ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nithyananda: ಎಲ್ಲಿದೆ ನಿತ್ಯಾನಂದನ ಕೈಲಾಸ? ಶಿಷ್ಯರಿಂದಲೇ ಬಯಲಾಯ್ತು ಅಸಲಿ ಸತ್ಯ!

Nithyananda's Kailasa location: ಈ ಮೊದ್ಲು ದಕ್ಷಿಣ ಅಮೆರಿಕಾದ ಇಕ್ವೇಡಾರ್​ ಬಳಿಯ ಚಿಕ್ಕ ದ್ವೀಪ ಖರೀದಿಸಿ ಹೊಸ ರಾಷ್ಟ್ರ ಕಟ್ಟಲಾಗಿದೆ ಅನ್ನೋ ಸುದ್ದಿ ಇತ್ತು. ಆದರೆ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಇದೀಗ ಕೋರ್ಟ್‌ ಕೇಳಿದ ಪ್ರಶ್ನೆಗೆ ನಿತ್ಯಾನಂದನ ಶಿಷ್ಯ ಅರಚನ ತಿರುಮಲ ಉತ್ತರಿಸಿದ್ದಾರೆ. ಹಾಗಿದ್ರೆ ಕೈಲಾಸ ಎಲ್ಲಿದೆ? ಏನಿದರ ಅಸಲಿಯತ್ತು? ಇಲ್ಲಿದೆ ಡಿಟೇಲ್ಸ್‌

ಎಲ್ಲಿದೆ ನಿತ್ಯಾನಂದನ ಕೈಲಾಸ? ಶಿಷ್ಯರಿಂದಲೇ ಬಯಲಾಯ್ತು ಅಸಲಿ ಸತ್ಯ!

Profile Rakshita Karkera Jun 20, 2025 12:12 PM

ನವದೆಹಲಿ: ದೇಶದ ಅತ್ಯಂತ ವಿವಾದಿತ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ(Nithyananda) ಭಾರತದಿಂದ ಎಸ್ಕೇಪ್‌ ಆಗಿ ಅದೆಲ್ಲೋ ದೂರ ಪ್ರಪಂಚದ ಮೂಲೆಯಲ್ಲಿ ನೆಲೆಸಿದ್ದಾನೆ. ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ಎಂಬ ಹೆಸರಿಟ್ಟು ಹೊಸ ದೇಶವನ್ನೇ ಘೋಷಿಸಿರುವುದು ಎಲ್ಲಿರಿಗೂ ತಿಳಿದೇ ಇರೋ ಸಂಗತಿ. ಆದರೆನಿತ್ಯಾನಂದನ ಈ ಕೈಲಾಸ ಎಲ್ಲಿದೆ? ಅಂತ ಕೇಳಿದ್ರೆ ಉತ್ತರ ಸಿಗೋದು ಇಲ್ಲಿವರೆಗೆ ಕಷ್ಟ ಆಗಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ನಿತ್ಯಾನಂದನ ಶಿಷ್ಯರೇ ಆ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗವನ್ನು ಅವರ ಶಿಷ್ಯರೇ ಬಹಿರಂಗ ಮಾಡಿದ್ದಾರೆ. ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಎಲ್ಲಿದ್ದಾನೆ ಎಂಬುದರ ಕುರಿತು ಅಚ್ಚರಿಯ ಮಾಹಿತಿಯನ್ನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಬಹಿರಂಗ ಆಗಿದೆ.

ಹಾಗಿದ್ರೆ ಎಲ್ಲಿದೆ ಈ ನಿತ್ಯಾನಂದನ ಕೈಲಾಸ?

ಈ ಮೊದ್ಲು ದಕ್ಷಿಣ ಅಮೆರಿಕಾದ ಇಕ್ವೇಡಾರ್​ ಬಳಿಯ ಚಿಕ್ಕ ದ್ವೀಪ ಖರೀದಿಸಿ ಹೊಸ ರಾಷ್ಟ್ರ ಕಟ್ಟಲಾಗಿದೆ ಅನ್ನೋ ಸುದ್ದಿ ಇತ್ತು. ಆದರೆ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಇದೀಗ ಕೋರ್ಟ್‌ ಕೇಳಿದ ಪ್ರಶ್ನೆಗೆ ನಿತ್ಯಾನಂದನ ಶಿಷ್ಯ ಅರಚನ ತಿರುಮಲ ಉತ್ತರಿಸಿದ್ದಾರೆ.. ಆಸ್ಟ್ರೇಲಿಯಾ ಬಳಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಇದೆ.. ಇದಕ್ಕೆ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಸ್ಥಾಪಿಸಲಾಗಿದೆ ಅಂತ ಪ್ರತಿಪಾದಿಸಿದ್ದಾರೆ. ಆಸ್ಟ್ರೇಲಿಯಾ ಬಳಿಯ ಯುಎಸ್‌ಕೆ ಎಂಬ ಸ್ವಯಂ ಘೋಷಿತ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ ಅಂತ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Swami Nithyananda: ʼಕೈಲಾಸಾಧಿಪತಿʼ ನಿತ್ಯಾನಂದನ ಮತ್ತೊಂದು ಕಿತಾಪತಿ; ಬೊಲಿವಿಯಾದಲ್ಲಿ ಸಾವಿರಾರು ಎಕ್ರೆ ಭೂಮಿ ಕಬಳಿಸಲು ಮುಂದಾದ ಸ್ವಯಂ ಘೋಷಿತ ದೇವ ಮಾನವ

ಈ ವಿಚಾರ ಬೆಳಕಿಗೆ ಬಂದಿದ್ದೇಗೆ?

ತಿರುವಣ್ಣಮಲೈ ಮಠದಿಂದ ಸ್ವಾಮಿ ನಿತ್ಯಾನಂದನ ನಿಷೇಧಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ನಿತ್ಯಾನಂದ ಸ್ವಯಂ ಘೋಷಿತ ರಾಷ್ಟ್ರ ಎಲ್ಲಿದೆ ಎಂಬ ಪ್ರಶ್ನೆಗೆ ಕೋರ್ಟ್​ ಕೇಳಿತ್ತು. ಕೈಲಾಸ ಸ್ಥಳದ ಕುರಿತು ನ್ಯಾಯಾಲಯವು ಸ್ವಾಮಿ ನಿತ್ಯಾನಂದನ ಅನುಯಾಯಿಗಳನ್ನ ಕೆಣಕಿತು. ಅಧಿನಾಮ ಮಠದಿಂದ ಅವರನ್ನ ನಿಷೇಧಿಸುವ ಏಕ-ನ್ಯಾಯಾಧೀಶರ ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆಯಲ್ಲಿ ನ್ಯಾ. ಎಸ್‌.ಎಂ ಸುಬ್ರಮಣ್ಯಂ, ಮಾರಿಯಾ ಕ್ಲೆಟ್ ವಿಭಾಗೀಯ ಪೀಠವು ನಿತ್ಯಾನಂದನ ಭೌತಿಕ ಸ್ಥಳದ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನ ಎತ್ತಿದೆ. ಅರ್ಜಿದಾರರು ಎಲ್ಲಿದ್ದಾರೆ ಅಂತ ಪ್ರಶ್ನಿಸಿತ್ತು. ಈ ವೇಳೆ ಈ ನಿಗೂಢ ಸತ್ಯ ಬಯಲಾಗಿದೆ.