ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಆರ್‌ಸಿಬಿ ಮುಖ್ಯ ಕೋಚ್‌ಗೆ ಪಂದ್ಯ ಶುಲ್ಕದ ಶೇ 15ರಷ್ಟು ದಂಡ ವಿಧಿಸಿದ ಐಪಿಎಲ್

RCB vs MI: ರಾಜ್ ಬಾವಾ ಅವರ ಅಂತಿಮ ಎಸೆತದಲ್ಲಿ ರಸಿಕ್ ಸಲಾಂ ಎರಡು ರನ್ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಿತು.

ಆರ್‌ಸಿಬಿ ಮುಖ್ಯ ಕೋಚ್‌ಗೆ ಪಂದ್ಯ ಶುಲ್ಕದ ಶೇ 15ರಷ್ಟು ದಂಡದ ಶಿಕ್ಷೆ

andy flower -

Abhilash BC
Abhilash BC May 11, 2026 10:32 AM

ರಾಯ್ಪುರ, ಮೇ 11: ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಪಂದ್ಯದ ವೇಳೆ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ.

"ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮುಖ್ಯ ತರಬೇತುದಾರ ಆಂಡಿ ಫ್ಲವರ್, ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಐಪಿಎಲ್ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಅನ್ವಯವಾಗುವ ಪಂದ್ಯ ಶುಲ್ಕದ 15% ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

"ಆಂಡಿ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ, ಇದು 'ಪಂದ್ಯದ ಸಮಯದಲ್ಲಿ ಶ್ರವ್ಯ ಅಶ್ಲೀಲತೆಯನ್ನು ಬಳಸುವುದಕ್ಕೆ' ಸಂಬಂಧಿಸಿದೆ. 17.2 ಓವರ್‌ನಲ್ಲಿ ಆಂಡಿ ನಾಲ್ಕನೇ ಅಂಪೈರ್ ಜೊತೆ ಆಕ್ರಮಣಕಾರಿಯಾಗಿ ಮಾತನಾಡಿದಾಗ ಈ ಘಟನೆ ಸಂಭವಿಸಿದೆ. ಆಂಡಿ ಅಪರಾಧವನ್ನು ಒಪ್ಪಿಕೊಂಡರು ಮತ್ತು ಪಂದ್ಯದ ರೆಫರಿ ಅಮಿತ್ ಶರ್ಮಾ ವಿಧಿಸಿದ ಶಿಕ್ಷೆಯನ್ನು ಒಪ್ಪಿಕೊಂಡರು" ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ ಬಾವಾ ಅವರ ಅಂತಿಮ ಎಸೆತದಲ್ಲಿ ರಸಿಕ್ ಸಲಾಂ ಎರಡು ರನ್ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಿತು.

ಮುಂಬೈ ಪಂದ್ಯಕ್ಕೂ ಮುನ್ನ ಉರ್ವಿಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್‌ ವೀಕ್ಷಿಸಿದ ಕೊಹ್ಲಿ

ನಮನ್ ಧೀರ್ 47 ರನ್ ಗಳಿಸಿ ಮುಂಬೈ ತಂಡವು 166/7 ರನ್ ಗಳಿಸಲು ಕಾರಣರಾದರು. ಆದರೆ ಕೃನಾಲ್ ಪಾಂಡ್ಯ ಅವರ ಅಬ್ಬರದ ಅರ್ಧಶತಕವು ಈ ಋತುವಿನಲ್ಲಿ ಬೆಂಗಳೂರಿನ ಎರಡನೇ 'ತವರು' ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗೆಲವಿನ ಹಾದಿಗೆ ಮುನ್ನಡೆಯುವಂತೆ ಮಾಡಿತು. ನೋವಿನ ಮಧ್ಯೆಯೂ ಕೃಣಾಲ್ ಪಾಂಡ್ಯ (73 ರನ್) ಅವರ ವೀರೋಚಿತ ಹೋರಾಟ ಎಲ್ಲರ ಮನಗೆದ್ದಿತು.

ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಕೊನೆಯ ಎರಡು ಓವರ್‌ಗಳಲ್ಲಿ 18 ರನ್‌ ಅಗತ್ಯವಿತ್ತು. ಆಗ ಜಸ್‌ಪ್ರೀತ್ ಬೂಮ್ರಾ 19ನೇ ಓವರ್‌ನಲ್ಲಿ ಕೇವಲ ಮೂರು ರನ್ ಬಿಟ್ಟುಕೊಟ್ಟರು. ಆರ್‌ಸಿಬಿಗೆ ಕೊನೆಯ ಓವರ್‌ ನಲ್ಲಿ 15 ರನ್‌ ಬೇಕಿತ್ತು. ಯುವ ಆಟಗಾರ ರಾಜ್ ಬಾವಾ ಈ ಓವರ್ ಬೌಲಿಂಗ್ ಮಾಡಿ ದರು. ಅವರು 3 ವೈಡ್,1 ನೋಬಾಲ್ ಹಾಕಿದರು. ಹೀಗಾಗಿ ಆರ್‌ಸಿಬಿಗೆ ಹೆಚ್ಚುವರಿ ರನ್‌ ಸಿಕ್ಕವು. ಕೊನೆಯ ಎಸೆತದಲ್ಲಿ ಎರಡು ರನ್‌ ಬೇಕಿದ್ದ ಸಂದರ್ಭದಲ್ಲಿ ರಸಿಕ್ ಚುರುಕುತನ ಬ್ಯಾಟಿಂಗ್‌ ಮೂಲಕ ರನ್‌ ಗಳಿಸಿ ಗೆಲುವಿನ ಸಂಭ್ರಮ ಅಚರಿಸಿದರು.