Vishwavani Editorial: ಮೈಯೆಲ್ಲಾ ಕಣ್ಣಾಗಿರಬೇಕು

ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದಂಥ ‘ಮಗ್ಗಲು ಮುಳ್ಳು’ ದೇಶಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುವ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೇನಾ ಮುಖ್ಯಸ್ಥರು ಆಡಿರುವ ಈ ಮಾತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಜತೆಗೆ, ಭಾರತದ ಮೇಲೆ ಮುರ ಕೊಂಡು ಬೀಳಲು ಹವಣಿಸುತ್ತಿರುವ ಶತ್ರುರಾಷ್ಟ್ರಗಳಿಗೆ ನೀಡಿದ ಪರೋಕ್ಷ ಎಚ್ಚರಿಕೆಯೂ ಆಗಿದೆ ಎಂದರೆ ಅತಿ #ಶಯೋಕ್ತಿಯಲ್ಲ

Upendradwivedi_indianarmy
Profile Ashok Nayak Jan 17, 2025 7:27 AM

Source : Vishwavani Daily News Paper

ದೇಶದ ಉತ್ತರ ಭಾಗದ ಗಡಿಗಳಲ್ಲಿ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿದೆ, ಆದರೆ ಎಂಥದೇ ಪರಿಸ್ಥಿತಿ ಮತ್ತು ಸವಾಲು ಒದಗಿದರೂ ಅದನ್ನು ಎದುರಿಸಲು ಭಾರತೀಯ ಸೇನಾಪಡೆ ಸಮರ್ಥವಾಗಿದೆ ಮತ್ತು ಸನ್ನದ್ಧವಾಗಿದೆ ಎಂಬ ಮಾತುಗಳನ್ನಾಡಿದ್ದಾರೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ.

ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದಂಥ ‘ಮಗ್ಗಲು ಮುಳ್ಳು’ ದೇಶಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುವ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೇನಾ ಮುಖ್ಯಸ್ಥರು ಆಡಿರುವ ಈ ಮಾತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಜತೆಗೆ, ಭಾರತದ ಮೇಲೆ ಮುರ ಕೊಂಡು ಬೀಳಲು ಹವಣಿಸುತ್ತಿರುವ ಶತ್ರುರಾಷ್ಟ್ರಗಳಿಗೆ ನೀಡಿದ ಪರೋಕ್ಷ ಎಚ್ಚರಿಕೆಯೂ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಈಶಾನ್ಯ ರಾಜ್ಯ ಮಣಿಪುರವು ಕೆಲ ತಿಂಗಳ ಹಿಂದೆ ಕಾರಣವಲ್ಲದ ಕಾರಣಕ್ಕೆ ಹೊತ್ತಿ ಕೊಂಡು ಉರಿದಿದ್ದು, ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅಲ್ಲಿನವರು ಎರಗಿ, ಹಿಂಸಿಸಿ, ಆಸ್ತಿಪಾಸ್ತಿಗಳಿಗೆ ನಷ್ಟ ಉಂಟುಮಾಡಿದ್ದು ಈ ಎಲ್ಲ ಬೆಳವಣಿಗೆಗಳ ಹಿಂದೆ ಕೆಲವೊಂದು ವಿದೇಶಿ ಶಕ್ತಿಗಳ ಮತ್ತು ಶತ್ರುರಾಷ್ಟ್ರಗಳ ಕೈವಾಡವಿದೆ ಎನ್ನಲಾಗುತ್ತಿದೆ.

ಗಡಿಭಾಗದಲ್ಲಿ ಆಗಾಗ ತಲೆದೋರುವ ಉದ್ವಿಗ್ನ ಪರಿಸ್ಥಿತಿಗೂ ಇದು ಅನ್ವಯವಾಗುವ ಮಾತು. ತಾನಾಗಿಯೇ ಯಾವ ದೇಶದ ಮೇಲೂ ಆಕ್ರಮಣಕ್ಕೆ ಮುಂದಾಗದ ಶುಭ್ರ ಮತ್ತು ಸ್ಪಷ್ಟ ಚಾರಿತ್ರ್ಯ ಭಾರತ ದೇಶದ್ದು; ಆದರೆ ಭಾರತದ ಮತ್ತು ಭಾರತೀಯರ ಸೌಜನ್ಯವನ್ನು ‘ದೌರ್ಬಲ್ಯ’ ಎಂದು ಪರಿಗಣಿಸಿ ಕಿತಾಪತಿ ಮಾಡಿದವರಿಗೆಲ್ಲಾ ಭಾರತೀಯ ಸೇನೆ ಸರಿಯಾಗೇ ತಪರಾಕಿ ನೀಡಿದ್ದಿದೆ.

ಸಾಕಷ್ಟು ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧ, ಉಗ್ರರ ಶಿಬಿರಗಳ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ಹೀಗೆ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಇಷ್ಟಾ ಗಿಯೂ ಪಾಠ ಕಲಿಯದ ಚಿತ್ತಸ್ಥಿತಿ ಕೆಲವೊಂದು ನೆರೆಹೊರೆ ದೇಶಗಳದ್ದು. ಹೀಗಾಗಿ, ಅನುಗಾಲವೂ ‘ಸಮರಸನ್ನದ್ಧ’ ಸ್ಥಿತಿಯಲ್ಲಿ ಇರಬೇಕಾದ ಹಾಗೂ ಗಡಿಭಾಗದಲ್ಲಿ ಮೈಯೆಲ್ಲಾ ಕಣ್ಣಾಗಿ ಕಾಯಬೇಕಾದ ಅನಿವಾರ್ಯತೆಯಿದೆ ಭಾರತೀಯ ಸೇನೆಗೆ. ದೇಶದ

ಸಮಗ್ರತೆ-ಸಾರ್ವಭೌಮತೆಗಳ ರಕ್ಷಣೆಗೆ ಅದು ಅಗತ್ಯವೂ ಹೌದೆನ್ನಿ.

ಇದನ್ನೂ ಓದಿ: Vishwavani Editorial: ಗುರುವಿನ ವೇಷದ ಗಿಡುಗನೇ?

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್