Bigg Boss Kannada 12: ಗಿಲ್ಲಿ, ಕಾವ್ಯ ಸೇರಿ ಈ ವಾರ 9 ಮಂದಿ ನಾಮಿನೇಟ್! ಸೇಫ್ ಆದ ಅಶ್ವಿನಿ ಗೌಡ
Bigg Boss Nomination: ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ. ಹಾಗೆ ಯಾರ ಬಳಿ ಹೆಚ್ಚು ಚಾಕು ಇರುತ್ತದೆಯೋ ಅವರೇ ನಾಮಿನೇಟ್ ಆಗುತ್ತಾರೆ. ಧ್ರುವಂತ್ ಅವರು ಬಿಗ್ ಬಾಸ್ ಆಟದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ತಾವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಅವರು ಸಿದ್ಧರಾಗಿದ್ದಾರೆ. ಹೀಗಾಗಿ ಸ್ಪಂದನಾ ಸೇರಿದಂತೆ ಬಹುತೇಕರು ಈ ಕಾರಣ ಕೊಟ್ಟು ನಾಮಿನೇಟ್ ಮಾಡಿದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳ ಮಧ್ಯೆ ಕಾಂಪಿಟೇಶನ್ ಜೋರಾಗಿದೆ. ಈ ವಾರ ಒಟ್ಟು 9 ಜನರ ಹೆಸರನ್ನು ನಾಮಿನೇಟ್ (Nominate) ಮಾಡಲಾಗಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಹತ್ತಿರ ಆಗಲಿರುವುದರಿಂದ ಎಲ್ಲ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.ಈ ವಾರ ನಾಮಿನೇಶನ್ ವೇಳೆ ಬಹುತೇಕ ಸ್ಪರ್ಧಿಗಳ ಮಧ್ಯೆ ವಾದ ವಿವಾದ ನಡೆದಿದೆ. ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ (Rakshitha Shetty) ಅವರು ನಾಮಿನೇಟ್ ಆಗಿದ್ದಾರೆ.
ಧ್ರುವಂತ್ ಆಟದಲ್ಲಿ ನಿರಾಸಕ್ತಿ
ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ. ಹಾಗೆ ಯಾರ ಬಳಿ ಹೆಚ್ಚು ಚಾಕು ಇರುತ್ತದೆಯೋ ಅವರೇ ನಾಮಿನೇಟ್ ಆಗುತ್ತಾರೆ. ಧ್ರುವಂತ್ ಅವರು ಬಿಗ್ ಬಾಸ್ ಆಟದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ತಾವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಅವರು ಸಿದ್ಧರಾಗಿದ್ದಾರೆ. ಹೀಗಾಗಿ ಸ್ಪಂದನಾ ಸೇರಿದಂತೆ ಬಹುತೇಕರು ಈ ಕಾರಣ ಕೊಟ್ಟು ನಾಮಿನೇಟ್ ಮಾಡಿದರು.
ಇದನ್ನೂ ಓದಿ: Bigg Boss Kannada 12: ರಘು Vs ಗಿಲ್ಲಿ; ‘ಬಾಹುಬಲಿ’ ಕಟ್ಟಪ್ಪ ಸೀನ್ ಹೋಲಿಕೆ, ವೈರಲ್ ಆಯ್ತು ಪೋಸ್ಟ್
ಫ್ರೆಂಡ್ಶಿಪ್ ಬಗ್ಗೆ ಟಾಂಗ್
ಗಿಲ್ಲಿ ಮತ್ತು ಕಾವ್ಯ ಬಗ್ಗೆಯೂ ಅನೇಕ ಸ್ಪರ್ಧಿಗಳು ಜೋಡಿಯ ಬಗ್ಗೆ ಮಾತನಾಡಿ ನಾಮಿನೇಟ್ ಮಾಡಿದ್ದಾರೆ. ರಕ್ಷಿತಾ ಅವರು ನಿನ್ನೆ ಈ ಪ್ರಕ್ರಿಯೆ ವೇಳೆ ಕಾವ್ಯ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಗಿಲ್ಲಿ ವಿಚಾರವಾಗಿಯೂ ಕಾವ್ಯ ಅವರೇ ತಡೆ ಆಗುತ್ತಿದ್ದಾರೆ ಅನೋ ಕಾರಣ ಕೊಟ್ಟರು. ರಾಶಿಕಾ ಕೂಡ ಗಿಲ್ಲಿ ವಿರುದ್ಧ ಅಬ್ಬರಿಸಿದ್ದರು. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್ಶಿಪ್ ಬಗ್ಗೆ ಟಾಂಗ್ ಕೊಟ್ಟಿದ್ದರು.
ಯಾವಾಗ ಗಿಲ್ಲಿ ಕಾವ್ಯ ಫ್ರೆಂಡ್ಶಿಪ್ ಬಗ್ಗೆ ರಾಶಿಕಾ ಮಾತನಾಡಿದರೂ, ಸೂರಜ್ ಅವರನ್ನ ಎಳೆದು ತಂದಿದ್ದಾರೆ ಗಿಲ್ಲಿ. ಹೀಗಾಗಿ ಸೂರಜ್ ಅವರನ್ನು ನಾಮಿನೇಟ್ ಮಾಡಿದರು.
ನಾಮಿನೇಶನ್ ವೇಳೆ ಕಾವ್ಯ ಸ್ಟ್ರಾಟೆಜಿ ಮಾಡಿಕೊಂಡು ಸೇವ್ ಆಗಿದ್ದಾರೆ ಅಂತ ರಕ್ಷಿತಾ ಆರೋಪಿಸಿದ್ದರು. ಆದರೆ, ಆ ಸ್ಟ್ರಾಟೆಜಿ ಏನು ಅಂತಲೇ ರಕ್ಷಿತಾ ಶೆಟ್ಟಿ ಹೇಳಲಿಲ್ಲ. ನಾಮಿನೇಷನ್ಗೆ ಮತ್ತೆ ಸರಿಯಾದ ಕಾರಣಗಳನ್ನ ಕೊಡಲೇ ಇಲ್ಲ.
ಕಲರ್ಸ್ ಕನ್ನಡ ಪ್ರೋಮೋ
ಅಶ್ವಿನಿ ಗೌಡ ಸೈಲೆಂಟ್
ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆ ಕಾರಣದಿಂದಲೇ ನಾಮಿನೇಷನ್ನಿಂದ ಪಾರಾಗಿದ್ದಾರೆ. ರಘು ಕೂಡ ನಾಮಿನೇಶನ್ನಿಂದ ಪಾರಾಗಿದ್ದಾರೆ. ಇನ್ನು ನಾಮಿನೇಶನ್ ಪ್ರಕ್ರಿಯೆ ಆ ಬಳಿಕ ಧ್ರುವಂತ್ ಅವರು ಅಶ್ವಿನಿ ಬಳಿ ಚರ್ಚಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕಾವ್ಯ - ಗಿಲ್ಲಿನ ಸೋಲಿಸಲು ಪಣ ತೊಟ್ಟ ರಾಶಿಕಾ, ಸೂರಜ್
ನಾನು ಪ್ರತಿ ಬಾರಿ ಬ್ಯಾಗ್ ನೀಟ್ ಆಗಿ ಪ್ಯಾಕ್ ಮಾಡ್ತೇನೆ. ಆದರೆ ಸೇಫ್ ಆಗ್ತಿದ್ದೀನಿ. ಇದು ನನಗೂ ಅರ್ಥ ಆಗ್ತಿಲ್ಲ ಎಂದಿದ್ದಾರೆ. ಹೀಗಾಗಿ ಈ ವಾರ ಧ್ರುವಂತ್ ಅವರೇ ಮನೆಯಿಂದ ಆಚೆ ಹೋಗಬೇಕು ಅಂತ ವೀಕ್ಷಕರು ಕಮೆಂಟ್ ಮಾಡಿದ್ದಾರೆ.