#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Padma awards 2025: ರಾಜ್ಯದ ಪ್ರಸಿದ್ಧ ಪಿಟೀಲು ವಾದಕ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ

Padma awards 2025: ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ ಅವರು ಕರ್ನಾಟಕ ಮತ್ತು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದ ಪ್ರಸಿದ್ಧ ಪಿಟೀಲು ವಾದಕರಾಗಿದ್ದಾರೆ.

ರಾಜ್ಯದ ಪ್ರಸಿದ್ಧ ಪಿಟೀಲು ವಾದಕ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ

Profile Prabhakara R Jan 25, 2025 10:17 PM

ಬೆಂಗಳೂರು: ರಾಜ್ಯದ ಪ್ರಸಿದ್ಧ ಪಿಟೀಲು ವಾದಕ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿಯನ್ನು (Padma awards 2025) ಕೇಂದ್ರ ಸರ್ಕಾರ ಘೋಷಿಸಿದೆ. ಚೆನ್ನೈ ಮೂಲದ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಪರಿಗಣಿಸಿ ಪದ್ಮವಿಭೂಷಣ ಪ್ರಶಸ್ತಿ (Padma Vibhushan award) ನೀಡಲಾಗಿದೆ.

1947ರ ಜುಲೈ 23ರಂದು ವಿ. ಲಕ್ಷ್ಮೀನಾರಾಯಣ ಅಯ್ಯರ್ ಮತ್ತು ಸೀತಾಲಕ್ಷ್ಮಿ ದಂಪತಿ ಮಗನಾಗಿ ಸುಬ್ರಮಣ್ಯಂ ಅವರು ಮದ್ರಾಸ್‌ನಲ್ಲಿ ಜನಿಸಿದರು. ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ ಅವರು ಕರ್ನಾಟಕ ಮತ್ತು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದ ಪ್ರಸಿದ್ಧ ಪಿಟೀಲು ವಾದಕರು. ಸಂಗೀತದಲ್ಲಿ ಇವರ ವೃತ್ತಿಜೀವನವು 1973 ರಲ್ಲಿ ಪ್ರಾರಂಭವಾಯಿತು ಮತ್ತು ಅಂದಿನಿಂದ ಅವರು 200 ಕ್ಕೂ ಹೆಚ್ಚು ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿದ್ದಾರೆ.

ಇವರು ಖ್ಯಾತ ಸಂಗೀತಗಾರರಾದ ಯೆಹೂದಿ ಮೆನುಹಿನ್, ಸ್ಟೀಫನ್ ಗ್ರಾಪ್ಪೆಲ್ಲಿ, ರುಗ್ಗಿರೋ ರಿಕ್ಕಿ, ಜೀನ್-ಪಿಯರ್ ರಾಂಪಾಲ್, ಹರ್ಬಿ ಹ್ಯಾನ್‌ಕಾಕ್, ಜಾರ್ಜ್ ಹ್ಯಾರಿಸನ್ ಮತ್ತು ಇತರರೊಂದಿಗೆ ಕೆಲಸ ಮಾಡಿದ್ದಾರೆ. ಇವರು ಸಲಾಮ್ ಬಾಂಬೆ (1988) ಮತ್ತು ಮಿಸ್ಸಿಸ್ಸಿಪ್ಪಿ ಮಸಾಲಾ (1991) ದಂತಹ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದರು, ಜೊತೆಗೆ ಬರ್ನಾರ್ಡೊ ಬರ್ಟೊಲುಸಿಯ ಲಿಟಲ್ ಬುದ್ಧ (1993) ಮತ್ತು ಕಾಟನ್ ಮೇರಿ (1999) ನಲ್ಲಿ ಪಿಟೀಲು ಸೋಲೋ ವಾದಕರಾಗಿದ್ದರು. 1981 ರಲ್ಲಿ ಅವರ ಆಲ್ಬಮ್ ಇಂಡಿಯನ್ ಶಾಸ್ತ್ರೀಯ ಸಂಗೀತಕ್ಕಾಗಿ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಇವರಿಗೆ ಕೇಂದ್ರ ಸರ್ಕಾರ 1988 ರಲ್ಲಿ ಪದ್ಮಶ್ರೀ ಮತ್ತು 2001 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿತ್ತು, ಇದೀಗ 2025ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಿದೆ.

ಚಿತ್ರ ನಟ ಅನಂತ್‌ ನಾಗ್‌ ಸೇರಿದಂತೆ ಇಬ್ಬರು ಕನ್ನಡಿಗರಿಗೆ ಪದ್ಮ ಭೂಷಣ!

Anant Nag-Surya Prakash

ನವದೆಹಲಿ: ಭಾರತ ಸರ್ಕಾರ ಶನಿವಾರ 2025ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ರಾಷ್ಟ್ರಪತಿಗಳು ಈ ಬಾರಿ 139 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ. ಈ ಪಟ್ಟಿಯಲ್ಲಿ 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಪ್ರಶಸ್ತಿ ಪುರಸ್ಕೃತರಲ್ಲಿ 23 ಮಂದಿ ಮಹಿಳೆಯರು. ಈ ಪಟ್ಟಿಯಲ್ಲಿ 10 ವಿದೇಶಿಯರು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ಅಂದ ಹಾಗೆ ಕರ್ನಾಟಕದಿಂದ ಇಬ್ಬರು ಸಾಧಕರನ್ನು ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ ಚಲನಚಿತ್ರ ನಟ ಅನಂತ್‌ ನಾಗ್‌ ಹಾಗೂ ಹಿರಿಯ ಪತ್ರಕರ್ತ ಎ ಸೂರ್ಯ ಪ್ರಕಾಶ್‌ ಅವರಿಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಾಹಿತ್ಯ ಹಾಗೂ ಶಿಕ್ಷಣ ಹಾಗೂ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿದ ಫಲವಾಗಿ ಕರ್ನಾಟಕದ ಎ ಸೂರ್ಯ ಪ್ರಕಾಶ್‌ಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗುತ್ತಿದೆ. ಇನ್ನು ಸಿನಿಮಾ ರಂಗದಲ್ಲಿ ಅಭೂತಪೂರ್ವ ಸೇವೆಯನ್ನು ಪರಿಗಣಿಸಿ ಅನಂತ್‌ ನಾಗ್‌ ಅವರನ್ನು ಪರಿಗಣಿಸಲಾಗಿದೆ.

Padma Awards 2025: ಕರ್ನಾಟಕದ ಮಡಿಲಿಗೆ 3 ಪದ್ಮಶ್ರೀ ಪ್ರಶಸ್ತಿ

ಎ ಸೂರ್ಯ ಪ್ರಕಾಶ್‌ ಯಾರು?

ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಸೂರ್ಯ ಪ್ರಕಾಶ್ ಅವರು ಪ್ರಸಾರ ಭಾರತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಮೂಲಕ ಹುದ್ದೆಯನ್ನು ನಿರ್ವಹಿಸಿದ ಎರಡನೇ ಕನ್ನಡಿಗ ಎಂಬ ಹೆಮ್ಮೆಗೂ ಇವರು ಪಾತ್ರರಾಗಿದ್ದಾರೆ.

ಸೂರ್ಯ ಪ್ರಕಾಶ್ ಅವರು‘ದಿ ಪಯೋನಿರ್’ನಲ್ಲಿ ಕಾರ್ಯನಿರ್ವಾಹಕ ಸಂಪಾದಕ, ‘ಈ ನಾಡು’ ನ್ಯೂಸ್‌ಪೇಪರ್ ಸಮೂಹದ ರಾಜಕೀಯ ಸಂಪಾದಕ, ‘ಜೀ ನ್ಯೂಸ್’ನಲ್ಲಿ ಸಂಪಾದಕ, ಬ್ಯಾಂಕಾಕ್ ಮತ್ತು ಸಿಂಗಾಪುರದಲ್ಲಿ ಪ್ರಕಟವಾಗುವ ‘ಏಷ್ಯಾ ಟೈಮ್ಸ್ ’ದೈನಿಕದಲ್ಲಿ ಇಂಡಿಯಾ ಎಡಿಟರ್, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ದಿಲ್ಲಿ ಬ್ಯುರೋ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Padma Awards 2025: ಪದ್ಮ ಪ್ರಶಸ್ತಿ ಪ್ರಕಟ; ಕರ್ನಾಟಕದ ವೆಂಕಪ್ಪ ಅಂಬಾಜಿ ಮುಡಿಗೆ ಪ್ರತಿಷ್ಠಿತ ಗೌರವ

ಅನಂತ್‌ ನಾಗ್‌ ಕುರಿತು ಮಾಹಿತಿ

ಕನ್ನಡ ಚಲನಚಿತ್ರದ ಸಾರ್ವಕಾಲಿಕ ಶ್ರೇಷ್ಠ ನಟರಲ್ಲಿ ಅನಂಗ್‌ ನಾಗ್‌ ಕೂಡ ಒಬ್ಬರು. ಅವರು ನಟರಾಗಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಲೇಖಕರಾಗಿಯೂ ಅನಂತ್‌ ನಾಗ್‌ ದೊಡ್ಡ ಹೆಸರು ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಅವರು, ಕನ್ನಡ ಭಾಷೆಯಲ್ಲಿ 150ಕ್ಕೂ ಹೆಚ್ಚಿನ ಸಿನಿಮಾಗಳಕ್ಕಿ ನಟಿಸಿದ್ದಾರೆ.

ಇವುಗಳ ಪೈಕಿ, ಅರುಣರಾಗ, ಅನುಪಮ, ಮುಳ್ಳಿನಗುಲಾಬಿ, ಹೊಸ ನೀರು , ಬಾಡದ ಹೂ, ಜನ್ಮಜನ್ಮದ ಅನುಬಂಧ ಅನಂತ್ ನಾಗ್‌ ನಟಿಸಿದ ಪ್ರಮುಖ ಚಿತ್ರಗಳು. ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು. ಚಾಲೆಂಜ್ ಗೋಪಾಲಕೃಷ್ಣ, ಗೋಲ್ ಮಾಲ್ ರಾಧಾಕೃಷ್ಣ, ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು, ಹೆಂಡ್ತೀಗ್ಹೇಳ್ಬೇಡಿ, ಗೌರಿ ಗಣೇಶ, ಗಣೇಶ ಸುಬ್ರಮಣ್ಯ, ಮನೇಲಿ ಇಲಿ ಬೀದೀಲಿ ಹುಲಿ, ಧೈರ್ಯಲಕ್ಷ್ಮಿ, ನಾರದ ವಿಜಯ, ಹಾಸ್ಯರತ್ನ ರಾಮಕೃಷ್ಣ, ಯಾರಿಗೂ ಹೇಳ್ಬೇಡಿ, ಗಾಯತ್ರಿ ಮದುವೆ, ಇನ್ನೊಂದು ಮದುವೆ, ಯಾರಿಗೆ ಸಾಲುತ್ತೆ ಸಂಬಳ ಪ್ರಮುಖ ಸಿನಿಮಾಗಳಾಗಿವೆ.