ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲಬುರಗಿ

ಕಲಬುರಗಿಯಲ್ಲಿ ಮತ್ತೊಂದು ಎಡವಟ್ಟು; ಕಂಡಕ್ಟರ್ ಬದಲು ಟಿಕೆಟ್ ವಿತರಿಸಿದ ವಿದ್ಯಾರ್ಥಿ! ಕೆಕೆಆರ್‌ಟಿಸಿ ಬಸ್‌ನ ದೃಶ್ಯ ಮೊಬೈಲ್‌ನಲ್ಲಿ ಸೆರೆ

ಕಂಡಕ್ಟರ್ ಬದಲು ವಿದ್ಯಾರ್ಥಿಯಿಂದ ಟಿಕೆಟ್ ವಿತರಣೆ

Kalaburagi News: ಕಲಬುರಗಿ ಸಿಟಿ ಬಸ್ ನಿಲ್ದಾಣದಿಂದ ಕಾಳಗಿಗೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿರುವ ದೃಶ್ಯ ಪ್ರಯಾಣಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಸ್ ಕಾಳಗಿ ತಾಲೂಕಿನ ಡಿಪೋಗೆ ಸೇರಿದ್ದು ಎಂದು ತಿಳಿದುಬಂದಿದೆ.

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ‘ಯಾರಿವಳು ಯಾರಿವಳು’ ಸಾಂಗ್ ಹಾಡಿದ ಕಾವಿಧಾರಿ; ಸ್ವಾಮೀಜಿಯ ಬಿಂದಾಸ್ ವಿಡಿಯೊ ವೈರಲ್

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ಸಿನಿಮಾ ಗೀತೆ ಹಾಡಿದ ಸ್ವಾಮೀಜಿ

Viral Video: ಕಲಬುರಗಿಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೈರಲ್‌ ವಿಡಿಯೊದಲ್ಲಿ ಅವರು ಕೈಯಲ್ಲಿ ಮೈಕ್ ಹಿಡಿದು ‘ಯಾರಿವಳು ಯಾರಿವಳು’ ಎಂಬ ಸಿನೆಮಾ ಹಾಡನ್ನು ಹಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಎದುರುಗಡೆ ಮದ್ಯದ ಬಾಟಲ್‌ಗಳು ಕಾಣಿಸಿಕೊಂಡಿದೆ.

UP ATS Raid in Kalaburagi: ಪಾಕಿಸ್ತಾನದ ಜತೆ ಸಂಪರ್ಕ ಶಂಕೆ: ಕಲಬುರಗಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಉತ್ತರ ಪ್ರದೇಶದ ಎಟಿಎಸ್

ಪಾಕಿಸ್ತಾನದ ಜತೆ ಸಂಪರ್ಕ ಶಂಕೆ: ಕಲಬುರಗಿಯಲ್ಲಿ ಇಬ್ಬರು ಎಟಿಎಸ್‌ ವಶಕ್ಕೆ

Kalaburagi News: ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಉತ್ತರ ಪ್ರದೇಶ ಎಟಿಎಸ್ ತಂಡ ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ನಿವಾಸಿ ವಿಳಾಸ ಹೊಂದಿರುವ ಸಮೀರ್ ಸಲ್ಮಾನ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Gelatin Blast at Kalaburagi: ಪತ್ನಿ ನಡತೆ ಬಗ್ಗೆ ಸಂಶಯ ಪಟ್ಟು ಮನೆಯಲ್ಲೇ ಜಿಲೆಟಿನ್ ಸ್ಫೋಟ; ತಂದೆ–ಮಗಳು ಬಲಿ, ನಾಲ್ವರಿಗೆ ಗಂಭೀರ ಗಾಯ!

ಪತ್ನಿ ನಡತೆ ಬಗ್ಗೆ ಸಂಶಯ; ಜಿಲೆಟಿನ್ ಸ್ಫೋಟಕ್ಕೆ ತಂದೆ–ಮಗಳು ಬಲಿ

Kalaburagi News: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ನಡತೆ ಬಗ್ಗೆ ಸಂಶಯಗೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿಕೊಂಡ ಪರಿಣಾಮ ತಂದೆ ಹಾಗೂ 15 ವರ್ಷದ ಪುತ್ರಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಮಂಟಕಿ ತಾಂಡಾದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

Bandh: ಬೆಳೆ ವಿಮೆ ತಾರತಮ್ಯ ಖಂಡಿಸಿ ಕಾಳಗಿ ಸಂಪೂರ್ಣ ಬಂದ್: ರೈತರ ಹೋರಾಟಕ್ಕೆ ವ್ಯಾಪಾರಸ್ಥರು, ಸಾರ್ವಜನಿಕರ ಬೆಂಬಲ; ನ್ಯಾಯಯುತ ಪರಿಹಾರಕ್ಕೆ ಆಗ್ರಹ

ಬೆಳೆ ವಿಮೆ ತಾರತಮ್ಯ ಖಂಡಿಸಿ ಕಾಳಗಿ ಸಂಪೂರ್ಣ ಬಂದ್

ಬೆಳೆ ವಿಮೆ ಪಾವತಿಯಲ್ಲಿ ಅರ್ಹ ರೈತರಿಗೆ ಅನ್ಯಾಯವಾಗಿದ್ದು, ವಿಮೆ ಪಾವತಿಗೆ ಸಂಬಂಧಿಸಿದ ತಾರತಮ್ಯವನ್ನು ಸರಿಪಡಿಸಿ ನಷ್ಟಕ್ಕೊಳಗಾದ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಕೈಜೋಡಿಸಿದರು

ರಾಜ್ಯದಲ್ಲಿ ಬರ, ಬೆಳೆ ಹಾನಿ ಕುರಿತು ಸಚಿವ ಸಂಪುಟ‌ ಸಭೆಯಲ್ಲಿ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ

ಬರ, ಬೆಳೆ ಹಾನಿ ಕುರಿತು ಸಚಿವ ಸಂಪುಟ‌ ಸಭೆಯಲ್ಲಿ ಚರ್ಚೆ: ಪ್ರಿಯಾಂಕ್ ಖರ್ಗೆ

Priyank Kharge: ರಾಜ್ಯದಲ್ಲಿನ ಬರದ ಸ್ಥಿತಿ ಕುರಿತು ಈಗಾಗಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದು ಮನವರಿಕೆ‌ ಮಾಡಿಕೊಟ್ಟಿದ್ದಾರೆ. ಕೇಂದ್ರದ ಕಠಿಣ ಎನ್.ಡಿ.ಆರ್.ಎಫ್ ನಿಯಮಾವಳಿಯಿಂದ ರೈತರಿಗೆ‌ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ, ಇದನ್ನು ಸರಳಿಕರಣ ಮಾಡುವಂತೆ ರಾಜ್ಯದ ಬೇಡಿಕೆ ಇದ್ದು, ಅದನ್ನು ಕೇಂದ್ರ ಸರ್ಕಾರ ಪುರಸ್ಕರಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕರುಣೆಯಿಲ್ಲದ ಬುದ್ಧಿವಂತಿಕೆ ಸಮಾಜಕ್ಕೆ ಅಪಾಯಕಾರಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಕರುಣೆಯಿಲ್ಲದ ಬುದ್ಧಿವಂತಿಕೆ ಸಮಾಜಕ್ಕೆ ಅಪಾಯ: ಮಧುಸೂದನ ಸಾಯಿ

Sadguru Sri Madhusudan Sai: ವಿದ್ಯಾಸಂಸ್ಥೆಗಳ ಮೂಲಕ ಚಾರಿತ್ರ್ಯದ ಶಕ್ತಿ ಇರುವ ದೈವೀ ಪುರುಷರನ್ನು ನಾವು ರೂಪಿಸಬೇಕು. ಶಿಕ್ಷಣ ಸುಧಾರಿಸಬೇಕಾದರೆ ಉತ್ತಮ ಶಿಕ್ಷಕರು ಬೇಕು. ಉತ್ತಮ ಶಿಕ್ಷಕರು ರೂಪುಗೊಳ್ಳಲು ಪೂರಕವಾದ ಸಂದರ್ಭ ಸಮಾಜದಲ್ಲಿ ನಿರ್ಮಾಣವಾಗಬೇಕು. ಶಿಕ್ಷಕರಿಗೆ ಉತ್ತಮ ಸಂಬಳ, ಗೌರವ ಸಿಗಬೇಕು. ಮಕ್ಕಳ ಪಾಲಿಗೆ ಶಿಕ್ಷಕರು ತಂದೆ-ತಾಯಿ ಮತ್ತು ಗುರುವೂ ಆಗಿರುತ್ತಾರೆ” ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.

Afzalpur News: ಶಾಸಕ ಎಂ.ವೈ.ಪಾಟೀಲರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ: ಇಬ್ಬರ ವಿರುದ್ಧ ಎಫ್‌ಐಆರ್

ಶಾಸಕ ಎಂ.ವೈ.ಪಾಟೀಲರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ

ಶಾಸಕರಿಗೆ ಉದ್ದೇಶಪೂರ್ವಕವಾಗಿ ಅವಮಾನವಾಗುವ ರೀತಿಯಲ್ಲಿ sandipAfz007 ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ganeshjalde07 ಎಂಬ ಇನ್‌ಸ್ಟಾಗ್ರಾಮ್ ಖಾತೆ ಯಿಂದ ಶಾಸಕರನ್ನು ಉದ್ದೇಶಿಸಿ ಕೀಳುಮಟ್ಟದ ಹಾಗೂ ಅಶ್ಲೀಲ ಭಾಷೆಯಲ್ಲಿ ಕಾಮೆಂಟ್ ಮಾಡಲಾಗಿದೆ ಎನ್ನಲಾಗಿದೆ.

Jewargi MLA Dr. Ajay Singh: ಪಕ್ಷ ನಿಷ್ಠೆಗೆ ಫಲವಾಗಿ ಡಾ.ಅಜಯಸಿಂಗ್‌ಗೆ ಸಚಿವ ಸಂಪುಟ ಪ್ರವೇಶ

ಪಕ್ಷ ನಿಷ್ಠೆಗೆ ಫಲವಾಗಿ ಡಾ.ಅಜಯಸಿಂಗ್‌ಗೆ ಸಚಿವ ಸಂಪುಟ ಪ್ರವೇಶ

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ. ಅಜಯಸಿಂಗ್ ಅವರು ಶಾಂತ, ಸಮತೋಲನದ ಹಾಗೂ ಅಭಿವೃದ್ಧಿ ಪರ ರಾಜಕಾರಣದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪಕ್ಷದ ಏಳು-ಬೀಳುಗಳ ನಡುವೆಯೂ ಕಾಂಗ್ರೆಸ್ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದ ಅವರ ನಿಷ್ಠೆಗೆ ಇದೀಗ ಸಚಿವ ಸ್ಥಾನ ರೂಪದಲ್ಲಿ ಮನ್ನಣೆ ದೊರೆತಿದೆ ಎನ್ನಲಾಗುತ್ತಿದೆ.

ಮಡಿಲು ತುಂಬಿದ ಮಮತೆ, 31 ಮಕ್ಕಳಿಗೆ ಹೊಸ ಬದುಕು

ಮಡಿಲು ತುಂಬಿದ ಮಮತೆ, 31 ಮಕ್ಕಳಿಗೆ ಹೊಸ ಬದುಕು

ದತ್ತು ಪ್ರಕ್ರಿಯೆ ಕೇವಲ ಕಾನೂನುಬದ್ಧ ಕ್ರಮವಲ್ಲ; ಅದು ಒಂದು ಮಗುವಿನ ಬದುಕನ್ನು ಮರು ರೂಪಿಸುವ ಸಾಮಾಜಿಕ ಜವಾಬ್ದಾರಿ. ಇದೇ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಕಾರಾ (CARA) ಮಾರ್ಗಸೂಚಿಯಡಿ ಜಿಲ್ಲೆಯ ಅಮೂಲ್ಯ ಶಿಶು ಗೃಹ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಪುನರ್ವಸತಿ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆ.

ಕಲಬುರಗಿಯಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ಬಿಜೆಪಿ ಶಾಸಕ, ಮುಖಂಡರು ವಶಕ್ಕೆ

ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ಬಿಜೆಪಿ ಶಾಸಕ, ಮುಖಂಡರು ವಶಕ್ಕೆ

Kalaburagi News: ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಬಳಿಕ ಕಾಂಗ್ರೆಸ್ ಕಚೇರಿಯತ್ತ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಭೀಮಾ ತೀರದಲ್ಲಿ ಮತ್ತೆ ರಕ್ತದ ಓಕುಳಿ: ಟಂ-ಟಂ ಚಾಲಕನಿಗೆ ಮಾರಣಾಂತಿಕ ಹಲ್ಲೆ

ಭೀಮಾ ತೀರದಲ್ಲಿ ಮತ್ತೆ ರಕ್ತದ ಓಕುಳಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಪ್ರಜ್ವಲ್ ತಂದೆ ಮಲ್ಕಪ್ಪ ಹೊಸಮನಿ ಹಾಗೂ ಪ್ರೀತಮ್ ಹೊಸಮನಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದತ್ತುವನ್ನು ಮೊದಲಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Kalaburagi News: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ಬಿಜೆಪಿ ಶಾಸಕರು, ಮುಖಂಡರ ಬಂಧನ

ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ಬಿಜೆಪಿ ಶಾಸಕರು, ಮುಖಂಡರ ಬಂಧನ

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿ, ಬಳಿಕ ಕಾಂಗ್ರೆಸ್ ಕಚೇರಿಯತ್ತ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ತಡೆದರು. ನಂತರ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ವಾಹನಗಳಲ್ಲಿ ಕರೆದೊಯ್ದರು.

ಕಲಬುರಗಿ: ಸ್ಟಾರ್‌ ಏರ್‌ʼಗೆ ಭರ್ಜರಿ ಸ್ಪಂದನೆ

ಕಲಬುರಗಿ: ಸ್ಟಾರ್‌ ಏರ್‌ʼಗೆ ಭರ್ಜರಿ ಸ್ಪಂದನೆ

ಕಳೆದ ಒಂದು ತಿಂಗಳಲ್ಲಿ ಕಲಬುರಗಿ-ಬೆಂಗಳೂರು ನಡುವೆ ಒಟ್ಟು 60 ವಿಮಾನ ಟ್ರಿಪ್‌ಗಳು ನಡೆದಿವೆ. ಬೆಂಗಳೂರಿನಿಂದ ಕಲಬುರಗಿಗೆ 2596 ಮಂದಿ ಆಗಮಿಸಿದ್ದರೆ, ಕಲಬುರಗಿಯಿಂದ ಬೆಂಗಳೂರಿಗೆ 2774 ಮಂದಿ ಪ್ರಯಾಣಿಸಿದ್ದಾರೆ. ಹಲವು ದಿನಗಳಲ್ಲಿ ವಿಮಾನಗಳು ಶೇ.100ರಷ್ಟು ಭರ್ತಿಯಾಗಿ ಸಂಚರಿಸಿರುವುದು ಈ ಮಾರ್ಗದ ಅಗತ್ಯವನ್ನು ಸಾಬೀತುಪಡಿಸಿದೆ.

Kalaburagi Jail Incident: 40 ಗಂಟೆ ಕಳೆದರೂ ಸಿಗದ ಇಬ್ಬರು ಕೈದಿಗಳು; ತೀವ್ರಗೊಂಡ ಶೋಧ

40 ಗಂಟೆ ಕಳೆದರೂ ಸಿಗದ ಇಬ್ಬರು ಕೈದಿಗಳು; ತೀವ್ರಗೊಂಡ ಶೋಧ

ಮಂಗಳವಾರ ನಸುಕಿನ ಜಾವ ಜೈಲಿನ ಕಬ್ಬಿಣದ ಕಂಬಿ ಕತ್ತರಿಸಿ, 20 ಅಡಿ ಎತ್ತರದ ಗೋಡೆ ಹಾರಿ ಎಸ್ಕೇಪ್ ಆಗಿದ್ದ ಮೂವರ ಪೈಕಿ ಸಂತೋಷ್ ಎಂಬಾತನನ್ನು ಪೊಲೀಸರು ಶೂಟೌಟ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪೋಕ್ಸೋ ಮತ್ತು ಕೊಲೆ ಪ್ರಕರಣದಂತಹ ಗಂಭೀರ ಅಪರಾಧ ಹಿನ್ನೆಲೆಯುಳ್ಳ ಮಸ್ತಾನ್ ಮತ್ತು ಸಾಗರ್ ಎಂಬ ಇಬ್ಬರು ಕೈದಿಗಳು ಇನ್ನೂ ಮುಕ್ತವಾಗಿ ತಿರುಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

Kalaburagi Central Jail: ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಜಾ ಅಪರಾಧಿಗಳು ಎಸ್ಕೇಪ್ ಪ್ರಕರಣ: ಬಸ್‌ನಲ್ಲಿ ಪರಾರಿಯಾಗುತ್ತಿದ್ದ ಕೈದಿ ಹುಮನಾಬಾದ್‌ನಲ್ಲಿ ವಶಕ್ಕೆ!

ಬಸ್‌ನಲ್ಲಿ ಪರಾರಿಯಾಗುತ್ತಿದ್ದ ಕೈದಿ ಹುಮನಾಬಾದ್‌ನಲ್ಲಿ ವಶಕ್ಕೆ!

ಸೋಮವಾರ ಮಧ್ಯರಾತ್ರಿ ಕಲಬುರಗಿ ಜೈಲಿನಿಂದ ಮೂವರು ಕೈದಿಗಳು ನಾಪತ್ತೆಯಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದರು. ಈ ವೇಳೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿ ಸಂತೋಷ್, ಕಲಬುರಗಿ ಕಡೆಯಿಂದ ಬೀದರ್ ಕಡೆಗೆ ಹೋಗುತ್ತಿದ್ದ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

Vishwavani Impact: ‘ವಿಶ್ವವಾಣಿ’ ವರದಿಗೆ ಎಚ್ಚೆತ್ತುಕೊಂಡ ಜೆಸ್ಕಾಂ: ಮಾಗಣಗೇರಿ ಗ್ರಾಮದ ಟ್ರಾನ್ಸ್ ಫಾರ್ಮರ್ ದುರಸ್ತಿ

‘ವಿಶ್ವವಾಣಿ’ ವರದಿಗೆ ಎಚ್ಚೆತ್ತುಕೊಂಡ ಜೆಸ್ಕಾಂ

ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೀವ್ರ ಪರದಾಟ ಸೃಷ್ಟಿಯಾಗಿತ್ತು. ಅಲ್ಲದೆ ಕೃಷಿ ಪಂಪ್‌ಸೆಟ್‌ಗಳು ಸ್ಥಗಿತ ಗೊಂಡಿದ್ದರಿಂದ ಕೈಗೆ ಬಂದ ಬೆಳೆಗಳು ಒಣಗುವ ಸ್ಥಿತಿ ತಲುಪಿದ್ದವು. ರೈತರು ಮತ್ತು ಗ್ರಾಮಸ್ಥರ ಈ ದಾರುಣ ಸ್ಥಿತಿಯ ಕುರಿತು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಶನಿವಾರ ‘ಮಾಗಣಗೇರಿ ಯಲ್ಲಿ ವಿದ್ಯುತ್ ವ್ಯತ್ಯಯ, ಕ್ರಮಕ್ಕೆ ಒತ್ತಾಯ’ ಎಂದು ಸವಿಸ್ತಾರವಾದ ವಿಶೇಷ ವರದಿ ಪ್ರಕಟ ವಾಗಿತ್ತು.

Bidadi Township: ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ: ವಿಜಯೇಂದ್ರ

ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ: ವಿಜಯೇಂದ್ರ ಆಗ್ರಹ

BY Vijayendra: ರಾಜ್ಯದ ಮುಖ್ಯಮಂತ್ರಿಗಳಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಕರ್ತವ್ಯ ಅವರ ಮೇಲಿದೆ. ದಬ್ಬಾಳಿಕೆ ಮಾಡಲು ನೀವು ರಾಜ್ಯದ ಮುಖ್ಯಮಂತ್ರಿಗಳಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಜನರು ಈಗಾಗಲೇ ಬಿಡದಿ ವಿಚಾರದಲ್ಲಿ ಬೀದಿಗೆ ಇಳಿದಿದ್ದಾರೆ. ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

Kalaburagi Breaking: ಕಲಬುರಗಿ ಜೈಲಿನಿಂದ ಮೂವರು ಕೈದಿಗಳು ಪರಾರಿ: ಗೃಹ ಸಚಿವರ ತವರಿನಲ್ಲೇ ಭದ್ರತಾ ವೈಫಲ್ಯ?

ಮೂವರು ಕೈದಿಗಳು ಪರಾರಿ: ಗೃಹ ಸಚಿವರ ತವರಿನಲ್ಲೇ ಭದ್ರತಾ ವೈಫಲ್ಯ?

ನಗರದ ಹೊರವಲಯದ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಜೈಲಿನಲ್ಲಿ ಬಿಗಿ ಭದ್ರತೆಯಿದ್ದರೂ, ಕೈದಿಗಳು ಎಸ್ಕೇಪ್ ಆಗಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತಂದಿಟ್ಟಿದೆ. ಸ್ವತಃ ಗೃಹ ಸಚಿವರ ತವರಿನಲ್ಲೇ ಇಂತಹ ದೊಡ್ಡ ಲೋಪ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ನ ಮೌನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಆರಂಭಿಕ ಲಕ್ಷಣಗಳನ್ನು ಸಮಯಕ್ಕೆ ಗುರುತಿಸಿದರೆ ಚಿಕಿತ್ಸೆಯಲ್ಲಿ ಯಶಸ್ಸಿನ ಸಾಧ್ಯತೆ ಹೆಚ್ಚು

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ನ ಮೌನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಎಂಬುದು ಬಾಯಿ, ಗಂಟಲು, ಧ್ವನಿಪೆಟ್ಟಿಗೆ (Voice Box), ಮೂಗಿನ ಒಳಭಾಗ, ಸೈನಸ್, ಲಾಲಾರಸ ಗ್ರಂಥಿಗಳು ಹಾಗೂ ತಲೆ ಮತ್ತು ಕುತ್ತಿಗೆ ಭಾಗದ ಇತರ ಅಂಗಾಂಶಗಳಲ್ಲಿ ಉಂಟಾಗುವ ವಿವಿಧ ಕ್ಯಾನ್ಸರ್‌ಗಳನ್ನು ಒಳಗೊಂಡಿರುವ ವಿಶಾಲ ಪದವಾಗಿದೆ. ಈ ಕ್ಯಾನ್ಸರ್‌ಗಳಲ್ಲಿ ಬಹುತೇಕವು ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಬತ್ತಿದ ಜಲಮೂಲಗಳು: ರೈತರಲ್ಲಿ ಹೆಚ್ಚಿದ ಆತಂಕ

ಬತ್ತಿದ ಜಲಮೂಲಗಳು: ರೈತರಲ್ಲಿ ಹೆಚ್ಚಿದ ಆತಂಕ

ಬೀದರ್ ಜಿಲ್ಲೆಯ ಪ್ರಮುಖ ಕಾರಂಜಾ ಜಲಾಶಯದಲ್ಲಿ ನೀರಿನ ಮಟ್ಟ ಶೇ.59.50ಕ್ಕೆ ಕುಸಿದಿದ್ದು, ಚುಳಕಿನಾಲಾದಲ್ಲಿ ಶೇ.57.04 ರಷ್ಟಿದೆ. ಅಪ್ಪರ್ ಮುಲ್ಲಾಮಾರಿ ಜಲಾಶಯವು ಶೇ.27.64 ರಷ್ಟಕ್ಕೆ ಕುಸಿದಿರುವುದು ಆ ಭಾಗದ ರೈತರ ಕೃಷಿ ಆಧಾರಿತ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಯಾದಗಿರಿ ಜಿಲ್ಲೆಯ ಪರಿಸ್ಥಿತಿಯಂತೂ ಅತ್ಯಂತ ಗಂಭೀರವಾಗಿದ್ದು, ಹತ್ತಿಕುಣಿ ಜಲಾಶಯದಲ್ಲಿ ಕಳೆದ ವರ್ಷ ಶೇ. 80.11 ರಷ್ಟು ನೀರಿದ್ದರೆ, ಈ ಬಾರಿ ಕೇವಲ ಶೇ.25.00 ರಷ್ಟು ಮಾತ್ರ ಇದೆ.

ಹೊಸ ನೀರು ಇಲ್ಲದೆ ಭೀಮೆ ನಿಶ್ಚಲ !

ಹೊಸ ನೀರು ಇಲ್ಲದೆ ಭೀಮೆ ನಿಶ್ಚಲ !

ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಇರುವ ಭೀಮಾ ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಆತಂಕಕಾರಿ ಹಂತಕ್ಕೆ ಕುಸಿದಿದೆ. 3.199 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಬ್ಯಾರೇಜ್‌ನಲ್ಲಿ ಪ್ರಸ್ತುತ ಕೇವಲ 0.270 ಟಿಎಂಸಿ ನೀರು ಮಾತ್ರ ಉಳಿದಿದ್ದು, ಜಲಾಶಯವು ಶೇ.8.53ರಷ್ಟು ಮಾತ್ರ ಭರ್ತಿಯಾಗಿದೆ.

Kalaburagi News: ಕರ್ತವ್ಯದ ವೇಳೆಯೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಕಾನ್‌ಸ್ಟೇಬಲ್‌ ಆತ್ಮಹತ್ಯೆ!

ರೈಫಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಕಾನ್‌ಸ್ಟೇಬಲ್‌ ಆತ್ಮಹತ್ಯೆ

ಕಲಬುರಗಿ ನಗರದ ಜಗತ್ ವೃತ್ತದ ಬಳಿ ಪೊಲೀಸ್ ವಾಹನದಲ್ಲೇ ಕಾನ್‌ಸ್ಟೇಬಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಕಲಬುರಗಿ ಸಿಎಆರ್ ವಿಭಾಗದಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಲಬುರಗಿಯನ್ನ ಬರಪೀಡಿತ ಜಿಲ್ಲೆಯೆಂದು ಘೋಷಿಸಲು ಸಿಎಂಗೆ ಬಿಜೆಪಿ ನಿಯೋಗ ಮನವಿ

ಕೃಷಿ ಸಾಲ ಮನ್ನಾ, ಎಕರೆಗೆ 50 ಸಾವಿರ ಪರಿಹಾರಕ್ಕೆ ಆಗ್ರಹ

ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಡಾ. ಬಿ.ಜಿ ಪಾಟೀಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗವು, ಜಿಲ್ಲೆಯ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿತು.

Loading...