ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್ ಬಿಕ್ಕಟ್ಟಿನ ನಡುವೆ ರಸಗೊಬ್ಬರ ಪೂರೈಕೆಗೆ ಭಾರತದ ಹೊಸ ಸಮುದ್ರ ಮಾರ್ಗ ಯೋಜನೆ; ಏನಿದು ಕೇಂದ್ರದ ಕಾರ್ಯತಂತ್ರ?

ಹೊರ್ಮುಜ್ ಜಲಸಂಧಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತದ ರಸಗೊಬ್ಬರ ಪೂರೈಕೆ ಭದ್ರತೆಯ ಬಗ್ಗೆ ಆತಂಕ ಹೆಚ್ಚಾಗಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳ ಮೇಲೆ ಭಾರತ ಹೆಚ್ಚಿನ ಅವಲಂಬನೆ ಹೊಂದಿರುವುದರಿಂದ ಸೌದಿ ಅರೇಬಿಯಾದ ಯಾನ್ಬು ಬಂದರನ್ನು ಬಳಸಿಕೊಂಡು ಹೊರ್ಮುಜ್ ಜಲಸಂಧಿಯನ್ನು ತಪ್ಪಿಸುವ ಪರ್ಯಾಯ ಸಾಗಣೆ ಮಾರ್ಗವನ್ನು ಭಾರತ ಪರಿಶೀಲಿಸುತ್ತಿದೆ. ಈ ಕ್ರಮವು ಕೃಷಿ ಉತ್ಪಾದನೆ ಹಾಗೂ ಆಹಾರ ಭದ್ರತೆಯನ್ನು ಕಾಪಾಡುವ ಉದ್ದೇಶ ಹೊಂದಿದೆ.

ಗಲ್ಫ್ ಉದ್ವಿಗ್ನತೆ ನಡುವೆ ಭಾರತದ ಕೃಷಿಗೆ ರಸಗೊಬ್ಬರ ಭದ್ರತೆಯ ಸವಾಲು

ಎಐ ರಚಿತ ಚಿತ್ರ -

Profile
Sushmitha Jain Jun 2, 2026 10:11 PM

ದೆಹಲಿ, ಜೂ. 2: ಹೊರ್ಮುಜ್ ಜಲಸಂಧಿಯಲ್ಲಿ(Hormuz Strait) ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಭಾರತದ ಆಹಾರ ಭದ್ರತೆ ಮತ್ತು ಕೃಷಿ ಉತ್ಪಾದನೆಗೆ ಅಗತ್ಯವಾದ ರಸಗೊಬ್ಬರ ಪೂರೈಕೆಯನ್ನು ಸುರಕ್ಷಿತಗೊಳಿಸಲು ಕೇಂದ್ರ ಸರ್ಕಾರ ಹೊಸ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸುತ್ತಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಮತ್ತು ಗೋಧಿ ಉತ್ಪಾದಕ ರಾಷ್ಟ್ರವಾಗಿದ್ದರೂ, ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರಗಳಿಗಾಗಿ ವಿದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. 2024ರಲ್ಲಿ ಭಾರತವು ಸುಮಾರು 7.68 ಬಿಲಿಯನ್ ಡಾಲರ್ ಮೌಲ್ಯದ ರಸಗೊಬ್ಬರಗಳನ್ನು ಆಮದು ಮಾಡಿಕೊಂಡಿದ್ದು, ಚೀನಾ ಮತ್ತು ಬ್ರೆಜಿಲ್ ನಂತರ ಮೂರನೇ ಅತಿದೊಡ್ಡ ಖರೀದಿದಾರ ರಾಷ್ಟ್ರವಾಗಿದೆ.

ಹೊರ್ಮುಜ್ ಮೇಲಿನ ಅವಲಂಬನೆ

ಸೌದಿ ಅರೇಬಿಯಾ, ಒಮಾನ್, ಯುಎಇ, ಕತಾರ್ ಹಾಗೂ ಬಹ್ರೇನ್ ಸೇರಿ ಭಾರತದ ವಿವಿಧ ದೇಶಗಳಿಂದ ಒಟ್ಟು ಸುಮಾರು 37%ರಷ್ಟು ರಸಗೊಬ್ಬರ ಆಮದು ಮಾಡಿಕೊಳ್ಳುತ್ತಿದೆ. ಅಮೋನಿಯಾ, ಯೂರಿಯಾ ಹಾಗೂ ಇತರ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ನೈಸರ್ಗಿಕ ಅನಿಲ ಮತ್ತು ಗಂಧಕದಂತಹ ಕಚ್ಚಾ ವಸ್ತುಗಳೂ ಪಶ್ಚಿಮ ಏಷ್ಯಾದಿಂದಲೇ ಬರುತ್ತವೆ. ಆದರೆ ಇರಾನ್-ಅಮೆರಿಕ ಉದ್ವಿಗ್ನತೆ ಹಾಗೂ ಹೊರ್ಮುಜ್ ಜಲಸಂಧಿಯ ಮೇಲಿನ ಒತ್ತಡದಿಂದ ಸರಕು ಸಾಗಣೆ ನಿಧಾನಗೊಂಡಿದ್ದು, ರಸಗೊಬ್ಬರ ಪೂರೈಕೆಯ ಮೇಲೂ ಪರಿಣಾಮ ಬೀರುವ ಆತಂಕ ಮೂಡಿದೆ.

ಯಾನ್ಬು ಬಂದರು ಹೊಸ ಪರ್ಯಾಯ

ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಕೆಂಪು ಸಮುದ್ರ ತೀರದಲ್ಲಿರುವ ಯಾನ್ಬು (Yanbu) ಬಂದರು ಭಾರತದ ಗಮನ ಸೆಳೆದಿದೆ. ಭಾರತೀಯ ಅಧಿಕಾರಿಗಳು ಇತ್ತೀಚೆಗೆ ಯಾನ್ಬು ಬಂದರಿನ ಮೂಲ ಸೌಕರ್ಯ, ರಸ್ತೆ ಸಂಪರ್ಕ ಹಾಗೂ ಸಾಗಣೆ ಸಾಮರ್ಥ್ಯವನ್ನು ಪರಿಶೀಲಿಸಿದ್ದಾರೆ.

ಯೋಜನೆಯ ಪ್ರಕಾರ, ಪರ್ಷಿಯನ್ ಗಲ್ಫ್ ಪ್ರದೇಶಕ್ಕೆ ಬಂದ ರಸಗೊಬ್ಬರ ಸರಕುಗಳನ್ನು ಸುಮಾರು 1,200 ಕಿ.ಮೀ. ರಸ್ತೆ ಮಾರ್ಗದ ಮೂಲಕ ಸೌದಿ ಅರೇಬಿಯಾದ ಯಾನ್ಬು ಬಂದರಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ಹಡಗುಗಳ ಮೂಲಕ ಕೆಂಪು ಸಮುದ್ರ ಹಾಗೂ ಅರಬ್ಬಿ ಸಮುದ್ರದ ಮಾರ್ಗವಾಗಿ ಭಾರತಕ್ಕೆ ತಲುಪಿಸಲಾಗುತ್ತದೆ. ಇದರಿಂದ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತಪ್ಪಿಸಬಹುದು.

ಕರಾಚಿ ಸೇಫ್ ಹೌಸ್‌ನಿಂದ ಉಗ್ರ ಜಾಲ ನಿರ್ವಹಣೆ? ದಾವೂದ್ ಆಪ್ತ ಮುನ್ನಾ ಝಿಂಗಾಡಾ ಮೇಲೆ ತನಿಖಾ ಬಲೆ

ಕೃಷಿಗೆ ಎದುರಾಗಿರುವ ಸವಾಲು

ಭಾರತದಲ್ಲಿ ಖಾರೀಫ್ ಹಂಗಾಮಿಗೆ 390 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ರಸಗೊಬ್ಬರ ಅಗತ್ಯವಿದ್ದು, ಸದ್ಯ ಸರ್ಕಾರ ಯೂರಿಯಾ, ಡಿಎಪಿ, ಎಂಒಪಿ ಹಾಗೂ ಇತರ ರಸಗೊಬ್ಬರಗಳ ಸಾಕಷ್ಟು ಸಂಗ್ರಹವಿದೆ ಎಂದು ತಿಳಿಸಿದೆ. ಆದರೆ ಹೊರ್ಮುಜ್ ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ ರಸಗೊಬ್ಬರ ಬೆಲೆ ಏರಿಕೆ ಹಾಗೂ ಸಬ್ಸಿಡಿ ವೆಚ್ಚದ ಹೆಚ್ಚಳ ಸರ್ಕಾರಕ್ಕೆ ದೊಡ್ಡ ಸವಾಲಾಗುವ ಸಾಧ್ಯತೆ ಇದೆ.

ಆಹಾರ ಭದ್ರತೆಗೆ ಹೊಸ ಚಿಂತನೆ

ಜಾಗತಿಕವಾಗಿ ಸುಮಾರು ಮೂರನೇ ಒಂದು ಭಾಗದ ರಸಗೊಬ್ಬರ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಾಟವಾಗುತ್ತದೆ. ಹೀಗಾಗಿ ಭಾರತವು ಕೇವಲ ರಸಗೊಬ್ಬರ ಬಳಕೆಯನ್ನು ಸಮತೋಲನಗೊಳಿಸುವುದಷ್ಟೇ ಅಲ್ಲದೆ, ಅವುಗಳ ಮೂಲ ಹಾಗೂ ಸಾಗಣೆ ಮಾರ್ಗಗಳತ್ತವೂ ಗಮನ ಹರಿಸುವ ಅಗತ್ಯ ಎದುರಾಗಿದೆ. ಭಾರತದ ಆಹಾರ ಭದ್ರತೆಯನ್ನು ಕಾಪಾಡಲು ಹೊರ್ಮುಜ್‌ಗೆ ಪರ್ಯಾಯ ರಸಗೊಬ್ಬರ ಪೂರೈಕೆ ಮಾರ್ಗಗಳ ನಿರ್ಮಾಣ ಈಗ ಅತ್ಯಂತ ಪ್ರಮುಖ ಕಾರ್ಯತಂತ್ರವಾಗಿ ಪರಿಣಮಿಸಿದೆ.