ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಉತ್ತರ ಕನ್ನಡ
Rani Chennabhaira Devi: ʼಕಾಳುಮೆಣಸಿನ ರಾಣಿʼ ಚೆನ್ನಾಭೈರಾದೇವಿ ನೆನಪಿನ ಅಂಚೆ ಚೀಟಿ ಬಿಡುಗಡೆಗೊಳಿಸಿದ ರಾಷ್ಟ್ರಪತಿ

ಕಾಳುಮೆಣಸಿನ ರಾಣಿ ಚೆನ್ನಾಭೈರಾದೇವಿ ನೆನಪಿನ ಅಂಚೆ ಚೀಟಿ ಬಿಡುಗಡೆ

Draupadi Murmu: ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Karnataka High Court: ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ಮಹಿಳೆಯ ಗಡೀಪಾರಿಗೆ ಹೈಕೋರ್ಟ್‌ ತಡೆಯಾಜ್ಞೆ

ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ಮಹಿಳೆಯ ಗಡೀಪಾರಿಗೆ ಹೈಕೋರ್ಟ್‌ ತಡೆಯಾಜ್ಞೆ

Gokarna: ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ (ಯುಎನ್‌ಆರ್‌ಸಿ) ನಿರ್ಣಯಗಳನ್ನು ಪರಿಗಣಿಸುವ ಅಗತ್ಯದ ಬಗ್ಗೆ ಉಲ್ಲೇಖಿಸಿರುವ ಹೈಕೋರ್ಟ್‌, ಮಹಿಳೆ ಹಾಗೂ ಮಕ್ಕಳ ಗಡೀಪಾರು ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ. ತಕ್ಷಣ ಗಡಿಪಾರು ಮಾಡಿದರೆ ಅವರ ಜೀವನಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದಿದೆ.

Sirsi News: ಬಾಂಗ್ಲಾ ಮತ್ತು ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಈ ಜಿಲ್ಲೆಯಲ್ಲಿ “ಕೂಬಿಂಗ್ ಆಪರೇಷನ್” ಆಗಲಿ

ಜಿಲ್ಲೆಯಲ್ಲಿ “ಕೂಬಿಂಗ್ ಆಪರೇಷನ್” ಆಗಲಿ

ಬಾಂಗ್ಲಾದೇಶಿ ಮತ್ತು ಕೆಲವು ರೋಹಿಂಗ್ಯಾ ಮುಸಲ್ಮಾನರು ಅಕ್ರಮವಾಗಿ ಪಶ್ಚಿಮ ಬಂಗಾಲ, ಆಸ್ಸಾಂ ಮತ್ತು ಕೆಲವು ಪೂರ್ವಾಂಚಲ ರಾಜ್ಯಗಳಿಗೆ ಅಕ್ರಮ ಪ್ರವೇಶ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ. ಈ ರೀತಿಯ ನುಸುಳುಕೋರರು ಕರ್ನಾಟಕ ರಾಜ್ಯದಲ್ಲೂ ಸಹ ಸೇರಿಕೊಂಡಿರು ವುದು ಈಗಾಗಲೇ ಅನೇಕ ಕಡೆ ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಜನರೇ ಸ್ಪಯಂ ಸ್ಪೂರ್ತಿಯಿಂದ ಇಂತಹ ನುಸುಳುಕೋರರನ್ನು ಪತ್ತೆ ಹಚ್ಚುತ್ತಿದ್ದಾರೆ.

Sirsi News: ಮಾಧ್ಯಮ ಶ್ರೀ ಪ್ರಶಸ್ತಿಗೆ ವಿಶ್ವವಾಣಿ, ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಆಯ್ಕೆ

ಮಾಧ್ಯಮ ಶ್ರೀ ಪ್ರಶಸ್ತಿಗೆ ವಿನುತಾ ಹೆಗಡೆ ಆಯ್ಕೆ

2006ರಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ವಿನುತಾ ಹೆಗಡೆಯವರು ಯಲ್ಲಾಪುರ ತಾಲೂಕಿನ ಹಿಂದುಳಿದ ಗ್ರಾಮ ಭಾಗಿನಕಟ್ಟಾದಲ್ಲಿ 1979ರಂದು ಜನಿಸಿದವರು. ಇವರು ಹೈಸ್ಕೂಲು ವಿದ್ಯಾಭ್ಯಾಸವನ್ನು 14 ಕಿಲೋಮೀಟರ್ ದೂರ ನಡೆದು ಪೂರೈಸಿದ್ದಾರೆ. ಮದುವೆ ನಂತರದಲ್ಲಿ ಧಾರವಾಡ ಜೆ ಎಸ್ ಎಸ್ ನಲ್ಲಿ ಬಿ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ ಪಡೆದಿದ್ದಾರೆ.

Krishna Byre Gowda: ಭೂಕುಸಿತ, ಕಡಲ ಕೊರೆತ ತಡೆಗೆ 800 ಕೋಟಿ ಅನುದಾನ-ಕೃಷ್ಣ ಬೈರೇಗೌಡ

ಭೂಕುಸಿತ, ಕಡಲ ಕೊರೆತ ತಡೆಗೆ 800 ಕೋಟಿ ಅನುದಾನ- ಕೃಷ್ಣ ಬೈರೇಗೌಡ

Krishna Byre Gowda: ರಾಜ್ಯದ 6 ಜಿಲ್ಲೆಗಳಲ್ಲಿ ಭೂಕುಸಿತ ಸಮಸ್ಯೆ ತೀವ್ರವಾಗಿದ್ದು, ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ 500 ಕೋಟಿ ರೂ. ಮೀಸಲಿಡಲಾಗುತ್ತಿದೆ. ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲು ಕೊರೆತ ಸಮಸ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೂರು ಕೋಟಿಯಂತೆ 300 ಕೋಟಿ ರೂ. ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Sirsi News: ಕಾರಿನ ಮೇಲೆ ಬಿದ್ದ ಮರ: ಮಹಿಳೆ ಸಾವು

ಕಾರಿನ ಮೇಲೆ ಮರ ಬಿದ್ದು ಮಹಿಳೆ ಸಾವು

ಮೃತ ಮಹಿಳೆ ಮಲ್ಲಾಪುರ ಗ್ರಾಮದ ಲಕ್ಷ್ಮೀ ನಾರಾಯಣ ಮಮ್ತೆಕರ (55) ಎಂದು ಗುರುತಿಸಲಾಗಿದೆ. ಗರ್ಭಿಣಿ ಸೊಸೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಕೆಯ ಅತ್ತೆ ಲಕ್ಷ್ಮೀ ಮಮ್ತೆಕರ ಕಾರಿನೊಳಗೆ ಕುಳಿತುಕೊಂಡಿದ್ದರು. ಈ ವೇಳೆಗ ಬುಡ ಸಮೇತ ಬೃಹತ್ ಮರ ಕಾರಿನ ಮೇಲೆ ಉರುಳಿ ಬಿದ್ದಿದೆ..

Child Death: ಜೋಕಾಲಿಯಲ್ಲಿ ಆಡುವಾಗ ಶಾಲು ಕುತ್ತಿಗೆಗೆ ಸುತ್ತಿಕೊಂಡು ಮಗು ಸಾವು

ಜೋಕಾಲಿಯಲ್ಲಿ ಆಡುವಾಗ ಶಾಲು ಕುತ್ತಿಗೆಗೆ ಸುತ್ತಿಕೊಂಡು ಮಗು ಸಾವು

Child Death: ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಜೋಕಾಲಿ ಆಟ ಆಡುತ್ತಿದ್ದಳು. ಆಡುವಾಗ ಪ್ರಣಿತಾ ಕುತ್ತಿಗೆಯಲ್ಲಿದ್ದ ವೇಲ್‌ ಜೋಕಾಲಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗಲೇ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.

Self Harming: ಮೊಬೈಲ್‌ ನೋಡಬೇಡ ಎಂದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಮೊಬೈಲ್‌ ನೋಡಬೇಡ ಎಂದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Self Harming: ಹಳಿಯಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಓಂ ಕದಂ (13) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಪ್ರತಿದಿನ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದ ಮಗನಿಗೆ ತಂದೆ ಮನೋಹರ್ ಮೊಬೈಲ್ ನೋಡದಂತೆ ಬುದ್ದಿವಾದ ಹೇಳುತ್ತಿದ್ದರು.

Russian woman rescued: ಗೋವಾದಲ್ಲಿ ಇಸ್ರೇಲಿಗನ ಜತೆ ಪ್ರೀತಿ; 7 ವರ್ಷ ಲಿವ್‌ ಇನ್ ಬಳಿಕ ಗುಹೆ ಸೇರಿದ್ದ ರಷ್ಯಾ ಮಹಿಳೆ!

ಇಸ್ರೇಲಿಗನ ಜತೆ 7 ವರ್ಷ ಲಿವ್‌ ಇನ್ ಬಳಿಕ ಗುಹೆ ಸೇರಿದ್ದ ರಷ್ಯಾ ಮಹಿಳೆ!

Russian woman rescued: ಮಹಿಳೆ ನೀನಾ ಕುಟಿನಾ ರಷ್ಯಾ ಪ್ರಜೆಯಾಗಿದ್ದು, ಈಕೆ ಇಸ್ರೇಲ್‌ ಪ್ರಜೆ ಡ್ರೋರ್ ಗೋಲ್ಡ್‌ಸ್ಟೆನ್‌ ಎಂಬಾತನ ಜತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ. 2024ರ ಡಿಸೆಂಬರ್‌ನಲ್ಲಿ ತನಗೆ ಯಾವುದೇ ಮಾಹಿತಿ ನೀಡದೇ ಗೋವಾದಿಂದ ಹೊರಟು ಹೋಗಿದ್ದಳು ಎಂದು ಪ್ರಿಯಕರ ತಿಳಿಸಿದ್ದಾನೆ.

Bomb threat: ಭಟ್ಕಳ ಸ್ಫೋಟಿಸುವ ಬೆದರಿಕೆ ಹಾಕಿದ್ದ ಖಾಲಿದ್‌ ಅಲಿಯಾಸ್‌ ನಿತಿನ್‌ ಶರ್ಮಾ ಬಂಧನ

ಭಟ್ಕಳ ಸ್ಫೋಟದ ಬೆದರಿಕೆ ಹಾಕಿದ್ದ ಖಾಲಿದ್‌ ಅಲಿಯಾಸ್‌ ನಿತಿನ್‌ ಶರ್ಮಾ ಸೆರೆ

Bomb threat: ಭಟ್ಕಳ ನಗರವನ್ನು ಸ್ಫೋಟ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿದ್ದರು.

Book Release: ನಟ, ಸಾಹಿತಿ ಸುಚೇಂದ್ರ ಪ್ರಸಾದರಿಂದ ಕರ್ಮಫಲ ಕಾದಂಬರಿ ಬಿಡುಗಡೆ

ನಟ, ಸಾಹಿತಿ ಸುಚೇಂದ್ರ ಪ್ರಸಾದರಿಂದ ಕರ್ಮಫಲ ಕಾದಂಬರಿ ಬಿಡುಗಡೆ

ಹೊಸಪೇಟೆಯ ಯಾಜಿ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಸತೀಶ್ ಹೆಗಡೆ ಹೊನ್ನಾವರ ಅನಿಲಗೋಡಿನ ಬರೆದಿರುವ ಕರ್ಮಫಲ ಕಾದಂಬರಿಯನ್ನು ನಟ, ಸಾಹಿತಿ ಸುಚೇಂದ್ರ ಪ್ರಸಾದ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಸಹಿತವಾದ ಸಾಹಿತ್ಯದ ಸಾಂಗತ್ಯ ಅಗತ್ಯ, ಸೀತಲ ತಾಟಸ್ಯ ಇಂದು ಬಾಧಿಸುತ್ತಿದೆ ಎಂದರು.

Russian woman rescued: ಗೋಕರ್ಣದ ದಟ್ಟಾರಣ್ಯದ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯಾ ಮಹಿಳೆಯ ರಕ್ಷಣೆ!

ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ರಷ್ಯಾ ಮಹಿಳೆಯ ರಕ್ಷಣೆ!

Russian woman rescued: ಗೋಕರ್ಣದ ರಾಮತೀರ್ಥ ಗುಡ್ಡದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ, ಗುಹೆಯೊಳಗೆ ಅಪರಿಚಿತರು ವಾಸಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ವೇಳೆ ಪರಿಶೀಲಿಸಿದಾಗ, ರಷ್ಯಾ ಮಹಿಳೆಯೊಬ್ಬರು, ಇಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

Shocking News: 20 ದಿನದ ಮಗುವನ್ನು ಸಾಲ ತೀರಿಸಲು ಮಾರಾಟ ಮಾಡಿದ ದಂಪತಿ

20 ದಿನದ ಮಗುವನ್ನು ಸಾಲ ತೀರಿಸಲು ಮಾರಾಟ ಮಾಡಿದ ದಂಪತಿ

Shocking News: ಸದ್ಯ ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ. ದಂಪತಿ ನಾಪತ್ತೆಯಾಗಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಮಗು ಖರೀದಿಸಿದ ವ್ಯಕ್ತಿ ಹಾಗೂ ಅದಕ್ಕೆ ಸಹಕರಿಸಿದ ಚಾಲಕನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Bomb Threat: 24 ಗಂಟೆಯೊಳಗೆ ಭಟ್ಕಳ ಪಟ್ಟಣ ಸ್ಫೋಟಿಸುತ್ತೇವೆ: ಪೊಲೀಸ್‌ ಠಾಣೆಗೆ ಬಾಂಬ್‌ ಬೆದರಿಕೆ ಸಂದೇಶ

24 ಗಂಟೆಯೊಳಗೆ ಭಟ್ಕಳ ಪಟ್ಟಣ ಸ್ಫೋಟಿಸುತ್ತೇವೆ: ಬಾಂಬ್‌ ಬೆದರಿಕೆ ಸಂದೇಶ

Bomb Threat: ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬಾಂಬ್‌ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್‌ ಆಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ.

Drugs Case: ಶಿರಸಿಯಲ್ಲಿ ಅಕ್ರಮ ಗಾಂಜಾ ಸಾಗಾಟ; ಇಬ್ಬರು ಯುವಕರ ಬಂಧನ

ಶಿರಸಿಯಲ್ಲಿ ಅಕ್ರಮ ಗಾಂಜಾ ಸಾಗಾಟ :ಇಬ್ಬರ ಬಂಧನ

ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಶಿರಸಿ ಗ್ರಾಮೀಣ ಪೊಲೀಸರು ಶನಿವಾರ ಬೆಳಗಿನ ಜಾವ 3:00 ಗಂಟೆಗೆ ಬಂಧಿಸಿದ್ದಾರೆ. ಆರೋಪಿಗಳನ್ನು ವಿಕ್ರಮ್ ರಾಮಕೃಷ್ಣ ಭಟ್ (28) ಹಾಗೂ ಕಶ್ಯಪ್ ಮಂಜುನಾಥ ಹೆಗಡೆ (27) ಎಂದು ಗುರುತಿಸಲಾಗಿದ್ದು, ಇನ್ನೋವಾ ಕಾರ್‌ನಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಶಿರಸಿ ಕಡೆಗೆ ಸಾಗಿಸುತ್ತಿದ್ದರು

Karnataka Rains: ಕದ್ರಾ-ಕೊಡಸಳ್ಳಿ ಮಾರ್ಗದಲ್ಲಿ ಗುಡ್ಡ ಕುಸಿತ; ರಸ್ತೆ ಸಂಚಾರ ಸ್ಥಗಿತ

ಕದ್ರಾ-ಕೊಡಸಳ್ಳಿ ಮಾರ್ಗದಲ್ಲಿ ಗುಡ್ಡ ಕುಸಿತ; ರಸ್ತೆ ಸಂಚಾರ ಸ್ಥಗಿತ

Karnataka Rains: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಗುರುವಾರ ರಾತ್ರಿಯಿಂದ ಮಳೆಯ ಅಬ್ಬರ ಮುಂದುವರಿದಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕದ್ರಾದಿಂದ ಕೊಡಸಳ್ಳಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ಈ ಕುರಿತ ವಿವರ ಇಲ್ಲಿದೆ.

Sirsi News: ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾದ ಯುವಕನಿಗಾಗಿ ಎನ್.ಡಿ.ಆರ್.ಎಫ್ ಶೋಧ

ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾದ ಯುವಕನಿಗಾಗಿ ಶೋಧ

ತಾಲೂಕಿನ ಮತ್ತಿಘಟ್ಟ ಸಮೀಪದ ಜೋಗನ ಹಕ್ಕಲು ಜಲಪಾತದಲ್ಲಿ ಜೂ.23ರಂದು ಜಲಪಾತ ವೀಕ್ಷಣೆಗೆ ಗೆಳೆಯರೊಂದಿಗೆ ತೆರಳಿದ್ದ ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಯುವಕ ಪವನ್ (24) ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದರು. ಸತತವಾಗಿ ಅಗ್ನಿಶಾಮಕದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರೂ ಅಬ್ಬರದ ಮಳೆಯಲ್ಲಿ ಹುಡುಕಾಟ ನಡೆಸಲು ವಿಫಲವಾದ ಹಿನ್ನಲೆಯಲ್ಲಿ ಇದೀಗ ಎನ್.ಡಿ.ಆರ್.ಎಫ್ ತಂಡ ಶೋಧ ಕಾರ್ಯ ನಡೆಸಲು ತೆರಳಿದೆ.

Anti-Drug Day: "ಮಾದಕ ವಸ್ತುಗಳಿಂದ ದೂರವಿರಿ ನಿಮ್ಮ ಜೀವನ ಕಾಪಾಡಿಕೊಳ್ಳಿ" ; ಶಿರಸಿಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಮಾದಕ ವಸ್ತುಗಳ ಕುರಿತು ಜಾಗೃತಿ;ಶಿರಸಿಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಇಂದಿನ ಯುವ ಜನತೆ ಯಾವುದೇ ದುಶ್ಚಟಕ್ಕೆ ಒಳಗಾಗದೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಹೇಳಿದರು. ಅವರು ಗುರುವಾರ ನಗರದ ರಂಗಧಾಮದಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಶಿರಸಿ ಉಪವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡಿದರು.

ಆಧ್ಯಾತ್ಮ, ಯೋಗ ಎರಡೂ ಸಹ ಜೀವನದಲ್ಲಿ ಪ್ರಮುಖ ಪಾತ್ರ ಹೊಂದಿದೆ

ಆಧ್ಯಾತ್ಮ, ಯೋಗ ಎರಡೂ ಸಹ ಜೀವನದಲ್ಲಿ ಪ್ರಮುಖ ಪಾತ್ರ ಹೊಂದಿದೆ

ಆಧ್ಯಾತ್ಮ ವಿಚಾರವೇ ಇರಲಿ ಅಥವಾ ಇನ್ಯಾವುದೇ ಕಾರ್ಯವೇ ಆಗಲಿ ಸತಿ ಪತಿಯರು ಒಗ್ಗಟ್ಟಾಗಿ ಮಾಡಿದರೆ ಮಾತ್ರ ಅದಕ್ಕೆ ತಕ್ಕ ಫಲ ಸಿಗಲಿದೆ. ಆಧ್ಯಾತ್ಮ, ಯೋಗ ಎರಡೂ ಸಹ ಜೀವನದಲ್ಲಿ ಪ್ರಮುಖ ಪಾತ್ರ ಹೊಂದಿದ್ದು ಅದು ನಮಗೆಲ್ಲ ಅವಶ್ಯ ಮತ್ತು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮಲ್ಲಿ ಸಂಜೆ ಹಾಗೂ ಬೆಳಗ್ಗೆ ಯೊಇಗ ತರಗತಿಯೂ ಸಹ ನಡೆಯಲಿದೆ

Karnataka Rains: ನಾಳೆ ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್;‌ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಎಚ್ಚರಿಕೆ!

ನಾಳೆ ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್;‌ ಭಾರಿ ಮಳೆ ಸಾಧ್ಯತೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 21°C ಇರುವ ಸಾಧ್ಯತೆ ಇದೆ.

Sirsi news: ತಹಶೀಲ್ದಾರ್ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನ ವಹಿಸುತ್ತಿಲ್ಲ

ತಹಶೀಲ್ದಾರ್ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನ ವಹಿಸುತ್ತಿಲ್ಲ

ತಕ್ಷಣ ಶಿರಸಿಗೆ ಖಾಯಂ ತಹಶೀಲ್ದಾರರನ್ನು ನೇಮಕಗೊಳಿಸಬೇಕು‌ ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ನೇತ್ರತ್ವದಲ್ಲಿ ಕಾರವಾರ ಚಲೋ ನಡೆಯಿತು. ಇಂದು ಕಾರವಾರ  ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಜನ ಜಮಾವಣೆಯಾಗಿದ್ದರು.

Murudeshwara Temple: ಮುರುಡೇಶ್ವರ ದೇವಾಲಯದಲ್ಲಿ ಹೊಸ ನಿಯಮಾವಳಿ ಜಾರಿ, ಇನ್ನು ಮೊದಲಿನಂತೆ ಹೋಗುವಂತಿಲ್ಲ!

ಮುರುಡೇಶ್ವರ ದೇವಾಲಯದಲ್ಲಿ ಹೊಸ ನಿಯಮಾವಳಿ ಜಾರಿ

Murudeshwara Temple: ಮುರುಡೇಶ್ವರ ದೇವಾಲಯದ ಆಡಳಿತ ಮಂಡಳಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಭಕ್ತರಿಗೆ ಸಾಂಪ್ರದಾಯಿಕ ಭಾರತೀಯ ವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿದೆ. ದೇವಾಲಯದ ಧಾರ್ಮಿಕ ಪಾವಿತ್ರ್ಯತೆಯನ್ನು ಉಳಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ.

Sirsi News: ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗಲು ಯೋಗ ಅತ್ಯವಶ್ಯಕ

ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗಲು ಯೋಗ ಅತ್ಯವಶ್ಯಕ

ಅಂತರಾಷ್ಟ್ರೀಯ ಯೋಗದಿ‌ನವನ್ನು ಜಗತ್ತಿನ ಎಲ್ಲಾ ಕಡೆಗಳಲ್ಲಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಬೇರೆ ಕೆಲವು ದೇಶಗಳಲ್ಲಿ ಯುದ್ಧವಾಗುತ್ತಿದ್ದರೆ ಭಾರತದಲ್ಲಿ ಯೋಗದ ಮೂಲಕ ಜೋಡಿಸುವ ಕಾರ್ಯ ಆಗುತ್ತಿದೆ. ಯುದ್ದ ಒಡೆಯುವ ಕೆಲಸ‌ ಮಾಡಿದರೆ ಯೋಗ ಕೂಡಿಸುತ್ತದೆ. ಆದ್ದರಿಂದ ಯೋಗ ದಿನಾ ಚರಣೆಯ ಈ ಸಂದರ್ಭದಲ್ಲಿ ನಮ್ಮ ಹೊಣೆಗಾರಿಕೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು.

Sirsi News: ಸ್ಥಳೀಯ ಚುನಾವಣೆ ಶೀಘ್ರದಲ್ಲೇ ಬರಲಿದ್ದು ಕಮಿಟಿಗಳ ನೇಮಕವಾಗಬೇಕಿದೆ

ಎಲ್ಲರೂ ಪಕ್ಷದ ಸಂವಿಧಾನಕ್ಕೆ ಬದ್ಧರಾಗಬೇಕಿದೆ

ಸಿಎಫ್ ನಾಯ್ಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಗಣಪತಿ‌ನಾಯ್ಕ ನಡೆಯಲಿ. ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ಸಮರ್ಗವಾಗಿ ಎದುರಿಸುವ ಜವಾಬ್ದಾರಿ ಅವರ ಮೆರಲಿದೆ. ನಾವು ಈ ಸ್ಥಳೀಯ ಸಂಸ್ಥೆಯ ಬುನಾದಿಯನ್ನು ಗಟ್ಟಿಗೊಳಿಸಬೇಕಿದೆ. ನಿಷ್ಠಾವಂತರ ಕಡೆಗಣನೆಯಾಗದೆ ಪಕ್ಷದ ಹಿರಿಯರಿಗೆ ಗೌರವ ನೀಡುವ ಕಾರ್ಯವಾಗಬೇಕು ಎಲ್ಲರೂ ಪಕ್ಷದ ಸಂವಿಧಾನಕ್ಕೆ ಬದ್ಧರಾಗಬೇಕಿದೆ ಎಂದರು

Loading...