Vishwavani Editorial: ದುರಂತಗಳ ಸರಪಳಿ ತುಂಡಾಗಲಿ
ತೆಲಂಗಾಣದಲ್ಲಿ ಗೋದಾವರಿ ನದಿಯಲ್ಲಿ ಐವರು ಯುವಕರು ಮುಳುಗಿ ಬದುಕನ್ನು ಕೊನೆಗೊಳಿಸಿ ಕೊಂಡಿರುವುದು ಹೀಗೆ ಒಂದೇ ದಿನದಲ್ಲಿ ಸರಣಿ ದುರ್ಘಟನೆಗಳು ವರದಿಯಾಗಿವೆ. ಮನುಷ್ಯನ ಕೈ ಮೀರಿದ ಪರಿಸ್ಥಿತಿಗಳನ್ನು ನಿಭಾಯಿಸಲಾಗದು ಎನ್ನುವುದು ಕಠೋರ ಸತ್ಯವೇ. ಆದರೆ, ‘ಜೀವ’ ಎಂಬುದು ಎಷ್ಟೊಂದು ಅಮೂಲ್ಯವಾದುದು, ಅದನ್ನು ಕಾಪಿಟ್ಟುಕೊಳ್ಳಲು ಎಷ್ಟೆಲ್ಲಾ ಮುಂಜಾಗ್ರತೆ ಕೈಗೊಳ್ಳಬೇಕು ಎಂಬುದನ್ನು ಇಂಥ ನಿದರ್ಶನಗಳು ತಿಳಿಹೇಳಬಲ್ಲವು.


ದೇಶದ ವಿವಿಧೆಡೆ ಸಂಭವಿಸಿದ ದುರಂತಗಳು, ಆ ವೇಳೆ ಆದ ಸಾವುಗಳು ಮತ್ತು ಜನರು ತೀವ್ರವಾಗಿ ಗಾಯಗೊಂಡ ನಿದರ್ಶನಗಳು ಮನವನ್ನು ವಿಹ್ವಲಗೊಳಿಸಿವೆ. ಮಹಾರಾಷ್ಟ್ರದ ಪುಣೆಯ ಮಾವಲ್ ತಾಲೂಕಿನ ಕುಂದಾಮಲ ಬಳಿ ಇಂದ್ರಾಣಿ ನದಿಗೆ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಮುರಿದು ಇಬ್ಬರು ಅಸುನೀಗಿರುವುದು, ಉತ್ತರಾಖಂಡದ ಡೆಹ್ರಾಡೂನ್ನಿಂದ ಕೇದಾರನಾಥ ಪುಣ್ಯಕ್ಷೇತ್ರಕ್ಕೆ ಯಾತ್ರಿಗಳನ್ನು ಒಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಸೇರಿದಂತೆ 7 ಮಂದಿ ಸಾವನ್ನಪ್ಪಿರುವುದು,
ತೆಲಂಗಾಣದಲ್ಲಿ ಗೋದಾವರಿ ನದಿಯಲ್ಲಿ ಐವರು ಯುವಕರು ಮುಳುಗಿ ಬದುಕನ್ನು ಕೊನೆಗೊಳಿಸಿ ಕೊಂಡಿರುವುದು ಹೀಗೆ ಒಂದೇ ದಿನದಲ್ಲಿ ಸರಣಿ ದುರ್ಘಟನೆಗಳು ವರದಿಯಾಗಿವೆ. ಮನುಷ್ಯನ ಕೈಮೀರಿದ ಪರಿಸ್ಥಿತಿಗಳನ್ನು ನಿಭಾಯಿಸಲಾಗದು ಎನ್ನುವುದು ಕಠೋರ ಸತ್ಯವೇ. ಆದರೆ, ‘ಜೀವ’ ಎಂಬುದು ಎಷ್ಟೊಂದು ಅಮೂಲ್ಯವಾದುದು, ಅದನ್ನು ಕಾಪಿಟ್ಟುಕೊಳ್ಳಲು ಎಷ್ಟೆಲ್ಲಾ ಮುಂಜಾ ಗ್ರತೆ ಕೈಗೊಳ್ಳಬೇಕು ಎಂಬುದನ್ನು ಇಂಥ ನಿದರ್ಶನಗಳು ತಿಳಿ ಹೇಳಬಲ್ಲವು.
ಇದನ್ನೂ ಓದಿ: Vishwavani Editorial: ಮತ್ತೆ ಕವಿದ ಯುದ್ಧದ ಕಾರ್ಮೋಡ
‘ಈ ಭೂಮಿ ಮೇಲೆ ನಮ್ಮದು ನಾಲ್ಕು ದಿನದ ಬಾಳು’ ಎಂಬ ‘ದಾರ್ಶನಿಕತೆಯ ಲೇಪದ’ ಮಾತು ನಿಷ್ಠುರ ಸತ್ಯವೇ ಆದರೂ, ಆ ನಾಲ್ಕು ದಿನದ ಬಾಳು ಅಪಾಯಗಳಿಗೆ ಈಡಾಗದಂತೆ ನೋಡಿ ಕೊಳ್ಳುವುದೇ ಸವಾಲಿನ ಸಂಗತಿಯಾಗಿದೆ. ಆಯುಷ್ಯ ಮುಗಿದ ನಂತರ ಸಂಭವಿಸುವ ವ್ಯಕ್ತಿಯ ಸಹಜ ಸಾವು ಪ್ರಾಯಶಃ ಅಷ್ಟಾಗಿ ಕಾಡಲಾರದು; ಆದರೆ ಅಕಾಲಿಕ ಸಾವು, ಅಪಘಾತದಿಂದ ಒದಗುವ ಸಾವುಗಳು ಮೃತರ ಕುಟುಂಬಿಕರನ್ನು ಬಹಳ ಕಾಲ ಕಾಡುವುದು ಖರೆ.
ಹೀಗಾಗಿ, ದೇಶವನ್ನು ಕಾಡುತ್ತಿರುವ ದುರಂತಗಳು/ದುರ್ಘಟನೆಗಳ ಸರಪಳಿ ಇನ್ನಾದರೂ ತುಂಡಾ ಗಲಿ, ಜನರ ಶಾಂತಿ-ನೆಮ್ಮದಿ ಕಲಕದಿರಲಿ ಎಂದು ಹಾರೈಸುವುದು ಮಾತ್ರ ನಮ್ಮ ಕೈಯಲ್ಲಿದೆ. ಮಿಕ್ಕಿದ್ದು ಈ ಬ್ರಹ್ಮಾಂಡದ ‘ನಿಯಂತ್ರಕ ಶಕ್ತಿ’ಗೆ ಬಿಟ್ಟ ಸಂಗತಿ. ಈ ಭೂಮಿ ಮೇಲೆ ಇರುವ ‘ನಾಲ್ಕು’ ದಿನವಾದರೂ ಸುಖ-ಶಾಂತಿಯಿಂದ ಇರುವಂತಾಗುವ ಚಿತ್ತಸ್ಥಿತಿ ಎಲ್ಲರಲ್ಲೂ ರೂಪುಗೊಳ್ಳಬೇಕಿದೆ.