Roopa Gururaj Column: ಹಣ ಆಸ್ತಿ ಅಂತಸ್ತನ್ನು ಅವಲಂಬಿಸಿದ ಸಂಬಂಧಗಳು
ಆತ ತಾನಿದ್ದ ಊರು ಬಿಟ್ಟು ತನ್ನ ಹಿರಿಯ ಮಗನ ಮನೆಯಲ್ಲಿ ಬಂದು ನೆಲೆಸಿದ. ಅವನಿಗೆ ಯಾವ ತೊಂದರೆಯೂ ಆಗದಂತೆ ಮಗ ಸೊಸೆ ಚೆನ್ನಾಗಿ ನೋಡಿಕೊಳ್ಳು ತ್ತಿದ್ದರು. ಒಂದು ಸಲ ಮೂರು ಮಕ್ಕಳೂ ಒಟ್ಟಿಗೆ ಸೇರಿದಾಗ, ಒಬ್ಬ ಮಗ, ಅಪ್ಪಾ ನೀನು ಕಟ್ಟಿಸಿದ ಮನೆ, ಖಾಲಿಯಾಗಿ ಹಾಗೇ ಇದೆ. ಅದನ್ನು ಖಾಲಿಯಾಗಿ ಹಾಗೆಯೇ ಬಿಟ್ಟರೆ, ಅದು ಹಾಳಾಗಿ ಹೋಗು ತ್ತದೆ, ಅದರ ಬದಲು ಅದನ್ನು ಮಾರಿದರೆ ಒಳ್ಳೆಯ ಬೆಲೆ ಸಿಗಬಹುದು ಎಂದರು.


ಒಂದೊಳ್ಳೆ ಮಾತು
ಒಂದು ಕುಟುಂಬದ ಯಜಮಾನ ಒಬ್ಬ ಶ್ರೀಮಂತ ವ್ಯಾಪಾರಿ. ಈ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು. ವ್ಯಾಪಾರಿಯ ಹೆಂಡತಿ ಇದ್ದಕ್ಕಿದ್ದಂತೆ ಹೃದಯಘಾತದಿಂದ ಮರಣ ಹೊಂದಿದಳು. ಈಗ ಯಜಮಾನ ಒಬ್ಬಂಟಿಯಾದ. ಆತ ತಾನಿದ್ದ ಊರು ಬಿಟ್ಟು ತನ್ನ ಹಿರಿಯ ಮಗನ ಮನೆಯಲ್ಲಿ ಬಂದು ನೆಲೆಸಿದ. ಅವನಿಗೆ ಯಾವ ತೊಂದರೆಯೂ ಆಗದಂತೆ ಮಗ ಸೊಸೆ ಚೆನ್ನಾಗಿ ನೋಡಿಕೊಳ್ಳು ತ್ತಿದ್ದರು. ಒಂದು ಸಲ ಮೂರು ಮಕ್ಕಳೂ ಒಟ್ಟಿಗೆ ಸೇರಿದಾಗ, ಒಬ್ಬ ಮಗ, ಅಪ್ಪಾ ನೀನು ಕಟ್ಟಿಸಿದ ಮನೆ, ಖಾಲಿಯಾಗಿ ಹಾಗೇ ಇದೆ. ಅದನ್ನು ಖಾಲಿಯಾಗಿ ಹಾಗೆಯೇ ಬಿಟ್ಟರೆ, ಅದು ಹಾಳಾಗಿ ಹೋಗು ತ್ತದೆ, ಅದರ ಬದಲು ಅದನ್ನು ಮಾರಿದರೆ ಒಳ್ಳೆಯ ಬೆಲೆ ಸಿಗಬಹುದು ಎಂದರು.
ತಂದೆಗೆ ಇವರ ಮಾತಿನ ಇಂಗಿತ ಅರ್ಥವಾಯಿತು, ಮನೆಯನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಿದರು. ಬಂದ ಹಣವನ್ನು ಮೂವರು ಮಕ್ಕಳಿಗೂ ಸರಿಯಾಗಿ ಹಂಚಿಬಿಟ್ಟ. ಹಾಗೆಯೇ, ತನ್ನ ಹೆಂಡತಿಯ ಆಭರಣಗಳನ್ನೂ ಮೂವರು ಸೊಸೆಯಂದಿರಿಗೆ ಹಂಚಿಬಿಟ್ಟ. ಈಗ ಈ ವ್ಯಕ್ತಿಯ ಬಳಿ ಏನೂ ಇರದೇ ಬರಿ ಕೈ ಆಯಿತು.
ಇದೆಲ್ಲಾ ನಡೆದು, ಸ್ವಲ್ಪ ದಿನಗಳ ತನಕ ಅಂತಹ ಯಾವ ಬದಲಾವಣೆಗಳೂ ಕಾಣಲಿಲ್ಲ. ಆದರೆ ಬರು ಬರತ್ತಾ ಸಣ್ಣ ಪುಟ್ಟ ವ್ಯತ್ಯಾಸಗಳು ಕಾಣತೊಡಗಿದವು. ಇವರು ಕಾಫಿ ಕೊಡಿ ಎಂದು ಕೇಳು ವವರೆಗೂ ಕಾಫಿ ಸಿಗುತ್ತಿರಲಿಲ್ಲ. ದಿನಪತ್ರಿಕೆ ಓದುವ ಅಭ್ಯಾಸವಿದ್ದ ಇವನಿಗೆ, ಎಲ್ಲರೂ ಓದಿಯಾದ ಮೇಲೆ, ಮಧ್ಯಾಹ್ನದ ಸಮಯ ಓದಲು ಪತ್ರಿಕೆ ದೊರೆಯುತ್ತಿತ್ತು.
ಇದನ್ನೂ ಓದಿ: Roopa Gururaj Column: ಮನುಷ್ಯನ ತಲೆ ಬುರುಡೆಗಿರುವ ಬೆಲೆ
ಮನೆಯವರು ಇವರೊಂದಿಗೆ ಕೂತು ಮಾತನಾಡುವುದು ಅಪರೂಪವಾಯಿತು. ಇವರೊಬ್ಬರೇ ಕೊಠಡಿಯಲ್ಲಿ, ಒಬ್ಬಂಟಿಯಾಗಿ ಕಾಲ ಕಳೆಯಬೇಕಾಯಿತು. ಹೋಗಲಿ ಟಿವಿ ಕಾರ್ಯಕ್ರಮ ನೋಡೋಣವೆಂದರೆ, ಮಗ ಸೊಸೆ, ಅವರ ಮಕ್ಕಳು ತಮಗೆ ಬೇಕಾದ ಕಾರ್ಯಕ್ರಮ ನೋಡು ತ್ತಿರುತ್ತಿದ್ದರು. ಈಗ ಯಜಮಾನರಿಗೆ ಜೀವನ ಬೇಸರವೆನಿಸತೊಡಗಿ, ತಾವು ಒಬ್ಬಂಟಿ ಎನಿಸತೊಡಗಿ ಯೋಚಿಸತೊಡಗಿದ.
ಈತ ಒಂದು ದಿನ ತಮ್ಮ ಎಲ್ಲಾ ಮಕ್ಕಳನ್ನೂ ಬರ ಹೇಳಿ ನನ್ನ ಬಳಿ ನನ್ನ ಅಜ್ಜಿಯಿಂದ ನನ್ನ ಹೆಂಡತಿಗೆ ಬಂದ ಒಂದಷ್ಟು ವಜ್ರದ ಹಾಗೂ ಚಿನ್ನದ ಒಡವೆಗಳನ್ನು ಇನ್ನೂ ಮಾರದೇ ಇಟ್ಟು ಕೊಂಡಿದ್ದೇನೆ. ಈಗೆಲ್ಲಾ ಬಂಗಾರದ ಆಭರಣಗಳು ಅದೆಷ್ಟೋ ಕೋಟಿ ಗಟ್ಟಲೆ ಬೆಲೆ ಬಾಳುತ್ತವೆ. ಅದನ್ನೆಲ್ಲಾ ನಾನು ಒಂದು ಪೆಟ್ಟಿಗೆಯಲ್ಲಿ ಹಾಕಿ, ಬ್ಯಾಂಕಿನ ವಿಶೇಷ ಲಾಕರ್ ನಲ್ಲಿ ಇಟ್ಟಿದ್ದೇನೆ, ಅದರ ಒಂದು ಕೀಲಿ ಕೈ ನನ್ನ ಸ್ನೇಹಿತರಾದ ತಹಶೀಲ್ದಾರ್ ಕೃಷ್ಣಪ್ಪನವರ ಬಳಿಗೆ ಕೊಟ್ಟಿದ್ದೇನೆ.
ಇನ್ನೊಂದು ಕೀಲಿ ಕೈಯನ್ನು ಈಗ ನಿಮ್ಮ ಹತ್ತಿರ ಕೊಡುತ್ತೇನೆ. ಆದರೆ ಅದನ್ನು ನಾನು ಸಾಯು ವವರೆಗೂ ಯಾರೂ ತೆಗೆಯುವಂತಿಲ್ಲ. ನಾನು ಸತ್ತ ನಂತರ, ಬ್ಯಾಂಕಿನಿಂದ ಅದನ್ನು ತೆಗೆದು, ಆಭರಣಗಳನ್ನು ಮೂರು ಜನರು ಸರಿಯಾಗಿ ಹಂಚಿಕೊಳ್ಳಿ ಎಂದು ಹೇಳಿ ಹಿರಿಯ ಮಗನ ಕೈಗೆ ಕೀಲಿಕೈಯನ್ನು ಕೊಟ್ಟರು.
ಈ ಪ್ರಸಂಗ ನಡೆದ ನಂತರ, ಯಜಮಾನರಿಗೆ ಪುನಹ ರಾಜೋಪಚಾರ ಶುರುವಾಯಿತು. ಅವರ ಆಯಸ್ಸು ಮುಗಿದು ಒಂದು ದಿನ ತೀರಿಕೊಂಡರು. ಮರುದಿನ ಅವರ ಮಕ್ಕಳು ಮೂರು ಜನರೂ, ಬ್ಯಾಂಕಿಗೆ ಅಪ್ಪನ ಸ್ನೇಹಿತ ತಹಸೀಲ್ದಾರ್ ಕೃಷ್ಣಪ್ಪನವರೊಂದಿಗೆ ಹೋಗಿ ಲಾಕರ್ಬೀಗವನ್ನು ತೆರೆದು, ಒಳಗಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡರು.
ಮನೆಗೆ ಬಂದು ಅದನ್ನು ತೆರೆದು ನೋಡಿದಾಗ, ಅದರಲ್ಲಿ ಒಂದು ಸಣ್ಣ ಚೀಟಿ ಮಾತ್ರ ಇತ್ತು. ಅದರಲ್ಲಿ ಹೀಗೆ ಬರೆದಿತ್ತು. ‘ಒಬ್ಬ ಬುದ್ಧಿ ಇಲ್ಲದ ಮೂರ್ಖ ಮಾತ್ರ, ಏನನ್ನೂ ಇಟ್ಟುಕೊಳ್ಳದೆ, ಎಲ್ಲವನ್ನು ಕೊಟ್ಟುಬಿಡುತ್ತಾನೆ’ ಎಂದಿತ್ತು. ಮಕ್ಕಳನ್ನು ನಂಬಬಾರದು ಎಂದಲ್ಲ; ಆದರೆ ನಾವು ಕಷ್ಟಪಟ್ಟು ದುಡಿದ ಹಣ ಆಸ್ತಿ ಎಂದಿಗೂ ನಮ್ಮ ಕೈಲಿರಬೇಕು. ಮಕ್ಕಳಿಗೆ ಕಷ್ಟಪಟ್ಟು ದುಡಿಯುವು ದನ್ನು ಕಲಿಸಬೇಕು. ನಾವು ಬದುಕಿರುವವರೆಗೂ ನಾವು ದುಡಿದ ಹಣ ನಮಗೆ ಆಪತ್ದನವಾಗಿರಲಿ.