Fire Accident: ಬೆಂಗಳೂರಿನಲ್ಲಿ ಶಾರ್ಟ್ ಸರ್ಕ್ಯೂಟ್ ದುರಂತ, ಬೆಂಕಿಯಲ್ಲಿ ಸುಟ್ಟುಹೋದ 18 ತಿಂಗಳ ಮಗು
Bengaluru: ಪುತ್ರಿ ಅನು ಸೇರಿದಂತೆ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅಪಾರ್ಟ್ಮೆಂಟ್ನ 10X10 ಅಳತೆ ರೂಮ್ನಲ್ಲಿ ವಾಸವಿದ್ದರು. ಮಗುವನ್ನು ಮನೆಯಲ್ಲೇ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ.

-

ಬೆಂಗಳೂರು: ಶಾರ್ಟ್ ಸರ್ಕ್ಯೂಟ್ನಿಂದ (short circuit) ಮನೆಗೆ ಬೆಂಕಿ (fire accident) ಹೊತ್ತಿಕೊಂಡು ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರು (Bengaluru) ನಗರದ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ನೇಪಾಳ ಮೂಲದ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿಯ 18 ತಿಂಗಳ ಪುತ್ರಿ ಅನು ಮೃತ ಮಗು. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪುತ್ರಿ ಅನು ಸೇರಿದಂತೆ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅಪಾರ್ಟ್ಮೆಂಟ್ನ 10X10 ಅಳತೆ ರೂಮ್ನಲ್ಲಿ ವಾಸವಿದ್ದರು. ಮಗುವನ್ನು ಮನೆಯಲ್ಲೇ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ.
ಹೈಡ್ರಾಲಿಕ್ ಎಲಿವೇಟರ್ಗೆ ಸಿಲುಕಿ ಯುವಕ ಸಾವು
ಹೈಡ್ರಾಲಿಕ್ ಎಲಿವೇಟರ್ಗೆ ಸಿಲುಕಿ ಯುವಕ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಜಾಲ ಎಂವಿಐಟಿ ಕಾಲೇಜು ರಸ್ತೆಯಲ್ಲಿರುವ ಜಸ್ಟ್ ಬೇಕ್ನಲ್ಲಿ ನಡೆದಿದೆ. ಬಿಹಾರ ಮೂಲದ 20 ವರ್ಷದ ಭೂಪೇಂದ್ರ ಚೌಧರಿ ಮೃತ ಯುವಕ. ಭೂಪೇಂದ್ರ ಚೌಧರಿ 3 ತಿಂಗಳ ಹಿಂದೆಯಷ್ಟೇ ಜಸ್ಟ್ ಬೇಕ್ಗೆ ಕೆಲಸಕ್ಕೆ ಸೇರಿದ್ದ. ಬಿಸ್ಕತ್ ಸಾಗಿಸುವಾಗ ಎರಡನೇ ಫ್ಲೋರ್ನಲ್ಲಿ ತಲೆ ಹೊರಗೆ ಮಾಡಿದ್ದ. ಈ ವೇಳೆ ಹೈಡ್ರಾಲಿಕ್ ಎಲಿವೇಟರ್ಗೆ ಸಿಲುಕಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ಮುಂದುವರಿದ ಮಳೆಯ ಅಬ್ಬರ; ರಸ್ತೆಯಲ್ಲಿ ಕಾಲು ಜಾರಿ ಬಿದ್ದು ವೃದ್ಧ ಸಾವು