Bhagya Lakshmi Serial: ಭಾಗ್ಯ ಮೇಲೆ ಮತ್ತೊಂದು ಕಥೆ ಕಟ್ಟಿದ ಕನ್ನಿಕಾ: ನಂಬಿಯೇ ಬಿಟ್ಟ ಆದೀಶ್ವರ್
ಸದ್ಯ ಕನ್ನಿಕಾ ಕಟ್ಟಿರುವ ಮತ್ತೊಂದು ಸುಳ್ಳಿನ ಕಥೆಯನ್ನೂ ಆದೀಶ್ವರ್ ನಂಬಿದ್ದಾನೆ. ಆ ಭಾಗ್ಯಾಗೆ ಈ ಆಸ್ತಿಯಲ್ಲಿ ಒಂದು ಪೈಸೆ ಕೂಡ ಸಿಗದ ಹಾಗೆ ನಾನು ಮಾಡ್ತೇನೆ ಎಂದು ಹೇಳಿದ್ದಾನೆ. ಮತ್ತೊಂದೆಡೆ ಎರಡೂ ಮನೆಯಲ್ಲಿ ಎಂಗೇಜ್ಮೆಂಟ್ ಕಾರ್ಯ ಶುರುವಾಗಿದೆ. ಇದನ್ನ ನಿಲ್ಲಿಸಲು ಕನ್ನಿಕಾ-ಆದೀ ಪ್ಲ್ಯಾನ್ ಮಾಡುವುದು ಖಚಿತ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆ ತಡೆಯಲು ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಳೆ. ಮುಖ್ಯವಾಗಿ ಭಾಗ್ಯ ಈ ಮನೆಯ ಸಂಬಂಧಿ ಆಗಬಾರದು ಎಂಬ ಹಠ ಕನ್ನಿಕಾಗೆ ಇದ್ದು, ಈ ಮದುವೆ ಮುರಿಯಲು ಆದೀಶ್ವರ್ನ ಸಹಾಯ ತೆಗೆದುಕೊಂಡು ನಾನಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಆದರೆ, ಇದರಲ್ಲಿ ಮೊದಲ ಪ್ಲ್ಯಾನ್ ಫ್ಲಾಫ್ ಆಗಿದೆ. ಹಣದಿಂದ ಏನು ಬೇಕಾದರು ಕೊಂಡುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದ ಕನ್ನಿಕಾ- ಆದೀಶ್ವರ್ನ ಮೈಚಳಿ ಬಿಡಿಸಿದ್ದಾಳೆ ಭಾಗ್ಯ. ತನ್ನ ಮೇಲೆ ಹಣದ ಮಳೆ ಸುರಿಸಿದ ಆದೀಗೆ ಅದೇ ಹಣವನ್ನು ವಾಪಾಸ್ ಕೊಟ್ಟು ಬುದ್ದಿ ಹೇಳಿದ್ದಾಳೆ.
ಆದೀಶ್ವರ್ ಭಾಗ್ಯಾಗೆ ಕಾಲ್ ಮಾಡಿ ಒಂದು ಸ್ಥಳಕ್ಕೆ ಬಂದು ನನ್ನನ್ನ ಒಮ್ಮೆ ಭೇಟಿ ಮಾಡಿ ಎಂದು ಹೇಳಿರುತ್ತಾನೆ. ಅದರಂತೆ ಭಾಗ್ಯ ಅಲ್ಲಿಗೆ ಹೋದ ಕೂಡಲೇ ಒಂದು ಸ್ಯೂಟ್ ಕೇಸ್ ತೆರೆದು ಅದರಲ್ಲಿದ್ದ ದುಡ್ಡನ್ನು ಭಾಗ್ಯಾಳ ಮೈಮೇಲೆ ಸುರಿದು ಪೂಜಾ-ಕಿಶನ್ ಮದವೆಯನ್ನು ನಿಲ್ಲಿಸಬೇಕು ಎಂದು ಆದೀ ಹೇಳುತ್ತಾನೆ. ಇಷ್ಟು ಹಣ ಸಾಕಾಗಿಲ್ಲ ಅಂತ ಅಂದ್ರೆ ಹೇಳು ಇನ್ನೂ ಹಣ ಕೊಡುತ್ತೇನೆ ಎಂದು ಹೇಳುತ್ತಾನೆ. ಇದರಿಂದ ಭಾಗ್ಯಾಗೆ ಕೋಪ ಬರುತ್ತದೆ.
ಈ ದುಡ್ಡಲ್ಲಿ ನನ್ನ ಸ್ವಾಭಿಮಾನ ಕೊಂಡುಕೊಳ್ಳೋಕೆ ಆಗುತ್ತಾ?, ನಾವು ಮಿಡಲ್ ಕ್ಲಾಸ್ ಪೀಪಲ್ ಆಗಿರಬಹುದು.. ಕಷ್ಟ ಪಟ್ಟು ಕೆಲಸ ಮಾಡುತ್ತೇವೆ.. ನಿಮ್ಮಂತವರನ್ನು ಸರ್.. ಬಾಸ್ ಅಂತನೂ ಕರಿತೇವೆ.. ಹಾಗಂದ ಮಾತ್ರಕ್ಕೆ ನಮ್ಮನ್ನ ನಾವು ದುಡ್ಡಿಗೆ ಮಾರ್ಕೊಳ್ಳುತ್ತೇವೆ ಎಂದರ್ಥ ಅಲ್ಲ.. ನಾನು ಮಿಡಲ್ ಕ್ಲಾಸ್ ಫ್ಯಾಮಿಲಿಯವಳೇ ಆದ್ರೆ ದುಡ್ಡಿಗೆ ಕೈಚಾಚುವವಳಂತು ಖಂಡಿತಾ ಅಲ್ಲ.. ಕೈಚಾಚಿ ಹಣ ಪಡೆಯುವ ಫ್ಯಾಮಿಲಿಯಿಂದ ನಾನು ಬಂದಿಲ್ಲ. ನನ್ನಂತ ಎಷ್ಟೋ ಜನರನ್ನು ನೀವು ಲೈಫ್ನಲ್ಲಿ ನೋಡಿರಬಹುದು ಆದರೆ, ನನ್ನನ್ನ ನೋಡಿರಲ್ಲ.. ಕಿಶನ್ ಪೂಜಾ ಮೇಲೆ ತೋರಿಸುತ್ತಿರುವ ಪ್ರೀತಿಗೆ ಈ ಸಂಬಂಧ ಹುಟ್ಟಿದ್ದೇ ಹೊರತು ಈ ದುಡ್ಡಿಗಾಗಿ ಅಲ್ಲ ಎಂದು ಖಡಕ್ ಆಗಿ ಹೇಳಿದ್ದಾಳೆ.
ಬಳಿಕ ಆದೀಶ್ವರ್ ಹಣವನ್ನು ಹಿಡಿದುಕೊಂಡು ವಾಪಾಸ್ ಮನೆಗೆ ಬಂದಿದ್ದಾನೆ. ಈ ಸಂದರ್ಭ ರಾಮ್ದಾಸ್ ಬಳಿ ಕನ್ನಿಕಾ ಭಾಗ್ಯ ಕೆಟ್ಟವಳೆಂದು ಸುಳ್ಳು ಹೇಳುತ್ತಾ ಇರುತ್ತಾಳೆ. ಇದೇ ಸಂದರ್ಭ ಅಲ್ಲಿಗೆ ಆದೀ ಬರುತ್ತಾನೆ. ಅಪ್ಪನ ಹತ್ರ ಹೇಳು ಆದೀ ಹಣವನ್ನೆಲ್ಲ ಭಾಗ್ಯ ತೆಗೊಂಡ್ಳು ಅಂತ ಹೇಳು ಎಂದು ಕನ್ನಿಕಾ ಹೇಳುತ್ತಾಳೆ. ಆಗ ರಾಮ್ದಾಸ್, ಭಾಗ್ಯ ಖಂಡಿತಾ ಆ ಹಣ ತೆಗೆದುಕೊಂಡಿರಲ್ಲ.. ಭಾಗ್ಯ ಎಲ್ಲರಂತಲ್ಲ ಶ್ರಮದ ಶ್ರೀಮಂತಿಕೆ ಇರುವವರ ಹತ್ರ ದುಡ್ಡಿನ ಶ್ರೀಮಂತಿಕೆ ಆಟ ಯಾವತ್ತೂ ನಡೆಯಲ್ಲ.. ನೀವು ತಪ್ಪು ತಿಳಿದುಕೊಂಡಿದ್ದೀರಿ ಅವಳ ಮೇಲೆ ಎಂದು ಹೇಳಿ ಹೋಗುತ್ತಾರೆ.
ಇದಾದ ಬಳಿಕ ಆದೀ ಒಬ್ಬನೆ ಕೂತು ನಾನೇ ಭಾಗ್ಯ ಬಗ್ಗೆ ತಪ್ಪು ತಿಳಿದಿರಬಹುದಾ? ಆಕೆ ಒಳ್ಳೆಯವಳಾಗಿರಬಹುದಾ ಎಂದು ಯೋಚನೆ ಮಾಡುತ್ತಾನೆ. ಆಗ ಕನ್ನಿಕಾ ಬಂದು ಆ ಭಾಗ್ಯ ಒಳ್ಳೆಯವಳಲ್ಲ.. ಅವಳದ್ದು ಬೇರೆ ಏನೋ ಪ್ಲ್ಯಾನ್ ಇದೆ.. ಬಹುಶಃ ಹಣ ತೆಗೆದುಕೊಂಡರೆ ಸ್ವಲ್ಪ ಸಿಗೋದು ಅದೇ ತಂಗಿ ಈ ಮನೆಗೆ ಸೊಸೆಯಾಗಿ ಬಂದರೆ ಈ ಎಲ್ಲ ಆಸ್ತಿಯನ್ನು ನಮ್ಮದು ಮಾಡಬಹುದು ಎಂಬ ಪ್ಲ್ಯಾನ್ ಭಾಗ್ಯಾಳದ್ದು ಎಂದು ಕನ್ನಿಕಾ ಆದೀ ಬಳಿ ಮತ್ತೊಂದು ಕಥೆ ಕಟ್ಟಿದ್ದಾಳೆ. ಅವಳಿಗೆ ದುರಾಸೆ ಜಾಸ್ತಿ.. ನೀನು ಕೊಟ್ಟ ಹಣ ತೆಗೆದುಕೊಂಡ್ರೆ ಅದು ಅಲ್ಲಿಗೆ ಕೊನೆಯಾಗುತ್ತಿತ್ತು.. ಅದೇ ಪೂಜಾಳ ಮದುವೆ ಆದ್ರೆ ಅವಳು ನಮ್ಮ ಮನೆಗೆ ಬರುತ್ತಾಳೆ.. ಅವಳ ಮೂಲಕ ನಮ್ಮ ಮನೆ, ಪ್ರಾಪರ್ಟಿ ಮೇಲೆ ಕಂಟ್ರೋಲ್ ತೆಗಳೋಕೆ ಚಾನ್ಸ್ ಸಿಗುತ್ತೆ ಇದೇ ಅವಳ ಪ್ಲ್ಯಾನ್ ಎಂದು ಆದೀಶ್ವರ್ ಅನ್ನು ಕನ್ನಿಕಾ ನಂಬಿಸುತ್ತಾಳೆ.
ಸದ್ಯ ಕನ್ನಿಕಾ ಕಟ್ಟಿರುವ ಮತ್ತೊಂದು ಸುಳ್ಳಿನ ಕಥೆಯನ್ನೂ ಆದೀಶ್ವರ್ ನಂಬಿದ್ದಾನೆ. ಆ ಭಾಗ್ಯಾಗೆ ಈ ಆಸ್ತಿಯಲ್ಲಿ ಒಂದು ಪೈಸೆ ಕೂಡ ಸಿಗದ ಹಾಗೆ ನಾನು ಮಾಡ್ತೇನೆ ಎಂದು ಹೇಳಿದ್ದಾನೆ. ಮತ್ತೊಂದೆಡೆ ಎರಡೂ ಮನೆಯಲ್ಲಿ ಎಂಗೇಜ್ಮೆಂಟ್ ಕಾರ್ಯ ಶುರುವಾಗಿದೆ. ಇದನ್ನ ನಿಲ್ಲಿಸಲು ಕನ್ನಿಕಾ-ಆದೀ ಪ್ಲ್ಯಾನ್ ಮಾಡುವುದು ಖಚಿತ. ಆದ್ರೆ, ಇದನ್ನೆಲ್ಲ ಭಾಗ್ಯ ಹೇಗೆ ಎದುರಿಸುತ್ತಾಳೆ?, ಕನ್ನಿಕಾಗೆ ಯಾವರೀತಿ ಬುದ್ದಿ ಕಲಿಸುತ್ತಾಳೆ ಎಂಬುದು ನೋಡಬೇಕಿದೆ.
Karna Serial: ಕರ್ಣ ಧಾರಾವಾಹಿ ಬಗ್ಗೆ ಹೊರಬಿತ್ತು ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ