ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿದ್ಯಾರ್ಥಿನಿಯ ಜೀವ ಉಳಿಸಿದ ಇನ್‌ಸ್ಟಾಗ್ರಾಮ್‌! ಹೇಗೆ ಅಂತೀರಾ?

ಉತ್ತರ ಪ್ರದೇಶದ ಬರೇಲಿಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ಮೆಟಾದ ಎಚ್ಚರಿಕೆಯಿಂದಾಗಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಯತ್ನವನ್ನು ಪೊಲೀಸರು ಕೇವಲ 16 ನಿಮಿಷಗಳಲ್ಲಿ ತಡೆದಿದ್ದಾರೆ. ಸಿಬಿ ಗಂಜ್‌ನ ನಿವಾಸಿ ಈ ವಿದ್ಯಾರ್ಥಿನಿ, ಇನ್‌ಸ್ಟಾಗ್ರಾಮ್‌ನಲ್ಲಿ ಕೀಟನಾಶಕ ಬಾಟಲಿಯ ಫೋಟೊದೊಂದಿಗೆ ಆತಂಕಕಾರಿ ಸಂದೇಶವನ್ನು ಪೋಸ್ಟ್ ಮಾಡಿದ್ದಳು. ಈ ಪೋಸ್ಟ್ ಮೆಟಾದ ಆತ್ಮಹತ್ಯೆ ತಡೆಗಟ್ಟುವ ವ್ಯವಸ್ಥೆಯನ್ನು ಸಕ್ರಿಯಗೊಳಿಸಿತು. ತಕ್ಷಣವೇ ಅಧಿಕಾರಿಗಳಿಗೆ ಎಚ್ಚರಿಕೆ ರವಾನೆಯಾಯಿತು.

ಮೆಟಾ ಎಚ್ಚರಿಕೆಯಿಂದ ಉಳಿಯಿತು ಒಂದು ಜೀವ

ಸಾಂದರ್ಭಿಕ ಚಿತ್ರ -

Profile Sushmitha Jain Sep 2, 2025 9:42 PM

ಲಖನೌ: ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareilly) ಸಾಮಾಜಿಕ ಮಾಧ್ಯಮ (Social Media) ವೇದಿಕೆ ಮೆಟಾದ (Meta) ಎಚ್ಚರಿಕೆಯಿಂದಾಗಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಯತ್ನವನ್ನು ಪೊಲೀಸರು ಕೇವಲ 16 ನಿಮಿಷಗಳಲ್ಲಿ ತಡೆದಿದ್ದಾರೆ. ಪಿಟಿಐ ವರದಿಯ ಪ್ರಕಾರ, ಬರೇಲಿಯ ಸಿಬಿ ಗಂಜ್‌ನ ನಿವಾಸಿಯಾದ ಈ ವಿದ್ಯಾರ್ಥಿನಿ, ಇನ್‌ಸ್ಟಾಗ್ರಾಮ್‌ನಲ್ಲಿ ಕೀಟನಾಶಕ ಬಾಟಲಿಯ ಫೋಟೊದೊಂದಿಗೆ ಆತಂಕಕಾರಿ ಸಂದೇಶವನ್ನು ಪೋಸ್ಟ್ ಮಾಡಿದ್ದಳು. ಈ ಪೋಸ್ಟ್ ಮೆಟಾದ ಆತ್ಮಹತ್ಯೆ ತಡೆಗಟ್ಟುವ ವ್ಯವಸ್ಥೆಯನ್ನು ಸಕ್ರಿಯಗೊಳಿಸಿತು, ತಕ್ಷಣವೇ ಅಧಿಕಾರಿಗಳಿಗೆ ಎಚ್ಚರಿಕೆ ರವಾನೆಯಾಯಿತು. ಅವರು ಕೂಡಲೇ ಕ್ರಮ ಕೈಗೊಂಡರು.

ಮಧ್ಯಾಹ್ನ 12:45ಕ್ಕೆ ಉತ್ತರ ಪ್ರದೇಶ ಪೊಲೀಸರ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕಕ್ಕೆ ಎಚ್ಚರಿಕೆ ಬಂದಿತ್ತು. ತಕ್ಷಣ ಕ್ರಮಕ್ಕೆ ಇಳಿದ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ, ಬರೇಲಿ ಜಿಲ್ಲಾ ಪೊಲೀಸರಿಗೆ ವಿದ್ಯಾರ್ಥಿನಿಯ ಸ್ಥಳವನ್ನು ತಕ್ಷಣ ಪತ್ತೆಹಚ್ಚುವಂತೆ ಸೂಚಿಸಿದರು. ಮೆಟಾದ ಮಾಹಿತಿಯ ಆಧಾರದಲ್ಲಿ, ಸ್ಥಳೀಯ ಪೊಲೀಸ್ ತಂಡವು 16 ನಿಮಿಷಗಳಲ್ಲಿ ವಿದ್ಯಾರ್ಥಿನಿಯ ಮನೆಗೆ ತಲುಪಿತು. ಒಬ್ಬ ಸಬ್-ಇನ್‌ಸ್ಪೆಕ್ಟರ್ ಮತ್ತು ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳು ಸ್ಥಳಕ್ಕೆ ಧಾವಿಸಿ, ಅರೆಪ್ರಜ್ಞೆಯಲ್ಲಿದ್ದ ವಿದ್ಯಾರ್ಥಿನಿಯು ಕೀಟನಾಶಕ ಸೇವಿಸಿರುವುದನ್ನು ಕಂಡು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರು.

ಪ್ರಾಥಮಿಕ ತನಿಖೆಯಲ್ಲಿ, ವಿದ್ಯಾರ್ಥಿನಿಯು ತನ್ನ ಪರಿಚಿತನೊಂದಿಗಿನ ಜಗಳದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಆಗಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ. ಕೀಟನಾಶಕವನ್ನು ಆಕೆಯ ತಂದೆ ಕೃಷಿಗಾಗಿ ಮನೆಯಲ್ಲಿ ಇಟ್ಟಿದ್ದರು ಎಂದು ಆಕೆ ತಿಳಿಸಿದಳು. ವಿದ್ಯಾರ್ಥಿನಿಯ ಕುಟುಂಬವನ್ನು ಸಂಪರ್ಕಿಸಲಾಗಿದ್ದು, ಆಕೆ ಈಗ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಘಟನೆ ಬಗ್ಗೆ ಯಾವುದೇ ಪೊಲೀಸ್ ಕೇಸ್ ದಾಖಲಾಗಿಲ್ಲ.

ಈ ಸುದ್ದಿಯನ್ನು ಓದಿ: Viral Video: ಶ್ವಾನದ ಮೈಮೇಲಿನ ರೋಮ ತೆಗೆದು ಟ್ಯಾಟೂ ಹಾಕಿಸಿ ವಿಕೃತಿ ಮೆರೆದ ಮಾಲೀಕ; ಕಠಿಣ ಕ್ರಮಕ್ಕೆ ಆಗ್ರಹ

ಪೊಲೀಸ್ ಅಧಿಕಾರಿಗಳ ಪ್ರಕಾರ, 2022ರಲ್ಲಿ ಮೆಟಾದಲ್ಲಿ ಆರಂಭವಾದ ಈ ಫೀಚರ್‌ 2025ರ ಆಗಸ್ಟ್ ವೇಳೆಗೆ ಉತ್ತರ ಪ್ರದೇಶದಾದ್ಯಂತ 1,315 ಆತ್ಮಹತ್ಯೆ ಯತ್ನಗಳನ್ನು ತಡೆಗಟ್ಟಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಡಿಜಿಟಲ್ ಜಾಗರೂಕತೆ ಮತ್ತು ಯುವಕರಿಗೆ ಮಾನಸಿಕ ಆರೋಗ್ಯದ ಬೆಂಬಲದ ಮಹತ್ವವನ್ನು ಒತ್ತಿಹೇಳಿದೆ.