ಕೊಪ್ಪಳದಲ್ಲಿ ಪತ್ನಿ, ಮಗನೊಂದಿಗೆ ಚಿನ್ನದ ವ್ಯಾಪಾರಿ ಆತ್ಮಹತ್ಯೆ
ಪ್ರಾಥಮಿಕ ತನಿಖೆಯ ಪ್ರಕಾರ, ವ್ಯವಹಾರದಲ್ಲಿ ಉಂಟಾಗಿದ್ದ ವಿಪರೀತ ಸಾಲಬಾಧೆಯಿಂದ ಚಿನ್ನದ ವ್ಯಾಪಾರಿಯ ಕುಟುಂಬದ ಈ ತೀವ್ರ ನಿರ್ಧಾರ ತೆಗೆದುಕೊಂಡಿದೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗಂಗಾವತಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.