ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಿರುವನಂತಪುರದಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವು: ಅಭಿನಂದಿಸಿ ಮೇಯರ್‌ಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ

BJP’s victory in Thiruvananthapuram: ಕೇರಳದ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮೇಯರ್ ವಿ.ವಿ. ರಾಜೇಶ್ ಅವರಿಗೆ ಅಭಿನಂದನಾ ಪತ್ರ ಬರೆದಿದ್ದಾರೆ. ಉಪ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಜಿ.ಎಸ್. ಆಶಾನಾಥ್ ಅವರಿಗೆ ಕೂಡ ಶುಭಾಶಯ ತಿಳಿಸಿದ್ದಾರೆ.

ತಿರುವನಂತದ ಮೊದಲ ಬಿಜೆಪಿ ಮೇಯರ್‌ಗೆ ಪತ್ರ ಬರೆದ ಪ್ರಧಾನಿ ಮೋದಿ

ನರೇಂದ್ರ ಮೋದಿ ಮತ್ತು ವಿ.ವಿ. ರಾಜೇಶ್ (ಸಂಗ್ರಹ ಚಿತ್ರ) -

Priyanka P
Priyanka P Jan 1, 2026 8:58 PM

ತಿರುವನಂತಪುರ, ಜ. 1: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಬಿಜೆಪಿ ನಾಯಕ ಮತ್ತು ತಿರುವನಂತಪುರ ಕಾರ್ಪೊರೇಷನ್‌ನ ಮೇಯರ್ ವಿ.ವಿ. ರಾಜೇಶ್ ಅವರಿಗೆ ಪತ್ರ ಬರೆದಿದ್ದಾರೆ. ಕೇರಳದಲ್ಲಿ ಬಿಜೆಪಿಯನ್ನು (Kerala BJP) ಅಧಿಕಾರಕ್ಕೆ ತರಲು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಉಪಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಜಿ.ಎಸ್. ಆಶಾನಾಥ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

ರಾಜೇಶ್ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಈ ಮನ್ನಣೆ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನು ಕೇರಳದ ಜನರಿಗೆ ಹೊಸ ವರ್ಷದ ಉಡುಗೊರೆ ಎಂದು ಕರೆದಿದ್ದಾರೆ. ''ಈ ಮನ್ನಣೆಯು ಗೌರವಾನ್ವಿತ ಪ್ರಧಾನಮಂತ್ರಿ ಕೇರಳಕ್ಕೆ ನೀಡಿದ ಹೊಸ ವರ್ಷದ ಉಡುಗೊರೆ. ತಿರುವನಂತಪುರದಲ್ಲಿನ ರಾಜಕೀಯ ಬದಲಾವಣೆಯು ಕೇರಳದ ಬಿಜೆಪಿ ಕಾರ್ಯಕರ್ತರ ದಶಕಗಳ ಕಠಿಣ ಪರಿಶ್ರಮದ ಫಲಿತಾಂಶ. ಈ ಮನ್ನಣೆಯು ಮೋದಿ ಕೇರಳಕ್ಕೆ ನೀಡಿದ ಹೊಸ ವರ್ಷದ ಕೊಡುಗೆʼʼ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೋದಿ ಬರೆದ ಪತ್ರ:



ʼʼಯುಡಿಎಫ್ ಮತ್ತು ಎಲ್‌ಡಿಎಫ್‌ನ ಕಳಪೆ ಆಡಳಿತದ ಮಧ್ಯೆ ಪ್ರತಿಕೂಲ ಪರಿಸ್ಥಿತಿ ಮತ್ತು ಹಿಂಸಾಚಾರದ ನಡುವೆಯೂ ಬಿಜೆಪಿ ಕಾರ್ಯಕರ್ತರು ನಿಜವಾಗಿಯೂ ಶ್ರಮಿಸಿದ್ದಾರೆʼʼ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.

ʼʼಹಬ್ಬದ ವಾತಾವರಣದ ನಡುವೆ ನಾವು 2026ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ನೀವು ನಗರ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗ ಮತ್ತು ಜಿ.ಎಸ್. ಆಶಾನಾಥ್ ಉಪಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗ, ತಿರುವನಂತಪುರ ಎಂಬ ಮಹಾನಗರದಲ್ಲಿ ಇತಿಹಾಸ ನಿರ್ಮಾಣವಾಯಿತು. ಇದಕ್ಕಾಗಿ ನಿಮಗೂ ಆಶಾ ಅವರಿಗೂ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಲವು ದಶಕಗಳಿಂದ ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರು ಕಠಿಣ ಮಾರ್ಗದಲ್ಲಿ ನಡೆದುಕೊಂಡು ಬಂದಿದ್ದಾರೆ. ರಾಜ್ಯದ ರಾಜಕೀಯವನ್ನು ಎಲ್‌ಡಿಎಫ್ ಮತ್ತು ಯುಡಿಎಫ್ ಆಳುತ್ತಿದ್ದು, ಅವರ ದುರ್ಬಲ ಆಡಳಿತದ ದಾಖಲೆಯನ್ನು ಎಲ್ಲರೂ ನೋಡಬಹುದುʼʼ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಗಂಡನ ಜತೆ ಮಲಗಲು, ಮಕ್ಕಳನ್ನು ಹೆರಲು ಮಹಿಳೆಯರು ಮನೆಯಲ್ಲೇ ಇರಲಿ; ನಾಲಗೆ ಹರಿಬಿಟ್ಟ ಸಿಪಿಎಂ ನಾಯಕನ ವಿರುದ್ಧ ಆಕ್ರೋಶ

ʼʼಎಲ್‌ಡಿಎಫ್‌ ಮತ್ತು ಯುಡಿಎಫ್‌ ಕೇರಳದ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿರುವ ಭ್ರಷ್ಟಾಚಾರ ಮತ್ತು ಕ್ರೂರ ಹಿಂಸಾಚಾರದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದಿವೆ. ಆದರೂ ಪ್ರತಿಕೂಲತೆ, ವೈರಾಗ್ಯ ಹಾಗೂ ಕ್ರೂರ ಹಿಂಸೆಯ ನಡುವೆಯೂ ನಮ್ಮ ಕಾರ್ಯಕರ್ತರು ದೃಢವಾಗಿ ನಿಂತಿದ್ದಾರೆ. ದೆಹಲಿಯಲ್ಲಿ ಸ್ನೇಹಿತರು ಮತ್ತು ಕೇರಳದಲ್ಲಿ ಪ್ರತಿಸ್ಪರ್ಧಿಗಳು ಎನ್ನುವ ಎಲ್‌ಡಿಎಫ್–ಯುಡಿಎಫ್‌ಗಳ ಪಂದ್ಯವು ಶೀಘ್ರದಲ್ಲೇ ಅಂತ್ಯಗೊಳ್ಳಲಿದೆʼʼ ಎಂದು ಮೋದಿ ಬರೆದಿದ್ದಾರೆ.

ತಿರುವನಂತಪುರ ಕಾರ್ಪೊರೇಷನ್‌ನಲ್ಲಿ ಬಿಜೆಪಿಯ ಅದ್ಭುತ ಪ್ರದರ್ಶನ

ತಿರುವನಂತಪುರ ಕಾರ್ಪೊರೇಷನ್‌ನ ಮೇಯರ್ ಆಗಿ ಬಿಜೆಪಿ ಕೌನ್ಸಿಲರ್ ವಿ.ವಿ. ರಾಜೇಶ್ ಆಯ್ಕೆಯಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಮೇಯರ್ ಹುದ್ದೆಯನ್ನು ಪಡೆದುಕೊಂಡಿರುವುದು ಇದೇ ಮೊದಲು. ಕೊಡಂಗನೂರು ವಾರ್ಡ್ ಅನ್ನು ಪ್ರತಿನಿಧಿಸುವ ಮತ್ತು ಬಿಜೆಪಿಯ ಕೇರಳ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ರಾಜೇಶ್, 50 ಬಿಜೆಪಿ ಕೌನ್ಸಿಲರ್‌ಗಳು ಮತ್ತು ಒಬ್ಬ ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ಚುನಾವಣೆಯಲ್ಲಿ ಗೆದ್ದಿದ್ದಾರೆ.

ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು; ವಿಕಸಿತ ಕೇರಳ ಎಂದ ಮೋದಿ

ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಅಭ್ಯರ್ಥಿ ಆರ್‌.ಪಿ. ಶಿವಾಜಿ 29 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ (ಯುಡಿಎಫ್) ಅಭ್ಯರ್ಥಿ ಕೆ.ಎಸ್. ಶಬರಿನಾಥನ್ ಮೇಯರ್ ಚುನಾವಣೆಯಲ್ಲಿ 17 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.

ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ಪ್ರದರ್ಶನವು ಪಕ್ಷದ ಯಶಸ್ಸನ್ನು ಎತ್ತಿ ಹಿಡಿದಿದೆ. ಕೇಸರಿ ಪಕ್ಷವು 50 ವಾರ್ಡ್‌ಗಳನ್ನು ಗೆದ್ದು, ಕಾರ್ಪೊರೇಷನ್‌ನಲ್ಲಿ ದಶಕಗಳ ಎಡ ಪ್ರಾಬಲ್ಯವನ್ನು ಕೊನೆಗೊಳಿಸಿತು. ಎಲ್‌ಡಿಎಫ್ 29 ವಾರ್ಡ್‌ಗಳನ್ನು ಗೆದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 19 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ತನ್ನ ಅಸ್ತಿತ್ವವನ್ನು ಸುಧಾರಿಸಿಕೊಂಡಿದೆ.