ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಜೂನ್ 2 ರಂದು ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ

ಪಶ್ಚಿಮ ಘಟ್ಟದ ಗ್ರಾಮ ಭೂಮಿ ಸಂರಕ್ಷಣೆಗಾಗಿ ಪಾರಂಪರಿಕ ಬೆಟ್ಟ, ಕಾನು, ದೇವರ ಕಾಡು, ಗೋಮಾಳ ಜೀವವೈವಿಧ್ಯದ ಉಳಿವಿಗಾಗಿ ಮಲೆನಾಡಿನ ರೈತರ ಸಾಮೂಹಿಕ ನೈಸರ್ಗಿಕ ಸಂಪತ್ತಿನ ಸುಸ್ಥಿರ ಅಭಿವೃದ್ಧಿಗಾಗಿ ಜಾಗೃತಿ ಅಭಿಯಾನವನ್ನು ಜೂನ್ 2 ರಂದು ಶಿರಸಿ ತಾಲೂಕಿನ ಯಡಳ್ಳಿ ಸಹಕಾರಿ ಸಂಘದ ನೇತೃತ್ವದಲ್ಲಿ ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ ನಡೆಯಲಿದೆ.

ಜೂನ್ 2 ರಂದು ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ

Profile Ashok Nayak May 29, 2025 11:48 AM

ಶಿರಸಿ: ಪಶ್ಚಿಮ ಘಟ್ಟದ ಗ್ರಾಮ ಭೂಮಿ ಸಂರಕ್ಷಣೆಗಾಗಿ ಪಾರಂಪರಿಕ ಬೆಟ್ಟ, ಕಾನು, ದೇವರ ಕಾಡು, ಗೋಮಾಳ ಜೀವವೈವಿಧ್ಯದ ಉಳಿವಿಗಾಗಿ ಮಲೆನಾಡಿನ ರೈತರ ಸಾಮೂಹಿಕ ನೈಸರ್ಗಿಕ ಸಂಪತ್ತಿನ ಸುಸ್ಥಿರ ಅಭಿವೃದ್ಧಿಗಾಗಿ ಜಾಗೃತಿ ಅಭಿಯಾನವನ್ನು ಜೂನ್ 2 ರಂದು ಶಿರಸಿ ತಾಲೂಕಿನ ಯಡಳ್ಳಿ ಸಹಕಾರಿ ಸಂಘದ ನೇತೃತ್ವದಲ್ಲಿ ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಎಂದು ವೈಕ್ಷ ಲಕ್ಷ್ಯ ಆಂದೋಲನದ ಅನಂತ ಹೆಗಡೆ ಅಶೀಸರ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಸ್ವರ್ಣವಲ್ಲ ಸ್ವಾಮಿಜಿಯವರು ಸಾನಿಧ್ಯ ವಹಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ವಸಂತ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀಧರ ಮಂಜುನಾಥ ಕೆರಕೊಪ್ಪ ಅವರಿಗೆ ಬೆಟ್ಟ ಸನ್ಮಾನ ಮಾಡಲಾಗುತ್ತದೆ.

ಇದನ್ನೂ ಓದಿ: Sirsi News: ಜೂನ್ 5,6 ರಂದು ಹಲಸಿನ ಮೇಳ, ಹಲಸಿನ ಬೀಜದ ಆನಂದ ಪೌಡರ್ ಬಿಡುಗಡೆ

ಜೂನ್ 5 ರಂದು ಶಿರಸಿ ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆ ನೇತೃತ್ವದಲ್ಲಿ ಹಲಸು ವೃಕ್ಷಾರೋಪಣ ನಡೆಯಲಿದೆ. ಪ್ರೊ.ದಂಡಿನ್, ಡಿ.ಸಿ.ಎಫ್ ಅಜ್ಜಯ್ಯ ಅವರು ಪಾಲ್ಗೊಳ್ಳ ಲಿದ್ದಾರೆ. ಜೂನ್ 4 ರಂದು ಬೆಳಗ್ಗೆ 10:30 ಕ್ಕೆ ಪೂಜ್ಯ ನೆಲಮಾವು ಮಠದ ಶ್ರೀ ಗಳಿಂದ ನೆಲಮಾವು ಬೆಟ್ಟದಲ್ಲಿ ವೃಕ್ಷಾರೋಪಣ ಕಾರ್ಯಕ್ರಮದ ಉದ್ಘಾಟನೆ ಆಗಲಿದೆ. ಜೂನ್ 7 ರಂದು ಶಿವಮೊಗ್ಗ ಪರ್ಯಾವರಣ ಸಂಸ್ಥೆ ಆಶ್ರಯದಲ್ಲಿ ನಡೆಯುವ ಗ್ರಾಮಭೂಮಿ ಉಳಿಸಿ ಅಭಿಯಾನದಲ್ಲಿ ಶಾಸಕ ಚನ್ನಬಸಪ್ಪ ಅವರು ಭಾಗವಹಿಸಲಿದ್ದಾರೆ. ಜೂನ್ 12-13 ರಂದು ಸಾಗರ, ಹೊಸನಗರಗಳಲ್ಲಿ ಕಾನು, ಬೆಟ್ಟ ಜಾಗೃತಿ ಜಾಥ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಚಿಂತಕ ಕೇಶವ ಹೆಗಡೆ ಕೂರ್ಸೆ, ವಿಎನ್ ಹೆಗಡೆ, ಗಣಪತಿ ಹೆಗಡೆ, ಜಿ ಅರ್ ಹೆಗಡೆ ಬೆಳ್ಳೆಕೆರೆ ಮುಂತಾದವರಿದ್ದರು.

ಹಿನ್ನೆಲೆ: ಮಲೆನಾಡಿನ ಹಳ್ಳಿಗಳ ಸುತ್ತ ಕಾನು, ಬೆಟ್ಟ, ಗೋಮಾಳ, ಗೋಚರ, ಸೊಪ್ಪಿಗೆ ಮುವತ್ತು, ಮುಂತಾದ ಹೆಸರಲ್ಲಿ ಗ್ರಾಮ ಸಾಮೂಹಿಕ ನೈಸರ್ಗಿಕ ಸಂಪತ್ತು ಇದೆ. ಉ.ಕ. ಜಿಲ್ಲೆಯಲ್ಲಿ ಸೊಪ್ಪಿನ ಬೆಟ್ಟಗಳನ್ನು ರೈತರು ನಿರ್ವಹಣೆ ಮಾಡುತ್ತಿದ್ದಾರೆ. ಜೇನು, ಔಷಧಿ ಸಸ್ಯ, ಹಣ್ಣು ಹಂಪಲು, ಮುರುಗಲು, ಉಪ್ಪಾಗೆ, ಒಣಎಲೆದರಕು, ಕಟ್ಟಿಗೆ, ಜಲ ಸಮೃದ್ಧಿ ಸೇರಿ ಬಹು ಅಮೂಲ್ಯ ಜೀವ ವೈವಿದ್ಯದ ಕೊಡುಗೆ ಬೆಟ್ಟ-ಕಾನು ಗಳಿಂದ ದೊರಕುತ್ತಿದೆ.

ಬೆಟ್ಟ ಸುಸ್ಥಿರ ಅಭಿವೃದ್ಧಿ ಜಾಗೃತಿ ಅಭಿಯಾನ

ಕೆನರಾ ಪ್ರಿವಿಲೆಜ್ ಅಡಿಯಲ್ಲಿ ಉ.ಕ ಜಿಲ್ಲೆಯ 53000 ಹೆಕ್ಟೇರ್ ಅರಣ್ಯ ಪ್ರದೇಶ ಬೆಟ್ಟ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಇದೆ. 1980 ರ ಅರಣ್ಯ ಕಾಯಿದೆ ಅಡಿಯಲ್ಲಿ ಬರುವ ಬೆಟ್ಟ ಅಡಿಕೆ ಬೆಳೆಗಾರರ ನಿರ್ವಹಣೆಯಲ್ಲಿದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಅಧಿಕಾರ ಇದ್ದರೂ ಉ.ಕ. ದ ಬೆಟ್ಟದ ಮೇಲೆ ಅರಣ್ಯ ಇಲಾಖೆಯದೇ ಹೆಚ್ಚಿನ ಜವಾಬ್ದಾರಿ ಇದೆ.

ಕಳೆದ 30 ವರ್ಷಗಳಿಂದ ಬೆಟ್ಟ ಅರಣ್ಯ ಉತ್ಪನ್ನದಲ್ಲಿ 33% ಇದ್ದ ಪಾಲನ್ನು ಹೆಚ್ಚಿಸುವ ಬಗ್ಗೆ ಹಾಗೂ ಬೆಟ್ಟ ರಕ್ಷಣೆ ಬಗ್ಗೆ ಇಲ್ಲಿನ ರೈತರು, ಸಂಸ್ಥೆಗಳು ಹೋರಾಟ ನಡೆಸಿದ್ದೇವೆ. ಪಶ್ಚಿಮ ಘಟ್ಟ ಕಾರ್ಯಪಡೆ ವಿಶೇಷ ಪ್ರಯತ್ನ ಹಾಗೂ ಇಲ್ಲಿನ ಜನ ಪ್ರತಿನಿಧಿಗಳ ಬೆಂಬಲದಿಂದ 75% ಪಾಲು ಸಿಗಲು ಸರ್ಕಾರ ಒಪ್ಪಿಗೆ ನೀಡಿದೆ. ಮಾದರಿ ಬೆಟ್ಟ ಅಭಿವೃದ್ಧಿ ಯೋಜನೆ ಜಾರಿ ಆಗಿದೆ. ಬೆಟ್ಟ ಪ್ರಶಸ್ತಿಯನ್ನು ಶ್ರೀ ಸ್ವರ್ಣವಲ್ಲೀಯಲ್ಲಿ ಸ್ಥಾಪಿಸಲಾಗಿದೆ. ಮಾಹಿತಿ ಪುಸ್ತಕ ಪ್ರಕಟಣೆ ಹಾಗೂ ಬೃಹತ್ ಬೆಟ್ಟ ಜಾಗೃತಿ ಅಭಿಯಾನವನ್ನು 2012ರಲ್ಲಿ ನಡೆಸಿದ್ದೇವೆ. ಸಚಿವರಾದ ಯೋಗೇಶ್ವರ, ರಮಾನಾಥ ರೈ, ಅರಣ್ಯ ಪರಿಸರ ಕಾರ್ಯದರ್ಶಿ ಶ್ರೀಧರನ್ ಪಿ.ಸಿ.ಸಿ.ಎಫ್. ದೀಪಕ ಶರಾ ಬೆಟ್ಟ ಅಭಿವೃದ್ಧಿ ವೀಕ್ಷಣಗೆ ಬಂದಿದ್ದು ಇತಿಹಾಸ