ನ್ಯೂಜಿಲೆಂಡ್ ವಿರುದ್ಧ ಫೈನಲ್ನಲ್ಲಿ ಶ್ರೇಯಸ್ ಅಯ್ಯರ್ ಆಟ ತೃಪ್ತಿ ತಂದಿಲ್ಲ: ದಿಲೀಪ್ ವೆಂಗ್ಸರ್ಕಾರ್
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಪ್ರದರ್ಶನ ತೋರಿದ್ದರು ಹಾಗೂ 248 ರನ್ ಗಳಿಸಿದ್ದರು. ಆ ಮೂಲಕ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ದ ಫೈನಲ್ ಹಣಾಹಣಿಯಲ್ಲಿ ಅಯ್ಯರ್ ಔಟ್ ಆದ ಹಾದಿಯಲ್ಲಿ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಅಯ್ಯರ್ ಬಗ್ಗೆ ದಿಲೀಪ್ ವೆಂಗ್ಸರ್ಕಾರ್ ದೊಡ್ಡ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಭಾರತ ತಂಡ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಸ್ಟಾರ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಟೂರ್ನಿಯುದ್ದಕ್ಕೂ ಅಯ್ಯರ್ ಟೀಮ್ ಇಂಡಿಯಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಅಯ್ಯರ್ 48.60ರ ಸರಾಸರಿಯಲ್ಲಿ 248 ರನ್ಗಳನ್ನು ಕಲೆ ಹಾಕಿದ್ದರು. ಶ್ರೇಯಸ್ ಅಯ್ಯರ್ ಎರಡು ಅರ್ಧಶತಕಗಳನ್ನು ಕೂಡ ಸಿಡಿಸಿದ್ದರು. ಆದರೆ, ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಅವರು, ಶ್ರೇಯಸ್ ಅಯ್ಯರ್ ಅವರು ಫೈನಲ್ ಪಂದ್ಯದಲ್ಲಿ ಔಟ್ ಆದ ಹಾದಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಯ್ಯರ್ ಅವರೇ ಔಟ್ ಆಗದೆ ಪಂದ್ಯವನ್ನು ಮುಗಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಮಾರ್ಚ್ 9 ರಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಕಿವೀಸ್ ನೀಡಿದ್ದ 252 ರನ್ಗಳ ಗುರಿ ಹಿಂಬಾಲಿಸಿದ್ದ ಭಾರತ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಶ್ರೇಯಸ್ ಅಯ್ಯರ್, 62 ಎಸೆತಗಳಲ್ಲಿ 48 ರನ್ಗಳನ್ನು ಕಲೆ ಹಾಕಿ ಉತ್ತಮ ಆರಂಭವನ್ನು ಪಡೆದಿದ್ದಾರೆ. ಆದರೆ, ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಶ್ರೇಯಸ್ ಅಯ್ಯರ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಅರ್ಧಶತಕವನ್ನು ಕಳೆದುಕೊಂಡಿದ್ದರು. ಆ ಮೂಲಕ ಸಿಕ್ಕಿದ್ದ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನಾಗಿ ಕಲೆ ಹಾಕುವಲ್ಲಿ ಅವರು ವಿಫಲರಾಗಿದ್ದರು.ಆದರೆ,ಅಕ್ಷರ್ ಪಟೇಲ್ ಅವರ ಜೊತೆ ಸೇರಿ 61 ರನ್ಗಳ ಜೊತೆಯಾಟವನ್ನು ಆಡಿದ್ದರು.
ರೋಹಿತ್ ಶರ್ಮಾ ವಿದಾಯ ಹೇಳುವ ಅಗತ್ಯವಿಲ್ಲ, ಅವರು ಅತ್ಯುತ್ತಮ ನಾಯಕ: ಎಬಿಡಿ!
ಅಂದ ಹಾಗೆ ಶ್ರೇಯಸ್ ಅಯ್ಯರ್ ಟೂರ್ನಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ದಿಲೀಪ್ ವೆಂಗ್ಸರ್ಕಾರ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಆದರ, ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಅವರೇ ಗೆಲ್ಲಿಸಬೇಕಾಗಿತ್ತು ಎಂದು ಹೇಳಿದ್ದಾರೆ.
"ಶ್ರೇಯಸ್ ಅಯ್ಯರ್ ತುಂಬಾ ಚೆನ್ನಾಗಿ ಆಡಿದ್ದಾರೆ ಆದರೆ ಫೈನಲ್ನಲ್ಲಿ ಅವರು ಔಟ್ ಆದ ರೀತಿ ನನಗೆ ಸಂತೋಷವಾಗಿಲ್ಲ. ಅವರು ಕೊನೆಯವರೆಗೂ ಆಡಿ ಪಂದ್ಯವನ್ನು ಮುಗಿಸಬೇಕಿತ್ತು. ಆದರೆ ಅವರು ತನ್ನ ಸಾಮರ್ಥ್ಯವನ್ನು ಅರಿತುಕೊಂಡದ್ದನ್ನು ನೋಡುವುದು ಸಂತೋಷವಾಯಿತು," ಎಂದು ಮಾಜಿ ಸೆಲೆಕ್ಟ್ರ್ ದಿಲೀಪ್ ವೆಂಗ್ಸರ್ಕಾರ್ ತಿಳಿಸಿದ್ದಾರೆ.
ಕೆಎಲ್ ರಾಹುಲ್ ಬಗ್ಗೆ ಹೇಳಿಕೆ
"ಕೆಎಲ್ ರಾಹುಲ್ ಕೂಡ ಆರನೇ ಕ್ರಮಾಂಕದಲ್ಲಿ ಕೆಲವು ಪ್ರಮುಖ ಇನಿಂಗ್ಸ್ಗಳನ್ನು ಆಡಿದ್ದಾರೆ. ಆದರೆ ಅಕ್ಷರ್ ಪಟೇಲ್ ಐದನೇ ಕ್ರಮಾಂಕದಲ್ಲಿ ರಾಹುಲ್ಗೂ ಮುನ್ನ ಬ್ಯಾಟ್ ಮಾಡುತ್ತಾರೆಂದು ನಾನು ನಂಬುವುದಿಲ್ಲ. ಎಡ-ಬಲಗೈ ಸಂಯೋಜನೆಯೇ ಇದಕ್ಕೆ ಕಾರಣವಾಗಿರಬಹುದು," ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ಉಂಟಾದ ಲಾಭವೇನೆಂದು ತಿಳಿಸಿದ ಸುನೀಲ್ ಗವಾಸ್ಕರ್!
ಅಕ್ಷರ್ ಪಟೇಲ್ ಅವರನ್ನು ಕೆ.ಎಲ್. ರಾಹುಲ್ ಮೇಲೆ ಬ್ಯಾಟಿಂಗ್ ಮಾಡುವಂತೆ ಮಾಡುವುದು ಭಾರತದ ಮಾಸ್ಟರ್ ಪ್ಲಾನ್ ಆಗಿತ್ತು. ಅಗ್ರಸ್ಥಾನದಲ್ಲಿ ಬ್ಯಾಟ್ ಮಾಡುವಾಗ, ಅಕ್ಷರ್ ಯಾವುದೇ ಒತ್ತಡವಿಲ್ಲದೆ ಆಡುತ್ತಿರುವುದು ಕಂಡುಬಂದಿತು. ಅವರು ತಮ್ಮ ಅತಿಥಿ ಪಾತ್ರಗಳೊಂದಿಗೆ ತಂಡಕ್ಕೆ ವೇದಿಕೆಯನ್ನು ಒದಗಿಸುತ್ತಿದ್ದರು, ಇದು ನಂತರ ಕೆಎಲ್ ರಾಹುಲ್ ಸೇರಿದಂತೆ ಇತರ ಬ್ಯಾಟ್ಸ್ಮನ್ಗಳಿಗೆ ಪ್ರಯೋಜನವನ್ನು ನೀಡಿತು. ಅವರ ನಂತರ ಬಂದ ರಾಹುಲ್, ಒತ್ತಡವನ್ನು ಚೆನ್ನಾಗಿ ನಿಭಾಯಿಸಿ ಭಾರತಕ್ಕೆ ಪಂದ್ಯವನ್ನು ಗೆದ್ದ ನಂತರ ಡಗೌಟ್ಗೆ ಮರಳುತ್ತಿದ್ದರು. ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಫಿನಿಷರ್ ಪಾತ್ರ ವಹಿಸಿದ್ದಾರೆ ಮತ್ತು 5 ಪಂದ್ಯಗಳಲ್ಲಿ 140 ರನ್ ಗಳಿಸಿದ್ದಾರೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ವೆಂಗ್ಸರ್ಕಾರ್ ಕೂಡ ಮನ್ನಣೆ ನೀಡಿದರು. "ಇದರ ಶ್ರೇಯಸ್ಸು ಆಯ್ಕೆದಾರರಿಗೆ ಸಲ್ಲಬೇಕು," ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಸರಣಿಯ ನಂತರ ಅವರು ರೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡಿದ್ದಾರೆ. ತಂಡದಲ್ಲಿ ಐದು ಸ್ಪಿನ್ನರ್ಗಳನ್ನು ಸೇರಿಸಿಕೊಳ್ಳುವ ನಿರ್ಧಾರವು ಸಹ ಮಾಸ್ಟರ್ ಸ್ಟ್ರೋಕ್ ಎಂದು ಸಾಬೀತಾಯಿತು. ಟೂರ್ನಿಯಲ್ಲಿ ಭಾರತ ತಂಡ ನಾಲ್ವರು ಸ್ಪಿನ್ನರ್ಗಳೊಂದಿಗೆ ಆಡುತ್ತಿರುವುದು ಕಂಡುಬಂದಿದೆ. ದುಬೈ ಪಿಚ್ನಲ್ಲಿ ಭಾರತ ತಂಡಕ್ಕೂ ಇದರ ಲಾಭ ಸಿಕ್ಕಿತು.