ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Honnamaradi Jatre: ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಹೊನ್ನಮರಡಿ ಜಾತ್ರೆಗೆ ಆಗಮಿಸಿ ಶ್ರೀ ರಂಗನಾಥ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದ ಆಡಳಿತ ಮಂಡಳಿ, ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ ಅನ್ನದಾನ ನೆರವೇರಿತು.

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Profile Prabhakara R Jan 15, 2025 5:53 PM

ಚಿಕ್ಕನಾಯಕನಹಳ್ಳಿ: ತಾಲೂಕಿನ ಬೆಳಗುಲಿ ಹೊನ್ನಮರಡಿ ಶ್ರೀ ರಂಗನಾಥ ಸ್ವಾಮಿಯ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ (Honnamaradi Jatre) ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.

ಶ್ರೀ ಹೊನ್ನಮರಡಿ ರಂಗನಾಥ ಸ್ವಾಮಿ ಬೆಟ್ಟದ ಮೇಲೆ ಶ್ರೀ ಉಡುಸಲಮ್ಮ ದೇವಿ ಆಗಮನದೊಂದಿಗೆ ನಡೆದ ಗಂಡುಗತ್ರಿ ಮುಳ್ಳಾವಿಗೆ ಉರುವತ್ತಿ ಮತ್ತು ದೊಡ್ಡ ಊಳಗ ಕಾರಣಿಕ, ಬಸವನ ಮೆರವಣಿಗೆಯನ್ನು ಭಕ್ತರು ಕಣ್ತುಂಬಿಕೊಂಡರು. ಜಾತ್ರೆ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

Honnamaradi temple

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದಿದ್ದು, ದೇವಸ್ಥಾನದ ಆಡಳಿತ ಮಂಡಳಿ, ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ ಅನ್ನದಾನ ನೆರವೇರಿತು.

ಶಿವಗಂಗೆ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಮಿಂದೆದ್ದ ಭಕ್ತ ಸಾಗರ

Shivagange News 1

ನೆಲಮಂಗಲ: ತಾಲೂಕಿನ ಶಿವಗಂಗೆಯ ಗಂಗಾಧರೇಶ್ವರ ದೇಗುಲದಲ್ಲಿ ಪ್ರತಿ ವರ್ಷದಂತೆ ಮಕರ ಸಂಕ್ರಮಣದಂದು ಬೆಳಗಿನ ಜಾವ ಸಂಭ್ರಮದಿಂದ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿಸಲಾಯಿತು. ಮಧ್ಯಾಹ್ನ 3.30 ಗಂಟೆಯಿಂದ 04 ಗಂಟೆಯೊಳಗೆ ಸಲ್ಲುವ ಮಕರ ಲಗ್ನದಲ್ಲಿ ಸಂಪನ್ನವಾಯಿತು.

ಭೂ ಮಟ್ಟದಿಂದ 1600 ಮೀಟರ್ ಎತ್ತರ ಹಾಗೂ ಇಡೀ ಬೆಟ್ಟ 4567 ಅಡಿ ಎತ್ತರದ ಬೆಟ್ಟದ ತುತ್ತ ತುದಿಯಲ್ಲಿರುವ ತೀರ್ಥ ಕಂಬದಲ್ಲಿ ಮಂಗಳವಾರ ಮಧ್ಯಾಹ್ನ 02.39 ಕ್ಕೆ ಸರಿಯಾಗಿ ತೀಥೋದ್ಭವವಾಗಿದ್ದು, ಸಾಕಷ್ಟು ಹೇರಳ ಪ್ರಮಾಣದಲ್ಲಿ ಧಾರೆ ದೈವ ಜಲ ದೊರೆಯಿತು. ಈ ಜಲವನ್ನು ತಂದು ಶಿವ ಮತ್ತು ಗಿರಿಜಾ ಮಾತೆಗೆ ಧಾರೆ ಎರೆದು ನಂತರ ವಿವಾಹ ಮಹೋತ್ಸವ ಮಾಡಲಾಯಿತು.

ಈ ವೇಳೆ ಶಾಸಕ ಎನ್.ಶ್ರೀನಿವಾಸ್  ಮಾತನಾಡಿ, ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ದಿನ, ಶಿವಗಂಗೆಯಲ್ಲಿ ಹಗಲಿನಲ್ಲಿ ಗಿರಿಜಾ ಕಲ್ಯಾಣ ಮತ್ತು ಗಂಗೋತ್ಪತ್ತಿ ಚೆನ್ನಾಗಿ ಆಗಿರುವುದು ಸಂತಸ ತಂದಿದೆ. ಈ ವರ್ಷ ಮಳೆ-ಬೆಳೆ ಉತ್ತಮವಾಗಿ ಉಂಟಾಗಲಿ ರೈತರು ಸುಭೀಕ್ಷವಾಗಲಿ,  ಶಾಸ್ತ್ರೋಕ್ತವಾಗಿ ಗಿರಿಜಾ ಕಲ್ಯಾಣ ನಡೆದಿದೆ. ಕ್ಷೇತ್ರದ ಜನತೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎರಡನೇ ಬಾರಿಗೆ ಶಿವಗಂಗೆ ಗಿರಿಜಾ ಕಲ್ಯಾಣ ವೀಕ್ಷಿಸಿದ್ದೇನೆ, ದಾಸೋಹಕ್ಕೆ ಆರ್ಥಿಕ ನೆರವು, ಉತ್ತಮ ರಾಸುಗಳಿಗೆ ಬಹುಮಾನವನ್ನು ವೈಯಕ್ತಿಕವಾಗಿ ಈ ವರ್ಷ ನೀಡಿ ಸಹಕರಿಸಿದ್ದೇನೆ. ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ಸಹಕಾರ ವೈಯಕ್ತಿಕವಾಗಿ ನೀಡುತ್ತೇನೆ, ಕ್ಷೇತ್ರದ ಸೇವಕನಾಗಿ ಜನರ ಅಶೋತ್ತರಗಳಿಗೆ ಸ್ಪಂದಿಸುತ್ತೇನೆ, ಹೊನ್ನಾದೇವಿ ಯ ದರ್ಶನ ಮತ್ತು ದೇವಿ ಪ್ರಸಾದ ನೀಡಿದ್ದು ಸಂತಸವಾಗಿದೆ ಎಂದರು.

Shivagange News

50 ಸಾವಿರ ಭಕ್ತರಿಗೆ ದಾಸೋಹ: ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್ ಮತ್ತು ದಾನಿಗಳ ಸಹಕಾರದಿಂದ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರಿಗೆ ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಸಿಹಿ-ಖಾರ ಪೊಂಗಲ್, ಪಲಾವ್, ಪಾಯಿಸ ಸೇರಿದಂತೆ, ಬಮೂಲ್ ವತಿಯಿಂದ 15 ಸಾವಿರ ಮಜ್ಜಿಗೆ ಪ್ಯಾಕೇಟ್, ಸ್ಥಳೀಯ ಡೇರಿಗಳಿಂದ 1600 ಲೀಟರ್ ಹಾಲು  ವಿತರಣೆಯಾಯಿತು. ಶಾಸಕರು ವೈಯಕ್ತಿಕವಾಗಿ ದಾಸೋಹಕ್ಕೆ ಆರ್ಥಿಕವಾಗಿ ಸಹಕರಿಸಿದ್ದು ಮತ್ತು ಉಪಹಾರ ವಿತರಿಸಿದ್ದು ಅತೀವ ಸಂತಸವಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ಸೋಮಶೇಖರ್ ಹಾಗೂ ಹೊನ್ನಗಂಗಾಶೆಟ್ಟಿ ಹೇಳಿದರು.

ಗಣ್ಯರ ದಂಡು ಶಿವಗಂಗೆಯತ್ತ: ಮಧ್ಯಾಹ್ನದ ವೇಳೆಗೆ ಗಣ್ಯರ ದಂಡು ಶಿವಗಂಗೆಯತ್ತ ಮುಖ ಮಾಡಿತ್ತು, ಸಂಸದ ಡಾ.ಕೆ.ಸುಧಾಕರ್, ಸಪ್ತಗಿರಿ ಶಂಕರ್ ನಾಯಕ್, ಅಗಳಕುಪ್ಪೆ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಬೂದಿಹಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ   ಎಂ.ಕೆ.ನಾಗರಾಜು, ಗ್ರಾ.ಪಂ.ಸದಸ್ಯರಾದ ದಿನೇಶ್, ಮನು ಪ್ರಸಾದ್, ಗ್ರಾ.ಪಂ.ಮಾಜಿ ಅಧ್ಯಕ್ಷ ಹನುಮಂತರಾಜು, ಹೊಸನಿಜಗಲ್ ಸಿದ್ದರಾಜು, ಯೋಗನಂದೀಶ್, ಹೆಗ್ಗುಂದ ಲೋಕೇಶ್, ಖಲೀಂ ಉಲ್ಲಾ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ನಾಗಬಸವರಾಜು ಇನ್ನಿತರರಿದ್ದರು.

ರಾಸುಗಳಿಗೆ ಶಾಸಕರಿಂದ ಬಹುಮಾನ: ಜಾನುವಾರು ಜಾತ್ರೆಗೆ ಆಗಮಿಸಿದ್ದ ರಾಸುಗಳಿಗೆ ಪಶು ವೈದ್ಯ ಇಲಾಖೆ ಸಹಯೋಗದಲ್ಲಿ ಬಹುಮಾನವನ್ನು ನೀಡಲಾಯಿತು. ಶ್ರೀಗಂಗಾದರೇಶ್ವರ ಹೊನ್ನಾದೇವಿ ಟ್ರಸ್ಟ್ ವತಿಯಿಂದ ಅನ್ನ ದಾಸೋಹ, ಬಮೂಲ್ ಟ್ರಸ್ಟ್‌ನಿಂದ ಮಜ್ಜಿಗೆ ವಿತರಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಈ ಸುದ್ದಿಯನ್ನೂ ಓದಿ | Zameer Ahmed: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ; ಮಾಲೀಕನಿಗೆ ಮೂರು ಹಸು ಕೊಡಿಸಿದ ಸಚಿವ ಜಮೀರ್‌ ಅಹ್ಮದ್‌