ದುರಂತವನ್ನೇ ಸೋಲಿಸಿ ಚೊಚ್ಚಲ ಪ್ರಯತ್ನದಲ್ಲೇ ಕಾಮನ್ವೆಲ್ತ್ ಪದಕ ಗೆದ್ದ ಕನ್ನಡತಿ ಶಿಲ್ಪಾ
Shilpa K S: ರೈತ ಶೈಲಾ ಹಾಗೂ ಗೃಹಿಣಿ ಶಾಂತಾ ದಂಪತಿ ಪುತ್ರಿಯಾಗಿರುವ ಶಿಲ್ಪಾ, ಗ್ರಾಮೀಣ ವಾತಾವರಣದಲ್ಲೇ ಬೆಳೆದವರು. ಕ್ರೀಡೆಗೆ ಹೆಚ್ಚಿನ ಅವಕಾಶಗಳಿಲ್ಲದ ಪರಿಸ್ಥಿತಿಯಲ್ಲೂ ಸ್ನಾತಕೋತ್ತರ ಪದವಿ ಹಾಗೂ ಬಿಇಡಿ ಪೂರ್ಣಗೊಳಿಸಿ, ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
Shilpa celebrate winning medals -
ಬೆಂಗಳೂರು, ಜು.28: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ಶಾಟ್ಪುಟ್ F57 ಫೈನಲ್ನಲ್ಲಿ ಮೈಸೂರಿನ ಕೆ.ಎಸ್. ಶಿಲ್ಪಾ, ಎಲ್ಲಾ ಅಡೆತಡೆಗಳನ್ನು ಮೀರಿ ಚೊಚ್ಚಲ ಪ್ರಯತ್ನದಲ್ಲೇ ಕಂಚಿನ ಪದಕ ಗೆದ್ದು ದೇಶ ಮತ್ತು ರಾಜ್ಯ ಹೆಮ್ಮೆಪಡುವಂತೆ ಮಾಡಿದ್ದಾರೆ. ಇದೇ ವಿಭಾಗದಲ್ಲಿ 40 ವರ್ಷದ ಶರ್ಮಿಳಾ ಧಂಕರ್ ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿದರು.
ಆರಂಭದಲ್ಲಿ ಕೆ.ಎಸ್. ಶಿಲ್ಪಾ ಪದಕಗಳಿಂದ ಹೊರಗುಳಿದ ನಂತರ ನಾಟಕೀಯ ತಿರುವು ಪಡೆಯಿತು. ಭಾರತೀಯ ತಂಡದ ಯಶಸ್ವಿ ಪ್ರತಿಭಟನೆಯ ನಂತರ ಅವರು ಕಂಚಿಗೆ ಬಡ್ತಿ ಪಡೆದರು. ಶಿಲ್ಪಾ ಫೈನಲ್ನಲ್ಲಿ ವೈಯಕ್ತಿಕ ಅತ್ಯುತ್ತಮ ಎಸೆತ 7.26 ಮೀಟರ್ ದಾಖಲಿಸಿದರು ಮತ್ತು ನೈಜೀರಿಯಾದ ಯುಚಾರಿಯಾ ಇಯಾಜಿ ಸಮೀಕರಣವನ್ನು ಪ್ರವೇಶಿಸುವ ಮೊದಲು ಪದಕ ಸ್ಥಾನದಲ್ಲಿ ಕುಳಿತಿದ್ದರು. ಹಾಲಿ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಮತ್ತು ಬಹು ಪ್ಯಾರಾಲಿಂಪಿಕ್ ಪದಕ ವಿಜೇತೆ ಇಯಾಜಿ 8.19 ಮೀಟರ್ ಪ್ರಯತ್ನವನ್ನು ಆರಂಭದಲ್ಲಿ ಮಾನ್ಯವೆಂದು ಘೋಷಿಸಲಾಯಿತು. ಆ ಅಂಕವು ಇಯಾಜಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿತು ಮತ್ತು ಶಿಲ್ಪಾ ಅವರನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿತು.
ಶ್ರೀಲಂಕಾ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಜಡೇಜಾ ಕಮ್ಬ್ಯಾಕ್
ಆದರೆ ಇಯಾಜಿಯವರ 8.19 ಮೀ ಪ್ರಯತ್ನದ ವಿರುದ್ಧ ಭಾರತವು ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿತು. ಇದರಿಂದಾಗಿ ಅಧಿಕಾರಿಗಳು ನೈಜೀರಿಯಾದ ಅಥ್ಲೀಟ್ನ ಎಸೆತವನ್ನು ಪರಿಶೀಲಿಸಲು ಪ್ರೇರೇಪಿಸಿದರು. ಪರಿಶೀಲನೆಯ ನಂತರ, ನಿರ್ಧಾರವನ್ನು ರದ್ದುಗೊಳಿಸಲಾಯಿತು ಮತ್ತು ಪ್ರಯತ್ನವನ್ನು ಫೌಲ್ ಎಂದು ಘೋಷಿಸಲಾಯಿತು. ಬಹುಮುಖ್ಯವಾಗಿ, 8.19 ಮೀ ಪ್ರಯತ್ನವು ಆರಂಭದಲ್ಲಿ ಮಾನ್ಯವೆಂದು ಪರಿಗಣಿಸಲಾದ ಇಯಾಜಿಯ ಏಕೈಕ ಥ್ರೋ ಆಗಿತ್ತು. ಒಮ್ಮೆ ಅದನ್ನು ಅವರ ದಾಖಲೆಯಿಂದ ತೆಗೆದುಹಾಕಿದ ನಂತರ, ಅವರು ಸ್ಪರ್ಧೆಯಲ್ಲಿ ಮಾನ್ಯ ಅಂಕವನ್ನು ಪಡೆಯಲಿಲ್ಲ. ಅದು ಸ್ವಯಂಚಾಲಿತವಾಗಿ ಶಿಲ್ಪಾ ಅವರ 7.26 ಮೀ ಪ್ರಯತ್ನವನ್ನು ಮೂರನೇ ಸ್ಥಾನಕ್ಕೆ ಹಿಂತಿರುಗಿಸಿತು ಮತ್ತು ಭಾರತೀಯ ಆಟಗಾರ್ತಿಯನ್ನು ನಾಲ್ಕನೇ ಸ್ಥಾನದಿಂದ ಕಂಚಿನ ಪದಕ ಸ್ಥಾನಕ್ಕೆ ಏರಿಸಿತು.
Resilience. Determination. Inspiration. 🇮🇳🥉
— Sonal Goel IAS 🇮🇳 (@sonalgoelias) July 28, 2026
Heartiest congratulations to Ms Shilpa Shyla on winning the Bronze Medal in the Women’s Shot Put F57 event at the Commonwealth Games 2026, Glasgow! 👏🏻
Your remarkable achievement is a testament to courage, perseverance and unwavering… pic.twitter.com/xNkovVCZWY
ದುರಂತವನ್ನೇ ಸೋಲಿಸಿದ ಶಿಲ್ಪಾ
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ 36 ವರ್ಷದ ಕೆ.ಎಸ್. ಶಿಲ್ಪಾ, ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಮನೆಯ ಸಮೀಪ ಐಸ್ಕ್ರೀಂ ಖರೀದಿಸಿ ಹಿಂದಿರುಗುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಡಗಾಲನ್ನೇ ಕಳೆದುಕೊಂಡರು. ಆದರೆ ಎಲ್ಲರಂತೆ ಈ ಘಟನೆಯನ್ನು ತನ್ನ ಪಾಲಿನ ದೌರ್ಭಾಗ್ಯವೆಂದು ನೆನೆದು ಮನೆಯಲ್ಲೇ ಉಳಿಯದ ಅವರು ತನಗೆ ಬಂದೊದಗಿದ ದುರ್ಗತಿಯನ್ನು ಸೂರ್ತಿಯಾಗಿ ಸ್ವೀಕರಿಸಿ, ಗೆಳತಿ ನೀಡಿದ ಅಮೂಲ್ಯ ಸಲಹೆಯಂತೆ ವಿಶೇಷ ಚೇತನರಿಗಾಗಿಯೇ ಇರುವ ಕ್ರೀಡಾ ಅಭ್ಯಾಸದಲ್ಲಿ ತೊಡಗಿಸಿಕೊಂಡರು.
ಅವರ ಈ ಪ್ರಾಮಾಣಿಕ ಪ್ರಯತ್ನ 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವಂತೆ ಮಾಡಿತು. ವಿಶೇಷವೆಂದರೆ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಸ್ಪರ್ಧಿಸಲು ರಾಜ್ಯದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಇವರಾಗಿದ್ದರು.
ಕಾಮನ್ವೆಲ್ತ್ ವೇಟ್ಲಿಫ್ಟಿಂಗ್: ಒಂದು ಅಂಕದ ಅಂತರದಲ್ಲಿ ಚಿನ್ನ ಕಳೆದುಕೊಂಡ ಅಜಯ ಬಾಬು; ಬೆಳ್ಳಿಗೆ ತೃಪ್ತಿ
ರೈತ ಶೈಲಾ ಹಾಗೂ ಗೃಹಿಣಿ ಶಾಂತಾ ದಂಪತಿ ಪುತ್ರಿಯಾಗಿರುವ ಶಿಲ್ಪಾ, ಗ್ರಾಮೀಣ ವಾತಾವರಣದಲ್ಲೇ ಬೆಳೆದವರು. ಕ್ರೀಡೆಗೆ ಹೆಚ್ಚಿನ ಅವಕಾಶಗಳಿಲ್ಲದ ಪರಿಸ್ಥಿತಿಯಲ್ಲೂ ಸ್ನಾತಕೋತ್ತರ ಪದವಿ ಹಾಗೂ ಬಿಇಡಿ ಪೂರ್ಣಗೊಳಿಸಿ, ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿದಿನ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪರಿಚಯವಾದ ಗೆಳತಿ ಗೀತಾ ಅವರು ಪ್ಯಾರಾ ಕ್ರೀಡೆಗಳತ್ತ ಶಿಲ್ಪಾ ಅವರನ್ನು ಕರೆದೊಯ್ದರು. 2019ರಲ್ಲಿ ಕ್ರೀಡಾ ಬದುಕಿಗೆ ಮುಖ ಮಾಡುವ ವೇಳೆ ಶಿಲ್ಪಾಗೆ 29 ವರ್ಷ.
Meet Shilpa K.S., a 37-year-old para-athlete from Kanchugara Koppalu, Karnataka whose extraordinary journey inspires both admiration and respect. At the age of four, Shilpa lost her left leg after being struck by a speeding truck. With the unwavering support of her parents and… pic.twitter.com/QN2xbMG2yW
— Dr. G Parameshwara (@DrParameshwara) July 24, 2026
ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್ ಆಯ್ಕೆ ಮಾಡಿಕೊಂಡ ಅವರು, ಕರ್ನಾಟಕ ತಂಡವನ್ನು ನಾಲ್ಕು ಬಾರಿ ಮುನ್ನಡೆಸಿದರು. ಅವರ ಸಾಮರ್ಥ್ಯವನ್ನು ಗುರುತಿಸಿದ ವಾಲಿಬಾಲ್ ಕೋಚ್ ರಾಘವೇಂದ್ರ, ವೈಯಕ್ತಿಕ ಸ್ಪರ್ಧೆಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದರು. ಅದರಂತೆ 2024ರಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ಎಸ್.ಡಿ. ಈಶಾನ್ಅವರಿಂದ ತರಬೇತಿ ಪಡೆದರು. ಬಳಿಕ ಸತ್ಯನಾರಾಯಣ ಅವರು ಅಂತಾರಾಷ್ಟ್ರೀಯ ವರ್ಗೀಕರಣ ಪ್ರಕ್ರಿಯೆಯಲ್ಲಿ ನೆರವಾದರು. ಪರಿಣಾಮ 2023ರಲ್ಲಿ ಥಾಯ್ಲೆಂಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆ ಡಿಸ್ಕಸ್ನಲ್ಲಿಬೆಳ್ಳಿ ಹಾಗೂ ಜಾವೆಲಿನ್ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಮೊದಲ ಅಂತಾರಾಷ್ಟ್ರೀಯ ಯಶಸ್ಸು ಕಂಡರು.
ಸಿಎಂ ಡಿ.ಕೆ. ಶಿವಕುಮಾರ್ ಅಭಿನಂದನೆ
ಕಂಚಿನ ಪದಕ ಗೆದ್ದ ಕರ್ನಾಟಕದ ಶಿಲ್ಪಾ ಕೆ. ಶೈಲಾ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟ್ವೀಟ್ ಮೂಲಕ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
"ನಿಮ್ಮ ಗಮನಾರ್ಹ ಸಾಧನೆ ಕರ್ನಾಟಕ ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಿಮ್ಮ ದೃಢನಿಶ್ಚಯ, ಸ್ಥಿತಿಸ್ಥಾಪಕತ್ವ ಮತ್ತು ಅಚಲ ಮನೋಭಾವವು ಅಸಂಖ್ಯಾತ ಯುವ ಕ್ರೀಡಾಪಟುಗಳಿಗೆ ದೊಡ್ಡ ಕನಸು ಕಾಣಲು ಮತ್ತು ಶ್ರೇಷ್ಠತೆಗಾಗಿ ಶ್ರಮಿಸಲು ಸ್ಫೂರ್ತಿ ನೀಡುತ್ತದೆ. ನೀವು ನಿರಂತರ ಯಶಸ್ಸು ಮತ್ತು ಭಾರತಕ್ಕೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಗೆಲ್ಲುವಂತಾಗಲಿ" ಎಂದು ಹಾರೈಸಿದರು.