ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ವಿಶಾಖಪಟ್ಟಣದಲ್ಲಿ ಪ್ರಬಲ ಭೂಕಂಪ? ಆತಂಕದಲ್ಲಿ ಜನ! ಅತ್ತ ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ

Earthquake in Andhra Pradesh: ಇಂದು ಆಂಧ್ರಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಿದ್ದಾರೆ. ಹಲವು ಬಳಕೆದಾರರು, ತಮ್ಮ ಪ್ರದೇಶದಲ್ಲಿ ನೆಲ ಕಂಪಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿಯೂ ಪ್ರಬಲ ಭೂಕಂಪನ ಸಂಭವಿಸಿದ್ದು, ಅದರ ಪರಿಣಾಮಗಳು ಸುತ್ತಮುತ್ತಲಿನ ಪ್ರದೇಶಗಳಿಗೂ ತಲುಪಿವೆ. ಅಧಿಕಾರಿಗಳು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಜನರಿಗೆ ಶಾಂತವಾಗಿರಲು ಹಾಗೂ ಅಧಿಕೃತ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲು ಸಲಹೆ ನೀಡಲಾಗಿದೆ.

ವಿಶಾಖಪಟ್ಟಣದಲ್ಲಿ ಭೂಕಂಪ? ವೈರಲ್‌ ಸುದ್ದಿಯ ಅಸಲಿತ್ತೇನು?

ವಿಶಾಖಪಟ್ಟಣದಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ(ಸಾಂದರ್ಭಿಕ ಚಿತ್ರ) -

Priyanka P Priyanka P Nov 4, 2025 11:57 AM

ವಿಶಾಖಪಟ್ಟಣ: ಮಂಗಳವಾರ ಮುಂಜಾನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ ರಾತ್ರಿ ವೇಳೆ ಭೂಕಂಪನದ (Earthquake) ಅನುಭವವಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್‌ನಲ್ಲಿ ಹೇಳಿದ್ದಾರೆ. ರಾತ್ರಿ ವೇಳೆ ಕೆಲವರು ಭೂಕಂಪನವು ಅಲ್ಪಾವಧಿಯದ್ದಾಗಿತ್ತು, ಆದರೆ ಬಲವಾಗಿತ್ತು. ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿತ್ತು ಎಂದು ಹೇಳಿದ್ದಾರೆ. ಸ್ವತಂತ್ರ ಟ್ರ್ಯಾಕಿಂಗ್ ವೆಬ್‌ಸೈಟ್ ವಾಲ್ಕನೋ ಡಿಸ್ಕವರಿ ವಿಶಾಖಪಟ್ಟಣದಲ್ಲಿ ರಾತ್ರಿ 10.49ರ ಸುಮಾರಿಗೆ GMT (IST ಸಮಯ 4.19 am) ಭೂಕಂಪದಂತಹ ಘಟನೆ, ಸಂಭವನೀಯ ಭೂಕಂಪ ಎಂದು ವರದಿ ಮಾಡಿದೆ.

ಆದರೆ ಟ್ರ್ಯಾಕಿಂಗ್ ಸೈಟ್, ಈ ಸಂಭವನೀಯ ಭೂಕಂಪದ ಪ್ರಮಾಣ ಅಥವಾ ಆಳದ ಬಗ್ಗೆ ಇನ್ನೂ ಯಾವುದೇ ವಿವರಗಳಿಲ್ಲ ಎಂದು ಹೇಳಿದೆ. ನೆಟ್ಟಿಗರು ನೀಡಿರುವ ಹೇಳಿಕೆಗಳು, ಸಂಭವನೀಯ ಭೂಕಂಪನ ಚಟುವಟಿಕೆಯ ಸ್ವತಂತ್ರ ವರದಿಗಳ ಹೊರತಾಗಿಯೂ, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದಿಂದ (NCS) ಇನ್ನೂ ಯಾವುದೇ ದೃಢೀಕರಣ ಬಂದಿಲ್ಲ.

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ

ಸೋಮವಾರ ಮುಂಜಾನೆ ಉತ್ತರ ಅಪ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 640 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವು ಮತ್ತು ಗಾಯಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಭೂಕಂಪದ ಕೇಂದ್ರಬಿಂದು ಖುಲ್ಮ್‌ನ ಪಶ್ಚಿಮ-ನೈಋತ್ಯಕ್ಕೆ 22 ಕಿಲೋಮೀಟರ್ (14 ಮೈಲಿ) ದೂರದಲ್ಲಿದ್ದು, ಬೆಳಗ್ಗೆ 12:59ಕ್ಕೆ 28 ಕಿಲೋಮೀಟರ್ (17 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: Air India Plain Crash: ʼಹೆಂಡತಿ, ಮಗುವಿನೊಂದಿಗೂ ಮಾತನಾಡಲಾಗುತ್ತಿಲ್ಲʼ; ಏರ್ ಇಂಡಿಯಾ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿ ಹೇಳಿದ್ದೇನು?

ಭೂಕಂಪದ ಕೇಂದ್ರಬಿಂದುವಿನ ಬಳಿಯಿರುವ ಖುಲ್ಮ್‌ನಲ್ಲಿ, ಕುಸಿದ ಮಣ್ಣಿನ ಇಟ್ಟಿಗೆ ಮನೆಗಳ ಅವಶೇಷಗಳನ್ನು ನಿವಾಸಿಗಳು ಸಲಿಕೆಗಳು ಮತ್ತು ತಮ್ಮ ಕೈಗಳನ್ನು ಬಳಸಿ ವಸ್ತುಗಳನ್ನು ಮರುಪಡೆಯಲು ಹುಡುಕಿದ್ದಾರೆ. ಉತ್ತರ ಬಾಲ್ಖ್ ಪ್ರಾಂತ್ಯದ ರಾಜಧಾನಿ ಮಜಾರ್-ಎ-ಶರೀಫ್‌ನ ಸಾಮಾಜಿಕ ಮಾಧ್ಯಮ ದೃಶ್ಯಗಳಲ್ಲಿ, ಮಸೀದಿಯ ಗೋಡೆಗಳಿಂದ ಕೆಲವು ಇಟ್ಟಿಗೆಗಳು ಬಿದ್ದಿರುವುದನ್ನು ಅಪ್ಲೋಡ್ ಮಾಡಲಾಗಿದೆ. ಶತಮಾನಗಳಷ್ಟು ಹಳೆಯದಾದ ಮಸೀದಿ, ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣವಾಗಿದ್ದು, ಇಸ್ಲಾಮಿಕ್ ಮತ್ತು ಸಾಂಸ್ಕೃತಿಕ ಹಬ್ಬಗಳ ಸಮಯದಲ್ಲಿ ದೊಡ್ಡ ಸಭೆಗಳನ್ನು ಆಯೋಜಿಸುತ್ತದೆ.

ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ದೇಶವಾದ ಅಫ್ಘಾನಿಸ್ತಾನವು, ವಿಶೇಷವಾಗಿ ದೂರದ ಪ್ರದೇಶಗಳಲ್ಲಿನ ನೈಸರ್ಗಿಕ ವಿಕೋಪದಿಂದ ತತ್ತರಿಸಿದೆ ಎಂದು ಹೇಳಲಾಗಿದೆ. ಅನೇಕ ಕಟ್ಟಡಗಳು ಕಡಿಮೆ ಎತ್ತರದ ಕಾಂಕ್ರೀಟ್ ಅಥವಾ ಇಟ್ಟಿಗೆ ರಚನೆಗಳಾಗಿವೆ. ಆದರೆ, ಗ್ರಾಮೀಣ ಮನೆಗಳು ಕಳಪೆಯಾಗಿ ನಿರ್ಮಿಸಲಾದ ಮಣ್ಣಿನ ಇಟ್ಟಿಗೆಗಳು ಮತ್ತು ಮರದಿಂದ ಮಾಡಲ್ಪಟ್ಟಿರುವುದರಿಂದ ಅವು ಭೂಕಂಪಗಳಿಗೆ ಹೆಚ್ಚು ಗುರಿಯಾಗುತ್ತವೆ.

ಇದನ್ನೂ ಓದಿ: Bihar Election ground report by Raghav Sharma Nidle: ಬದಲಾಗದ ನತದೃಷ್ಟ ಮಾಂಜಿಗಳ ಬದುಕು

ಬಾಲ್ಖ್, ಸಮಂಗನ್, ಸರ್-ಎ-ಪುಲ್ ಮತ್ತು ಕುಂದುಜ್ ಪ್ರಾಂತ್ಯಗಳಲ್ಲಿ ಭೂಕಂಪನ ಸಂಭವಿಸಿದ್ದು, 20 ಜನರು ಸಾವನ್ನಪ್ಪಿದ್ದಾರೆ ಮತ್ತು 643 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪ ವಕ್ತಾರ ಖಾರಿ ತಾಜ್ ಮೊಹಮ್ಮದ್ ಹೆಮತ್ ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯ ಸಚಿವಾಲಯದ ವಕ್ತಾರ ಶರಫತ್ ಜಮಾನ್, ಮೃತರನ್ನು ಮತ್ತು 500ಕ್ಕೂ ಹೆಚ್ಚು ಗಾಯಾಳುಗಳನ್ನು ಬಾಲ್ಖ್ ಮತ್ತು ಸಮಂಗನ್ ಪ್ರಾಂತ್ಯಗಳ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು. ರಕ್ಷಣಾ ಕಾರ್ಯಕರ್ತರು ಇನ್ನೂ ಸ್ಥಳದಲ್ಲಿದ್ದಾರೆ ಮತ್ತು ಗಾಯಾಳುಗಳ ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಲೇ ಇವೆ ಎಂದು ಅವರು ಹೇಳಿದರು.