Karna Serial: ಭವ್ಯಾ ಗೌಡ ಬಳಿಕ ಕರ್ಣ ಧಾರಾವಾಹಿಗೆ ಎರಡನೇ ಹೀರೋಯಿನ್ ಎಂಟ್ರಿ: ಯಾರು ನೋಡಿ
ಕರ್ಣ ಸೀರಿಯಲ್ನಲ್ಲಿ ಇಬ್ಬರು ನಾಯಕಿಯರು ಇರ್ತಾರೆ ಎಂದು ಸುದ್ದಿ ಹರಿದಾಡಿದೆ. ಇದೀಗ ಮತ್ತೊಬ್ಬ ನಾಯಕಿ ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ ಎಂದು ಹೇಳಲಾಗಿದೆ. ಹೌದು, ಕರ್ಣನಿಗೆ ರಂಜನಿ ರಾಘವನ್.. ಇಲ್ಲ ಮೋಕ್ಷಿತಾ ಪೈ ಬರಬೇಕು ಅಂತ ಫ್ಯಾನ್ಸ್ ಆಸೆ ಪಟ್ಟಿದ್ದರು. ಇವರು ಇಬ್ಬರೂ ಅಲ್ಲ. ಕರ್ಣನಿಗೆ ಜೋಡಿಯಾಗಿ ಮತ್ತೆ ಬಣ್ಣ ಹಚ್ಚುತಿದ್ದಾರೆ ನಟಿ ನಮ್ರತಾ.

Namrtha Gowda Karna Serial

ಝೀ ಕನ್ನಡ ವಾಹಿನಿ ಕರ್ಣ (Karna Serial) ಎಂಬ ಹೊಸ ಧಾರಾವಾಹಿಯೊಂದನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಕಿರಣ್ ರಾಜ್ ಈ ಧಾರಾವಾಹಿಯ ನಾಯಕನಾಗಿದ್ದಾರೆ. ಡಾಕ್ಟರ್ ಕರ್ಣ ಆಗಿ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಕಿರಣ್ ರಾಜ್ ಬರುತ್ತಿದ್ದಾರೆ. ಈಗಾಗಲೇ ಕರ್ಣ ಧಾರಾವಾಹಿಯ ಮೊದಲ ಪ್ರೋಮೋ ಎಲ್ಲೆಡೆ ವೈರಲ್ ಆಗಿದ್ದು, ಧಾರಾವಾಹಿಯ ಒನ್ ಲೈನ್ ಕಥೆ ಏನು ಎನ್ನುವುದು ಪ್ರೇಕ್ಷಕರಿಗೆ ತಿಳಿದು ಹೋಗಿದೆ. ಈ ಧಾರಾವಾಹಿಯ ಹೀರೋಯಿನ್ ಯಾರೂ ಎಂಬುದು ತಂಡ ಈವರೆಗೆ ಅಧಿಕೃತವಾಗಿ ರಿವೀಲ್ ಮಾಡಿಲ್ಲ.
ಆದರೆ ಮೊನ್ನೆಯಷ್ಟೆ ಕರ್ಣನಿಗೆ ಜೋಡಿ ಯಾರು ಎಂಬ ವಿಚಾರ ಬಹಿರಂಗವಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಲೀಕ್ ಆಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಭವ್ಯಾ ಗೌಡ ಈ ಧಾರಾವಾಹಿ ಮೂಲಕ ಮತ್ತೆ ತೆರೆಮೇಲೆ ಬರಲಿದ್ದಾರೆ. ಈ ಮೂಲಕ ಬಿಗ್ ಬಾಸ್ ಮುಗಿದು ಎರಡು ತಿಂಗಳ ಬಳಿಕ ಭವ್ಯಾ ಹೊಸ ಕರ್ಣ ಸೀರಿಯಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೋ ಚಿತ್ರೀಕರಣದ ವಿಡಿಯೋ ಕ್ಲಿಪ್ವೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು. ಇದೀಗ ಹೊಸ ಸುದ್ದಿ ಏನಂದ್ರೆ ಈ ಧಾರಾವಾಹಿಗೆ ಎರಡನೇ ಹೀರೋಯಿನ್ ಇದ್ದಾರಂತೆ.
ಈ ಸೀರಿಯಲ್ನಲ್ಲಿ ಇಬ್ಬರು ನಾಯಕಿಯರು ಇರ್ತಾರೆ ಎಂದು ಸುದ್ದಿ ಹರಿದಾಡಿದೆ. ಇದೀಗ ಮತ್ತೊಬ್ಬ ನಾಯಕಿ ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ ಎಂದು ಹೇಳಲಾಗಿದೆ. ಹೌದು, ಕರ್ಣನಿಗೆ ರಂಜನಿ ರಾಘವನ್.. ಇಲ್ಲ ಮೋಕ್ಷಿತಾ ಪೈ ಬರಬೇಕು ಅಂತ ಫ್ಯಾನ್ಸ್ ಆಸೆ ಪಟ್ಟಿದ್ದರು. ಇವರು ಇಬ್ಬರೂ ಅಲ್ಲ. ಕರ್ಣನಿಗೆ ಜೋಡಿಯಾಗಿ ಮತ್ತೆ ಬಣ್ಣ ಹಚ್ಚುತಿದ್ದಾರೆ ನಟಿ ನಮ್ರತಾ. ನಾಗಿಣಿ ಸೀರಿಯಲ್ ಮೂಲಕ ಸೂಪರ್ ಸಕ್ಸಸ್ ಕಂಡಿದ್ದ ನಟಿ, ಅಲ್ಲಿಂದ ಬಿಗ್ ಬಾಸ್ನತ್ತ ಮುಖ ಮಾಡಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸದ್ದು ಮಾಡಿದ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿರಲಿಲ್ಲ ನಮ್ರತಾ. ಇದೀಗ ಕರ್ಣ ಧಾರಾವಾಹಿ ಮೂಲಕ ಮತ್ತೆ ಕಮ್ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ, ಇದರಲ್ಲಿ ಇವರ ಪಾತ್ರ ಏನು? ಎಂಬುದು ಇನ್ನಷ್ಟೆ ಬಹಿರಂಗವಾಗಬೇಕಿದೆ.
Aishwarya-Shishir: ರಾಮನವಮಿಗೆ ಗುಡ್ ನ್ಯೂಸ್ ಕೊಟ್ಟ ಐಶ್ವರ್ಯಾ-ಶಿಶಿರ್: ಇನ್ಸ್ಟಾದಲ್ಲಿ ಅನೌನ್ಸ್
ಶ್ರುತಿ ನಾಯ್ಡು ನಿರ್ಮಾಣದ ಕರ್ಣ ಸೀರಿಯಲ್ನಲ್ಲಿ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಶ್ಯಾಮ್ ಸಿಮ್ರನ್, ವರಲಕ್ಷ್ಮೀ ಶ್ರೀನಿವಾಸ್ ಮುಂತಾದವರು ನಟಿಸಲಿದ್ದಾರೆ. ಈ ಧಾರಾವಾಹಿಯಲ್ಲಿ ಕರ್ಣ (ಕಿರಣ್ ರಾಜ್) ಪ್ರಶಸ್ತಿ ಪುರಸ್ಕೃತ ಸ್ತ್ರೀರೋಗ ತಜ್ಞನಾಗಿದ್ದಾನೆ. ಆದರೆ, ಈತ ತನ್ನದೇ ಮನೆಯಲ್ಲಿ ಅನಾಥನಂತೆ ಬದುಕುತ್ತಿರುತ್ತಾನೆ. ಹೊರಗಿನ ಪ್ರಪಂಚಕ್ಕೆ ಜನಪ್ರಿಯ ಡಾಕ್ಟರ್ ಆಗಿದ್ದರೂ ಕೂಡ ಮನೆಯಲ್ಲಿ ಮಾತ್ರ ಕೆಲಸಗಾರನಂತೆ ಇರುತ್ತಾನೆ. ಮನೆಯ ಎಲ್ಲಾ ಸದಸ್ಯರ ಕೆಲಸವನ್ನು ತಾನೇ ಮಾಡುವ ಕರ್ಣ ಅಮ್ಮ, ಅಜ್ಜಿಯ ಪಾಲಿಗೆ ಮುದ್ದಿನ ಮಗ. ಎಲ್ಲ ನೋವನ್ನು ನುಂಗುತ್ತಾ, ಕಷ್ಟಗಳನ್ನು ಎದುರಿಸುವುದೇ ಈ ಧಾರಾವಾಹಿಯ ಕಥಾ ವಸ್ತು. ಸದ್ಯ ಭವ್ಯಾ ಹಾಗೂ ನಮ್ರತಾ ನಾಯಕಿಯರು ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಷ್ಟೆ ಹರಿದಾಡುತ್ತಿದೆ. ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.