Kolhar (Vijayapura) News; ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಆಚರಣೆ ಮಾಡಿ: ಪಿಎಸ್ಐ ಎಂ.ಬಿ ಬಿರಾದಾರ
ನಮ್ಮ ಭಾರತ ದೇಶ ಜಗತ್ತಿನ ಅತ್ಯಂತ ಸುಂಧರವಾದ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವುದೇ ನಮ್ಮ ದೇಶದ ವೖಶಿಷ್ಠ್ಯವಾಗಿದೆ ಎಂದ ಅವರು ಬರುತ್ತಿರುವ ಬಕ್ರೀದ್ ಹಬ್ಬವನ್ನು ಸರ್ವರು ಅನ್ಯೋನ್ಯತೆಯಿಂದ ಆಚರಿಸೋಣ ಎಂದರು. ಅಲ್ಲದೇ ಗೋವನ್ನು ಗೋ ಮಾತೆ ಎಂದು ಪೂಜಿಸುವ ನಮ್ಮ ಹಿಂದು ಬಾಂಧವರ ಭಾವನೆಗಳಿಗೆ ಧಕ್ಕೆಯಾಗದಂತೆ ಗೋ ವಧೆಯನ್ನು ಸಂಪೂರ್ಣವಾಗಿ ತ್ಯಜಿಸಿ ಅವರ ಭಾವನೆಗಳಿಗೆ ಬೆಲೆ ನೀಡೋಣ


ಕೊಲ್ಹಾರ: ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಬುಧವಾರ ಶಾಂತಿ ಸಭೆ ಜರುಗಿತು. ಶಾಂತಿ ಸಭೆಯ ನೇತೃತ್ವ ವಹಿಸಿದ್ದ ಪಿಎಸ್ಐ ಎಂ.ಬಿ ಬಿರಾದಾರ ಮಾತನಾಡಿ ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಸರ್ವರು ಶಾಂತಿ ಹಾಗೂ ಸೌಹಾರ್ದತೆ ಯಿಂದ ಆಚರಣೆ ಮಾಡುವುದರ ಜೊತೆಗೆ ಸರ್ಕಾರ ವಿಧಿಸಿರುವ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಅಹಿತಕರ ಘಟನೆಗಳಿಗೆ ಯಾರು ಕೂಡ ಆಸ್ಪದ ನೀಡಬಾರದು ಎಂದು ಸೂಚನೆ ನೀಡಿದರು.
ಮುಂದುವರಿದು ಮಾತನಾಡಿದ ಅವರು ಕೊಲ್ಹಾರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ನಿಯೋಜನೆ ಗೊಂಡ ನಂತರ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈಗಾಗಲೇ ರೌಡಿ ಶೀಟರ್ ಗಳ ಮೇಲೆ, ಕಮ್ಯೂನಲ್ ಗೂಂಡಾಗಳ ಮೇಲೆ ಹಾಗೂ ಎಂ.ಓ.ಬಿ ಗಳ ಬಾಂಡ್ ಓವರ್ ಮಾಡಲಾಗಿದೆ, ಕಾನೂನು ಮೀರಿ ನಡೆಯುವವರ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿರುತ್ತದೆ ಎಂದರು.
ಎಐಎಂಐಎಂ ಜಿಲ್ಲಾಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ನಮ್ಮ ಭಾರತ ದೇಶ ಜಗತ್ತಿನ ಅತ್ಯಂತ ಸುಂದರವಾದ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವುದೇ ನಮ್ಮ ದೇಶದ ವೖಶಿಷ್ಠ್ಯವಾಗಿದೆ ಎಂದ ಅವರು ಬರುತ್ತಿರುವ ಬಕ್ರೀದ್ ಹಬ್ಬವನ್ನು ಸರ್ವರು ಅನ್ಯೋನ್ಯತೆಯಿಂದ ಆಚರಿಸೋಣ ಎಂದರು. ಅಲ್ಲದೇ ಗೋವನ್ನು ಗೋ ಮಾತೆ ಎಂದು ಪೂಜಿಸುವ ನಮ್ಮ ಹಿಂದು ಬಾಂಧವರ ಭಾವನೆಗಳಿಗೆ ಧಕ್ಕೆಯಾಗದಂತೆ ಗೋ ವಧೆಯನ್ನು ಸಂಪೂರ್ಣ ತ್ಯಜಿಸಿ ಅವರ ಭಾವನೆಗಳಿಗೆ ಬೆಲೆ ನೀಡೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಮಾತನಾಡಿ ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಸರ್ವರು ಕಾನೂನಿನ ಪರಿಪಾಲನೆಯ ಮೂಲಕ ಹಬ್ಬವನ್ನು ಆಚರಣೆ ಮಾಡೋಣ ಎಂದರು.
ಪತ್ರಕರ್ತ ಈರಯ್ಯ ಗಣಕುಮಾರ ಮಾತನಾಡಿ ಹಬ್ಬ ಹರಿದಿನಗಳು ಬಾಂಧವ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಕಾನೂನಿನ ನಿಯಮಗಳ ಪರಿಪಾಲನೆಯ ಮೂಲಕ ಸರ್ವರು ಹಬ್ಬವನ್ನು ಅನ್ಯೋನ್ಯತೆಯಿಂದ ಆಚರಣೆ ಮಾಡೋಣ ಎಂದರು. ಠಾಣಾಧಿಕಾರಿಗಳಾದ ಎಂ.ಬಿ ಬಿರಾದಾರ ಧಕ್ಷತೆಗೆ ಹೆಸರಾಗಿದ್ದು ಕೊಲ್ಹಾರ ಪೊಲೀಸ್ ಠಾಣೆಗೆ ಅವರು ಆಗಮಿಸಿದ ನಂತರ ಕಟ್ಟು ನಿಟ್ಟಿನ ಕಾನೂನಿನ ನಿಯಮಗಳ ಮೂಲಕ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ ಎಂದರು.
ಕರವೇ ಮುಖಂಡ ರವಿ ಗೊಳಸಂಗಿ ಮಾತನಾಡಿ ಬಕ್ರೀದ್ ಹಬ್ಬ ಮುಸ್ಲಿಂ ಸಮುದಾಯದ ಅತ್ಯಂತ ಪವಿತ್ರ ಹಬ್ಬವಾಗಿದ್ದು ಮುಸ್ಲಿಂ ಸಮುದಾಯದ ಜೊತೆಯಾಗಿ ನಾವುಗಳು ಕೂಡ ಒಟ್ಟಾಗಿ ಸಂಭ್ರಮ ದಿಂದ ಹಬ್ಬವನ್ನು ಆಚರಿಸೋಣ ಎಂದರು.
ಸಭೆಯಲ್ಲಿ ಪ.ಪಂ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ, ಆರ್.ಬಿ ಪಕಾಲಿ, ಹನೀಫ್ ಮಕಾನದಾರ, ಅಲ್ಲಾಭಕ್ಷ ಬಿಜಾಪುರ, ಪ.ಪಂ ಸದಸ್ಯರಾದ ತೌಶೀಪ ಗಿರಗಾಂವಿ, ಬನಪ್ಪ ಬಾಲಗೊಂಡ, ಎಂ.ಆರ್ ಕಲಾದಗಿ, ದಶರಥ ಈಟಿ, ತಿಪ್ಪಣ್ಣ ಕುದರಿ, ಯಮನೂರಿ ಮಾಕಾಳಿ ಸಹಿತ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಭಾಗವಹಿಸಿದ್ದರು.