Bengaluru News: ಅಡ್ವೋಕೇಟ್ ಕೆ.ಆರ್.ಜೊಬಿ ಮತ್ತು ಆರು ಜನರನ್ನು ರಾಜ್ಯಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾಗಿ ನೇಮಕ
ಕರ್ನಾಟಕ ಸರ್ಕಾರವು 2025ರ ಜೂ.12 ರಂದು ಹೊರಡಿಸಿದ ಆದೇಶಾನುಸಾರ ಅಡ್ವೋಕೇಟ್ ಕೆ.ಆರ್.ಜೊಬಿ ಮತ್ತು ಇತರ ಆರು ಜನರನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಸದಸ್ಯರು ಕ್ರಿಶ್ಚಿಯನ್, ಮುಸ್ಲಿಂ, ಸಿಖ್, ಜೈನ್ ಮತ್ತು ಬೌದ್ಧ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ. ಈ ಪಟ್ಟಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಅಂಗೀಕರಿಸಲಾಗಿದೆ.


ಬೆಂಗಳೂರು: ಕರ್ನಾಟಕ ಸರ್ಕಾರವು 2025ರ ಜೂ.12 ರಂದು ಹೊರಡಿಸಿದ ಆದೇಶಾನುಸಾರ ಅಡ್ವೋಕೇಟ್ ಕೆ.ಆರ್.ಜೊಬಿ ಮತ್ತು ಇತರ ಆರು ಜನರನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಸದಸ್ಯರು ಕ್ರಿಶ್ಚಿಯನ್, ಮುಸ್ಲಿಂ, ಸಿಖ್, ಜೈನ್ ಮತ್ತು ಬೌದ್ಧ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ. ಈ ಪಟ್ಟಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಅಂಗೀಕರಿಸ ಲಾಗಿದೆ.
ಇದನ್ನೂ ಓದಿ: Madhu Bangarappa: ಈ ವರ್ಷ 1008 ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭ: ಮಧು ಬಂಗಾರಪ್ಪ
ಆಯೋಗವು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಸರ್ಕಾರಕ್ಕೆ ಸಲಹೆ ನೀಡಲು ನೇಮಕಗೊಂಡಿರುವ ಅರ್ಧ-ನ್ಯಾಯಾಂಗ ಸಂಸ್ಥೆಯಾಗಿದ್ದು, ಸರ್ಕಾರದ ಕಲ್ಯಾಣ ಯೋಜನೆಗಳ ಅನುಷ್ಠಾನವನ್ನೂ ಮೇಲ್ವಿಚಾರಣೆ ಮಾಡುತ್ತದೆ.
ನ್ಯಾಯಾಲಯದ ಸಮಾನಾಧಿಕಾರ ಹೊಂದಿರುವ ಆಯೋಗವು ವ್ಯಕ್ತಿಗಳನ್ನು ಸಮನ್ಸ್ ಮಾಡು ವುದು, ಸಾಕ್ಷ್ಯ ಪರಿಶೀಲನೆ ನಡೆಸುವುದು ಮತ್ತು ಸರ್ಕಾರಿ ದಾಖಲೆಗಳನ್ನು ಪಡೆಯುವುದು ಸೇರಿ ದಂತೆ ಹಲವಾರು ಅಧಿಕಾರಗಳನ್ನು ಹೊಂದಿದೆ. ಈ ಹೊಸ ನಿಯುಕ್ತಿಯಿಂದ ಆಯೋಗದ ಕಾರ್ಯಕ್ಷಮತೆ ಇನ್ನಷ್ಟು ಬಲಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.