ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muniratna: ಶಾಸಕ ಮುನಿರತ್ನಗೆ ಬಿಗ್‌ ರಿಲೀಫ್‌; ಅತ್ಯಾಚಾರ ಆರೋಪದಲ್ಲಿ ಕ್ಲೀನ್‌ಚಿಟ್‌

ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಿದ್ದು, ಆರ್‌ಎಂಸಿ ಯಾರ್ಡ್ ಮಹಿಳೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಕ್ಲೀನ್‌ಚಿಟ್ ಸಿಕ್ಕಿದೆ. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.

ಅತ್ಯಾಚಾರ ಆರೋಪದಲ್ಲಿ ಮುನಿರತ್ನಗೆ ಕ್ಲೀನ್‌ಚಿಟ್‌

-

Vishakha Bhat Vishakha Bhat Sep 3, 2025 1:23 PM

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನಗೆ ಬಿಗ್ (Muniratna) ರಿಲೀಫ್ ಸಿಕ್ಕಿದ್ದು, ಆರ್‌ಎಂಸಿ ಯಾರ್ಡ್ ಮಹಿಳೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಕ್ಲೀನ್‌ಚಿಟ್ ಸಿಕ್ಕಿದೆ. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. ಮಹಿಳೆ ಆರೋಪಕ್ಕೆ ಯಾವ ಸಾಕ್ಷಿಗಳು ಇಲ್ಲ. ಮಹಿಳೆ ಮಾತ್ರೆ ಸೇವಿಸುವ ಬಗ್ಗೆ ರಿಹರ್ಸಲ್ ಮಾಡಲಾಗಿದೆ. 8 ಬಾರಿ ರಿಹರ್ಸಲ್ ಅನ್ನು ಮಹಿಳೆ ಮಾಡಿದ್ದರು. ಅಲ್ಲದೇ ಮಹಿಳೆ ದೇಹದಲ್ಲಿ ಮಾತ್ರೆಯ ಅಂಶ ಇಲ್ಲ. ಹೀಗಾಗಿ ಎಸ್​ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.

ಮಹಿಳೆ ಮಾತ್ರೆ ಸೇವಿಸುವಾಗ 8 ಬಾರಿ ರಿಹರ್ಸಲ್ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಮಹಿಳೆ ದೇಹದಲ್ಲಿ ನಿದ್ದೆ ಮಾತ್ರೆ ಸೇವಿಸಿರುವುದಕ್ಕೆ ದೇಹದಲ್ಲಿ ಯಾವುದೇ ಅಂಶ ಇಲ್ಲ. ಶಾಸಕ ಮುನಿರತ್ನನ ವಿರುದ್ಧ ಮಹಿಳೆ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಹೀಗಾಗಿ ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ. ನ್ಯಾಯಾಲಯದಿಂದ ತೀರ್ಪು ಬಂದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಲೋಕಸಭೆ ಚುನಾವಣೆಯಲ್ಲಿ ಯಾವಾಗ ಡಿ.ಕೆ ಸುರೇಶ್ ಅವರು ಸೋತರೋ ಅವಾಗಿಂದ ನನಗೆ ಸಮಸ್ಯೆಗಳು ಬರಲು ಶುರುವಾದವು. ತಲೆ ಮೇಲೆ ಮೊಟ್ಟೆ ಹೊಡೆದರು. ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದರು. ನನ್ನ ಬಗ್ಗೆ ಕೆಟ್ಟದಾಗಿರುವ ಪೋಸ್ಟರ್​ಗಳನ್ನು ಅಂಟಿಸಿದರು. ಒಬ್ಬ ಮಹಿಳೆ ಎಂಎಲ್​ಎ ಸ್ಥಾನ ಸಿಕ್ಕಿಲ್ಲ ಎಂದು ಇಷ್ಟೊಂದೆಲ್ಲಾ ಮಾಡೋದಾ?. ಒಂದು ಕ್ಷೇತ್ರ ಎಂದ ಮೇಲೆ ಯಾರಾದರು ಒಬ್ಬರು ಗೆಲ್ಲುತ್ತಾರೆ, ಇನ್ನೊಬ್ಬರು ಸೋಲುತ್ತಾರೆ. ಆದರೆ ಇದನ್ನೇ ವೈಯಕ್ತಿಕವಾಗಿ ತೆಗೆದುಕೊಂಡು, ದ್ವೇಷ ಸಾಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Kerala High Court: ಮದುವೆಯಾಗುವುದಾಗಿ ನಂಬಿಸಿ ನಡೆಯುವ ಸಮ್ಮತಿಯ ಲೈಂಗಿಕತೆ ಅತ್ಯಾಚಾರವಲ್ಲ: ಕೇರಳ ಹೈಕೋರ್ಟ್

ಮುನಿರತ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಆಕೆ ಅವರ ಪಕ್ಷದ ಮಹಿಳೆಯೇ, ಎಲ್ಲಿಂದ ತರ್ತಾರೆ ಸಾಕ್ಷಿಯನ್ನ. ಶಾಸಕರಷ್ಟು ಆಕೆ ಬುದ್ದಿವಂತರಲ್ಲವಲ್ಲ. ಬೇರೆ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ಇದೆಯಲ್ಲ. ಜಾತಿ ನಿಂದನೆ ಕೇಸ್ ಇದೆ. ಅದ್ಯಾವ ಮುಖ ಇಟ್ಕೊಂಡು ಪುರಾಣಗಳನ್ನು ಹೇಳುತ್ತಾರೋ ಗೊತ್ತಿಲ್ಲ ಎಂದು ಕಿಡಿ ಕಾರಿದರು. ತಾಯಿ ಹೆಂಡತಿ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ. ಈ ವ್ಯತ್ಯಾಸ ಗೊತ್ತಿಲ್ಲದ ವ್ಯಕ್ತಿ ಬಗ್ಗೆ ಮಾತಾಡಬೇಕಾ. ಚುನಾವಣೆ ಬಂದಾಗ ಮಾತಾಡೋಣ‌ ಎಂದು ಮುನಿರತ್ನ ವಿರುದ್ಧ ಡಿಕೆ ಸುರೇಶ್ ಆಕ್ರೋಶ ಹೊರಹಾಕಿದ್ದಾರೆ.