ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಆರ್‌ಸಿಬಿ ಈ ಸಲ ಕಪ್‌ ಗೆಲ್ಲುವುದು ಪಕ್ಕಾʼ-ಶೇನ್ ವ್ಯಾಟ್ಸನ್ ಭವಿಷ್ಯ ನಿಜವಾಗುತ್ತಾ?

ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಮೊದಲನೇ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನವೇ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಅವರು ರಜತ್ ಪಾಟಿದಾರ್ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೆ ಪ್ರಸಕ್ತ ಟೂರ್ನಿಯಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆದ್ದರೆ, ವಿರಾಟ್ ಕೊಹ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ಆರ್‌ಸಿಬಿ ಈ ಸಲ ಕಪ್‌ ಗೆಲ್ಲುವುದು ಪಕ್ಕಾ ಎಂದ ಶೇನ್‌ ವ್ಯಾಟ್ಸನ್‌!

ಆರ್‌ಸಿಬಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ಶೇನ್‌ ವ್ಯಾಟ್ಸನ್‌.

Profile Ramesh Kote May 29, 2025 8:06 PM

ಚಂಡೀಗಢ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಲಿದೆ ಹಾಗೂ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯಲಿದ್ದಾರೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಶೇನ್ ವಾಟ್ಸನ್ (Shane Watson) ಭವಿಷ್ಯ ನುಡಿದಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಎಲ್ಲಾ ವಿಭಾಗಗಳಲ್ಲೂ ಸಂಘಟಿತ ಪ್ರದರ್ಶನ ತೋರುತ್ತಿರುವ ರಜತ್ ಪಾಟಿದಾರ್ ( Rajath Patidar) ಪಡೆ ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ 19 ಅಂಕ ಸಂಗ್ರಹಿಸಿ 9 ವರ್ಷಗಳ ನಂತರ ಎರಡನೇ ಸ್ಥಾನದೊಂದಿಗೆ ಮೊದಲನೇ ಕ್ವಾಲಿಫೈಯರ್‌ಗೆ ಪ್ರವೇಶ ಮಾಡಿದೆ.

ಐಪಿಎಲ್‌ ಆರಂಭಗೊಂಡ ಆವೃತ್ತಿಯಿಂದಲೂ ಮೂರು ಬಾರಿ ರನ್ನರ್ ಅಪ್ ಆಗಿ ತಮ್ಮ ಪಯಣ ಮುಗಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 18ನೇ ಸೀಸನ್‌ನಲ್ಲಿ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸುತ್ತದೆ. ಪ್ಲೇಆಫ್ಸ್ ಹಂತದಲ್ಲಿ ಅನುಭವಿ ವೇಗಿ ಜಾಶ್‌ ಹೇಝಲ್‌ವಿಡ್‌ ತಂಡ ಕೂಡಿಕೊಂಡಿರುವುದು ದೊಡ್ಡ ವರದಾನವಾಗಿದೆ ಎಂದು ವ್ಯಾಟ್ಸನ್ ಹೇಳಿದ್ದಾರೆ.

IPL 2025: GT vs MI ನಡುವೆ ಎಲಿಮಿನೇಟರ್‌ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಯಾವುದು?

ಆರ್‌ಸಿಬಿ ಕಪ್‌ ಗೆಲ್ಲಲಿದೆ: ಶೇನ್ ವ್ಯಾಟ್ಸನ್

ತಮ್ಮದೇ ಆದ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಮಾತನಾಡಿದ ಶೇನ್‌ ವ್ಯಾಟ್ಸನ್‌, "2025ರ ಐಪಿಎಲ್ ಟೂರ್ನಿಯಲ್ಲಿ ವಿಜೇತ ತಂಡದ ಬಗ್ಗೆ ಸುದೀರ್ಘವಾಗಿ ಯೋಚಿಸಿದ್ದೇನೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚಾಂಪಿಯನ್ ಪಟ್ಟ ಅಲಂಕರಿಸುತ್ತದೆ ಹಾಗೂ ದಿಗ್ಗಜ ವಿರಾಟ್ ಕೊಹ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆಯುತ್ತಾರೆ ಎಂದು ಹೇಳುತ್ತೇನೆ. ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲುತ್ತದೆ ಎಂದು ಹೇಳುವುದಕ್ಕೆ ಬಲವಾದ ಕಾರಣವೂ ಇದೆ. ಪ್ರತಿ ಆವೃತ್ತಿಯಲ್ಲೂ ತಂಡಕ್ಕೆ ಅಂತಿಮ ಘಟ್ಟದಲ್ಲಿ ಒಂದು ಕಪ್ಪುಚುಕ್ಕಿ ಇರುತ್ತಿತ್ತು. ಆದರೆ ಪ್ಲೇಆಫ್ಸ್ ಹಂತದಲ್ಲಿ ಜಾಶ್‌ ಹೇಝಲ್‌ವುಡ್ ತಂಡಕ್ಕೆ ಮರಳಿರುವುದು ಆರ್‌ಸಿಬಿಗೆ ಈ ವರ್ಷ ಶುಭ ಸಂಕೇತವಾಗಿದೆ," ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ.

IPL 2025:ʻದಿಗ್ವೇಶ್‌ ಸಿಂಗ್‌ ರನ್‌ಔಟ್‌ ವಿವಾದʼ-ರಿಷಭ್‌ ಪಂತ್‌ ವಿರುದ್ಧ ಅಶ್ವಿನ್‌ ಕಿಡಿ!

ಅಭಿಮಾನಿಗಳ ಕ್ಷಮೆಯಾಚಿಸಿದ್ಧ ವ್ಯಾಟ್ಸನ್

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲುವ ಅವಕಾಶ ಇತ್ತು. ಆದರೆ ಡೇವಿಡ್ ವಾರ್ನರ್ ಸಾರಥ್ಯದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 8 ರನ್ ಸೋಲು ಕಂಡಿತ್ತು. ಪಂದ್ಯದಲ್ಲಿ ಶೇನ್ ವ್ಯಾಟ್ಸನ್ ತಾವು ಮಾಡಿದ 4 ಓವರ್‌ಗಳಲ್ಲಿ 61 ರನ್ ನೀಡಿದರೆ, ಬ್ಯಾಟ್‌ನಲ್ಲೂ ಮೋಡಿ ಮಾಡದೆ 11 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ತನ್ನಿಂದಲೇ ತಂಡ ಸೋಲು ಕಂಡಿತು ಎಂಬ ಭಾವನೆಯಿಂದ ಶೇನ್ ವ್ಯಾಟ್ಸನ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದರು.

ಆರ್‌ಸಿಬಿಗೆ ಹೇಝಲ್‌ವುಡ್ ಬಲ

ಆಸ್ಟ್ರೇಲಿಯಾದ ಮಾರಕ ವೇಗಿ ಜಾಶ್‌ ಹೇಝಲ್‌ವುಡ್ ಭುಜದ ಗಾಯದ ಸಮಸ್ಯೆಯಿಂದ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಿಂದ ಹಿಂದೆ ಸರಿದಿದ್ದರು. ಆದರೆ ಈಗ ಸಂಪೂರ್ಣ ಫಿಟ್ನೆಸ್ ಹೊಂದಿ ತಂಡಕ್ಕೆ ಮರಳಿರುವುದು ಒಳ್ಳೆಯ ಸಂಗತಿಯಾಗಿದೆ. ರಜತ್ ಪಾಟಿದಾರ್ ಪಡೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಬೇಕಾದರೆ ಹೇಝಲ್‌ವುಡ್ ಪಾತ್ರ ಪ್ರಮುಖವಾಗಿದೆ.