿಸಿ ಬಸ್‌ʼಗಳಲಿ ಡಿಜಿಟಲ್‌ ಕ್ರಾಂತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋ ಗದೊಂದಿಗೆ ಹಮ್ಮಿಕೊಳ್ಳಲಾದ ಈ ಬೃಹತ್ ಡಿಜಿಟಲ್ ಜಾಲದಲ್ಲಿ ಆರಂಭದಲ್ಲಿ ಕೆಲವು ನೆಟ್‌ವರ್ಕ್ ಹಾಗೂ ಸರ್ವರ್ ಸಮಸ್ಯೆಗಳು ಎದುರಾಗಿದ್ದವು. ಆದರೆ, ಸಾರಿಗೆ ಸಂಸ್ಥೆಯು ಆ ಎಲ್ಲ ದೋಷಗಳನ್ನು ಶೀಘ್ರವಾಗಿ ಬಗೆಹರಿಸಿ, ಇದೀಗ ನಿಗಮದ ಎಲ್ಲ ಬಸ್‌ಗಳಿಗೂ ಈ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಇದರಿಂದಾಗಿಗೂ ಗಲ್ಫ್ ಪೇ, ಫೋನ್ ಪೇ ಮೂಲಕ ಕೇವಲ ಒಂದು ಸ್ಕ್ಯಾನ್‌ನೊಂದಿಗೆ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಮೊಮ್ಮಗನ ಮುಖ ತೋರಿಸಲು ನಿರಾಕರಿಸಿ ಕಿರಿಕ್: ಸೊಸೆ ಮತ್ತು ಆಕೆಯ ಕಡೆಯವರಿಂದ ಹಲ್ಲೆಗೊಳಗಾಗಿದ್ದ ಅಜ್ಜ ಸಾವು!

ಸೊಸೆ ಮತ್ತು ಆಕೆಯ ಕಡೆಯವರಿಂದ ಹಲ್ಲೆಗೊಳಗಾಗಿದ್ದ ಮಾವ ಸಾವು!

Kalaburagi News: ಕಲಬುರಗಿ ಸಮೀಪದ ಬೇಲೂರ್ ಕ್ರಾಸ್ ಬಳಿ ಘಟನೆ ನಡೆದಿದೆ. ಮೊಮ್ಮಗನ ಮುಖ ತೋರಿಸಿ ಎಂದು ಕೇಳಿದ್ದಕ್ಕೆ ಸೊಸೆ ಹಾಗೂ ಆಕೆಯ ತವರು ಮನೆಯವರು ನಡೆಸಿದ ಮಾರಣಾಂತಿಕ ಹಲ್ಲೆಯಿಂದಾಗಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Kalaburagi News: ಪೋಕ್ಸೊ ಕೇಸ್ ತನಿಖೆಗೆ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಕಾನ್ಸ್‌ಟೇಬಲ್, ಎಎಸ್‌ಐ ಎಸ್ಕೇಪ್!

ಲಂಚ ಸ್ವೀಕಾರದ ವೇಳೆ ಸಿಕ್ಕಿಬಿದ್ದ ಮಹಿಳಾ ಕಾನ್ಸ್‌ಟೇಬಲ್, ಎಎಸ್‌ಐ ಎಸ್ಕೇಪ್!

ಕಲಬುರಗಿಯಲ್ಲಿ ಚಿಂದಿ ಆಯುವ ಬಡ ಕುಟುಂಬದ ಬಾಲಕಿ ಮೇಲೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದ ತನಿಖೆಗೆ ಲಂಚ ಸ್ವೀಕರಿಸುವ ವೇಳೆ ಮಹಿಳಾ ಪೊಲೀಸ್‌ ಪೇದೆ ಸಿಕ್ಕಿಬಿದ್ದಿದ್ದಾರೆ.

ಕಲಬುರಗಿಯಲ್ಲಿ ಭಾರಿ ಮಳೆಯ ಆರ್ಭಟ: ಸೇತುವೆ ಕುಸಿತ, ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ

ಕುಸಿದ ಸೇತುವೆ; 20 ಕ್ಕೂ ಅಧಿಕ ಮನೆಗೆ ನುಗ್ಗಿದ ನೀರು

ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಮ್ಮನಚೋಡ ಗ್ರಾಮದ ಸಮೀಪ ಇರುವ ಚಿಮ್ಮನಚೋಡ–ನರನಾಳ ಸಂಪರ್ಕ ಸೇತುವೆ ಮಳೆಯ ರಭಸಕ್ಕೆ ಕುಸಿದಿದೆ. ಇನ್ನೊಂದೆಡೆ, ಚಿಂಚೋಳಿ ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ಮಳೆ ನೀರು ನುಗ್ಗಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

Kalaburagi is number 1: ನಾಡ ಕಚೇರಿಯಿಂದ ತ್ವರಿತ ಸೇವೆ: ರಾಜ್ಯದಲ್ಲಿಯೇ ಕಲಬುರಗಿ ನಂಬರ್-1

ನಾಡ ಕಚೇರಿಯಿಂದ ತ್ವರಿತ ಸೇವೆ: ರಾಜ್ಯದಲ್ಲಿಯೇ ಕಲಬುರಗಿ ನಂಬರ್-1

ನಾಡ ಕಚೇರಿಯಿಂದ ಕಂದಾಯ ಇಲಾಖೆಯ 43 ಸೇವೆ ನೀಡಲು ಮೇ -2026ರ ಮಾಹೆಯಲ್ಲಿ ಸ್ವೀಕರಿಸ ಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ 9.48 ವಿಲೇವಾರಿ ಸೂಚ್ಯಂಕದ ಪ್ರಕಾರ ವಿಲೇವಾರಿ ಮಾಡುವ ಮೂಲಕ ಈಶಾನ್ಯದ ತುದಿಯಲ್ಲಿರುವ ಕಲಬುರಗಿ ಜಿಲ್ಲೆ ಸಾರ್ವಜನಿಕರ ಸೇವೆ ವಿಲೇವಾರಿ ಮತ್ತು ಮಾದರಿ ಆಡಳಿತದ ಮೂಲಕ ಮತ್ತೆ ರಾಜ್ಯದ ಗಮನ ಸೆಳೆದಿದೆ.

ಕಲಬುರಗಿಯನ್ನು ಪಾಕಿಸ್ತಾನ ಮಾಡಲು ಹೊರಟಿದೆ ಸರ್ಕಾರ: ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ FIR

ಕಲಬುರಗಿಯನ್ನು ಪಾಕಿಸ್ತಾನ ಮಾಡಲು ಹೊರಟಿದೆ ಸರ್ಕಾರ: ವಿವಾದಾತ್ಮಕ ಹೇಳಿಕೆ

ಹಿಂದೆ ಮುಸ್ಲಿಂ ಲೀಗ್ ಶಾಸಕರಾಗಿದ್ದ ಖಮರುಲ್ ಇಸ್ಲಾಂ ಅವರು ಕಲಬುರಗಿಯನ್ನು 'ಛೋಟಾ ಪಾಕಿಸ್ತಾನ' ಮಾಡುವುದಾಗಿ ಹೇಳುತ್ತಿದ್ದರು. ಅಂದಿನ ನಾಯಕರಿಂದ ಅದು ಸಾಧ್ಯವಾಗಲಿಲ್ಲ. ಆದರೆ ಇಂದಿನ ನಾಯಕರು ಮತ್ತು ಸರ್ಕಾರ ಮತ್ತೊಮ್ಮೆ ಕಲಬುರಗಿ ಯನ್ನು ಪಾಕಿಸ್ತಾನದ ಮಾದರಿಯಲ್ಲಿ ನಿರ್ಮಿಸಲು ಕೈ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು

Bhima river Tragedy: ಕಣ್ಣೆದುರೇ ಭೀಮಾ ನದಿಯಲ್ಲಿ ಮುಳುಗಿದ ತಂದೆ; ವಿಡಿಯೊ ಮಾಡುತ್ತಾ ಅಸಹಾಯಕನಾಗಿ ನಿಂತ ಮಗ!

ಕಣ್ಣೆದುರೇ ನದಿಯಲ್ಲಿ ಮುಳುಗಿದ ತಂದೆ; ವಿಡಿಯೊ ಮಾಡಿದ ಮಗ!

Kalaburagi News: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಎಮ್ಮೆಯನ್ನು ವಾಪಸ್ ಕರೆತರಲು ಭೀಮಾ ನದಿಗೆ ಇಳಿದ ವೇಳೆ ಈಜಲು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಗ ದಡದಲ್ಲೇ ನಿಂತಿದ್ದರೂ ರಕ್ಷಿಸಲು ಸಾಧ್ಯವಾಗಿಲ್ಲ.

Kalaburagi Airport: ಕಲಬುರಗಿ-ಬೆಂಗಳೂರು ವಿಮಾನಯಾನಕ್ಕೆ ಮತ್ತೆ ಚೈತನ್ಯ

ಕಲಬುರಗಿ-ಬೆಂಗಳೂರು ವಿಮಾನಯಾನಕ್ಕೆ ಮತ್ತೆ ಚೈತನ್ಯ

ಆರಂಭದಲ್ಲಿ ಸಂಜೆ ವೇಳೆಯಲ್ಲಿ ರೌಂಡ್ ಟ್ರಿಪ್ ಸೇವೆ ಆರಂಭಿಸುವ ಕುರಿತು ಮಾಹಿತಿ ನೀಡ ಲಾಗಿದ್ದರೂ ಬಳಿಕ ಸಾರ್ವಜನಿಕರು ಮತ್ತು ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಸಲ್ಲಿಸಿದ ಮನವಿಯನ್ನು ಪರಿಗಣಿಸಿ ವೇಳಾ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

Deputy CM: ಯಾರಾಗ್ತಾರೆ ಡಿಸಿಎಂ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಯಾರಾಗ್ತಾರೆ ಡಿಸಿಎಂ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಸಿಎಂ ಜತೆ ಎಷ್ಟು ಜನ ಸಚಿವರು ಪ್ರಮಾಣ ವಚನ ಸ್ವಿಕರಿಸುತ್ತಾರೆ ಎನ್ನುವುದೂ ನಿರ್ಧಾರ ಆಗಿಲ್ಲ. ಇನ್ನು ಡಿಕೆಶಿ ಸಿಎಂ ಆದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗೆಯೇ ಆಗುತ್ತದೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಯನ್ನೇ ನೇಮಕ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Karnataka Weather: ಆರೆಂಜ್‌ ಅಲರ್ಟ್; ನಾಳೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಆಲಿಕಲ್ಲು ಮಳೆ ಎಚ್ಚರಿಕೆ!

ನಾಳೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಆಲಿಕಲ್ಲು ಮಳೆ ಎಚ್ಚರಿಕೆ!

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನ/ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34°C ಮತ್ತು 22°C ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಲಬುರಗಿಯ ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್‌; ನೀಟ್‌ ಬರೆದಿದ್ದ ವಿದ್ಯಾರ್ಥಿನಿ ಸಾವಿಗೆ ಕಾರಣ ಬಹಿರಂಗ!

ಕಲಬುರಗಿ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆಗೆ ಕಾರಣ ಬಹಿರಂಗ

ನೀಟ್ ಪರೀಕ್ಷೆ ಬರೆದಿದ್ದ ಕಲಬುರಗಿ ನಗರದ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳು ಯಾವುದೋ ವಿಷಯದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾರ ಮೇಲೂ ದೂರು ಇರುವುದಿಲ್ಲ ಎಂದು ಯುವತಿಯ ತಂದೆ ಸ್ಟೇಷನ್‌ ಬಜಾರ್ ಠಾಣೆಗೆ ದೂರು ನೀಡಿದ್ದರು. ಆದರೆ, ಇದೀಗ ಸಾವಿಗೆ ಕಾರಣ ಬಹಿರಂಗವಾಗಿದೆ.

NEET Aspirant Self Harming: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಭಾಗ್ಯಶ್ರೀ (18) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿನಿಯು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92 ರಷ್ಟು ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಯಾಗಿದ್ದಳು. ವೈದ್ಯಕೀಯ ಶಿಕ್ಷಣದ ಕನಸು ಕಂಡಿದ್ದ ಆಕೆ, ಇತ್ತೀಚೆಗಷ್ಟೇ ಮೇ 2 ರಂದು ನೀಟ್ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ.

Karnataka Weather: ರಾಜ್ಯದಲ್ಲಿ ಮುಂದಿನ 4 ದಿನ ಅಬ್ಬರಿಸಲಿದೆ ಮಳೆ; ಗದಗ, ಕೊಪ್ಪಳ ಜಿಲ್ಲೆಗೆ ಆರೆಂಜ್‌ ಅಲರ್ಟ್‌!

ಆರೆಂಜ್‌ ಅಲರ್ಟ್‌; ರಾಜ್ಯದಲ್ಲಿ ಮುಂದಿನ 4 ದಿನ ಅಬ್ಬರಿಸಲಿದೆ ಮಳೆ!

Weather Report: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Accident at Kalaburagi: ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ಐವರ ಭೀಕರ ದುರ್ಮರಣ

ಕ್ರೂಸರ್-ಲಾರಿ ಡಿಕ್ಕಿ; ಒಂದೇ ಕುಟುಂಬದ ಐವರ ಭೀಕರ ದುರ್ಮರಣ

ಮೃತರೆಲ್ಲರೂ ಕ್ರೂಸರ್ ವಾಹನದಲ್ಲಿ ವೈಯಕ್ತಿಕ ಕೆಲಸದ ನಿಮಿತ್ತ ಯಾದಗಿರಿಗೆ ತೆರಳಿದ್ದರು. ಕಾರ್ಯ ಕ್ರಮ ಮುಗಿಸಿಕೊಂಡು ಮರಳುತ್ತಿದ್ದಾಗ, ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆಯ ಅಸುಪಾಸಿ ನಲ್ಲಿ ಲಾಡ್ಲಾಪುರ ಹತ್ತಿರ ಎದುರುಗಡೆಯಿಂದ ಬಂದ ಲಾರಿ ಇವರ ವಾಹನಕ್ಕೆ ಭೀಕರವಾಗಿ ಅಪ್ಪಳಿಸಿದೆ. ಪರಿಣಾಮ, ವಾಹನದಲ್ಲಿದ್ದ ಐವರಿಗೂ ಗಂಭೀರ ಸ್ವರೂಪದ ಗಾಯಗಳಾಗಿ, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Kalaburagi News: ಕರೆಂಟ್‌ ಹರಿಸಿ ಕಾಡು ಪ್ರಾಣಿಗಳ ಬಲಿ ಪಡೆಯುತ್ತಿದ್ದ ಇಬ್ಬರ ಬಂಧನ

ಕಾಡು ಪ್ರಾಣಿಗಳ ಬಲಿ ಪಡೆಯುತ್ತಿದ್ದ ಇಬ್ಬರ ಬಂಧನ

ತೆಲಂಗಾಣ ಗಡಿಭಾಗದ ಸಂಗಾಪೂರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕರೆಂಟ್‌ ಹರಿಸಿ ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಸಂಗಾಪೂರ ಗ್ರಾಮದ ಮಾಣಿಕ ತಂದೆ ಹರಿಶ್ಚಂದ್ರ ಪವಾರ (40) ಹಾಗೂ ಸುನೀಲ ತಂದೆ ಧರ್ಮು ರಾಠೋಡ (30) ಬಂಧಿತರು.

First Tech Park in Kalyana Karnataka: ಕಲಬುರಗಿಯಲ್ಲಿ ತಲೆ ಎತ್ತಲಿದೆ ಕಲ್ಯಾಣ ಕರ್ನಾಟಕದ ಮೊದಲ ‘ಟೆಕ್ ಪಾರ್ಕ್’

ಕಲಬುರಗಿಯಲ್ಲಿ ತಲೆ ಎತ್ತಲಿದೆ ಕಲ್ಯಾಣ ಕರ್ನಾಟಕದ ಮೊದಲ ‘ಟೆಕ್ ಪಾರ್ಕ್’

ಈ ಎರಡು ದಿನಗಳ ಉತ್ಸವದಲ್ಲಿ ‘ಟೆಕ್ನೋವಿಷನ್’ ಅಡಿಯಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳಾದ ‘12 ಗಂಟೆಯ ಕೋಡ್ ಎಕ್ಸರೇಟ್’, ‘ಸ್ಪೀಕ್ ಟ್ಯಾಕ್ಯುಲರ್’, ‘ಸ್ಲೈಡ್ ಎನ್ ಸರ್ವೈವ್’ ಹಾಗೂ ‘ಟೆಕ್ ಆನ್ ವಾರ್ಸ್’ ಒಳಗೊಂಡಂತೆ ಹತ್ತಾರು ರೋಚಕ ಸ್ಪರ್ಧೆಗಳು ಜರುಗಲಿವೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸ ಲಿದ್ದಾರೆ.

ಸುಖಕರ ಪ್ರಯಾಣ ಅಲ್ಲ, ಪ್ರತಿದಿನವೂ ನರಕ ದರ್ಶನ

ಸುಖಕರ ಪ್ರಯಾಣ ಅಲ್ಲ, ಪ್ರತಿದಿನವೂ ನರಕ ದರ್ಶನ

ಜನರಲ್ ಬೋಗಿಯಲ್ಲಿ ಕೂರಲು ಸ್ಥಳವಕಾಶವಿಲ್ಲದೇ ಅನಿವಾರ್ಯವಾಗಿ ಪ್ರಯಾಣಿಕರು ರಿಸರ್ವೇಷನ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ತುಸು ಕೂರಲು ಸ್ಥಳವಿಲ್ಲದೇ ಗಂಟೆಗಂಟಲೇ ನಿಂತುಕೊಂಡೆ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ರೈಲ್ವೆ ಇಲಾಖೆಗೆ ಪ್ರತಿ ಕೇಂದ್ರ ಬಜೆಟ್‌ ನಲ್ಲಿ ಸಾವಿರಾರು ಕೋಟಿ ಅನುದಾನ ಹರಿದು ಬಂದರೂ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಲಿಸುವ ರೈಲುಗಳನ್ನು ಮಾತ್ರ ಹೆಚ್ಚಳ ಮಾಡುತ್ತಿಲ್ಲ.

MLC Shashil G Namoshi: ಒಡ ಹುಟ್ಟಿದ ಸಹೋದರನಿಗೇ ವಂಚಿಸಿದ್ರಾ ಬಿಜೆಪಿ ಎಂಎಲ್‌ಸಿ ಶಶೀಲ್ ನಮೋಶಿ?

ಒಡ ಹುಟ್ಟಿದ ಸಹೋದರನಿಗೇ ವಂಚಿಸಿದ್ರಾ ಬಿಜೆಪಿ ಎಂಎಲ್‌ಸಿ ಶಶೀಲ್ ನಮೋಶಿ?

ಎಂಎಲ್‌ಸಿ ಶಶೀಲ್ ನಮೋಶಿ ಅವರು ನಮ್ಮ ಮನೆಗೆ ನಮ್ಮನ್ನೇ ಹೋಗಲು ಬಿಡುತ್ತಿಲ್ಲ ಎಂದು ಸಹೋದರ ಅನಿಲ್‌ ನಮೋಶಿ ಕುಟುಂಬ ಆರೋಪಿಸಿದೆ. ಅಲ್ಲದೇ ತಮಗೆ ನ್ಯಾಯ ಸಿಗಬೇಕೆಂದು ಮನೆಯ ಮುಂಭಾಗದಲ್ಲೇ ವಸ್ತುಗಳನ್ನು ಇಟ್ಟುಕೊಂಡು ಅನಿಲ್‌ ನಮೋಶಿ ಕುಟುಂಬ ಧರಣಿ ನಡೆಸಿದೆ.

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವರ್ಗಾವಣೆ: ಮಹಮ್ಮದ್ ಇಕ್ರಾಮುಲ್ಲಾ ಶರೀಫ್ ನೂತನ ಡಿಸಿ

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವರ್ಗಾವಣೆ

Kalaburagi News: ರಾಜ್ಯ ಸರ್ಕಾರವು ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಫೌಜಿಯಾ ತರನ್ನುಮ್ ಬಿ. ಅವರನ್ನು ವರ್ಗಾಯಿಸಿ, ಅವರ ಸ್ಥಾನಕ್ಕೆ ಮಹಮ್ಮದ್ ಇಕ್ರಾಮುಲ್ಲಾ ಶರೀಫ್ ಅವರನ್ನು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

'e-cigarette' Mafia: ಕಲಬುರಗಿಯಲ್ಲಿ ʼಇ-ಸಿಗರೇಟ್‌ʼ ಮಾಫಿಯಾ ?

'e-cigarette' Mafia: ಕಲಬುರಗಿಯಲ್ಲಿ ʼಇ-ಸಿಗರೇಟ್‌ʼ ಮಾಫಿಯಾ ?

ನಗರದ ಶಿಕ್ಷಣ ಸಂಸ್ಥೆಗಳ ಆಸುಪಾಸು ಮತ್ತು ದರ್ಗಾ ಆವರಣದ ಸಣ್ಣಪುಟ್ಟ ಅಂಗಡಿಗಳ ಮರೆಯಲ್ಲಿ ಈ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದೊಂದು ಇ-ಸಿಗರೇಟ್ ಸಾಧನಕ್ಕೆ ಸರಿಸುಮಾರು 3000 ದಿಂದ 3500 ರುಪಾಯಿ ವರೆಗೆ ಬೆಲೆ ನಿಗದಿ ಪಡಿಸ ಲಾಗುತ್ತಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳೇ ಈ ಜಾಲದ ಪ್ರಮುಖ ಗುರಿಯಾಗಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಕೊಟ್ರು ಸಖತ್‌ ಟ್ವಿಸ್ಟ್‌; ಎಐಸಿಸಿ ಅಧ್ಯಕ್ಷ ಹೇಳಿದ್ದೇನು?

ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಖರ್ಗೆ

Mallikarjun Kharge: ನಾಯಕತ್ವದ ಬದಲಾವಣೆಯ ಬಗ್ಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಿಎಂ ಬದಲಾವಣೆಯ ಸಮಯ ಬಂದಾಗ ನಾವೆಲ್ಲರೂ ಕುಳಿತು ಚರ್ಚಿಸುತ್ತೇವೆ. ಅಲ್ಲಿಯವರೆಗೆ ಇಂತಹ ಚರ್ಚೆಗಳಿಗೆ ಆಸ್ಪದವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿಎಂ, ನಾಯಕತ್ವ ಬದಲಾವಣೆ ಗೊಂದಲ ಶೀಘ್ರ ನಿವಾರಣೆ: ಗೃಹ ಸಚಿವ ಪರಮೇಶ್ವರ್

ಸಿಎಂ, ನಾಯಕತ್ವ ಬದಲಾವಣೆ ಗೊಂದಲ ಶೀಘ್ರ ನಿವಾರಣೆ: ಸಚಿವ ಪರಮೇಶ್ವರ್

G Parameshwar: ನಮ್ಮ ಪಕ್ಷದಲ್ಲಿ ಹೈಕಮಾಂಡ್ ಅತ್ಯುನ್ನತವಾದುದು. ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಜನರ ಆಶಯಗಳ ಬಗ್ಗೆ ವರಿಷ್ಠರಿಗೆ ಸಂಪೂರ್ಣ ಅರಿವಿದೆ. ನಾಯಕತ್ವದ ಕುರಿತಾದ ಯಾವುದೇ ಗೊಂದಲಗಳಿಗೆ ಅವರೇ ಶೀಘ್ರದಲ್ಲಿ ಅಧಿಕೃತ ತೆರೆ ಎಳೆಯಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

Kalaburagi News: ಕೌಟುಂಬಿಕ ಕಲಹ; ಪತ್ನಿಯನ್ನು ಕೊಂದು, ಮಗುವಿನೊಂದಿಗೆ ಬಾವಿಗೆ ಹಾರಿ ಪತಿ ಆತ್ಮಹತ್ಯೆ!

ಪತ್ನಿಯನ್ನು ಕೊಂದು, ಮಗುವಿನೊಂದಿಗೆ ಬಾವಿಗೆ ಹಾರಿ ಪತಿ ಆತ್ಮಹತ್ಯೆ!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ನಂತರ ಪತಿ ಕೂಡ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಲ್ಲಿ ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ಸಂಬಂಧ ರೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburgi Khadak Rotti: ದೇಶದ ಅಂಗಳಕ್ಕೆ ʼಕಲಬುರಗಿ ಖಡಕ್ ರೊಟ್ಟಿʼ ಲಗ್ಗೆ

ದೇಶದ ಅಂಗಳಕ್ಕೆ ʼಕಲಬುರಗಿ ಖಡಕ್ ರೊಟ್ಟಿʼ ಲಗ್ಗೆ

ಇದು ಕೇವಲ ಆಹಾರ ಪದಾರ್ಥದ ಯಶಸ್ಸಲ್ಲ, ಬದಲಾಗಿ ಬಿಸಿಲು ನಾಡಿನ ಸಾಂಸ್ಕೃತಿಕ ಅಸ್ಮಿತೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿಯುತ್ತಿರುವ ಹೆಮ್ಮೆಯ ಕ್ಷಣ. ಕಲಬುರಗಿಯ ಮಣ್ಣಿನ ಗುಣವೇ ಹಸಿರು ಸಿರಿಯ ಜೋಳ. ಇಲ್ಲಿನ ಹೊಲಗಳಲ್ಲಿ ಬೆಳೆಯುವ ‘ಮಾಲ್ದಂಡಿ’ ಜೋಳದ ಹಿಟ್ಟಿನಿಂದ ತಯಾರಾಗುವ ರೊಟ್ಟಿಗೆ ವಿಶಿಷ್ಟ ಪೌಷ್ಟಿಕಾಂಶವಿದೆ.

Loading...