Bhagya Lakshmi Serial: ಮದುವೆ ನಿಲ್ಲಿಸಲು ಬಂದ ತಾಂಡವ್ನ ಕೆನ್ನೆಗೆ ಬಾರಿಸಿ ಹೊರದಬ್ಬಿದ ರಾಮ್ದಾಸ್
ಮದುವೆ ನಿಲ್ಲಿಸುವ ತಾಂಡವ್ ಪ್ಲ್ಯಾನ್ ಫ್ಲಾಪ್ ಆಗಿದೆ. ಅತ್ತ ಮೀನಾಕ್ಷಿ-ಕನ್ನಿಕಾ ಸೈಲೆಂಟ್ ಆಗಿ ಏನೋ ಸ್ಕೆಚ್ ಹಾಕುವಂತಿದೆ. ಅವರೇನು ಮಾಡುತ್ತಾರೆ? ಎಂಬುದು ನೋಡಬೇಕಿದೆ. ಮತ್ತೊಂದೆಡೆ ಈ ಮದುವೆಗೆ ವೈಷ್ಣವ್ ಬಂದಿದ್ದು ಮುಂದಿನ ಸಂಚಿಕೆಯಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಮಹಾಲಕ್ಷ್ಮೀ ಕೂಡ ಬರಲಿದ್ದಾರೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವ ಭರ್ಜರಿ ಆಗಿ ನಡೆಯುತ್ತಿದೆ. ಎಲ್ಲ ಅಡೆತಡೆ ದಾಟಿ ಭಾಗ್ಯಾ-ಕುಸುಮಾ ಹೇಗಾದರು ಮಾಡಿ ಪೂಜಾ ಮದುವೆ ಮಾಡಿಸಿಯೇ ಬಿಡಬೇಕೆಂದು ಪಣತೊಟ್ಟಿದ್ದಾಳೆ. ಆದರೆ, ಈ ಮದುವೆ ನಿಲ್ಲಿಸಲು ಭಾಗ್ಯ ಮನೆಯವರಿಗೆ ಬರುತ್ತಿರುವ ಸಂಕಷ್ಟ ಒಂದೆರಡಲ್ಲ. ಮೀನಾಕ್ಷಿ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ, ಭಾಗ್ಯ ಪತಿ ತಾಂಡವ್ ಕೂಡ ಹಾಲ್ಗೆ ಬಂದು ಮದುವೆ ನಿಲ್ಲಿಸಲು ಮುಂದಾಗಿದ್ದಾನೆ. ಆದರೆ, ತಾಂಡವ್ಗೆ ರಾಮ್ದಾಸ್ ಕಾಮತ್ ಸರಿಯಾಗಿ ಪಾಠ ಕಲಿಸಿದ್ದಾರೆ.
ಈ ಮದುವೆ ಅದು ಹೇಗೆ ನಡೆಯುತ್ತೆ ಅಂತ ನಾನೂ ನೋಡ್ತೇನೆ ಎಂದು ನಿಲ್ಲಿಸಲು ತಾಂಡವ್ ಹಾಲ್ಗೆ ಬಂದಾಗ ಇದನ್ನು ಗಮನಿಸಿದ ಕುಸುಮಾ, ತಾಂಡವ್ನನ್ನು ಎಳೆದುಕೊಂಡು ಒಂದು ರೂಮ್ಗೆ ಬಂದು ಹೊರಟು ಹೋಗು ಇಲ್ಲಿಂದ ಎಂದಿದ್ದಾಳೆ. ಇದಕ್ಕೆ ಒಪ್ಪದಾಗ ವೈಷ್ಣವ್ ಜೊತೆ ಸೇರಿ ಕುಸುಮಾ, ಕಟ್ಟಿ ಹಾಕೋಣ ಅದು ಹೇಗೆ ಮದುವೆ ನಿಲ್ಲಿಸುತ್ತಾನೊ ನಾನು ನೋಡ್ತೇನೆ ಎಂದು ತಾಂಡವ್ನನ್ನು ಕುರ್ಚಿಯಲ್ಲಿ ಬಳ್ಳಿಯಿಂದ ಕಟ್ಟಿ ಹಾಕುತ್ತಾರೆ.
ಆದರೆ, ಭಾಗ್ಯ ಮರುದಿನ ರೂಮ್ ಒಳಗೆ ಬಂದಾಗ ಅಲ್ಲಿ ತಾಂಡವ್ನನ್ನು ಕಟ್ಟಿ ಹಾಕಿರುವುದು ಕಾಣುತ್ತದೆ. ಅಯ್ಯೋ ನಿಮ್ಮನ್ನ ಯಾರು ಕಟ್ಟಿ ಹಾಕಿದ್ದು ಎಂದು ಭಾಗ್ಯ ಬಳ್ಳಿ ಬಿಚ್ಚಿದ್ದಾಳೆ. ಆಗ ತಾಂಡವ್, ನನ್ನನ್ನೆ ಕಟ್ಟು ಹಾಕೋಕೆ ಹೇಳ್ತೀಯಾ..?. ಇದೆಲ್ಲ ನಿನ್ನದೆ ನಾಟಕ ಅಂತ ಗೊತ್ತು ನನ್ಗೆ.. ಯಾವುದೇ ಕಾರಣಕ್ಕೂ ಈ ಮದುವೆ ಆಗಲು ನಾನು ಬಿಡುವುದಿಲ್ಲ ಎಂದು ತಾಂಡವ್ ಮಂಟಪದ ಕಡೆ ಬಂದು ರಾಮ್ದಾಸ್ ಬಳಿ ಭಾಗ್ಯ ಸರಿ ಇಲ್ಲ.. ಆಕೆ ನನ್ನ ಲೈಫ್ ಅನ್ನೇ ಹಾಳು ಮಾಡಿದಳು.. ಆಕೆಯಿಂದಲೇ ನಾನು ಇಂದು ಈ ಪರಿಸ್ಥಿತಿಯಲ್ಲಿದ್ದೇನೆ.. ನನ್ನ ಅಪ್ಪ-ಅಮ್ಮನನ್ನು ನನ್ನಿಂದ ದೂರು ಮಾಡಿದ ಮನೆಹಾಳಿ ಆಕೆ.. ಕಿಶನ್ ಜೊತೆ ಪೂಜಾನ ಮದುವೆ ಮಾಡಿಸಿದ್ರೆ ನಿಮ್ಮ ಕುಟುಂಬ ಒಡೆಯೋದು ಗ್ಯಾರೆಂಟಿ ಎಂದು ಹೇಳಿದ್ದಾನೆ.
ಇದನ್ನೆಲ್ಲ ಕೇಳಿದ ರಾಮ್ದಾಸ್ ಕಾಮತ್, ಭಾಗ್ಯಾಳನ್ನು ಕರೆದಿದ್ದಾಳೆ.. ತಾಂಡವ್ ಹೇಳಿದ್ದನ್ನೆಲ್ಲ ನಾನು ಕೇಳಿಸಿದೆ.. ಈ ಮದುವೆ ನಡೆಯಲು ಸಾಧ್ಯವಿಲ್ಲ.. ಕ್ಯಾನ್ಸಲ್ ಮಾಡೋಣ ಎಂದಿದ್ದಾರೆ. ಇದನ್ನ ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಭಾಗ್ಯ ಹಾಗೂ ಕುಸುಮಾ ರಾಮ್ದಾಸ್ ಅವರನ್ನು ಎಷ್ಟೇ ಕನ್ವೆನ್ಸ್ ಮಾಡಲು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಮದುವೆ ಕ್ಯಾನ್ಸನ್ ಎಂದೊಡನೆ ಖುಷಿಯಾದ ತಾಂಡವ್ ಹಾಲ್ನಲ್ಲಿದ್ದ ಎಲ್ಲರ ಬಳಿ ಹೋಗಿ ಈ ಮದುವೆ ನಿಂತಿದೆ ಮನೆಗೆ ಹೋಗಿ ಎಲ್ಲರೂ ಅಂದಿದ್ದಾನೆ.. ಅಲ್ಲದೆ ಅಡುಗೆ ಮನೆಗೆ ಹೋಗಿ ಅಡುಗೆ ಯಾವುದೂ ಮಾಡೋದು ಬೇಡ ಈ ಮದುವೆ ಕ್ಯಾನ್ಸನ್ ಆಗಿದೆ ಎಂದಿದ್ದಾನೆ.
ಆದರೆ, ಅವರು ಯಾರೂ ಕೂಡ ತಾಂಡವ್ ಹೇಳಿದ ಮಾತಿಗೆ ಕಿಂಚಿತ್ತು ಬೆಲೆ ಕೊಡುವುದಿಲ್ಲ.. ಅವರೆಲ್ಲ ತಮ್ಮ ಕೆಲಸ ಮುಂದುವರೆಸಿದ್ದಾರೆ. ಇದರಿಂದ ಕೋಪಗೊಂಡ ತಾಂಡವ್, ಪುನಃ ರಾಮ್ದಾಸ್ ಬಳಿ ಬಂದು ಈ ಮದುವೆ ನಿಂತಿದೆ ಅಂತ್ರ ಹೇಳಿದ್ರೆ ಯಾರೂ ನಂಬುತ್ತಿಲ್ಲ ಎಂದಿದ್ದಾನೆ. ಆಗ ರಾಮ್ದಾಸ್, ಈಗ ಗೊತ್ತಾಯಿತಾ?, ನಿನ್ನ ಮಾತನ್ನ ಅವರೇ ನಂಬುತ್ತಿಲ್ಲ.. ಇನ್ನು ನಾನು ನಂಬಬೇಕಾ?, ನಿನ್ನ ಮಾತು ಕೇಳಿ ಈ ಮದುವೆ ನಾನು ಕ್ಯಾನ್ಸಲ್ ಮಾಡಬೇಕಾ.. ಭಾಗ್ಯ ಎಷ್ಟು ಒಳ್ಳೆಯ ಗುಣದವಳು ಅಂತ ನಿನಗಿಂತ ಚೆನ್ನಾಗಿ ನನಗೆ ಗೊತ್ತು ಎಂದು ತಾಂಡವ್ನ ಕೆನ್ನೆಗೆ ಬಾರಿಸಿದ್ದಾರೆ.
ಅಷ್ಟೇ ಅಲ್ಲದೆ ಸೆಕ್ಯುರಿಟಿ ಅವರನ್ನ ಕರೆದು ತಾಂಡವ್ನನ್ನು ಎಳೆದುಕೊಂಡು ಹೋಗಿ ಹೊರದಬ್ಬಿದ್ದಾರೆ. ಆದರೆ, ಈ ವಿಚಾರ ಯಾವುದು ಆದೀಶ್ವರ್ಗೆ ತಿಳಿದಿಲ್ಲ.. ಸದ್ಯ ಮದುವೆ ನಿಲ್ಲಿಸುವ ತಾಂಡವ್ ಪ್ಲ್ಯಾನ್ ಫ್ಲಾಪ್ ಆಗಿದೆ. ಅತ್ತ ಮೀನಾಕ್ಷಿ-ಕನ್ನಿಕಾ ಸೈಲೆಂಟ್ ಆಗಿ ಏನೋ ಸ್ಕೆಚ್ ಹಾಕುವಂತಿದೆ. ಅವರೇನು ಮಾಡುತ್ತಾರೆ? ಎಂಬುದು ನೋಡಬೇಕಿದೆ. ಮತ್ತೊಂದೆಡೆ ಈ ಮದುವೆಗೆ ವೈಷ್ಣವ್ ಬಂದಿದ್ದು ಮುಂದಿನ ಸಂಚಿಕೆಯಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಮಹಾಲಕ್ಷ್ಮೀ ಕೂಡ ಬರಲಿದ್ದಾರೆ.
Kiran Raj: ಕರ್ಣ ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ಕಿರಣ್ ರಾಜ್ ಬ್ಯುಸಿ