Viral News: ಮಲ ಮೂತ್ರವಾದ ಬಟ್ಟೆ, ಆಹಾರವಿಲ್ಲದೆ ಸೊರಗಿದ ದೇಹ; ವೃದ್ಧಾಶ್ರಮದಿಂದ 39 ಜನರ ರಕ್ಷಣೆ
ನೋಯ್ಡಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ವೃದ್ಧರನ್ನು ಕೋಣೆಯಲ್ಲಿ ಬಂಧಿಸಿ, ಅವರಿಗೆ ಚಿತ್ರ ಹಿಂಸೆ ನೀಡಲಾಗಿದೆ. ನೋಯ್ಡಾದ ಸೆಕ್ಟರ್ 55 ರಲ್ಲಿರುವ ಆನಂದ್ ನಿಕೇತನ ವೃದ್ಧಾಶ್ರಮದಲ್ಲಿ ಕೆಲ ವೃದ್ಧರು ಮೂತ್ರ ಮತ್ತು ಮಲ ಮಿಶ್ರಿತ ಬಟ್ಟೆಗಳನ್ನು ಧರಿಸಿದ್ದರು.


ಲಖನೌ: ನೋಯ್ಡಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ವೃದ್ಧರನ್ನು ಕೋಣೆಯಲ್ಲಿ (Viral News) ಬಂಧಿಸಿ, ಅವರಿಗೆ ಚಿತ್ರ ಹಿಂಸೆ ನೀಡಲಾಗಿದೆ. ನೋಯ್ಡಾದ ಸೆಕ್ಟರ್ 55 ರಲ್ಲಿರುವ ಆನಂದ್ ನಿಕೇತನ ವೃದ್ಧಾಶ್ರಮದಲ್ಲಿ ಕೆಲ ವೃದ್ಧರು ಮೂತ್ರ ಮತ್ತು ಮಲ ಮಿಶ್ರಿತ ಬಟ್ಟೆಗಳನ್ನು ಧರಿಸಿದ್ದರು. ಇನ್ನು ಕೆಲವರು ಬಟ್ಟೆಯಿಲ್ಲದೆ ಹಾಗೆಯೇ ಇದ್ದರು. ಸದ್ಯ ಈ ಆಶ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧಾಶ್ರಮದ ದುಃಸ್ಥಿತಿಯ ವಿಡಿಯೋವನ್ನು ಅದನ್ನು ಲಕ್ನೋದ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಲಾಗಿದೆ.
ಆ ಕಿರು ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬಳನ್ನು ಕೈಗಳನ್ನು ಕಟ್ಟಿ ಕೋಣೆಯಲ್ಲಿ ಇರಿಸಲಾಗಿದೆ ಎಂದು ತೋರಿಸಲಾಗಿದೆ. ಇದಾದ ಕೂಡಲೇ, ರಾಜ್ಯ ಮಹಿಳಾ ಆಯೋಗ ಮತ್ತು ನೋಯ್ಡಾ ಪೊಲೀಸರು ಗುರುವಾರ ಮನೆಯ ಮೇಲೆ ದಾಳಿ ನಡೆಸಿ 39 ಹಿರಿಯ ನಾಗರಿಕರನ್ನು ರಕ್ಷಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಅನೇಕ ವೃದ್ಧರನ್ನು ಬಟ್ಟೆಗಳಲ್ಲಿ ಕಟ್ಟಿಹಾಕಿ ಕೊಠಡಿಗಳಲ್ಲಿ ಬೀಗ ಹಾಕಿರುವುದು ಕಂಡುಬಂದಿದೆ. ರಾಜ್ಯ ಮಹಿಳಾ ಆಯೋಗದ ಸದಸ್ಯೆ ಮೀನಾಕ್ಷಿ ಭಾರಲಾ ಅವರ ಪ್ರಕಾರ, ಕೆಲವು ವೃದ್ಧರನ್ನು ನೆಲಮಾಳಿಗೆಯಂತಹ ಕೋಣೆಗಳಲ್ಲಿ ಬಂಧಿಸಲಾಗಿತ್ತು. ಹೆಚ್ಚಿನ ವೃದ್ಧ ಪುರುಷರು ಬಟ್ಟೆ ಧರಿಸದಿದ್ದರೂ, ಮಹಿಳೆಯರಿಗೆ ಭಾಗಶಃ ಬಟ್ಟೆಗಳನ್ನು ನೀಡಲಾಯಿತು. ಅವರಲ್ಲಿ ಹಲವರು ಮೂತ್ರ ಅಥವಾ ಮಲ ಮಿಶ್ರಿತ ಬಟ್ಟೆಗಳೊಂದಿಗೆ ಕಂಡುಬಂದರು.
ಆಶ್ರಮದಲ್ಲಿರುವ ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಯಾವುದೇ ಸಿಬ್ಬಂದಿಯೂ ಅಲ್ಲಿ ಇರಲಿಲ್ಲ. ಅವರಿಗೆ ಸರಿಯಾಗಿ ಊಟವೂ ಇರಲಿಲ್ಲ ಎಂದು ದಾಳಿಯ ಸಮಯದಲ್ಲಿ ತಿಳಿದು ಬಂದಿದೆ. ಆಶ್ರಮವು ವೃದ್ಧರ ಕುಟುಂಬಗಳಿಂದ 2.5 ಲಕ್ಷ ರೂ. ದೇಣಿಗೆ ಪಡೆದಿತ್ತು ಮತ್ತು ಹೆಚ್ಚುವರಿಯಾಗಿ, ಅವರ ಆಹಾರ ಮತ್ತು ವಸತಿಗಾಗಿ ತಿಂಗಳಿಗೆ 6,000 ರೂ.ಗಳನ್ನು ಪಡೆದಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ: Self Harming: ಬೆಂಗಳೂರಲ್ಲಿ ಘೋರ ಘಟನೆ; ಪುತ್ರ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ
ಇತ್ತೀಚೆಗೆ ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ ಮಾನಸಿಕ ಅಸ್ವಸ್ಥ ತಾಯಿಯನ್ನು ಮಗ ಬಿಟ್ಟು ರಸ್ತೆಯಲ್ಲಿ ಹೋಗಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ವೃದ್ಧೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಬರುತ್ತೇನೆ, ಇಲ್ಲೇ ಇರು’ ಎಂದು ರಸ್ತೆಯಲ್ಲಿ ತಾಯಿಯನ್ನು ಬಿಟ್ಟು ಮಗ ಹೋಗಿದ್ದ ಎಂದು ಹೇಳಲಾಗಿದೆ. ಸ್ಥಳೀಯರು ವೃದ್ಧೆಗೆ ಆಹಾರ ನೀಡಿದ್ದಾರೆ. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಆಕೆಯನ್ನು ಒಪ್ಪಿಸಲಾಗಿದೆ.