ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ರಾಶ್ಚೇರುವು ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ದ ಸಲ್ಲಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆ

ವಿಧಾನ ಪರಿಷತ್ ಚುನಾವಣೆ ಸಮಯದಲ್ಲಿ ಎಂಎಲ್‌ಸಿ ಅನಿಲ್ ಕುಮಾರ್, ಶಾಸಕ ಎಸ್.ಎನ್.ಸುಬ್ಬಾ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಗ್ರಾ.ಪಂ. ಅಧ್ಯಕ್ಷೆ ಸ್ಥಾನವನ್ನು ಗಿಟ್ಟಿಸಿ ಕೊಂಡಿದ್ದ ಕಾಂಗ್ರೆಸ್ ಬೆಂಬಲಿತ ಅದ್ಯಕ್ಷೆ ರೇವತಿ ಶ್ರೀನಿವಾಸ್‌ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಲು ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರ ಒಂದು ಬಣ ಹಾಗೂ ಎನ್‌ಡಿಎ ಬೆಂಬಲಿತ ಸದಸ್ಯರ ಬಣ ಸೇರಿ ೧೦ ಸದಸ್ಯರು ಹಾಲಿ ಅದ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ,

ಅಧ್ಯಕ್ಷರ ವಿರುದ್ದ ಸಲ್ಲಿಸಲಾಗಿದ್ದ ಅವಿಶ್ವಾಸ  ಗೊತ್ತುವಳಿ ಮಂಡನೆ ಸಭೆ

ಅವಿಶ್ವಾಸ ನಿಲುವಳಿ ನೋಟೀಸು

Profile Ashok Nayak Jun 24, 2025 1:57 PM

ಬಾಗೇಪಲ್ಲಿ: ತಾಲೂಕಿನ ರಾಶ್ಚೇರುವು ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ದ ಸಲ್ಲಿಸಲಾಗಿದ್ದ ಅವಿಶ್ವಾಸ  ಗೊತ್ತುವಳಿ ಮಂಡನೆ ಸಭೆ ದಿನಾಂಕಕ್ಕೂ ಮುನ್ನವೇ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇವತಿ ಶ್ರೀನಿವಾಸ್ ವಿರುದ್ದ ಕೆಲ ಗ್ರಾ.ಪಂ. ಸದಸ್ಯರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರೇ, ಹಣದ ಮೊತ್ತವನ್ನು ಭರ್ತಿ ಮಾಡದ ಬ್ಯಾಂಕ್ ಖಾತೆಯ ಖಾಲಿ ಚೆಕ್‌ಗಳಿಗೆ ಸಹಿ ಹಾಕುವಂತೆ ಗ್ರಾ.ಪಂ. ಅಧಿಕಾರಿಗಳು, ಮುಖಂಡರು ಮಾಡಿರುವ ಮೌಖಿಕ ಅದೇಶವನ್ನು ತಿರಸ್ಕರಿಸಿರುವ ಹಿನ್ನಲೆಯಲ್ಲಿ ಅಧ್ಯಕ್ಷ ಗಾದೆಯಿಂದ ಕೆಳಗಿಳಿಸುವ ಷಢ್ಯಂತ್ರಕ್ಕೆ ಮುಂದಾಗಿದ್ದಾರೆಂದು ಎರಡು ಬಣಗಳ ಸದಸ್ಯರು ಆರೋಪ ಪ್ರತ್ಯಾರೋಪಗಳಿಗೆ ಮುಂದಾಗಿದ್ದಾರೆ.

ತಾಲೂಕಿನ ರಾಶ್ಚೇರುವು ಗ್ರಾಮ ಪಂಚಾಯತಿಯಲ್ಲಿ ಒಟ್ಟು 14 ಸದಸ್ಯರ ಸಂಖ್ಯಾ ಬಲ ಇದ್ದು, ಗ್ರಾ.ಪಂ.ಅಧ್ಯಕ್ಷೆ ರೇವತಿ ಶ್ರೀನಿವಾಸ್ ವಿರುದ್ದ ೧೦ ಜನ ಗ್ರಾ.ಪಂ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸುವAತೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಪ ವಿಭಾಗೀಯ ಅಧಿಕಾರಿ ಅಶ್ವಿನ್‌ಗೆ ಜೂ.೪ ರಂದು ಮನವಿ ಸಲ್ಲಿಸಿರುತ್ತಾರೆ. ಅವಿಶ್ವಾಸ ಸೂಚನೆಯನ್ನು ಪರ್ಯಾಲೋಚಿಸಿರುವ ಉಪ ವಿಭಾಗಾಧಿಕಾರಿ ಗ್ರಾ.ಪಂ.ಅಧ್ಯಕ್ಷರ ವಿರುದ್ದದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಗೆ ಜು.೨ ರಂದು ಬೆಳಗ್ಗೆ ೧೧ ಗಂಟೆಗೆ ದಿನಾಂಕ ನಿಗದಿಪಡಿಸಿ ರಾಶ್ಚೇರುವು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆಯುವ ಸಭೆಗೆ ಎಲ್ಲಾ ಸದಸ್ಯರು ಹಾಜರಾಗುವಂತೆ ಜೂ ೧೭ ರಂದು ಉಪ ವಿಭಾಗಾಧಿಕಾರಿ ಕಚೇರಿಯಿಂದ ಎಲ್ಲಾ ಗ್ರಾ.ಪಂ. ಸದಸ್ಯರಿಗೆ ಮುದ್ದಾಂ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ

ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಸದಸ್ಯರು ಮೈತ್ರಿ: ವಿಧಾನ ಪರಿಷತ್ ಚುನಾವಣೆ ಸಮಯದಲ್ಲಿ ಎಂಎಲ್‌ಸಿ ಅನಿಲ್ ಕುಮಾರ್, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಗ್ರಾ.ಪಂ. ಅಧ್ಯಕ್ಷೆ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ ಕಾಂಗ್ರೆಸ್ ಬೆಂಬಲಿತ ಅದ್ಯಕ್ಷೆ ರೇವತಿ ಶ್ರೀನಿವಾಸ್‌ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಲು ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರ ಒಂದು ಬಣ ಹಾಗೂ ಎನ್‌ಡಿಎ ಬೆಂಬಲಿತ ಸದಸ್ಯರ ಬಣ ಸೇರಿ ೧೦ ಸದಸ್ಯರು ಹಾಲಿ ಅದ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ರಾಜಕೀಯ ಎದುರಾಳಿಗಳಾದರೆ, ಅದೇ ಕ್ಷೇತ್ರ ವ್ಯಾಪ್ತಿಯ ರಾಶ್ಚೇರುವು ಗ್ರಾಮ ಪಂಚಾಯತಿಯಲ್ಲಿ ಅಧಿಕಾರ ಮತ್ತು ಹಣದ ಆಸೆಗಾಗಿ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಸದಸ್ಯರು ಮೈತ್ರಿ ಮಾಡಿಕೊಂಡು ಹಾಲಿ ಗ್ರಾ.ಪಂ.ಅಧ್ಯಕ್ಷೆ ರೇವತಿ ಶ್ರೀನಿವಾಸ್‌ರನ್ನು ಅಧ್ಯಕ್ಷೆ ಗಾದೆಯಿಂದ ಕೆಳಗಿಸಲು ಕಾಂಗ್ರೆಸ್ ಪಕ್ಷದ ಒಂದು ಗುಂಪಿನ ಸದಸ್ಯರು ತಂತ್ರಗಾರಿಕೆ ರೂಪಿಸಿದ್ದಾರೆ.


ಸಂವಿಧಾನದ ಅಡಿಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸ್ಥಾನಕ್ಕೆ ಅಯ್ಕೆಗೊಂಡಿರುವ ನಾನು ನ್ಯಾಯುತವಾದ ಕೆಲಸಗಳಿಗೆ ಒಪ್ಪಿಗೆ ಸೂಚಿಸಿದ್ದೇನೆ, ಕಾನೂನು ವ್ಯಾಪ್ತಿ ಬಿಟ್ಟು ಮಾಡಿರುವ ಕೆಲ ಕೆಲಸಗಳಿಗೆ ಗ್ರಾ.ಪಂ.ನಿಂದ ಅನುಮೋದನೆ ನೀಡಿಲ್ಲ ಹಣವೂ ಕೊಟ್ಟಿಲ್ಲ, ರಾಶ್ಚೇರುವು ಗ್ರಾಮ ಪಂಚಾಯತಿ ಯಲ್ಲಿ ಕಳೆದ ೫ ವರ್ಷಗಳಿಂದ ನಡೆದಿರುವ ಎಲ್ಲಾ ಕಾಮಗಾರಿಗಳ ಬಿಲ್‌ಗಳ ಬಗ್ಗೆ ಜಿ.ಪಂ.ಕಾರ್ಯ ನಿರ್ವಹಣಾಧಿಕಾರಿ ಹಂತದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆ ಗುರಿಪಡಿಸಿದರೆ ಅದಕ್ಕೆ ನನ್ನ ಸಹಮತ ಇದೆ, ಆದರೆ ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ, ರಾಜಕೀಯ ಮುಖಂಡರ ಷಢ್ಯಂತ್ರಕ್ಕೆ ಮಣಿದಿರುವ ಕೆಲ ಸದಸ್ಯರು ಅವಿಶ್ವಾಸಕ್ಕೆ ಗೊತ್ತುವಳಿ ಮಂಡನೆಗೆ ಮುಂದಾಗಿದ್ದಾರೆ.

-ರೇವತಿ ಶ್ರೀನಿವಾಸ್, ಅಧ್ಯಕ್ಷರು, ರಾಶ್ಚೇರುವು ಗ್ರಾ.ಪಂ.