ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 final: ಐಪಿಎಲ್​ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!

ಫೈನಲ್‌ ಸಮಾರಂಭಕ್ಕೆ ಭೂಸೇನಾ, ವಾಯುಸೇನಾ ಹಾಗೂ ನೌಕಾಸೇನೆಯ ಮುಖ್ಯಸ್ಥರನ್ನು ಆಹ್ವಾನಿಸಲಾಗಿತ್ತು. ಆದರೆ ಇವರು ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಆದ್ಯಾಗೂ ಫೈನಲ್‌ ಪಂದ್ಯದ ಆರಂಭಕ್ಕೂ ಮೊದಲು ಮಿಲಿಟರಿ ಬ್ಯಾಂಡ್‌ ಪ್ರದರ್ಶನವೂ ನಡೆಯಲಿದೆ. ಜೂ. 3ರ ಮಂಗಳವಾರ ಐಪಿಎಲ್‌ ಫೈನಲ್‌ ಏರ್ಪಡಲಿದ್ದು, ಇದಕ್ಕೂ ಮೊದಲು ಭವ್ಯ ಸಮಾರೋಪ ಸಮಾರಂಭ ನಡೆಯಲಿದೆ.

ಐಪಿಎಲ್​ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!

Profile Abhilash BC Jun 1, 2025 12:14 PM

ನವದೆಹಲಿ: ಜೂನ್‌ 3 ರಂದು ಅಹಮದಾಬಾದ್‌ನಲ್ಲಿ ನಡೆಯುವ ಐಪಿಎಲ್‌ ಫೈನಲ್‌(IPL 2025 final) ಸಮಾರೋಪ ಸಮಾರಂಭವನ್ನು ಬಿಸಿಸಿಐ(BCCI) ವಿಶೇಷ ರೀತಿಯಲ್ಲಿ ಆಚರಿಸುತ್ತಿದೆ. ಭಾರತೀಯ ಸೈನಿಕರಿಗೆ ಅರ್ಪಿಸುವ( Indian Armed Forces) ಮೂಲಕ ಆಪರೇಷನ್‌ ಸಿಂದೂರ್‌(operation sindoor) ವಿಜಯೋತ್ಸವವನ್ನು ಆಚರಿಸುವುದಾಗಿ ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯ ತಿಳಿಸಿದ್ದಾರೆ. ಆದರೆ ಭಾರತೀಯ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಮುಖ್ಯಸ್ಥರಾದ ಜನರಲ್‌ ಉಪೇಂದ್ರ ದ್ವಿವೇದಿ, ಅಡ್ಮಿರಲ್‌ ದಿನೇಶ್‌ ಕೆ. ತ್ರಿಪಾಠಿ ಮತ್ತು ಏರ್‌ ಚೀಫ್ ಮಾರ್ಷಲ್‌ ಅಮರ್‌ಪ್ರೀತ್‌ ಸಿಂಗ್‌ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ತಿಳಿದುಬಂದಿದೆ.

ಫೈನಲ್‌ ಸಮಾರಂಭಕ್ಕೆ ಭೂಸೇನಾ, ವಾಯುಸೇನಾ ಹಾಗೂ ನೌಕಾಸೇನೆಯ ಮುಖ್ಯಸ್ಥರನ್ನು ಆಹ್ವಾನಿಸಲಾಗಿತ್ತು. ಆದರೆ ಇವರು ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಆದ್ಯಾಗೂ ಫೈನಲ್‌ ಪಂದ್ಯದ ಆರಂಭಕ್ಕೂ ಮೊದಲು ಮಿಲಿಟರಿ ಬ್ಯಾಂಡ್‌ ಪ್ರದರ್ಶನವೂ ನಡೆಯಲಿದೆ. ಜೂ. 3ರ ಮಂಗಳವಾರ ಐಪಿಎಲ್‌ ಫೈನಲ್‌ ಏರ್ಪಡಲಿದ್ದು, ಇದಕ್ಕೂ ಮೊದಲು ಭವ್ಯ ಸಮಾರೋಪ ಸಮಾರಂಭ ನಡೆಯಲಿದೆ.

ಇದನ್ನೂ ಓದಿ IPL 2025: ʻಜಸ್‌ಪ್ರೀತ್‌ ಬುಮ್ರಾ ಇರುವವರೆಗೂ ಪಂದ್ಯ ಮುಗಿಯಲ್ಲʼ-ಎಬಿ ಡಿ ವಿಲಿಯರ್ಸ್‌!

ಪಾಕಿಸ್ಥಾನ ಬೆಂಬಲಿತ ಉಗ್ರರು ಪೆಹಲ್ಗಾಮ್‌ನಲ್ಲಿ 26 ಮಂದಿ ಭಾರತೀಯರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ನಮ್ಮ ಸೈನಿಕರು ಆಪರೇಷನ್‌ ಸಿಂದೂರ್‌ ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ತಕ್ಕ ಪಾಠ ಕಲಿಸಿದ್ದರು.

ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟ್ಟಿದ್ದರಿಂದ ಟೂರ್ನಿಯನ್ನು ಒಂದು ವಾರಗಳ ಕಾಲ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಟೂರ್ನಿ ಪುನಾರಂಭಗೊಂಡ ಬಳಿಕ ಪ್ರತಿ ಪಂದ್ಯದ ವೇಳೆ ಬಿಸಿಸಿಐ ದೊಡ್ಡ ಬ್ಯಾನರ್‌ಗಳ ಮೂಲಕ ಸಶಸ್ತ್ರ ಪಡೆಗಳನ್ನು ಗೌರವಿಸುತ್ತಿದೆ.