Prabhakar Kalyani: ಕಾಂತಾರ ಚಿತ್ರದ ನಟ, ರಂಗಭೂಮಿ ಕಲಾವಿದ ಟಿ.ಪ್ರಭಾಕರ ಕಲ್ಯಾಣಿ ನಿಧನ
Prabhakar Kalyani: ಹಿರಿಯ ರಂಗಭೂಮಿ ಕಲಾವಿದ ಟಿ.ಪ್ರಭಾಕರ ಕಲ್ಯಾಣಿ ಅವರು ಕಾಂತಾರ-1 ಚಿತ್ರದಲ್ಲಿ ನ್ಯಾಯವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಉದ್ಯೋಗಿಯಾದ ಪ್ರಭಾಕರ ಕಲ್ಯಾಣಿ ಅವರು, ರಂಗಕಲಾವಿದರಾಗಿ ವಿವಿಧ ನಾಟಕಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು.


ಉಡುಪಿ: ಕಾಂತಾರ ಚಿತ್ರದಲ್ಲಿ ಅಭಿನಯಿಸಿದ್ದ ಮತ್ತೊಬ್ಬ ಸಹ ಕಲಾವಿದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪೆರ್ಡೂರು ಮೂಲದ ಹಿರಿಯ ರಂಗಭೂಮಿ ಕಲಾವಿದ, ನಿವೃತ್ತ ಬ್ಯಾಂಕ್ ಉದ್ಯೋಗಿ ಟಿ. ಪ್ರಭಾಕರ ಕಲ್ಯಾಣಿ ಅವರು (Prabhakar Kalyani) ಹೃದಯಘಾತದಿಂದ ಆ.8ರ ಶುಕ್ರವಾರ ನಿಧನರಾಗಿದ್ದರೆ. ಕಳೆದ 3 ದಿನಗಳ ಹಿಂದೆ ಹಿರಿಯಡಕ ಪೇಟೆಯಲ್ಲಿ ಇವರು ತಲೆ ಸುತ್ತಿ ಬಿದ್ದಿದ್ದರು. ಇಂದು ಮಲಗಿದಲ್ಲಿಯೇ ಹೃದಯಘಾತವಾಗಿ ಕೊನೆಯುಸಿರೆಳೆದಿದ್ದಾರೆ.
5 ವರ್ಷದ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರಿಗೆ ಸ್ಟಂಟ್ ಹಾಕಲಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇವರು ಕಾಂತಾರ-1 ಚಿತ್ರದಲ್ಲಿ ನ್ಯಾಯವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಉದ್ಯೋಗಿಯಾದ ಪ್ರಭಾಕರ ಕಲ್ಯಾಣಿ ಅವರು, ರಂಗಕಲಾವಿದರಾಗಿ ವಿವಿಧ ನಾಟಕಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು. ಕಾಂತಾರ ಸಿನಿಮಾಗಾಗಿ ಸುಮಾರು ಒಂದು ವರ್ಷಗಳ ಕಾಲ ಗಡ್ಡ ತೆಗೆಯದೆ ಇದ್ದರು.