ಇಚ್ಛಾಶಕ್ತಿ ಕೊರತೆ: ಅವನತಿಯತ್ತ ಕಲಬುರಗಿ ಕೋಟೆ
ಸ್ಮಾರಕದ ಒಳಭಾಗದಲ್ಲೇ ಅಕ್ರಮ ವಾಸಿಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇದು ಅತಿಕ್ರಮಣ ಕ್ಕೆ ನೇರ ಬೆಂಬಲ ನೀಡಿದಂತೆ ಎನ್ನುವ ಟೀಕೆಗಳು ಕೇಳಿಬರುತ್ತಿವೆ. ಕೆಲವರ ಇಚ್ಛಾಶಕ್ತಿಯ ಕೊರತೆಯಿಂದ, ವಿಶ್ವವಿಖ್ಯಾತವಾಗಬೇಕಿದ್ದ ಐತಿಹಾಸಿಕ ಪರಂಪರೆಗೆ ಅನ್ಯಾಯ ವಾಗುತ್ತಿರುವುದು ನಿರಾಕರಣೀಯ ಸತ್ಯ.