Sirsi News: ಅತೀ ಹೆಚ್ಚು ಅಡಕೆ ವಿಕ್ರಿ: 20 ಕೋಟಿ ರೂ. ಅಧಿಕ ಲಾಭ
ಈ ಸಾರಿ ನಮ್ಮ ಅಡಿಕೆ ಅಂಗಳದಲ್ಲಿ ಅತೀ ಹೆಚ್ಚು ಅಡಕೆ ವಿಕ್ರಿಯಾಗಿದ್ದು ದಾಖಲೆ ನಿರ್ಮಿಸಿದ್ದಲ್ಲದೇ 20 ರೋಟಿ ರೂಪಾಯಿಗೂ ಅಧಿಕ ಲಾಭವನ್ನು ಟಿ ಎಸ್ ಎಸ್ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು. ಇಂದು ಟಿಎಸ್ ಎಸ್ ನ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾಹಿತಿ ನೀಡಿದರು.

-

ಶಿರಸಿ: ಈ ಸಾರಿ ನಮ್ಮ ಅಡಿಕೆ ಅಂಗಳದಲ್ಲಿ ಅತೀ ಹೆಚ್ಚು ಅಡಕೆ ವಿಕ್ರಿಯಾಗಿದ್ದು, ದಾಖಲೆ ನಿರ್ಮಿಸಿದ್ದಲ್ಲದೇ 20 ರೋಟಿ ರೂಪಾಯಿಗೂ ಅಧಿಕ ಲಾಭವನ್ನು ಟಿ ಎಸ್ ಎಸ್ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು. ಇಂದು ಟಿಎಸ್ ಎಸ್ ನ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: Sirsi News: ಪತ್ರಕರ್ತೆ ವಿನುತಾ ಹೆಗಡೆ, ಕೃಷಿಕ ಕೃಷ್ಣ ಭಟ್ ರಿಗೆ ಗೌರವ ಸನ್ಮಾನ
ಹಲವು ಬ್ಯಾಂಕ್ ಗಳಲ್ಲಿ ನಾವು ಸಾಲ ಪಡೆದಿದ್ದೇವೆ. ಠೇವಣಿ ಹೆ ಚ್ಚಾಗಿದೆ. ಅಡಕೆಯ ವಿಕ್ರಿ ಸಹ ಹೆಚ್ಚಾಗಿದೆ. ೨ ಲಕ್ಷಕ್ಕೂ ಹೆಚ್ಚು ಅಡಕೆ ಧಾಖಲೆಯ ವಿಕ್ರಿಯಾಗಿದೆ ಎಂದು ಮಾಹಿತಿ ನೀಡಿದರು. ಸಹಕಾರಿ ಸಂಘದಲ್ಲಿ ಲಾಭ ಗಳಿಸಿದ್ದನ್ನು ರೈತರಿಗೇ ನೀಡುವ ಕಾರ್ಯಸಹ ನಡೆದಿದೆ.
ಇನ್ನು ಉಳಿದಂತೆ ಶಿಕ್ಷಣ ಕ್ಷೇತ್ರದಲ್ಲೂ ಸಹಾಯ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನಿರ್ದೇಶಕರೆಲ್ಲ ಉಪಸ್ಥಿತರಿದ್ದರು.
*
ನಮ್ಮದೇ ಡಿಪೋಜಿಟ್ ಇದ್ದಾಗ್ಯು ನಮಗೆ ಸಾಲ ಕೊಡಲಿಲ್ಲ ಕೆಡಿಸಿಸಿ . ನಾವು ನಮ್ಮ ಸಂಸ್ಥೆಯ ಸದಸ್ಯರಿಗೆ ಸಹಾಯಕ್ಕಾಗಿ ಕೇಳಿದ್ದಾಗಿತ್ತು. ನಮಗೆ ಆ ವಿಷಯವಾಗಿ ಬೇಸರವಿದೆ.
ಗೋಪಾಲಕೃಷ್ಣ ವೈದ್ಯ, ಟಿ ಎಸ್ ಎಸ್ ಅಧ್ಯಕ್ಷ.