Rashmika-Vijay Wedding: ಇಂದು ರಶ್ಮಿಕಾ-ವಿಜಯ್ ಅದ್ಧೂರಿ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ
Rashmika: ವಿಜಯ್(Vijay) ಮತ್ತು ರಶ್ಮಿಕಾ (Rashmika) ಅಭಿಮಾನಿಗಳು ಕಾಯುತ್ತಿದ್ದ ದಿನ ಇದು. ಇಂದು (ಫೆ.26) ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಫೋಟೋಗೆ ಫ್ಯಾನ್ಸ್ ತುದಿಗಾಲಲ್ಲಿ ಕಾಯುತ್ತಿದ್ದಾರೆ. ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್ನಲ್ಲಿ ಸಮಾರಂಭ ಜರುಗಲಿದ್ದು, ಬುಧವಾರವಷ್ಟೇ ಜೋಡಿ ತಮ್ಮ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ಆಚರಿಸಿದರು.
ರಶ್ಮಿಕಾ ಮಂದಣ್ಣ -
ವಿಜಯ್(Vijay) ಮತ್ತು ರಶ್ಮಿಕಾ (Rashmika) ಅಭಿಮಾನಿಗಳು ಕಾಯುತ್ತಿದ್ದ ದಿನ ಇದು. ಇಂದು (ಫೆ.26) ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಫೋಟೋಗೆ ಫ್ಯಾನ್ಸ್ ತುದಿಗಾಲಲ್ಲಿ ಕಾಯುತ್ತಿದ್ದಾರೆ. ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್ನಲ್ಲಿ ಸಮಾರಂಭ ಜರುಗಲಿದ್ದು, ಬುಧವಾರವಷ್ಟೇ ಜೋಡಿ ತಮ್ಮ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಹಳದಿ ಶಾಸ್ತ್ರ (Haldi) ಆಚರಿಸಿದರು.
ವರದಿಯ ಪ್ರಕಾರ, ವಿಜಯ್ ಮತ್ತು ರಶ್ಮಿಕಾ ಅವರ ವಿವಾಹದ ಶುಭ ಮುಹೂರ್ತವನ್ನು ಬೆಳಿಗ್ಗೆ 8 ಗಂಟೆಗೆ ನಿಗದಿಪಡಿಸಲಾಗಿದೆ. ಅಂದರೆ ಈ ಪವಿತ್ರ ಕ್ಷಣದಲ್ಲಿ ಜೋಡಿ ಅಧಿಕೃತವಾಗಿ ವಿವಾಹವಾಗಲಿದ್ದಾರೆ.
ಕೊಡವ ಸಂಪ್ರದಾಯ
ತೆಲುಗು ಮತ್ತು ಕೊಡವ ಸಂಪ್ರದಾಯಗಳನ್ನು ಗೌರವಿಸಲು ಎರಡು ವಿಭಿನ್ನ ಸಮಾರಂಭಗಳಲ್ಲಿ ವಿವಾಹವಾಗಲಿದ್ದಾರೆ ಎಂದು ಈ ಹಿಂದೆ ಬಹಿರಂಗಪಡಿಸಲಾಗಿತ್ತು ಮೊದಲ ವಿವಾಹ ಸಮಾರಂಭವು ವಿಜಯ್ ದೇವರಕೊಂಡ ಅವರ ಪರಂಪರೆಯನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ತೆಲುಗು ಹಿಂದೂ ಆಚರಣೆಗಳನ್ನು ಅನುಸರಿಸುತ್ತದೆ. ಇದು ಬೆಳಿಗ್ಗೆ 8 ಗಂಟೆಗೆ ನಡೆಯುವ ಸಮಾರಂಭ. ಅದರ ನಂತರ ಸಂಜೆ ರಶ್ಮಿಕಾ ಮಂದಣ್ಣ ಅವರು ಕೊಡವ ಸಂಪ್ರದಾಯದಲ್ಲಿ ವಿವಾಹ ಆಗಲಿದ್ದಾರೆ.
ಇದನ್ನೂ ಓದಿ: Rishab Shetty: ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?
ಜೋಡಿ ತಮ್ಮ ಅತಿಥಿಗಳಿಗಾಗಿ ವಿಶೇಷ ಜಪಾನೀಸ್ ಭೋಜನದೊಂದಿಗೆ ತಮ್ಮ ವಿವಾಹಪೂರ್ವ ಸಂಭ್ರಮವನ್ನು ಪ್ರಾರಂಭಿಸಿದರು. ಇದರ ನಂತರ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯ ನಡೆಯಿತು. ಮರುದಿನ, ಸಂಗೀತ ರಾತ್ರಿಯನ್ನು ಆಯೋಜಿಸಿದ್ದರು. ಸಂಗೀತದ ನಂತರ, ನಟರು ಹಲ್ದಿ ಸಮಾರಂಭವನ್ನು ಸಹ ಆಯೋಜಿಸಿದರು.
Evadanna leak cheseyandi ra aagalekapotunna😭#VijayDeverakonda #RashmikaMandanna #ViRoshWedding pic.twitter.com/5slZ2KTC37
— 𝙂𝙪𝙣𝙨𝙉'𝙍𝙤𝙨𝙚𝙨 (@theraajeshh) February 26, 2026
ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ
ರಶ್ಮಿಕಾ ಮತ್ತು ವಿಜಯ್ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ‘ರಶ್ಮಿಕಾ ಮತ್ತು ವಿಜಯ್ ಹಾಗೂ ಅವರ ಕುಟುಂಬಸ್ಥರಿಗೆ ಅಭಿನಂದನೆಗಳು. ಇದು ಇಬ್ಬರ ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಒಟ್ಟಿಗೆ ಸಪ್ತಪದಿ ತುಳಿದು ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ. ಮುಂದಿನ ದಿನಗಳು ಕನಸುಗಳು ಮತ್ತು ಅವುಗಳ ಈಡೇರಿಕೆಯಿಂದ ತಂಬಿರಲಿ. ಇಬ್ಬರಿಗೂ ಶುಭಾಶಯಗಳು’ ಎಂದಿದ್ದಾರೆ.
ರಶ್ಮಿಕಾ ಅವರು ಕೊಡಗು ಜಿಲ್ಲೆ ವಿರಾಜಪೇಟೆಯ ಕದಲೂರು ಗ್ರಾಮದವರು. ರಶ್ಮಿಕಾ ಕುಟುಂಬಕ್ಕೆ ವಿರಾಜಪೇಟೆಯ ಸುತ್ತ-ಮುತ್ತ ಸಾಕಷ್ಟು ಸಂಬಂಧಿಕರಿದ್ದಾರೆ. ರಶ್ಮಿಕಾ ತಂದೆ ಮದನ್ ಮಂದಣ್ಣ ಅವರು ಆ ಭಾಗದ ಪ್ರಭಾವಿ ಉದ್ಯಮಿಯು ಹೌದು. ಅಲ್ಲದೆ, ವಿರಾಜಪೇಟೆಯಲ್ಲಿ ಅವರ ಒಡೆತನದ ಐಷಾರಾಮಿ ಕಲ್ಯಾಣ ಮಂಟಪವಿದೆ. ಹಾಗಾಗಿ, ಇದೇ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ರಶ್ಮಿಕಾ ಮತ್ತು ವಿಜಯ್ ಅವರಿಗೆ ಮತ್ತೊಂದು ಆರತಕ್ಷತೆಯನ್ನು ಮಾಡುವ ಪ್ಲ್ಯಾನ್ ಇದೆಯಂತೆ.
ಇದನ್ನೂ ಓದಿ: Rashmika Vijay Wedding: ‘ದಿ ವೆಡ್ಡಿಂಗ್ ಆಫ್ ವಿರೋಷ್’: ಲೀಕ್ ಆಯ್ತು ಹಳದಿ, ಸಂಗೀತ ಸಂಭ್ರಮದ ವಿಡಿಯೋ
ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೆ, ಅಂದು ಸಂಬಂಧಿಕರು ಮತ್ತು ಕೊಡಗು ಭಾಗದ ಅವರ ಗೆಳೆಯರು, ಹಿತೈಷಿಗಳಿಗಾಗಿ ಎಂದೇ ಈ ಆರತಕ್ಷತೆ ಅಥವಾ ಔತಣಕೂಟವನ್ನು ಆಯೋಜಿಸಲು ಮದನ್ ಮಂದಣ್ಣ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.