ಹೊರಬಿತ್ತು ಅಕ್ಷಯ್ ಕುಮಾರ್ ನಟನೆಯ ʼಕೇಸರಿ ಚಾಪ್ಟರ್ 2ʼ ಚಿತ್ರದ ರಿವ್ಯೂ; ನ್ಯಾಶನಲ್ ಅವಾರ್ಡ್ ಪಕ್ಕ ಎಂದ ಕೇಂದ್ರ ಸಚಿವ
Kesari Chapter 2: ಜಲಿಯನ್ ವಾಲಾಭಾಗ್ ಹತ್ಯಾಕಾಂಡವನ್ನು ಆಧರಿಸಿ ತಯಾರಾದ ಬಾಲಿವುಡಟ್ ಚಿತ್ರ ʼಕೇಸರಿ ಚಾಪ್ಟರ್ 2ʼ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ದೆಹಲಿಯಲ್ಲಿ ಮಂಗಳವಾರ ಸ್ಪೆಶಲ್ ಪ್ರೀಮಿಯರ್ ಶೋ ಆಯೋಜಿಸಿತ್ತು. ಚಿತ್ರ ವೀಕ್ಷಿಸಿದ ರಾಜಕೀಯ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ.

ʼಕೇಸರಿ ಚಾಪ್ಟರ್ 2ʼ ಚಿತ್ರದ ಪೋಸ್ಟರ್.

ಹೊಸದಿಲ್ಲಿ: ಬಾಲಿವುಡ್ (Bollywood)ನ ಬಹುನಿರೀಕ್ಷಿತ ಚಿತ್ರ 'ಕೇಸರಿ ಚಾಪ್ಟರ್ 2' (Kesari Chapter 2) ರಿಲೀಸ್ಗೆ ರೆಡಿಯಾಗಿದ್ದು, ಮಂಗಳವಾರ ದೆಹಲಿಯಲ್ಲಿ ಚಿತ್ರತಂಡ ಸ್ಪೆಶಲ್ ಪ್ರೀಮಿಯರ್ ಶೋ ಏರ್ಪಡಿಸಿತ್ತು. ಸಿನಿಮಾ ನೋಡಿದ ರಾಜಕೀಯ ನಾಯಕರು ಬಹುಪರಾಕ್ ಎಂದಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹಾಗೂ ಆರ್.ಮಾಧವನ್ ನಟನೆ ಅದ್ಭುತವಾಗಿ ಮೂಡಿ ಬಂದಿದ್ದು, ಈ ಚಿತ್ರ ನ್ಯಾಶನಲ್ ಅವಾರ್ಡ್ (National Award)ಗೆ ಅರ್ಹವಾಗಿದೆ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.
ದೆಹಲಿಯಲ್ಲಿ ಚಿತ್ರತಂಡ ಆಯೋಜಿಸಿದ್ದ ಪ್ರೀಮಿಯರ್ ಶೋದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Union Minister Hardeep Singh Puri), ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ (Rekha Gupta) ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಹರ್ದೀಪ್ ಸಿಂಗ್ ಪುರಿ ತಮ್ಮ ಎಕ್ಸ್ ಖಾತೆಯಲ್ಲಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. 'ʼಕೇಸರಿ ಚಾಪ್ಟರ್ 2' ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಜಲಿಯನ್ ವಾಲಾಭಾಗ್ ಹುತಾತ್ಮರಿಗೆ ಸಮರ್ಪಿತವಾಗಿದ್ದು, ನಮ್ಮನ್ನು ಆಗಲಿದ ಯೋಧರ ತ್ಯಾಗಕ್ಕೆ ಈ ಚಿತ್ರದ ಮೂಲಕ ಗೌರವ ನಮನ ಸಲ್ಲಿಸಲಾಗಿದೆ" ಎಂದು ಬರೆದುಕೊಂಡಿದ್ದಾರೆ.
फ़िल्म 'Kesari Chapter 2' में देशभक्ति, शौर्य और बलिदान की भावना को अत्यंत प्रभावशाली और मार्मिक रूप में प्रस्तुत किया गया है। हर दृश्य, गौरव और प्रेरणा से परिपूर्ण है।
— Rekha Gupta (@gupta_rekha) April 15, 2025
फ़िल्म के लिए श्री @akshaykumar, श्री @ActorMadhavan, और #KesariChapter2 की पूरी टीम को ढेर सारी शुभकामनाएं।… pic.twitter.com/VhwgCl6qn1
ದಿಲ್ಲಿ ಸಿಎಂ ರೇಖಾ ಗುಪ್ತಾ ಅವರು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಪ್ರಮುಖ ಪಾತ್ರಗಳಲ್ಲಿ ನಟಿಸಿದ ಅಕ್ಷಯ್ ಕುಮಾರ್, ಆರ್.ಮಾಧವನ್ ಅವರೊಂದಿಗೆ ಪೋಸ್ ನೀಡುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ʼʼಕೇಸರಿ ಚಾಪ್ಟರ್ 2ʼ ಚಿತ್ರದಲ್ಲಿ ದೇಶಭಕ್ತಿ, ಧೈರ್ಯ ಮತ್ತು ತ್ಯಾಗದ ಮನೋಭಾವವನ್ನು ಬಹಳ ಅಚ್ಚುಕಟ್ಟಾಗಿ ಪರದ ಮೇಲೆ ಪ್ರಸ್ತುತ ಪಡಿಸಿದ್ದಾರೆ. ಪ್ರತಿಯೊಂದು ದೃಶ್ಯವನ್ನು ಭಾವನಾತ್ಮಕ ರೀತಿಯಲ್ಲಿ ತೋರಿಸಲಾಗಿದ್ದು, ಹೆಮ್ಮೆ ಮತ್ತು ಸ್ಫೂರ್ತಿಯಿಂದ ಕೂಡಿದೆʼʼ ಎಂದಿದ್ದಾರೆ.
ಈ ಸುದ್ದಿಯನ್ನು ಓದಿ: Kesari Chapter 2: ʼಕೇಸರಿ 2ʼ ಚಿತ್ರತಂಡದಿಂದ ಜಲಿಯನ್ವಾಲಾ ಭಾಗ್ ಸಂತ್ರಸ್ತರಿಗೆ ಗೌರವಪೂರ್ಣ ನಮನ
ʼಖಿಲಾಡಿ 786ʼ ಮತ್ತು ʼಹೌಸ್ಫುಲ್ 2ʼ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ತೆರೆಹಂಚಿಕೊಂಡಿದ್ದ ನಟಿ ಆಸಿನ್ ತೊಟ್ಟುಂಕಲ್ ಅವರ ಪತಿ ಉದ್ಯಮಿ ರಾಹುಲ್ ಶರ್ಮಾ ಕೂಡ ಈ ಪ್ರೀಮಿಯರ್ ಶೋದಲ್ಲಿ ಭಾಗಿಯಾಗಿದ್ದರು. ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, “ನಾವೆಲ್ಲರೂ ಇತಿಹಾಸದ ಪುಸ್ತಕಗಳಲ್ಲಿ ಜಲಿಯನ್ ವಾಲಾಭಾಗ್ ಬಗ್ಗೆ ಓದಿದ್ದೇವೆ. ಆದರೆ ಈ ಚಿತ್ರದ ಮೂಲಕ ಕಣ್ಣಾರೆ ನೋಡುವ ಅವಕಾಶ ಸಿಕ್ಕಿತು. ಈ ಸಿನಿಮಾ ನೋಡಿ ನನ್ನ ಮನಸ್ಸು ತುಂಬಿ ಬಂದಿದ್ದು, ನನ್ನೊಳಗೆ ಆಗುತ್ತಿರುವ ಭಾವೋದ್ರೆಕವನ್ನು ಹೇಳಲು ಪದಗಳೇ ಸಿಗುತ್ತಿಲ್ಲ. ಈ ಚಿತ್ರ ಅದ್ಭುತವಾಗಿದ್ದು, ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದೆʼʼ ಎಂದಿದ್ದಾರೆ.
We’ve all read about Jallianwala Bagh in history books, but nothing prepares you for the truth I witnessed today at the special screening of #Kesari2. I'm short of words for how deeply moved I am. This is content, deserving of a National Award. Brilliant performances by…
— Rahul Sharma (@rahulsharma) April 15, 2025
ಈ ಚಿತ್ರ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ನಂತರದ ಘಟನೆಗಳನ್ನಾಧರಿಸಿದ ಹಿಸ್ಟಾರಿಕಲ್ ಡ್ರಾಮಾದ ಆಗಿದ್ದು, ನ್ಯಾಯಾಲಯದಲ್ಲಿ ಅಕ್ಷಯ್ ಕುಮಾರ್ ಮತ್ತು ಆರ್.ಮಾಧವನ್ ನಡುವಿನ ರೋಮಾಂಚಕಾರಿ ವಾದ-ಪ್ರತಿವಾದ ದೃಶ್ಯಗಳನ್ನು ಒಳಗೊಂಡಿದೆ. ಇದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನ್ಯಾಯಕ್ಕಾಗಿ ನಡೆದ ಹೋರಾಟವನ್ನು ಎತ್ತಿ ತೋರಿಸಿದೆ. ಕರಣ್ ಜೋಹರ್ ಸೇರಿದಂತೆ ಚಿತ್ರದ ನಿರ್ಮಾಪಕರು ಮತ್ತು ಕಲಾವಿದರು ತಮ್ಮ ವಿವಿಧ ಸೋಶಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಚಿತ್ರದ ರಿವ್ಯೂ ಹಂಚಿಕೊಂಡಿದ್ದಾರೆ. ಏ. 18ರಂದು ಇದರು ತೆರೆ ಕಾಣಲಿದೆ.