Sonam Raghuwanshi Case: ಪತಿಯ ಕೊಲೆಗೆ 20 ಲಕ್ಷ ರೂ. ಆಮಿಷ ಒಡ್ಡಿದ್ದ ಸೋನಂ; ಮೇಘಾಲಯ ಹನಿಮೂನ್ ಹತ್ಯೆಯ ಭೀಕರ ರಹಸ್ಯ ಬಯಲು
Sonam Raghuvanshi: ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ ಮಧ್ಯ ಪ್ರದೇಶದ ಇಂದೋರ್ ಮೂಲದ ರಾಜ ರಘುವಂಶಿಯನ್ನು ಆತನ ಪತ್ನಿ ಸೋನಂ ರಘುವಂಶಿ ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸೋನಂ ತನ್ನ ಪ್ರಿಯಕರ ಮಧ್ಯ ಪ್ರದೇಶದ ರಾಜ್ ಕುಶ್ವಾಹಾ ಜತೆಗೂಡಿ ರಾಜ ರಘುವಂಶಿಯನ್ನು ಹತ್ಯೆ ಮಾಡಿದ್ದಾಳೆ. ಇದಕ್ಕಾಗಿ ಆಕೆ ಹಂತಕರಿಗೆ 20 ಲಕ್ಷ ರೂ. ಆಮಿಷ ಒಡ್ಡಿದ್ದಳು ಎನ್ನಲಾಗಿದೆ.

ಸೋನಂ ಮತ್ತು ರಾಜ ರಘುವಂಶಿ.

ಹೊಸದಿಲ್ಲಿ: ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿ ನಾಪತ್ತೆಯಾದ ಮಧ್ಯ ಪ್ರದೇಶದ ಇಂದೋರ್ ಮೂಲದ ರಾಜ ರಘುವಂಶಿ (Raja Raghuvanshi)ಯನ್ನು ಆತನ ಪತ್ನಿ ಸೋನಂ ರಘುವಂಶಿ (Sonam Raghuvanshi) ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸೋನಂ ತನ್ನ ಪ್ರಿಯಕರ ಮಧ್ಯ ಪ್ರದೇಶದ ರಾಜ್ ಕುಶ್ವಾಹಾ (Raj Kushwaha) ಜತೆಗೂಡಿ ರಾಜ ರಘುವಂಶಿಯನ್ನು ಹತ್ಯೆ ಮಾಡಿದ್ದಾಳೆ. ಇದಕ್ಕಾಗಿ ಇವರಿಬ್ಬರು ಸೇರಿ ರಾಜ ಕುಶ್ವಾಹಾನ ಮೂವರು ಗೆಳೆಯರಿಗೆ ಹತ್ಯೆಯ ಸುಪಾರಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ (Sonam Raghuwanshi Case). ರಾಜ ರಘುವಂಶಿ ಮತ್ತು ಸೋನಂ ಮದುವೆಯಾದ 5 ದಿನಗಳ ನಂತರ ರಾಜ್ ಕುಶ್ವಾಹಾ ತನ್ನ ಬಾಲ್ಯದ ಗೆಳೆಯರಾದ ಆನಂದ್ ಕುಮ್ರಿ (23), ಆಕಾಶ್ ರಾಜಪೂತ್ (19) ಮತ್ತು ವಿಶಾಲ್ ಸಿಂಗ್ ಚೌಹಾಣ್ (22)ನನ್ನು ಮಧ್ಯ ಪ್ರದೇಶದ ಇಂದೋರ್ನಲ್ಲಿರುವ ಕೆಫೆಯೊಂದಕ್ಕೆ ಕರೆಸಿ ಸುಪಾರಿ ನೀಡಿದ್ದ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿದೆ.
ಇನ್ನು ತನ್ನ ಪತಿ ರಾಜ ರಘುವಂಶಿ ಹತ್ಯೆಗೆ ಸೋನಂ ಬಾಡಿಗೆ ಹಂತಕರಿಗೆ ಆರಂಭದಲ್ಲಿ 4 ಲಕ್ಷ ರೂ. ನೀಡುವುದಾಗಿ ಹೇಳಿದ್ದಳು. ನಂತರ ಆ ಮೊತ್ತವನ್ನು 20 ಲಕ್ಷ ರೂ.ಗೆ ಹೆಚ್ಚಿಸಿದ್ದಳು ಎಂದು ಮೂಲಗಳು ಹೇಳಿವೆ. ಉನ್ನತ ಪೊಲೀಸ್ ಮೂಲಗಳ ಪ್ರಕಾರ ರಘುವಂಶಿ ಮೃತದೇಹವನ್ನು ಮೇಘಾಲಯದ ಕಂದಕಕ್ಕೆ ತಳ್ಳಲು ಸೋನಂ ಇತರ ಆರೋಪಿಗಳಿಗೆ ಸಹಾಯ ಮಾಡಿದ್ದಳು.
ಚಿರಾಪುಂಜಿ ಎಂದೂ ಕರೆಯಲ್ಪಡುವ ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆ ಸೊಹ್ರಾದ ಜಲಪಾತದ ಬಳಿಯ ಕಮರಿಯಲ್ಲಿ ಜೂ. 2ರಂದು ರಾಜಾ ರಘುವಂಶಿ ದೇಹವು ಕಂಡು ಬಂದಿತ್ತು. ಅವರು ಪತ್ನಿ ಸೋನಂ ಜತೆಗೆ ಹನಿಮೂನ್ಗಾಗಿ ಮೇಘಾಲಯ ತೆರಳಿ ದುರಂತ ಅಂತ್ಯ ಕಂಡಿದ್ದರು.
राजा हत्याकांड: आरोपियों से पूछताछ में बड़ा खुलासा
— Diksha singh (@DikshaSingh7522) June 10, 2025
सोनम के कहने पर आरोपियों ने राजा की हत्या की-सूत्र
50 हजार में राजा की हत्या की सुपारी दी थी- सूत्र
फोटोशूट के बहाने पहाड़ी इलाके पर लेकर गई-सूत्र
'सोनम ने हत्या के बाद 20 लाख लालच दिया था#IndoreCouple #SonamRaghuvanshi pic.twitter.com/oDoWWTcM4S
ಈ ಸುದ್ದಿಯನ್ನೂ ಓದಿ: Honeymoon Murder Case: ತಾನೇ ಹತ್ಯೆ ಮಾಡಿದ್ದ ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸೋನಂ ಲವರ್! ವಿಡಿಯೊ ವೈರಲ್
ಘಟನೆ ಹಿನ್ನೆಲೆ
ಮೇ 13ರಂದು ಮದುವೆಯಾದ ರಾಜ ರಘುವಂಶಿ ಮತ್ತು ಸೋನಂ ಮೇ 20ರಂದು ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಇವರನ್ನು ಮೂವರು ಹಂತಕರು ಹಿಂಬಾಲಿಸಿದ್ದರು. ಹಂತಕರು ಶಿಲ್ಲಾಂಗ್ನಲ್ಲಿ ಸೋನಂ ಮತ್ತು ರಾಜ ರಘುವಂಶಿ ಅವರ ಹೋಂಸ್ಟೇ ಬಳಿಯ ಹೋಟೆಲ್ನಲ್ಲಿ ತಂಗಿದ್ದರು. ದಂಪತಿ 3 ಮೂರು ದಿನಗಳ ಕಾಲ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದರು. ಮೇ 23ರಂದು ಸೋನಂ ಫೋಟೋಶೂಟ್ ನೆಪದಲ್ಲಿ ರಾಜ ಅವರನ್ನು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದಿದ್ದಳು. ಇದೇ ವೇಳೆ ಮೂವರು ಹಂತಕರು ಅವರನ್ನು ಕೂಡಿಕೊಂಡಿದ್ದರು. ಮೂವರು ರಾಜ ಅವರನ್ನು ಮಾತನಾಡಿಸಿ ಜತೆಗೆ ಹೆಜ್ಜೆ ಹಾಕಿದ್ದರು. ಬೆಟ್ಟ ಹತ್ತುವಾಗ ಸೋನಂ ದಣಿದಂತೆ ನಟಿಸಿ ತನ್ನ ಪತಿಯನ್ನು ಕೊಲೆಗಾರರ ಜತೆಗೆ ಬಿಟ್ಟು ಹಿಂದೆ ಉಳಿದಿದ್ದಳು.
ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಸೋನಂ ಪತಿಯನ್ನು ಹತ್ಯೆಗೈಯಲು ಸೂಚನೆ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಸೋನಂ ಪ್ರೇಮಿ ರಾಜ್ ಮೇಘಾಲಯದಲ್ಲಿ ಇರಲೇ ಇಲ್ಲ. ಆದರೆ ತೆರೆಮರೆಯಲ್ಲಿ ನಿಂತು ಹತ್ಯೆಯ ಸಂಚು ರೂಪಿಸಿದ್ದ. ಮಾತ್ರವಲ್ಲ ಸೋನಂ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವ ವಿಚಾರವೂ ತನಿಖೆ ವೇಳೆ ಬಯಲಾಗಿದೆ. ಈಗಾಗಲೇ ಮೊದಲ ಆರೋಪಿ ಆಕಾಶ್ ರಾಜಪೂತ್ನನ್ನು ಉತ್ತರ ಪ್ರದೇಶದ ಲಲಿತ್ಪುರದಲ್ಲಿ ಬಂಧಿಸಲಾಗಿದೆ.