Asia Cup 2025: ಇಂದು ಟೀಮ್ ಇಂಡಿಯಾ ಆಟಗಾರರ ದುಬೈ ಪ್ರಯಾಣ
ಸೆ.4 ರಂದು ದುಬೈಗೆ ಬಂದಿಳಿಯುವ ಟೀಮ್ ಇಂಡಿಯಾ ಆಟಗಾರರು ಅಂದು ವಿಶ್ರಾಂತಿ ಪಡೆದು, ಸೆ. 5ರಿಂದ ಅಭ್ಯಾಸ ಆರಂಭಿಸಲಿದ್ದಾರೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಜಸ್ಪ್ರೀತ್ ಬುಮ್ರಾ ನಿರ್ವಹಿಸಲಿದ್ದಾರೆ. ಅವರೊಂದಿಗೆ ಎಡಗೈ ವೇಗಿ ಅರ್ಶ್ದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕಾಣಿಸಿಕೊಂಡಿದ್ದಾರೆ.

-

ಮುಂಬಯಿ: ಸೆ.9 ರಿಂದ ಆರಂಭವಾಗಲಿರುವ ಏಷ್ಯಾದ ಪ್ರತಿಷ್ಠಿತ ತಂಡಗಳ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ(Asia Cup 2025) ಪಂದ್ಯವನ್ನಾಡಲು ಹಾಲಿ ಚಾಂಪಿಯನ್ ಭಾರತ ತಂಡದ ಆಟಗಾರರು ಇಂದು(ಗುರುವಾರ) ದುಬೈಗೆ ಪ್ರಯಾಣ ಬೆಳಸಲಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲ ಆಟಗಾರರು ಇದೇ ಮೊದಲ ಬಾರಿಗೆ ಭಾರತ ತಂಡದ ಆಟಗಾರರು ಪ್ರತ್ಯೇಕವಾಗಿ ದುಬೈಗೆ ಪ್ರಯಾಣಿಸಲಿದ್ದಾರೆ.
ಹೌದು, ಬಿಸಿಸಿಐ ಈ ಬಾರಿ ಆಟಗಾರರಿಗೆ ಪ್ರತ್ಯೇಕವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಅದರಂತೆ ಆಟಗಾರರು ತಮ್ಮ ತವರು ರಾಜ್ಯದದ ನಗರ ಅಥವಾ ತಮಗೆ ಅನುಕೂಲವೆನಿಸುವ ನಗರದಿಂದ ದುಬೈಗೆ ವಿಮಾನ ಏರಲಿದ್ದಾರೆ. ಉಪನಾಯಕ ಶುಭಮನ್ ಗಿಲ್ ಅವರು ಬೆಂಗಳೂರಿನಿಂದ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ. ಫಿಟ್ನೆಸ್ ಟೆಸ್ಟ್ಗಾಗಿ ಅವರು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಕಳೆದ ವಾರ ಆಗಮಿಸಿದ್ದರು. ಹೀಗಾಗಿ ಅವರು ಬೆಂಗಳೂರಿನಿಂದಲೇ ದುಬೈ ವಿಮಾನ ಹತ್ತಲಿದ್ದಾರೆ.
ಸೆ.4 ರಂದು ದುಬೈಗೆ ಬಂದಿಳಿಯುವ ಟೀಮ್ ಇಂಡಿಯಾ ಆಟಗಾರರು ಅಂದು ವಿಶ್ರಾಂತಿ ಪಡೆದು, ಸೆ. 5ರಿಂದ ಅಭ್ಯಾಸ ಆರಂಭಿಸಲಿದ್ದಾರೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಜಸ್ಪ್ರೀತ್ ಬುಮ್ರಾ ನಿರ್ವಹಿಸಲಿದ್ದಾರೆ. ಅವರೊಂದಿಗೆ ಎಡಗೈ ವೇಗಿ ಅರ್ಶ್ದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕಾಣಿಸಿಕೊಂಡಿದ್ದಾರೆ.
ಭಾರತ ತಂಡ
ಸೂರ್ಯ ಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ.), ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿ.ಕೀ.), ಹರ್ಷಿತ್ ರಾಣಾ, ರಿಂಕು ಸಿಂಗ್.
ಸ್ಟ್ಯಾಂಡ್ಬೈ ಆಟಗಾರರು: ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್.
ಇದನ್ನೂ ಓದಿ Asia Cup 2025: ಭಾರತ-ದಕ್ಷಿಣ ಕೊರಿಯಾ ನಡುವಣ ಸೂಪರ್-4ರ ಪಂದ್ಯ ಡ್ರಾ!