Rangapravesha: ಬೆಂಗಳೂರಿನಲ್ಲಿ ಸೆ.7ರಂದು ಬಹುಮುಖ ಪ್ರತಿಭೆ ಸೌಮ್ಯಶ್ರೀ ಮುರಳಿ ರಂಗಪ್ರವೇಶ
Rangapravesha: ಭರತನಾಟ್ಯ ನೃತ್ಯಕಲಾವಿದೆ, ನಾಟ್ಯಗುರು, ನೃತ್ಯಸಂಯೋಜಕಿ-ಸಂಶೋಧಕಿ, ಸಂಗೀತಗಾರ್ತಿ ಹಾಗೂ ರಂಗಭೂಮಿ-ಚಲನಚಿತ್ರ ರಂಗದ ಚಟುವಟಿಕೆಗಳಲ್ಲಿ ನಿರತರಾದ ಅದ್ಭುತ ಪ್ರತಿಭೆ ಅಕ್ಷರಾ ಅವರ, ‘ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್ʼ ನೃತ್ಯಶಾಲೆಯ ವಿದ್ಯಾರ್ಥಿನಿ ಬಹುಮುಖ ಪ್ರತಿಭೆಯ ಸೌಮ್ಯಶ್ರೀ ಮುರಳಿ ಅವರು ಸೆ.7ರಂದು ಭಾನುವಾರ ಬೆಂಗಳೂರು ನಗರದ ಜೆ.ಸಿ ರಸ್ತೆಯ ಎ.ಡಿ .ಎ. ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ರಂಗಪ್ರವೇಶ ಮಾಡಲಿದ್ದಾರೆ.

-

ಬೆಂಗಳೂರು: ಭರತನಾಟ್ಯ ಕ್ಷೇತ್ರದಲ್ಲಿ ವಿದುಷಿ ಅಕ್ಷರಾ ಭಾರಧ್ವಾಜ್ ಬಹುಮುಖ ಪ್ರತಿಭೆಯಾಗಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಭರತನಾಟ್ಯ ನೃತ್ಯಕಲಾವಿದೆ, ನಾಟ್ಯಗುರು, ನೃತ್ಯ ಸಂಯೋಜಕಿ-ಸಂಶೋಧಕಿ, ಸಂಗೀತಗಾರ್ತಿ ಹಾಗೂ ರಂಗಭೂಮಿ-ಚಲನಚಿತ್ರ ರಂಗದ ಚಟುವಟಿಕೆಗಳಲ್ಲಿ ನಿರತರಾದ ಅದ್ಭುತ ಪ್ರತಿಭೆ ಅಕ್ಷರಾ ಅವರ, ‘ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್ʼ ನೃತ್ಯಶಾಲೆಯ ವಿದ್ಯಾರ್ಥಿನಿ ಬಹುಮುಖ ಪ್ರತಿಭೆಯ ಸೌಮ್ಯಶ್ರೀ ಮುರಳಿ ಅವರು ಸೆ.7ರಂದು ಭಾನುವಾರ ಬೆಂಗಳೂರು ನಗರದ ಜೆ.ಸಿ ರಸ್ತೆಯ ಎ.ಡಿ .ಎ. ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ರಂಗಪ್ರವೇಶ (Rangapravesha) ಮಾಡಲಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಭರತನಾಟ್ಯ ನೃತ್ಯ ತರಬೇತಿ ಪಡೆಯುತ್ತಿರುವ ಸೌಮ್ಯಶ್ರೀ ಮುರಳಿ ಅವರು ಬಿಎಸ್ಸಿ- ಎಲ್ಎಲ್ಬಿ ಪದವೀಧರೆ, ಭರತನಾಟ್ಯದಲ್ಲಿ ಎಂ.ಎ. (ಎಂ.ಪಿ.ಎ) ಸ್ನಾತಕೋತ್ತರ ಪದವಿಯನ್ನು ಜೈನ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಕರ್ನಾಟಕ ಸರ್ಕಾರದ ‘ವಿದ್ಯುತ್ʼ ನೃತ್ಯಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಅಖಿಲ ಭಾರತಿಯ ಗಂಧರ್ವ ಮಹಾವಿದ್ಯಾಲಯದ ಎಲ್ಲ ಅಲಂಕಾರ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ.
ಗುರುವಿನ ಮಾರ್ಗದರ್ಶನದಲ್ಲಿ ಅವರ ಸಂಸ್ಥೆಯ ಜತೆಗೆ ಸೌಮ್ಯಶ್ರೀ ಮುರಳಿ ಅವರು ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು- ಹೊಸೂರು ನಾಟ್ಯಾಂಜಲಿ, ತಂಜಾವೂರಿನಲ್ಲಿ ವಂದೇ ಭಾರತಂ ನಿತ್ಯ ಉತ್ಸವ, ಮೈಸೂರು ದಸರಾ ಉತ್ಸವ, ಇಸ್ಕಾನ್, ತರಂಗರಂಗ, ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ಮುಂತಾದ ಅನೇಕ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡ ಹೆಮ್ಮೆ ಇವರದು.
ಈ ಸುದ್ದಿಯನ್ನೂ ಓದಿ | Beauty Trend 2025: ಹುಬ್ಬಿನ ಇನ್ಸ್ಟಂಟ್ ಸೌಂದರ್ಯ ಹೆಚ್ಚಿಸಲು ಬಂತು ಐಬ್ರೋ ಟ್ಯಾಟೂ ಪೆನ್!